AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಅಂಗಳದಲ್ಲಿ ಸ್ಮಾರ್ಟ್​ ಬಾಲ್: ಇನ್ಮುಂದೆ ಇಂಚಿಂಚು ಮಾಹಿತಿ ಸಿಗಲಿದೆ

smart ball in cricket: ಸ್ಮಾರ್ಟ್​ ಬಾಲ್​ ಸಾಂಪ್ರದಾಯಿಕ ಚೆಂಡಿನಂತೆಯೇ ಇರುತ್ತವೆ. ಅದರ ವಿನ್ಯಾಸ ಕೂಡ ಹಳೆಯ ಮಾದರಿಯಲ್ಲಿರುತ್ತದೆ.

ಕ್ರಿಕೆಟ್ ಅಂಗಳದಲ್ಲಿ ಸ್ಮಾರ್ಟ್​ ಬಾಲ್: ಇನ್ಮುಂದೆ ಇಂಚಿಂಚು ಮಾಹಿತಿ ಸಿಗಲಿದೆ
smart ball
TV9 Web
| Edited By: |

Updated on: Aug 26, 2021 | 3:59 PM

Share

ಹೊಸ ಹೊಸ ತಂತ್ರಜ್ಞಾನದಿಂದಾಗಿ ಕ್ರಿಕೆಟ್ (Cricket) ಬಹಳಷ್ಟು ಬದಲಾಗಿದೆ. ಮೂರನೇ ಅಂಪೈರ್‌ನಿಂದ ಹಿಡಿದು ಕ್ಯಾಮೆರಾದ ಬಳಕೆಯವರೆಗೆ, ಹಾಕ್ ಐ, ಸ್ನಿಕೋ ಮೀಟರ್, ಹಾಟ್ ಸ್ಪಾಟ್, ಸ್ಪೈಡರ್ ಕ್ಯಾಮ್, ಸ್ಪೀಡ್ ಗನ್, ಸ್ಟಂಪ್ ಮೈಕ್‌ನಂತಹ ಎಲ್ಲಾ ತಂತ್ರಗಳನ್ನು ಇದುವರೆಗೆ ಕ್ರೀಡಾ ಪ್ರೇಮಿಗಳು ನೋಡಿದ್ದಾರೆ. ಈಗ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಪ್ರಯೋಗ ನಡೆಯಲಿದ್ದು, ಅದು ತುಂಬಾ ವಿಭಿನ್ನವಾಗಿರುವುದೇ ವಿಶೇಷ. ಹೌದು, ಇದೇ ಮೊದಲ ಬಾರಿಗೆ ಕ್ರಿಕೆಟ್​ನಲ್ಲಿ ಸ್ಮಾರ್ಟ್​ ಬಾಲ್​ಗಳನ್ನು (Smart ball) ಬಳಸಲಾಗುತ್ತಿದೆ. ಆಗಸ್ಟ್ 26 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (CPL-2021) ಸ್ಮಾರ್ಟ್​ ಬಾಲ್​ಗಳ ಪ್ರಯೋಗ ಮಾಡಲಾಗುತ್ತಿದೆ. ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಬಾಲ್​ನ್ನು ತಯಾರಿಸಿರುವುದು ಖ್ಯಾತ ಸ್ಪೋಟ್ಸ್ ಕಂಪೆನಿ ಕೂಕಬುರ್ರಾ.

ಸ್ಮಾರ್ಟ್ ಬಾಲ್ ಎಂದರೇನು? ಸರಳವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ ಚಿಪ್ ಹೊಂದಿರುವ ಬಾಲ್ ಅಷ್ಟೇ. ಅಂದರೆ ಈ ಬಾಲ್​ಗಳಲ್ಲಿ ವಿಶೇಷ ಚಿಪ್ ಅಳವಡಿಸಲಾಗಿರುತ್ತದೆ. ಇದು ಬಾಲ್​ನ ಸ್ಪೀಡ್, ಸ್ಪಿನ್, ಪವರ್ ಸೇರಿದಂತೆ ಎಲ್ಲಾ ರೀತಿ ಮಾಹಿತಿಯನ್ನು ನೈಜ ಸಮಯದಲ್ಲಿ ಸಂಗ್ರಹಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಆ್ಯಪ್ ಮೂಲಕ ಸ್ಮಾರ್ಟ್ ವಾಚ್, ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್/ಲ್ಯಾಪ್ ಟಾಪ್ ನಲ್ಲಿ ಪ್ರತಿಯೊಂದು ಚೆಂಡಿನ ಮಾಹಿತಿಯನ್ನು ವೀಕ್ಷಿಸಬಹುದು. ಅಂದರೆ ವೀಕ್ಷಕರಿಗೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದರೆ ಬಾಲ್​ನ ವೇಗದ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸ್ಮಾರ್ಟ್ ಬಾಲ್ ಆ್ಯಪ್​ ಮೂಲಕ ಪಡೆದುಕೊಳ್ಳಬಹುದು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈ ಪ್ರಯೋಗ ಮಾಡಲಾಗುತ್ತಿದ್ದು, ಪ್ರಯೋಗ ಯಶಸ್ವಿಯಾದರೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಚಿಪ್ ಬಾಲ್ ಕಾಣಿಸಿಕೊಳ್ಳಲಿದೆ.

ಉಳಿದ ಚೆಂಡಿಗಿಂತ ಭಿನ್ನವಾಗಿರುತ್ತದೆಯೇ? ಹಾಗೇನು ಇಲ್ಲ. ಚೆಂಡು ತಯಾರಿಸಿರುವ ಕುಕಬುರ್ರಾ ಕಂಪೆನಿ ಪ್ರಕಾರ, ಸ್ಮಾರ್ಟ್​ ಬಾಲ್​ ಸಾಂಪ್ರದಾಯಿಕ ಚೆಂಡಿನಂತೆಯೇ ಇರುತ್ತವೆ. ಅದರ ವಿನ್ಯಾಸ ಕೂಡ ಹಳೆಯ ಮಾದರಿಯಲ್ಲಿರುತ್ತದೆ. ಇದರ ಹೊರತಾಗಿ ಚೆಂಡಿನ ಒಳಗೆ ಸ್ಮಾರ್ಟ್​ ಚಿಪ್ ಅಳವಡಿಸಲಾಗಿರುತ್ತದೆ. ಅದಾಗ್ಯೂ ಚೆಂಡಿನ ತೂಕ ಹೆಚ್ಚಾಗುವುದಿಲ್ಲ ಎಂದು ತಿಳಿಸಿದೆ.

ಸ್ಮಾರ್ಟ್ ಬಾಲ್ ಯಾವ ಡೇಟಾವನ್ನು ನೀಡುತ್ತದೆ? ಸ್ಮಾರ್ಟ್ ಬಾಲ್ ಚೆಂಡಿನ ವೇಗ, ಸ್ಪಿನ್ ಮತ್ತು ಪವರ್ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೆಯೇ ಇದರ ಮತ್ತೊಂದು ವಿಶೇಷ ಅಂಶವೆಂದರೆ ಚೆಂಡು ಪುಟಿದೆದ್ದ ಬಳಿಕದ ವೇಗದ ಬಗ್ಗೆ ಕೂಡ ಡೇಟಾವನ್ನು ನೀಡುತ್ತದೆ. ಹಾಗೆಯೇ ಸ್ಮಾರ್ಟ್ ಬಾಲ್‌ನಲ್ಲಿ ಬೌನ್ಸ್ ವೇಗ-ಚೆಂಡು ಬೌನ್ಸ್ ಆಗುವ ಮುನ್ನ ವೇಗ ಮತ್ತು ಚೆಂಡು ಬೌನ್ಸ್ ಆದ ತಕ್ಷಣ ಪಡೆದ ವೇಗವನ್ನು ಪ್ರತ್ಯೇಕವಾಗಿ ಸೂಚಿಸಲಾಗುತ್ತದೆ.

ಮಾಹಿತಿಯನ್ನು ಪಡೆಯುವುದು ಹೇಗೆ? ಸ್ಮಾರ್ಟ್​ ಬಾಲ್ ಬಳಸಲಾಗುವ ಪಂದ್ಯಗಳಿಗಾಗಿ ವಿಶೇಷ ಆಪರೇಟರ್ ಆ್ಯಪ್‌ ಹೊಂದಿದ್ದು, ಅದು ಬೌಲರ್ ಚೆಂಡನ್ನು ಎಸೆಯುವ ಮುನ್ನ ರೆಕಾರ್ಡಿಂಗ್ ಆರಂಭಿಸಲು ಆಜ್ಞೆಯನ್ನು ಕಳುಹಿಸುತ್ತದೆ. ನಂತರ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಇದರ ವಿವರವಾದ ವಿಶ್ಲೇಷಣೆಯನ್ನು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಸಂಖ್ಯೆಗಳಂತೆ ಪ್ರದರ್ಶಿಸಲಾಗುತ್ತದೆ. ಮೊಬೈಲ್‌ಗಳಿಗೆ ಸಂಬಂಧಿಸಿದಂತೆ, ಚೆಂಡಿನಿಂದ ಮಾಹಿತಿಯನ್ನು ನೇರವಾಗಿ ಬ್ಲೂಟೂತ್ ಮೂಲಕ ಮೊಬೈಲ್‌ಗೆ ಕಳುಹಿಸಲಾಗುತ್ತದೆ ಮತ್ತು ಫಲಿತಾಂಶಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

ಎಷ್ಟು ವೇಗದ ಪ್ರಕ್ರಿಯೆ? ಚೆಂಡನ್ನು ಎಸೆದ ಸಮಯದಿಂದ ಮಾಹಿತಿ ಪಡೆಯಲು ತೆಗೆದುಕೊಳ್ಳುವ ಸರಾಸರಿ ಸಮಯ ಸುಮಾರು ಐದು ಸೆಕೆಂಡುಗಳು ಮಾತ್ರ. ಹೀಗಾಗಿ ಮ್ಯಾಚ್ ವೀಕ್ಷಿಸುತ್ತಿದ್ದಂತೆ ನಿಮಗೆ ಬಿಗ್ ಸ್ಕ್ರೀನ್​ಗಳಲ್ಲಿ ಪ್ರತಿಯೊಂದು ಬಾಲ್​ನ ಸಂಪೂರ್ಣ ಮಾಹಿತಿ ದೊರೆಯಲಿದೆ. ಸದ್ಯ ಇದೇ ಮೊದಲ ಬಾರಿ ಸಿಪಿಎಲ್​ನಲ್ಲಿ ಸ್ಮಾರ್ಟ್​ ಬಾಲ್​ನ ಪ್ರಯೋಗ ನಡೆಯುತ್ತಿದ್ದು, ಇದು ಯಶಸ್ವಿಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(chip smart ball in cricket 1st time to introduce in cpl 2021)

Follow Us
TV9 Web
TV9 Web

TV9 Kannada

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ