AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ; 70ನೇ ವರ್ಷಕ್ಕೆ ಕಾಲಿಟ್ಟ ರವಿಶಂಕರ್ ಗುರೂಜಿಗೆ ಸಿಎಂಗಳು, ರಾಜ್ಯಪಾಲರು, ಸಚಿವರಿಂದ ಅಭಿನಂದನೆ

ಆರ್ಟ್ ಆಫ್ ಲಿವಿಂಗ್​ನ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಳಿ ಇರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಾಗತಿಕ ನಾಯಕರು, ರಾಜ್ಯಪಾಲರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಚಿವರು ಮುಂತಾದವರು ಆಗಮಿಸಿ ಅಭಿನಂದನೆ ಸಲ್ಲಿಸಿದರು. ರವಿಶಂಕರ್ ಅವರ ಸಾವಿರಾರು ಭಕ್ತರು ಸೇರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುದೇವ ಅವರನ್ನು ಜಗತ್ತಿಗೆ ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ ಎಂದು ಬಣ್ಣಿಸಿದರು. 

ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ; 70ನೇ ವರ್ಷಕ್ಕೆ ಕಾಲಿಟ್ಟ ರವಿಶಂಕರ್ ಗುರೂಜಿಗೆ ಸಿಎಂಗಳು, ರಾಜ್ಯಪಾಲರು, ಸಚಿವರಿಂದ ಅಭಿನಂದನೆ
Devendra Fadnavis With Ravi Shankar GurujiImage Credit source: TV9
ಸುಷ್ಮಾ ಚಕ್ರೆ
|

Updated on: May 15, 2026 | 10:38 PM

Share

ಬೆಂಗಳೂರು, ಮೇ 15: ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲಿವಿಂಗ್​ನ ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಆರ್ಟ್ ಆಫ್ ಲಿವಿಂಗ್ 45 ವರ್ಷಗಳ ಜಾಗತಿಕ ಸೇವೆ, ಮಾನವೀಯ ಸಂಪರ್ಕ ಮತ್ತು ಆಧ್ಯಾತ್ಮಿಕ ಪಯಣವನ್ನು ಕೂಡ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಆಧ್ಯಾತ್ಮಿಕ ನಾಯಕರು, ನೀತಿ ನಿರೂಪಕರು, ಕಲಾವಿದರು, ಕೈಗಾರಿಕೋದ್ಯಮಿಗಳು, ಶಿಕ್ಷಣತಜ್ಞರು, ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದ ವಿಶೇಷವಾಗಿತ್ತು.

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 1 ತಿಂಗಳ ಕಾಲ ನಡೆದ ಆಚರಣೆಗಳು ಆಡಳಿತ, ಸಂಸ್ಕೃತಿ, ಆಧ್ಯಾತ್ಮಿಕತೆ, ವ್ಯವಹಾರ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಟ್ಟುಗೂಡಿಸಿದವು. ಒತ್ತಡರಹಿತ, ಹಿಂಸಾಚಾರ ಮುಕ್ತ ಸಮಾಜವನ್ನು ಸೃಷ್ಟಿಸುವ ದೃಷ್ಟಿಕೋನದಿಂದ 1981ರಲ್ಲಿ ಗುರುದೇವ ರವಿಶಂಕರ್ ಅವರು ಸ್ಥಾಪಿಸಿದ ಆರ್ಟ್ ಆಫ್ ಲಿವಿಂಗ್​ ಇದೀಗ ಜಗತ್ತನ್ನೇ ಆಧ್ಯಾತ್ಮದತ್ತ ಸೆಳೆಯುವಂತೆ ಮಾಡಿದೆ.

ಈ ಆಶ್ರಮಕ್ಕೆ ಭೇಟಿ ನೀಡಿದವರಲ್ಲಿ ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹರಿಯಾಣದ ಗೌರವಾನ್ವಿತ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, 5 ಬಾರಿ ರಾಷ್ಟ್ರೀಯ ಮಹಿಳಾ ಹೆವಿವೇಯ್ಟ್ ಚಾಂಪಿಯನ್ ನೂಪುರ್ ಶಿಯೋರೆನ್; ಗೌರವಾನ್ವಿತ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಸಂಸದರು, ಸಚಿವರು, ಕಲಾವಿದರು, ಉದ್ಯಮಿಗಳು ಮತ್ತು ಸಾಮಾಜಿಕ ಮುಖಂಡರು ಸೇರಿದ್ದಾರೆ.

ಇದನ್ನೂ ಓದಿ: ಸೇವೆಯೇ ಪರಮ ಧರ್ಮ, ಆರ್ಟ್ ಆಫ್ ಲಿವಿಂಗ್‌ ಧ್ಯಾನ ಮಂದಿರ ವಿಶ್ವ ಶಾಂತಿಯ ಕೇಂದ್ರವಾಗಲಿದೆ: ಪ್ರಧಾನಿ ಮೋದಿ ಆಶಯ

ಆರ್ಟ್ ಆಫ್ ಲಿವಿಂಗ್​ನಲ್ಲಿ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್, ಗುರುದೇವ ರವಿಶಂಕರ್ ಅವರು ಇಡೀ ಜಗತ್ತಿಗೆ ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ ಎಂದು ಬಣ್ಣಿಸಿದರು. “ವಿಶ್ವಗುರುವಾಗಿ ನಾವು ಭಾರತವನ್ನು ನೋಡುವ ದೃಷ್ಟಿಕೋನ ಕೇವಲ ಆರ್ಥಿಕ ಅಥವಾ ಮಿಲಿಟರಿ ಶಕ್ತಿಯಲ್ಲಿ ಬೇರೂರಿಲ್ಲ. ಅದು ಆಧ್ಯಾತ್ಮಿಕ ಶಕ್ತಿಯಲ್ಲಿಯೂ ಇದೆ. ಭಾರತ ಆಧ್ಯಾತ್ಮಿಕ ಮಹಾಶಕ್ತಿಯಾಗುವ ಮಾರ್ಗಕ್ಕೆ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾರ್ಗದರ್ಶನ ಮಾಡುತ್ತಾರೆ” ಎಂದು ಫಡ್ನವೀಸ್ ಹೇಳಿದ್ದಾರೆ.

Dattatreya Hosabale With Ravi Shankar Guruji

Dattatreya Hosabale With Ravi Shankar Guruji

ಇದೇ ವೇಳೆ ಮಾತನಾಡಿದ ಹರಿಯಾಣದ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ಗುರುದೇವ ರವಿಶಂಕರ್ ಅವರ ಜಾಗತಿಕ ಆಧ್ಯಾತ್ಮಿಕ ಪ್ರಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 45 ವರ್ಷಗಳ ಹಿಂದೆ, ಗುರುದೇವ ರವಿಶಂಕರ್ ಕರ್ನಾಟಕದ ಈ ಜಾಗದಲ್ಲಿ ಜಾಗೃತಿ ಮತ್ತು ಕರುಣೆಯ ದೀಪವನ್ನು ಬೆಳಗಿಸಿದರು. ಇಂದು ಆ ದೀಪವು 182ಕ್ಕೂ ಹೆಚ್ಚು ದೇಶಗಳನ್ನು ಬೆಳಗಿಸುತ್ತಿದೆ. ಆ ದೀಪ 1 ಬಿಲಿಯನ್‌ಗಿಂತಲೂ ಹೆಚ್ಚು ಮನಸುಗಳನ್ನು ಮುಟ್ಟಿದೆ. ಗುರುದೇವ ರವಿಶಂಕರ್ ಅವರು ಜಗತ್ತಿಗೆ ಕೇವಲ ಜ್ಞಾನವನ್ನು ನೀಡಿಲ್ಲ ಒಂದು ಮಾರ್ಗವನ್ನು ಕೂಡ ನೀಡಿದ್ದಾರೆ ಎಂದರು.

ಇದನ್ನೂ ಓದಿ: Modi Visit Art Of Living: ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ

ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೃಹತ್ ಧ್ಯಾನ ಮಂದಿರದಲ್ಲಿ ವಿಶೇಷ ಸತ್ಸಂಗ ಮತ್ತು ಧ್ಯಾನವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಲವು ಗಣ್ಯರು ಗುರುದೇವ ರವಿಶಂಕರ್ ಅವರೊಂದಿಗೆ ಸೇರಿಕೊಂಡರು. ಈ ವಾರದ ಆರಂಭದಲ್ಲಿ, 182 ದೇಶಗಳಾದ್ಯಂತ ಕೋಟ್ಯಂತರ ಜನರು ಜಾಗತಿಕ ಶಾಂತಿಗಾಗಿ ಗುರುದೇವರೊಂದಿಗೆ ಧ್ಯಾನ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ಮತ್ತು ವೈಯಕ್ತಿಕವಾಗಿ ಸೇರಿಕೊಂಡರು. ಇದು ವಿಶ್ವದ ಅತಿದೊಡ್ಡ ಸಾಮೂಹಿಕ ಧ್ಯಾನ ಸಭೆಗಳಲ್ಲಿ ಒಂದಾಗಿದೆ.

ಸತ್ಸಂಗದ ಸಮಯದಲ್ಲಿ ಮಾತನಾಡಿದ ಗುರುದೇವ ರವಿಶಂಕರ್ ಅವರು ಧ್ಯಾನ, ಸಂತೋಷ, ಆಂತರಿಕ ಶಾಂತಿ ಮತ್ತು ಜೀವನದ ಆಳವಾದ ಅರ್ಥದ ಬಗ್ಗೆ ಮಾತನಾಡಿದರು. ನಮ್ಮ ಜೀವನವೇ ಒಂದು ಆಚರಣೆ. ಈ ಜೀವನದಲ್ಲಿ ನಾವು ಏನನ್ನು ಪಡೆದುಕೊಂಡಿದ್ದೇವೆಯೋ ಅದು ದೇವರ ಅನುಗ್ರಹವಾಗಿದೆ. ಮನಸ್ಸು ಶಾಂತಿಯುತವಾಗಿದ್ದಾಗ ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ, ಮನಸ್ಸು ಅರಳುತ್ತದೆ, ದೇಹವು ಶಕ್ತಿಯನ್ನು ಪಡೆಯುತ್ತದೆ. ಇದರಿಂದ ನಮ್ಮ ಮೂಲಕ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.

ನಮ್ಮ ಮನಸ್ಸನ್ನು ಯಾವಾಗಲೂ ಸಂತೋಷವಾಗಿಡುವ ಮಾರ್ಗವೆಂದರೆ ನಂಬಿಕೆ. ದೇವರು ನಮ್ಮೊಂದಿಗಿದ್ದಾನೆ ಮತ್ತು ನಮಗೆ ಯಾವುದು ಉತ್ತಮವೋ ಅದನ್ನು ಅವನು ಖಂಡಿತವಾಗಿಯೂ ನಮಗೆ ನೀಡುತ್ತಾನೆ ಎಂಬ ನಂಬಿಕೆಯನ್ನು ನಾವು ಇಟ್ಟುಕೊಳ್ಳಬೇಕು ಎಂದು ರವಿಶಂಕರ್ ಗುರೂಜಿ ಹೇಳಿದರು.

ಕಳೆದ 45 ವರ್ಷಗಳಲ್ಲಿ ಆರ್ಟ್ ಆಫ್ ಲಿವಿಂಗ್ ಧ್ಯಾನ, ಶಿಕ್ಷಣ, ಆಘಾತ ಪರಿಹಾರ, ಪರಿಸರ ಕ್ರಿಯೆ, ಮಹಿಳಾ ಸಬಲೀಕರಣ, ಯುವ ನಾಯಕತ್ವ ಮತ್ತು ವಿಪತ್ತು ನಿರ್ವಹಣೆ ಉಪಕ್ರಮಗಳ ಮೂಲಕ 182 ದೇಶಗಳಲ್ಲಿ 1 ಶತಕೋಟಿಗೂ ಹೆಚ್ಚು ಜನರನ್ನು ಮುಟ್ಟಿದೆ. ಈ ಕಾಯಕ ಮುಂದೆಯೂ ಮುಂದುವರಿಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More