BCCI: ಎನ್​ಸಿಎಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಸೆಪ್ಟೆಂಬರ್ 10 ಅರ್ಜಿ ಸಲ್ಲಿಸಲು ಕೊನೆ ದಿನ

BCCI: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) 4 ಹುದ್ದೆಗಳ ಖಾಲಿ ಇದ್ದು, ಇದಕ್ಕಾಗಿ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಕಳುಹಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯನ್ನು 60 ವರ್ಷಗಳಿಗೆ ಇಡಲಾಗಿದೆ.

BCCI: ಎನ್​ಸಿಎಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಸೆಪ್ಟೆಂಬರ್ 10 ಅರ್ಜಿ ಸಲ್ಲಿಸಲು ಕೊನೆ ದಿನ
ಪ್ರಾತಿನಿಧಿಕ ಚಿತ್ರ
Edited By:

Updated on: Aug 22, 2021 | 2:56 PM

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) 4 ಹುದ್ದೆಗಳ ಖಾಲಿ ಇದ್ದು, ಇದಕ್ಕಾಗಿ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಕಳುಹಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯನ್ನು 60 ವರ್ಷಗಳಿಗೆ ಇಡಲಾಗಿದೆ. ಈ ಎಲ್ಲ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಖಾಲಿಯಿರುವ ಹುದ್ದೆಗಳೆಂದರೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್. ಬೌಲಿಂಗ್ ತರಬೇತುದಾರರಿಗೆ 2 ಹುದ್ದೆಗಳು, ಒಂದು ಸ್ಪಿನ್ ಮತ್ತು ಇನ್ನೊಂದು ವೇಗದ ಬೌಲಿಂಗ್ ಕೋಚ್.

ಬಿಸಿಸಿಐ 11 ಎನ್‌ಸಿಎ ಕೋಚ್‌ಗಳ ವಾರ್ಷಿಕ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ ನಂತರ ಎನ್‌ಸಿಎಯ ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಕಳೆದ ವರ್ಷವೇ ಒಪ್ಪಂದಗಳನ್ನು ನವೀಕರಿಸದಿರಲು ನಿರ್ಧರಿಸಿತ್ತು, ಇದರಲ್ಲಿ ಭಾರತದ ಅನೇಕ ನಿವೃತ್ತ ಕ್ರಿಕೆಟಿಗರು ಸೇರಿದ್ದರು. ಈ ಕ್ರಿಕೆಟಿಗರಲ್ಲಿ ಹೃಷಿಕೇಶ್ ಕನಿತ್ಕರ್, ರೊಮೇಶ್ ಪವಾರ್, ಸುಜಿತ್ ಸೋಮಸುಂದರ್, ಸುಬಾರ್ಟೊ ಬ್ಯಾನರ್ಜಿ ಮತ್ತು ಶಿವ ಸುಂದರ್ ದಾಸ್ ಸೇರಿದ್ದಾರೆ. ಈ ಪೈಕಿ, ಎಸ್ ಎಸ್ ದಾಸ್ ಈಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ತರಬೇತುದಾರರಾಗಿದ್ದಾರೆ ಮತ್ತು ರೋಮೇಶ್ ಪವಾರ್ ಮುಖ್ಯ ತರಬೇತುದಾರರಾಗಿದ್ದಾರೆ.

ಕ್ರಿಕೆಟ್ ಮುಖ್ಯಸ್ಥ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ
ಈ ಹಿಂದೆ, ಬಿಸಿಸಿಐ ಕೂಡ ಎನ್‌ಸಿಎ ಕ್ರಿಕೆಟ್‌ನ ಮುಖ್ಯಸ್ಥರಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು, ಇದಕ್ಕೆ ಕೊನೆಯ ದಿನಾಂಕ ಆಗಸ್ಟ್ 31 ಆಗಿದೆ. ಈ ಹುದ್ದೆಗೆ ರಾಹುಲ್ ದ್ರಾವಿಡ್ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ದ್ರಾವಿಡ್ ಈ ಹುದ್ದೆಗೆ ಅರ್ಜಿ ಸಲ್ಲಿಸುವುದರೊಂದಿಗೆ, ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವ ಎಲ್ಲಾ ಊಹಾಪೋಹಗಳಿಗೂ ಪೂರ್ಣವಿರಾಮ ಸಿಕ್ಕಂತಿದೆ. ತನ್ನ ವೆಬ್‌ಸೈಟ್‌ನಲ್ಲಿ ಕ್ರಿಕೆಟ್ ಮುಖ್ಯಸ್ಥ ಹುದ್ದೆಯ ಅರ್ಹತೆಯನ್ನು ವಿವರಿಸಿದ ಬಿಸಿಸಿಐ, ಎನ್‌ಸಿಎಯಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳಿಗೆ ಅವರು ಜವಾಬ್ದಾರನಾಗಿರುತ್ತಾರೆ ಎಂದು ಹೇಳಿದೆ. ಪ್ರತಿಯೊಬ್ಬ ಕ್ರಿಕೆಟಿಗನ ಅಭಿವೃದ್ಧಿ, ಅವನ ಸಿದ್ಧತೆ ಮತ್ತು ಆತನನ್ನು ಅತ್ಯುತ್ತಮ ಆಟಗಾರನನ್ನಾಗಿ ಮಾಡುವ ಜವಾಬ್ದಾರಿ ಅವರ ಮೇಲಿರುತ್ತದೆ. NCA ಯ ಕ್ರಿಕೆಟ್ ಮುಖ್ಯಸ್ಥರಾಗಿ ಮರು ಅರ್ಜಿ ಸಲ್ಲಿಸುವ ರಾಹುಲ್ ದ್ರಾವಿಡ್ ನಿರ್ಧಾರವನ್ನು ಅನೇಕ ಕ್ರಿಕೆಟಿಗರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:BCCI: ದೇಶಿ ಕ್ರಿಕೆಟ್​ನ ನೂತನ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ; ಅಕ್ಟೋಬರ್ 27 ರಿಂದ ಹೊಸ ಸೀಸನ್ ಆರಂಭ

Published On - 2:56 pm, Sun, 22 August 21

Web contact

TV9 Kannada

Read More
Follow Us