AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಮೊನ್ನೆ ತನಕ ಡೆಲಿವರಿ ಬಾಯ್: ಈಗ ಟಿ20 ವಿಶ್ವಕಪ್ ಹೀರೋ

T20 World Cup 2021: ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಗೆಲುವಿನೊಂದಿಗೆ ಚುಟುಕು ಕ್ರಿಕೆಟ್ ಕದನದ ಅಭಿಯಾನ ಆರಂಭಿಸಿದೆ.

T20 World Cup 2021: ಮೊನ್ನೆ ತನಕ ಡೆಲಿವರಿ ಬಾಯ್: ಈಗ ಟಿ20 ವಿಶ್ವಕಪ್ ಹೀರೋ
Chris Greaves
TV9 Web
| Edited By: |

Updated on: Oct 18, 2021 | 10:40 PM

Share

ಭಾನುವಾರದವರೆಗೂ ಕ್ರಿಸ್ ಗ್ರೀವ್ಸ್ ಎಂಬ ಆಟಗಾರ ಕ್ರಿಕೆಟ್ ಜಗತ್ತಿನಲ್ಲಿ ಅಪರಿಚಿತ. ಅದರಲ್ಲೂ ಸ್ಕಾಟ್ಲೆಂಡ್​ ಕ್ರಿಕೆಟ್​ ಪ್ರೇಮಿಗಳಿಗೂ ಇಂತಹ ಒಬ್ಬ ಆಟಗಾರನಿದ್ದಾನೆ ಎಂಬುದು ಕೂಡ ಗೊತ್ತಿರಲಿಲ್ಲ. ಇದಾಗ್ಯೂ ಕೆಲವರಿಗಂತು ಗ್ರೀವ್ಸ್​ ಮುಖ ಪರಿಚಯವಿದೆ. ಹೀಗಾಗಿಯೇ ಈತನನ್ನು ಟಿ20 ವಿಶ್ವಕಪ್​ ತಂಡದಲ್ಲಿ ಕಂಡಾಗ ಹೌಹಾರಿದ್ದರು. ಏಕೆಂದರೆ ಮೊನ್ನೆ ಮೊನ್ನೆ ತನಕ ನಮ್ಮ ಏರಿಯಾದಲ್ಲಿ ಡೆಲಿವರಿ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಸ್ಕಾಟ್ಲೆಂಡ್ ಪರ ಬ್ಯಾಟಿಂಗ್ ಮಾಡಲು ಇಳಿದಿದ್ದರು. ಹೀಗಾಗಿಯೇ ಕ್ರಿಸ್ ಗ್ರೀವ್ಸ್ ಎಂಬ ಡೆಲಿವರಿ ಬಾಯ್​ ಅನ್ನು ಟಿವಿಯಲ್ಲಿ ನೋಡಿದಾಗ ಸ್ಕಾಟಿಷ್ ಕ್ರಿಕೆಟ್​ ಪ್ರೇಮಿಗಳು ಆಶ್ಚರ್ಯಚಕಿತರಾಗಿದ್ದರು.

ಹೌದು…ಸಾಧನೆಗೆ ಯಾವುದು ಕೂಡ ಅಡ್ಡಿಯಿಲ್ಲ ಎಂಬುದಕ್ಕೆ ಕ್ರಿಸ್ ಗ್ರೀವ್ಸ್​ ಉತ್ತಮ ಉದಾಹರಣೆ. ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದ ಗ್ರೀವ್ಸ್ ಬಡತನವೇ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿಯೇ ದಕ್ಷಿಣ ಆಫ್ರಿಕಾದಿಂದ ಸ್ಕಾಟ್ಲೆಂಡ್​ನತ್ತ ಪ್ರಯಾಣ ಬೆಳೆಸಿದ್ದರು. ಅಲ್ಲೇ ಪೌರತ್ವ ಪಡೆದು ಅಲ್ಲೇ ಡೆಲಿವರಿ ಬಾಯ್​ ಆಗಿ ಜೀವನ ನಡೆಸಲಾರಂಭಿಸಿದ್ದರು.

ಇದಾಗ್ಯೂ ಕ್ರಿಕೆಟ್​ನಿಂದ ಮಾತ್ರ ದೂರವಾಗಿರಲಿಲ್ಲ. ಅದರಲ್ಲೂ ಟಿ20 ಕ್ರಿಕೆಟ್​ ಆಡುವಷ್ಟು ಪ್ರತಿದಿನ ಸಮಯ ಹೊಂದಿಸಿಕೊಳ್ಳುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಹೀಗೆ ಸಮಯ ಹೊಂದಿಸಿ ನಡೆಸಿದ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ಗಾಗಿ ಆಯ್ಕೆಯಾದ ಸ್ಕಾಟ್ಲೆಂಡ್​ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲದೆ ವಾರಗಳ ಹಿಂದೆಯಷ್ಟೇ ಪಪುವಾ ನ್ಯೂಗಿನಿಯಾ ತಂಡದ ವಿರುದ್ದ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಸಿಕ್ಕ 2ನೇ ಅವಕಾಶ ಟಿ20 ವಿಶ್ವಕಪ್​ನ ಎಂಬ ಮಹತ್ವದ ಟೂರ್ನಿಯಲ್ಲಿ ಎಂಬುದು ವಿಶೇಷ.

ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಗ್ರೀವ್ಸ್ ಇಡೀ ಪಂದ್ಯದ ಚಿತ್ರಣ ಬದಲಿಸಿ ಹೀರೋ ಎನಿಸಿಕೊಂಡಿದ್ದಾರೆ. ಹೌದು, ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಗೆಲುವಿನೊಂದಿಗೆ ವಿಶ್ವಕಪ್  ಅಭಿಯಾನ ಆರಂಭಿಸಿದೆ. ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ನೀಡಿದ 140 ರನ್​ ಪ್ರತಿಯಾಗಿ ಬಾಂಗ್ಲಾದೇಶದ 134 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಕ್ರಿಸ್ ಗ್ರೀವ್ಸ್​. ತಂಡ 53 ರನ್​ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಗ್ರೀವ್ಸ್​ ಕಣಕ್ಕಿಳಿದಿದ್ದರು. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಗ್ರೀವ್ಸ್​ 28 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸ್ಕಾಟ್ಲೆಂಡ್​ 20 ಓವರ್​ನಲ್ಲಿ 140 ರನ್ ಗಳಿಸಲು ಸಾಧ್ಯವಾಯಿತು.

ಕಡಿಮೆ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಬೌಲಿಂಗ್ ಮೂಲಕ ಕೂಡ ಗ್ರೀವ್ಸ್ ಶಾಕ್ ನೀಡಿದ್ದರು. 3 ಓವರ್ ಬೌಲಿಂಗ್ ಮಾಡಿದ್ದ ಗ್ರೀವ್ಸ್​ ಕೇವಲ 19 ರನ್​ಗೆ ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕುರ್ ರಹೀಮ್ ವಿಕೆಟ್ ಉರುಳಿಸಿದ್ದರು. ಕ್ರಿಸ್ ಗ್ರೀವ್ಸ್ ಅವರ ಈ ಆಲ್​ರೌಂಡರ್ ಆಟದದಿಂದಾಗಿ​ ಬಾಂಗ್ಲಾದೇಶದ ವಿರುದ್ದ ಸ್ಕಾಟ್ಲೆಂಡ್ ತಂಡವು 6 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ಭರ್ಜರಿ ಪ್ರದರ್ಶನದ ಫಲವಾಗಿ ತಮ್ಮ 2ನೇ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಕ್ರಿಸ್ ಗ್ರೀವ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಅಂದಹಾಗೆ 31 ವರ್ಷದ ಕ್ರಿಸ್ ಗ್ರೀವ್ಸ್​ ಸ್ಕಾಟ್ಲೆಂಡ್ ತಂಡದ ಖಾಯಂ ಸದಸ್ಯರಲ್ಲ. ತಂಡದಲ್ಲಿ ಗುತ್ತಿಗೆ ಪಡೆದ ಆಟಗಾರನಂತು ಅಲ್ಲವೇ ಅಲ್ಲ. ಒಂದು ತಿಂಗಳ ಹಿಂದೆಯಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಹೀಗಾಗಿಯೇ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಗ್ರೀವ್ಸ್​ ಅಮೆಜಾನ್ ಸಂಸ್ಥೆಯ ಪಾರ್ಸಲ್ ಡೆಲಿವರಿ ಡ್ರೈವರ್ ಹಾಗೂ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಅದೇ ಕ್ರಿಸ್ ಗ್ರೀವ್ಸ್​ ಇಡೀ ದೇಶವೇ ಹೆಮ್ಮೆ ಪಡುವಂತಹ ಗೆಲುವು ತಂದುಕೊಟ್ಟು ಸ್ಕಾಟ್ಲೆಂಡ್​ನ ವಿಶ್ವಕಪ್ ಹೀರೋ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(From Amazon delivery driver to Scotland’s cricket hero)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ