AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Sri Lanka 3rd ODI: 3ನೇ ಅಂಪೈರ್ ತೀರ್ಪುಗೂ ಮುನ್ನ ಸಂಭ್ರಮಿಸಿ ಅಪಹಾಸ್ಯಕ್ಕೀಡಾದ ಶ್ರೀಲಂಕಾ ಆಟಗಾರರು..!

India vs Sri Lanka 3rd ODI: ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್​ನಲ್ಲಿ ಬಾಲ್​ ನೇರವಾಗಿ ಪ್ಯಾಡ್​ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್​ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು.

India vs Sri Lanka 3rd ODI: 3ನೇ ಅಂಪೈರ್ ತೀರ್ಪುಗೂ ಮುನ್ನ ಸಂಭ್ರಮಿಸಿ ಅಪಹಾಸ್ಯಕ್ಕೀಡಾದ ಶ್ರೀಲಂಕಾ ಆಟಗಾರರು..!
Surykumar Yadav LBW decision
TV9 Web
| Edited By: |

Updated on:Jul 23, 2021 | 10:52 PM

Share

ಭಾರತ-ಶ್ರೀಲಂಕಾ ನಡುವಣ 3ನೇ ಏಕದಿನ ಪಂದ್ಯವು ಹಲವು ಕಾರಣಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು. ಟಾಸ್ ಗೆದ್ದಾಗ ಶಿಖರ್ ಧವನ್ ಸಂಭ್ರಮಿಸಿದ್ದು, ಟೀಮ್ ಇಂಡಿಯಾ 6 ಬದಲಾವಣೆಯೊಂದಿಗೆ 5 ಹೊಸ ಮುಖಗಳಿಗೆ ಚಾನ್ಸ್​ ನೀಡಿದ್ದು…ಹೀಗೆ ಆರಂಭದಿಂದಲೇ ನಾನಾ ಕಾರಣಗಳಿಂದ ಲಂಕಾ ವಿರುದ್ದದ ಅಂತಿಮ ಪಂದ್ಯವು ಗಮನ ಸೆಳೆದಿತ್ತು. ಹಾಗೆಯೇ ಟಾಸ್ ಗೆದ್ದು ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ 118 ರನ್​ಗಳಿಸಿದ್ದ ವೇಳೆ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ ಕಚ್ಚಿ ಆಡಿದ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.

ಇತ್ತ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಹರಸಾಹಸ ಪಡುತ್ತಿದ್ದ ಲಂಕಾ ಬೌಲರುಗಳಿಗೆ 23ನೇ ಓವರ್​ನಲ್ಲಿ ತುಸು ಸಮಾಧಾನ ಸಿಕ್ಕಿತ್ತು. ಪ್ರವೀಣ್ ಜಯವಿಕ್ರಮ ಎಸೆದ ಎಸೆತವು ಸೂರ್ಯಕುಮಾರ್ ಪ್ಯಾಡ್​ಗೆ ತಾಗಿದೆ ಎಂದು ಲಂಕಾ ಆಟಗಾರರು ಎಲ್​ಬಿಡಬ್ಲ್ಯೂಗೆ ಮನವಿ ಸಲ್ಲಿಸಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಪು ಪ್ರಶ್ನಿಸಿ ಸೂರ್ಯಕುಮಾರ್ 3ನೇ ಅಂಪೈರ್​ಗೆ ಡಿಆರ್​ಎಸ್ ಮನವಿ ಸಲ್ಲಿಸಿದರು. ಟಿವಿ ಅಂಪೈರ್ ಚೆಂಡು ಬ್ಯಾಟ್​ಗೆ ತಗುಲಿದೆಯಾ ಎಂದು ಪರಿಶೀಲಿಸಿದಾಗ ಬಾಲ್ ನೇರವಾಗಿ ಹೋಗಿ ಕಾಲಿಗೆ ಪ್ಯಾಡ್​ಗೆ ಬಡಿದಿರುವುದು ಸ್ಪಷ್ಟವಾಗಿತ್ತು.

ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್​ನಲ್ಲಿ ಬಾಲ್​ ನೇರವಾಗಿ ಪ್ಯಾಡ್​ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್​ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು. ಆದರೆ ಬಾಲ್​ ಟ್ರ್ಯಾಕಿಂಗ್​ನ್ನು ಹಲವು ಬಾರಿ ಪರಿಶೀಲಿಸಿದ ಮೂರನೇ ಅಂಪೈರ್ ನೌಟೌಟ್ ಎಂದು ತೀರ್ಪು ನೀಡಿದರು. ಏಕೆಂದರೆ ಚೆಂಡು ಆಫ್ ಸ್ಟಂಪ್ ಹೊರಗೆ ಬಿದ್ದಿತು. ಬಹುಶಃ ಶ್ರೀಲಂಕಾದ ಆಟಗಾರರಿಗೆ ಡಿಆರ್​ಎಸ್​ ನಿಯಮದ ಬಗ್ಗೆ ಸ್ಪಷ್ಟತೆ ಇದಿರಲಿಲ್ಲ. ಹೀಗಾಗಿಯೇ ಮೂರನೇ ಅಂಪೈರ್ ನಿರ್ಧಾರ ಬರುವ ಮೊದಲು ಅವರು ಸಂಭ್ರಮಿಸಿದರು.

ಆದರೆ ಮೂರನೇ ಅಂಪೈರ್ ತೀರ್ಪು ಬಂದಾಗ ಶ್ರೀಲಂಕಾದ ಪ್ರತಿಯೊಬ್ಬ ಆಟಗಾರರು ದಿಗ್ಭ್ರಮೆಗೊಂಡರು. ಅಲ್ಲದೆ ಫೀಲ್ಡ್​ ಅಂಪೈರ್ ಜೊತೆ ಯಾಕೆ ನಾಟೌಟ್ ನೀಡಿದ್ದಾರೆ ಎಂದು ಪ್ರಶ್ನಿಸಿ ಕಾರಣಗಳನ್ನು ತಿಳಿದುಕೊಂಡರು. ಮೊದಲೇ ಕಳಪೆ ಪ್ರದರ್ಶನದಿಂದ ಭಾರೀ ಟ್ರೋಲ್​ಗೆ ಒಳಗಾಗಿದ್ದ ಶ್ರೀಲಂಕಾ ಆಟಗಾರರು ಇದೀಗ, ಮೂರನೇ ತೀರ್ಪಿಗೂ ಮುಂಚೆಯೇ ಸಂಭ್ರಮಿಸಿ ಅಪಹಾಸ್ಯಕ್ಕೀಡಾಗಿದ್ದಾರೆ.

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

(India vs Sri Lanka 3rd ODI: Sri Lanka Players Celebrate Suryakumar Yadav’s Wicket Even After DRS Confirms)

Published On - 10:13 pm, Fri, 23 July 21

Follow Us
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ