IND vs SA: ಇಂದು ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಬಲ್ಲ ಐವರು ಕ್ರಿಕೆಟಿಗರಿವರು..!

| Updated By: ಪೃಥ್ವಿಶಂಕರ

Updated on: Jun 17, 2022 | 3:34 PM

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ 0-2 ಹಿನ್ನಡೆಯಲ್ಲಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಸರಣಿಯನ್ನು ಜೀವಂತವಾಗಿರಿಸುವ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು.

IND vs SA: ಇಂದು ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಬಲ್ಲ ಐವರು ಕ್ರಿಕೆಟಿಗರಿವರು..!
ಟೀಂ ಇಂಡಿಯಾ
Follow us on

ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಸರಣಿಯಲ್ಲಿ ಭಾರತ 0-2 ಹಿನ್ನಡೆಯಲ್ಲಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಸರಣಿಯನ್ನು ಜೀವಂತವಾಗಿರಿಸುವ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಭಾರತ 48 ರನ್‌ಗಳ ದೊಡ್ಡ ಅಂತರದಿಂದ ಗೆಲುವನ್ನು ಕಸಿದುಕೊಂಡಿತು. ಆದರೆ ಭಾರತ ತಂಡ ಇನ್ನೂ ಸರಣಿಯಲ್ಲಿ ಹಿಂದುಳಿದಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಸಮಬಲ ಸಾಧಿಸುವ ಕಾತುರದಲ್ಲಿದೆ. ಕೊನೆಯ ಪಂದ್ಯದಲ್ಲಿ ಗೆದ್ದಿರುವುದರಿಂದ. ಈ ಫಲಿತಾಂಶ ರಿಷಬ್ ಪಂತ್ (Rishabh Panth) ನೇತೃತ್ವದ ಭಾರತ ತಂಡ (Indian team)ಕ್ಕೆ ಕೊಂಚ ಆತ್ಮವಿಶ್ವಾಸ ಮೂಡಿಸಲಿದೆ. ಆದರೆ ಕ್ರಿಕೆಟ್ ಒಂದು ತಂಡದ ಕ್ರೀಡೆ. ಹೀಗಾಗಿ ತಂಡದಲ್ಲಿರುವ ಎಲ್ಲರೂ ಪ್ರತಿದಿನ ಉತ್ತಮವಾಗಿ ಆಡುವುದು ಸಾಧ್ಯವಿಲ್ಲ. ಹಾಗಾಗಿ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಬಲ್ಲ ಕ್ರಿಕೆಟಿಗರ ಬಗ್ಗೆ ನೋಡೋಣ.

1) ಇಶಾನ್ ಕಿಸಾನ್ – ಮಿಷನ್ T20 ವಿಶ್ವಕಪ್. ಪ್ರತಿ ಸರಣಿಯೂ ಯುವ ಕ್ರಿಕೆಟಿಗರಿಗೆ ಒಂದು ರೀತಿಯ ತಾಲೀಮು. ಇಶಾನ್ ಇಲ್ಲಿಯವರೆಗೆ ಸೀಮಿತ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಈ ಆರಂಭಿಕ ಆಟಗಾರ ಭಾರತ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಉಭಯ ತಂಡಗಳ ನಡುವಿನ ಸರಣಿಯಲ್ಲಿ ಇಶಾನ್ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 3 ಪಂದ್ಯಗಳಲ್ಲಿ 164 ರನ್ ಗಳಿಸಿದ್ದಾರೆ. ಜೊತೆಗೆ ಸ್ಟ್ರೈಕ್ರೇಟ್ ಕೂಡ ಸುಮಾರು 156ರಷ್ಟಿದ್ದು, ಎರಡು ಅರ್ಧಶತಕಗಳ ಇನ್ನಿಂಗ್ಸ್‌ಗಳಿವೆ. ರಾಜ್‌ಕೋಟ್‌ನ ಪಿಚ್ ಬ್ಯಾಟಿಂಗ್ ಸಹಾಯಕವಾಗಿದ್ದು, ಇಶಾನ್ ಬ್ಯಾಟ್​ನಲ್ಲಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಾಣಬಹುದಾಗಿದೆ.

ಇದನ್ನೂ ಓದಿ:IND vs IRE: 6 ಎಸೆತಗಳಲ್ಲಿ 6 ಸಿಕ್ಸರ್! ಐಪಿಎಲ್​ನಲ್ಲಿ 413 ರನ್ ಚಚ್ಚಿದ ಬ್ಯಾಟರ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ

ಇದನ್ನೂ ಓದಿ
WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ
Ranji Trophy: ಪೂಜಾರ 2.0; ಬರೋಬ್ಬರಿ 54 ಎಸೆತಗಳ ನಂತರ ಖಾತೆ ತೆರೆದ ಐಪಿಎಲ್​ನ ಸ್ಟಾರ್ ಓಪನರ್..!

2) ರಿಷಭ್ ಪಂಥ್ – ನಾಯಕತ್ವದ ಹೆಚ್ಚುವರಿ ಒತ್ತಡವನ್ನು ರಿಷಬ್ ಪಂಥ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಈ ಸರಣಿಯಲ್ಲಿ ಎಲ್ಲರೂ ಕೇಳುತ್ತಿದ್ದಾರೆ. ಐಪಿಎಲ್ ಇರಲಿ ಅಥವಾ ರಾಷ್ಟ್ರೀಯ ತಂಡದಲ್ಲಿ ಹೊಸ ನಾಯಕತ್ವ ಇರಲಿ. ರಿಷಭ್ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 340 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಕೇವಲ 40 ರನ್ ಗಳಿಸಿದ್ದಾರೆ. ಕಳೆದ 16 ಇನ್ನಿಂಗ್ಸ್‌ಗಳಲ್ಲಿ ಅವರು 50ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಚಂಡಮಾರುತದ ಮೊದಲು ಶಾಂತವಾಗಿದ್ದಂತೆಯೇ ರಿಷಭ್ ಪರಿಸ್ಥಿತಿಯೂ ಇದೆ. ಬಹುಶಃ ರಾಜ್‌ಕೋಟ್‌ನಲ್ಲಿ ರಿಷಬ್‌ನ ಬ್ಯಾಟ್ ಅಬ್ಬರಿಸಬಹುದು.

3) ಹಾರ್ದಿಕ್ ಪಾಂಡ್ಯ – ಐರ್ಲೆಂಡ್ ಸರಣಿಗೆ ಹಾರ್ದಿಕ್ ಅವರನ್ನು ನಾಯಕ ಎಂದು ಘೋಷಿಸಲಾಗಿದೆ. ನಾಯಕತ್ವದ ಜವಾಬ್ದಾರಿ ಅವರಿಗೆ ಹೆಚ್ಚುವರಿ ಪ್ರಚೋದನೆಯನ್ನು ನೀಡಬೇಕು. ಪ್ರಸ್ತುತ ಸರಣಿಯಲ್ಲಿ ಅವರು ಉಪನಾಯಕರಾಗಿದ್ದಾರೆ. ಜೊತೆಗೆ ಅನೇಕ ನಿರ್ಧಾರಗಳಲ್ಲಿ ರಿಷಭ್​ಗೆ ನೆರವಾಗುತ್ತಿದ್ದಾರೆ. ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಹಾರ್ದಿಕ್ 61 ರನ್ ಗಳಿಸಿದ್ದಾರೆ. ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿದ್ದರು. ಎರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದರೂ ಯಶಸ್ಸು ಕಾಣಲಿಲ್ಲ. ಹೀಗಾಗಿ ರಾಜ್‌ಕೋಟ್‌ನಲ್ಲಿ ಹಾರ್ದಿಕ್‌ಗೆ ಹೆಚ್ಚಿನ ಗಮನ ನೀಡಲಾಗುವುದು.

4) ಯುಜ್ಬೇಂದ್ರ ಚಹಾಲ್ – ಯುಜ್ಬೇಂದ್ರ ಚಹಾಲ್ ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದಾರೆ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಚಹಲ್ ವಿಶಾಖಪಟ್ಟಣದಲ್ಲಿ ತಮ್ಮ ಲಯಕ್ಕೆ ಮರಳಿದರು. ಜೊತೆಗೆ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಸ್ತಿಯನ್ನೂ ಪಡೆದರು. ಚಹಲ್‌ನಲ್ಲಿ ತಾಂತ್ರಿಕವಾಗಿ ಬದಲಾವಣೆ ಕಂಡುಬಂದಿದೆ. ಮೊದಲೆರಡು ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದ ಚಹಲ್ ಕಳೆದ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದರು. 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರು.

5) ಉಮ್ರಾನ್ ಮಲಿಕ್ – IPL ನಲ್ಲಿ ಉಮ್ರಾನ್ ಬಿರುಗಾಳಿ ಎಬ್ಬಿಸಿದ್ದರು. ರಾಷ್ಟ್ರೀಯ ತಂಡದಲ್ಲಿ ಇದು ಯಾವಾಗ ಕಾಣಿಸುತ್ತದೆ? ಭಾರತ ತಂಡದ ಮ್ಯಾನೇಜ್‌ಮೆಂಟ್ ಕೂಡ ಉಮ್ರಾನ್ ಮಲಿಕ್‌ ಅವಕಾಶಕ್ಕಾಗಿ ಕಾಯುತ್ತಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯು ಸಾಮಾನ್ಯವಾಗಿ ಕನಿಷ್ಠ ಮೂರು ಪಂದ್ಯಗಳಲ್ಲಿ ಭಾರತದ ಆಡುವ ಇಲೆವೆನ್ ಬದಲಿಸಲು ಮನಸು ಮಾಡಲಿಲ್ಲ. ರಾಜ್‌ಕೋಟ್‌ನಲ್ಲಿ ಸರಣಿಯ ನಾಲ್ಕನೇ ಪಂದ್ಯ ನಡೆಯಲ್ಲಿದ್ದು, ಅವೇಶ್ ಖಾನ್ ಮೂರು ಪಂದ್ಯಗಳಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೀಗಾಗಿ ಬಹುಶಃ ಅವರ ಬದಲಿಗೆ ಉಮ್ರಾನ್ ಅವರನ್ನು ತಂಡದಲ್ಲಿ ನೋಡಬಹುದು.

Published On - 3:34 pm, Fri, 17 June 22