AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಹೀನಾಯವಾಗಿ ಸೋತ ಪಾಕ್ ತಂಡದ ಕಾಲೆಳೆದ ಜೊಮ್ಯಾಟೊ; ಟ್ವೀಟ್ ಸಖತ್ ವೈರಲ್

T20 World Cup 2022: ಜೊಮ್ಯಾಟೊ ಮಾಡಿರುವ ಈ ಟ್ವೀಟ್​ಗೆ ಧ್ವನಿಗೂಡಿಸಿರುವ ಅನೇಕ ಭಾರತೀಯರು, "ಈ ಸಮಯದಲ್ಲಿ ನಿವು ರುಚಿಯನ್ನು ಬದಲಾಯಿಸಲು ಮರೆಯಬೇಡಿ. ಏಕೆಂದರೆ, ಅವರಿಗೆ (ಪಾಕಿಸ್ತಾನ) ಈ ಊಟ ಇಷ್ಟವಾಗದೆ ಇರಬಹುದು ಎಂದು ಮರು ಟ್ವೀಟ್ ಮಾಡಿದ್ದಾರೆ.

IND vs PAK: ಹೀನಾಯವಾಗಿ ಸೋತ ಪಾಕ್ ತಂಡದ ಕಾಲೆಳೆದ ಜೊಮ್ಯಾಟೊ; ಟ್ವೀಟ್ ಸಖತ್ ವೈರಲ್
Virat Kohli
Follow us
TV9 Web
| Updated By: ಪೃಥ್ವಿಶಂಕರ

Updated on: Oct 24, 2022 | 12:09 PM

ಕಾಂಗರೂಗಳ ನಾಡಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಗೆಲುವಿನ ಶುಭಾರಂಭ ಮಾಡಿರುವ ಟೀಂ ಇಂಡಿಯಾ, ತನ್ನ ಮೊದಲ ಪಂದ್ಯದಲ್ಲೇ ಪಾಕ್ (India Vs Pakistan) ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಕೊಹ್ಲಿ (Virat Kohli) ಹೀರೋ ಎನಿಸಿಕೊಂಡರೆ, ಬೌಲಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಹಾಗೂ ಅರ್ಷ್​ದೀಪ್ ಸಿಂಗ್ ಕೂಡ ತಂಡದ ಗೆಲುವಿನ ಪ್ರಮುಖ ರೂವಾರಿಗಳು ಎನಿಸಿಕೊಂಡರು. ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿರುವ ಪಾಕ್ ತಂಡ ಮುಂದಿನ ಪಂದ್ಯದತ್ತ ಗಮನಹರಿಸುತ್ತಿದ್ದರೆ, ಟೀಂ ಇಂಡಿಯಾ ಅಭಿಮಾನಿಗಳು ಮಾತ್ರ ಪಾಕ್ ತಂಡವನ್ನು ಒಂದಲ್ಲ ಒಂದು ರೀತಿಯಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಕೈಜೋಡಿಸಿರುವ ಭಾರತ ಮೂಲದ ಫುಡ್ ಡೆಲಿವರಿಂಗ್ ಆ್ಯಪ್ ಜೊಮ್ಯಾಟೊ (Zomato) ಕೂಡ ತನ್ನ ತಮಾಷದಾಯಕ ಟ್ವೀಟ್​ನಿಂದ ಪಾಕಿಸ್ತಾನದ ಕಾಲೆಳೆದಿದೆ.

ಜೊಮ್ಯಾಟೊ ಟ್ವೀಟ್ ಸಖತ್ ವೈರಲ್

ಟೀಂ ಇಂಡಿಯಾ ವಿರುದ್ಧ ಪಾಕ್ ತಂಡ ಸೋತ ಬಳಿಕ ಟ್ವೀಟ್ ಮಾಡಿರುವ ಜೊಮ್ಯಾಟೊ, ‘ಪ್ರಿಯ ಪಾಕಿಸ್ತಾನ, ನೀವು ಸೋಲನ್ನು ಆರ್ಡರ್ ಮಾಡಿದ್ದೀರಾ? ಕೊಹ್ಲಿ ನಿಮ್ಮ ಸರ್ವಿಸ್’ (“Dear Pakistan, ordered a defeat? Virat your service.”) ಎಂದು ಟ್ವೀಟ್ ಮಾಡಿದೆ. ಈಗ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಜೊಮ್ಯಾಟ್ ಮಾಡಿರುವ ಈ ಟ್ವೀಟ್​ಗೆ ಮರು ಟ್ವೀಟ್ ಮಾಡಿರುವ ಪಾಕಿಸ್ತಾನ ಕರೀಂ ಎನ್ನುವ ಟ್ವಿಟರ್ ಹ್ಯಾಂಡಲ್, ‘ವಿ ಡೋಂಟ್ ಹ್ಯಾವ್ ಎ ಚೀಟ್ ಡೇಸ್’ (We don’t have cheat days) ಎಂದು ಬರೆದುಕೊಂಡಿದೆ. ಈ ಮೂಲಕ 20ನೇ ಓವರ್​ನಲ್ಲಿನ ನೋ ಬಾಲ್​ ಪ್ರಸಂಗವನ್ನು ಸೂಕ್ಷ್ಮವಾಗಿ ಎಳೆದು ತಂದಿರುವ ಈ ಟ್ವಿಟರ್ ಹ್ಯಾಂಡಲ್, ಆ ಎಸೆತ ನೋ ಬಾಲ್ ಆಗಿರಲಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದೆ.

ಜೊಮ್ಯಾಟೊ ಮಾಡಿರುವ ಈ ಟ್ವೀಟ್​ಗೆ ಧ್ವನಿಗೂಡಿಸಿರುವ ಅನೇಕ ಭಾರತೀಯರು, “ಈ ಸಮಯದಲ್ಲಿ ನಿವು ರುಚಿಯನ್ನು ಬದಲಾಯಿಸಲು ಮರೆಯಬೇಡಿ. ಏಕೆಂದರೆ, ಅವರಿಗೆ (ಪಾಕಿಸ್ತಾನ) ಈ ಊಟ ಇಷ್ಟವಾಗದೆ ಇರಬಹುದು ಎಂದು ಮರು ಟ್ವೀಟ್ ಮಾಡಿದ್ದಾರೆ.

ಪಂದ್ಯದ ಸಾರಾಂಶ ಹೀಗಿದೆ

ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಬಾಬರ್ ಎರಡನೇ ಓವರ್​ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ರಿಜ್ವಾನ್ 4 ರನ್​ಗಳಿಸಿ ಅರ್ಷದೀಪ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಎರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ವೇಳೆ ಇಫ್ತಿಕರ್ 34 ಎಸೆತಗಳಲ್ಲಿ 51 ರನ್ ಗಳಿಸಿದರೆ, ಮಸೂದ್ ಅಜೇಯ 52 ರನ್ ಗಳಿಸಿದರು. ಇವರಿಬ್ಬರ 81 ರನ್ ಜೊತೆಯಾಟ ಪಾಕಿಸ್ತಾನವನ್ನು 150 ರ ಗಡಿ ದಾಟುವಂತೆ ಮಾಡಿತು.

ಭಾರತದ ಅಗ್ರ ಕ್ರಮಾಂಕ ವಿಫಲ

160 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭವೂ ಕೂಡ ತೀರ ಕಳಪೆಯಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕೇವಲ 4 ರನ್ ಗಳಿಸಿ ಔಟಾದರೆ ನಾಯಕ ರಾಹುಲ್ ಕೂಡ ಅಷ್ಟೇ ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಸೂರ್ಯಕುಮಾರ್ ಯಾದವ್ ಕೂಡ ಇದಷ್ಟು ಸಮಯ ಸ್ಫೋಟಕ ಬ್ಯಾಟಿಂಗ್ ಮಾಡಿ, ಕೇವಲ 15 ರನ್ ಗಳಿಸಿ ಔಟಾದರು. ಈ ವಿಕೆಟ್ ಬಳಿಕ ಬಂದ ಅಕ್ಷರ್ ಪಟೇಲ್ ಕೂಡ ಕೇವಲ 2 ರನ್ ಗಳಿಸಿ ರನೌಟ್ ಆದರು.

ಆದರೆ 4 ವಿಕೆಟ್​ ಉರುಳಿದ ನಂತರ ಜೊತೆಯಾದ ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕದ ಜೊತೆಯಾಟದ ಮೂಲಕ ಭಾರತವನ್ನು ಗೆಲುವಿನ ಟ್ರ್ಯಾಕ್​ಗೆ ಮರಳಿಸಿದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಸಹ ಪೂರೈಸಿದರು. ಅಂತಿಮವಾಗಿ ಈ ಇಬ್ಬರ ನಡುವೆ ಶತಕದ ಜೊತೆಯಾಟವು ಬಂತು. ಆದರೆ ಗೆಲುವಿನ ದಡ ಸೇರಿಸಬೇಕಿದ್ದ ಪಾಂಡ್ಯ 20 ನೇ ಓವರ್ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಪಾಂಡ್ಯ ಔಟಾದ ನಂತರ ಬಂದ ಕಾರ್ತಿಕ್ ಕೂಡ ಕೇವಲ 1 ರನ್ ಗಳಿಗೆ ಸುಸ್ತಾದರು. ಕಾರ್ತಿಕ್ ವಿಕೆಟ್ ಬಳಿಕ ಬಂದ ಅಶ್ವಿನ್ ಒಂದು ರನ್ ಗಳಿಸಿ ಅಜೇಯರಾಗಿ ಉಳಿದಲ್ಲದೆ ಗೆಲುವಿನ ರನ್ ಬಾರಿಸಿದರು.

ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ