AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಸೈನಿಗೆ ಇಂಜುರಿ, ಹೊಸಬರಿಗೆ ಸಿಗುತ್ತಾ ಅವಕಾಶ? ಅಂತಿಮ ಚುಟುಕು ಸಮರಕ್ಕೆ ಭಾರತದ ಸಂಭಾವ್ಯ ಇಲೆವೆನ್

IND vs SL: ಕೊರೊನಾದ ಕಾರಣ, ಟೀಮ್ ಇಂಡಿಯಾದ 8 ಆಟಗಾರರು ಅಲಭ್ಯರಾಗಿದ್ದಾರೆ. ಆದ್ದರಿಂದ ತಂಡವನ್ನು ಆಯ್ಕೆ ಮಾಡಲು ಭಾರತಕ್ಕೆ ಅನೇಕ ಆಯ್ಕೆಗಳಿಲ್ಲ.

IND vs SL: ಸೈನಿಗೆ ಇಂಜುರಿ, ಹೊಸಬರಿಗೆ ಸಿಗುತ್ತಾ ಅವಕಾಶ? ಅಂತಿಮ ಚುಟುಕು ಸಮರಕ್ಕೆ ಭಾರತದ ಸಂಭಾವ್ಯ ಇಲೆವೆನ್
ಟೀಂ ಇಂಡಿಯಾ
TV9 Web
| Edited By: |

Updated on: Jul 29, 2021 | 3:12 PM

Share

ಟೀಮ್ ಇಂಡಿಯಾ 24 ಗಂಟೆಗಳಲ್ಲಿ ಸೇಡು ತೀರಿಸಿಕೊಳ್ಳಲಿದೆ. ಎರಡನೇ ಟಿ 20 ಯಲ್ಲಿ ಭಾರತವನ್ನು 4 ವಿಕೆಟ್‌ಗಳಿಂದ ಸೋಲಿಸಿದ ನಂತರ, ಕೊಲಂಬೊದ ಅದೇ ಪ್ರೇಮದಾಸ ಮೈದಾನದಲ್ಲಿ ಆತಿಥೇಯರನ್ನು ಸೋಲಿಸುವ ಸರದಿ ಈಗ. ಇಂದು ಕೊಲಂಬೊದಲ್ಲಿ, ಪಂದ್ಯದ ಬಗ್ಗೆ ಮಾತ್ರವಲ್ಲದೆ ಸರಣಿಯ ಬಗ್ಗೆಯೂ ನಿರ್ಧಾರ ಅಂತಿಮವಾಗಲಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ 3 ಟಿ 20 ಪಂದ್ಯಗಳು ಸರಣಿಯು 1-1ರಿಂದ ಸಮವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ಯಾವುದೇ ತಂಡವು ಗೆದ್ದರೂ ಟಿ 20 ಸರಣಿಯು ಅದರ ಮಡಿಲಿಗೆ ಬೀಳುತ್ತದೆ. ಉಭಯ ತಂಡಗಳು ಉತ್ತಮ ತಂಡದ ಸಂಯೋಜನೆಯೊಂದಿಗೆ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ.

ಕೊರೊನಾದ ಕಾರಣ, ಟೀಮ್ ಇಂಡಿಯಾದ 8 ಆಟಗಾರರು ಅಲಭ್ಯರಾಗಿದ್ದಾರೆ. ಆದ್ದರಿಂದ ತಂಡವನ್ನು ಆಯ್ಕೆ ಮಾಡಲು ಭಾರತಕ್ಕೆ ಅನೇಕ ಆಯ್ಕೆಗಳಿಲ್ಲ. ಇಂದು ನಡೆಯಲಿರುವ ನಿರ್ಣಾಯಕ ಪಂದ್ಯಕ್ಕಾಗಿ ಭಾರತ ಬಹುಶಃ ಅದೇ ತಂಡದೊಂದಿಗೆ ಆಡಬಹುದು. ಆದರೆ, ನವದೀಪ್ ಸೈನಿ ಅವರ ಆಯ್ಕೆಯಲ್ಲಿ ಸಸ್ಪೆನ್ಸ್ ಉಳಿದಿದೆ. ಮತ್ತೊಂದೆಡೆ, ಶ್ರೀಲಂಕಾ ತಂಡವು ತನ್ನ ಗೆಲುವಿನ ಸಂಯೋಜನೆಯನ್ನು ಬದಲಾಯಿಸುವ ಸಾಧ್ಯತೆಯೂ ಕಡಿಮೆ. ಎರಡೂ ತಂಡಗಳು ಇಂದು 24 ಗಂಟೆಗಳಲ್ಲಿ ಎರಡನೇ ಪಂದ್ಯವನ್ನು ಆಡಲಿವೆ ಎಂಬುದು ಇದಕ್ಕೆ ಕಾರಣ.

ಈ ಆಟಗಾರ ಪಾದಾರ್ಪಣೆ ಮಾಡಬಹುದು ಅಂದಹಾಗೆ, ಜುಲೈ 28 ರಂದು ಆಡಿದ ಎರಡನೇ ಟಿ 20 ಯಲ್ಲಿ ತೋರಿಸಿರುವಂತೆಯೇ ಮೂರನೇ ಮತ್ತು ಕೊನೆಯ ಟಿ 20 ಗಾಗಿ ಭಾರತದ ಇಲೆವೆನ್ ಆಡಬಹುದು. ಆದರೆ ಒಂದು ಬದಲಾವಣೆ ಇದ್ದರೆ ಅದು ನವದೀಪ್ ಸೈನಿ ರೂಪದಲ್ಲಿರುತ್ತದೆ. ನವದೀಪ್ ಆಡಲು ಸಾಧ್ಯವಾಗಿಲ್ಲದಿದ್ದರೆ, ಇಂದು ಅರ್ಶ್‌ದೀಪ್ ಸಿಂಗ್ ತಮ್ಮ ಟಿ 20 ಚೊಚ್ಚಲ ಪಂದ್ಯವನ್ನೂ ಆಡಬಹುದು. ತಂಡದ ಮೇಲೆ ಕೊರೊನಾ ನಡೆಸಿದ ದಾಳಿಯಿಂದಾಗಿ, ಎರಡನೇ ಟಿ 20 ಯಲ್ಲಿ ನಾಲ್ಕು ಆಟಗಾರರು ಚೊಚ್ಚಲ ಪಂದ್ಯ ಆಡಿದರು. ರಿತುರಾಜ್, ದೇವದತ್, ರಾಣಾ ಮತ್ತು ಚೇತನ್ ಸಕರಿಯಾ ಇಂದು ತಮ್ಮ ಎರಡನೇ ಟಿ 20 ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವುದನ್ನು ಕಾಣಬಹುದು.

ಭುವಿ ಬೌಲಿಂಗ್ ಮುನ್ನಡೆಸಲಿದ್ದಾರೆ ಇಂದು ನಡೆಯಲಿರುವ ನಿರ್ಣಾಯಕ ಟಿ 20 ಯಲ್ಲಿ ಧವನ್ ರಿತುರಾಜ್ ಅವರ ಹೆಗಲ ಮೇಲೆ ಸಾಕಷ್ಟು ಜವಬ್ದಾರಿ ಇರುವುದರಿಂದ, ಉತ್ತಮ ಆರಂಭವನ್ನು ಪಡೆಯಲು ಒತ್ತು ನೀಡಲಾಗುವುದು. ಇದಲ್ಲದೆ, ದೇವ್‌ದತ್, ರಾಣಾ, ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡಬೇಕಿದೆ. ಬೌಲಿಂಗ್​ನಲ್ಲಿ, ಉಪನಾಯಕ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ. ಕುಲದೀಪ್ ಯಾದವ್, ರಾಹುಲ್ ಚಹರ್ ಮತ್ತು ವರುಣ್ ಚಕ್ರವರ್ತಿ ಅವರ ಹೆಗಲ ಮೇಲೆ ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ಕಾಣಬಹುದು.

ಮೂರನೇ ಟಿ 20 ಯಲ್ಲಿ ಭಾರತದ ಸಂಭಾವ್ಯ ಇಲೆವೆನ್ ಶಿಖರ್ ಧವನ್, ರಿತುರಾಜ್ ಗೈಕ್ವಾಡ್, ದೇವದತ್ ಪಡಿಕ್ಕಲ್, ನಿತೀಶ್ ರಾಣಾ, ಸಂಜು ಸ್ಯಾಮ್ಸನ್, ಭುವನೇಶ್ವರ್ ಕುಮಾರ್, ಚೇತನ್ ಸಕಾರಿಯಾ, ರಾಹುಲ್ ಚಹರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಮತ್ತು ನವದೀಪ್ ಸೈನಿ / ಅರ್ಷ್‌ದೀಪ್ ಸಿಂಗ್