AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Sri Lanka 3rd ODI: 3ನೇ ಅಂಪೈರ್ ತೀರ್ಪುಗೂ ಮುನ್ನ ಸಂಭ್ರಮಿಸಿ ಅಪಹಾಸ್ಯಕ್ಕೀಡಾದ ಶ್ರೀಲಂಕಾ ಆಟಗಾರರು..!

India vs Sri Lanka 3rd ODI: ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್​ನಲ್ಲಿ ಬಾಲ್​ ನೇರವಾಗಿ ಪ್ಯಾಡ್​ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್​ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು.

India vs Sri Lanka 3rd ODI: 3ನೇ ಅಂಪೈರ್ ತೀರ್ಪುಗೂ ಮುನ್ನ ಸಂಭ್ರಮಿಸಿ ಅಪಹಾಸ್ಯಕ್ಕೀಡಾದ ಶ್ರೀಲಂಕಾ ಆಟಗಾರರು..!
Surykumar Yadav LBW decision
TV9 Web
| Edited By: |

Updated on:Jul 23, 2021 | 10:52 PM

Share

ಭಾರತ-ಶ್ರೀಲಂಕಾ ನಡುವಣ 3ನೇ ಏಕದಿನ ಪಂದ್ಯವು ಹಲವು ಕಾರಣಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು. ಟಾಸ್ ಗೆದ್ದಾಗ ಶಿಖರ್ ಧವನ್ ಸಂಭ್ರಮಿಸಿದ್ದು, ಟೀಮ್ ಇಂಡಿಯಾ 6 ಬದಲಾವಣೆಯೊಂದಿಗೆ 5 ಹೊಸ ಮುಖಗಳಿಗೆ ಚಾನ್ಸ್​ ನೀಡಿದ್ದು…ಹೀಗೆ ಆರಂಭದಿಂದಲೇ ನಾನಾ ಕಾರಣಗಳಿಂದ ಲಂಕಾ ವಿರುದ್ದದ ಅಂತಿಮ ಪಂದ್ಯವು ಗಮನ ಸೆಳೆದಿತ್ತು. ಹಾಗೆಯೇ ಟಾಸ್ ಗೆದ್ದು ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ 118 ರನ್​ಗಳಿಸಿದ್ದ ವೇಳೆ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ ಕಚ್ಚಿ ಆಡಿದ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.

ಇತ್ತ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಹರಸಾಹಸ ಪಡುತ್ತಿದ್ದ ಲಂಕಾ ಬೌಲರುಗಳಿಗೆ 23ನೇ ಓವರ್​ನಲ್ಲಿ ತುಸು ಸಮಾಧಾನ ಸಿಕ್ಕಿತ್ತು. ಪ್ರವೀಣ್ ಜಯವಿಕ್ರಮ ಎಸೆದ ಎಸೆತವು ಸೂರ್ಯಕುಮಾರ್ ಪ್ಯಾಡ್​ಗೆ ತಾಗಿದೆ ಎಂದು ಲಂಕಾ ಆಟಗಾರರು ಎಲ್​ಬಿಡಬ್ಲ್ಯೂಗೆ ಮನವಿ ಸಲ್ಲಿಸಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಪು ಪ್ರಶ್ನಿಸಿ ಸೂರ್ಯಕುಮಾರ್ 3ನೇ ಅಂಪೈರ್​ಗೆ ಡಿಆರ್​ಎಸ್ ಮನವಿ ಸಲ್ಲಿಸಿದರು. ಟಿವಿ ಅಂಪೈರ್ ಚೆಂಡು ಬ್ಯಾಟ್​ಗೆ ತಗುಲಿದೆಯಾ ಎಂದು ಪರಿಶೀಲಿಸಿದಾಗ ಬಾಲ್ ನೇರವಾಗಿ ಹೋಗಿ ಕಾಲಿಗೆ ಪ್ಯಾಡ್​ಗೆ ಬಡಿದಿರುವುದು ಸ್ಪಷ್ಟವಾಗಿತ್ತು.

ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್​ನಲ್ಲಿ ಬಾಲ್​ ನೇರವಾಗಿ ಪ್ಯಾಡ್​ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್​ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು. ಆದರೆ ಬಾಲ್​ ಟ್ರ್ಯಾಕಿಂಗ್​ನ್ನು ಹಲವು ಬಾರಿ ಪರಿಶೀಲಿಸಿದ ಮೂರನೇ ಅಂಪೈರ್ ನೌಟೌಟ್ ಎಂದು ತೀರ್ಪು ನೀಡಿದರು. ಏಕೆಂದರೆ ಚೆಂಡು ಆಫ್ ಸ್ಟಂಪ್ ಹೊರಗೆ ಬಿದ್ದಿತು. ಬಹುಶಃ ಶ್ರೀಲಂಕಾದ ಆಟಗಾರರಿಗೆ ಡಿಆರ್​ಎಸ್​ ನಿಯಮದ ಬಗ್ಗೆ ಸ್ಪಷ್ಟತೆ ಇದಿರಲಿಲ್ಲ. ಹೀಗಾಗಿಯೇ ಮೂರನೇ ಅಂಪೈರ್ ನಿರ್ಧಾರ ಬರುವ ಮೊದಲು ಅವರು ಸಂಭ್ರಮಿಸಿದರು.

ಆದರೆ ಮೂರನೇ ಅಂಪೈರ್ ತೀರ್ಪು ಬಂದಾಗ ಶ್ರೀಲಂಕಾದ ಪ್ರತಿಯೊಬ್ಬ ಆಟಗಾರರು ದಿಗ್ಭ್ರಮೆಗೊಂಡರು. ಅಲ್ಲದೆ ಫೀಲ್ಡ್​ ಅಂಪೈರ್ ಜೊತೆ ಯಾಕೆ ನಾಟೌಟ್ ನೀಡಿದ್ದಾರೆ ಎಂದು ಪ್ರಶ್ನಿಸಿ ಕಾರಣಗಳನ್ನು ತಿಳಿದುಕೊಂಡರು. ಮೊದಲೇ ಕಳಪೆ ಪ್ರದರ್ಶನದಿಂದ ಭಾರೀ ಟ್ರೋಲ್​ಗೆ ಒಳಗಾಗಿದ್ದ ಶ್ರೀಲಂಕಾ ಆಟಗಾರರು ಇದೀಗ, ಮೂರನೇ ತೀರ್ಪಿಗೂ ಮುಂಚೆಯೇ ಸಂಭ್ರಮಿಸಿ ಅಪಹಾಸ್ಯಕ್ಕೀಡಾಗಿದ್ದಾರೆ.

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

(India vs Sri Lanka 3rd ODI: Sri Lanka Players Celebrate Suryakumar Yadav’s Wicket Even After DRS Confirms)

Published On - 10:13 pm, Fri, 23 July 21

Follow Us
ಗವಿಮಠ ದಾಸೋಹಕ್ಕೆ ತಟ್ಟದ ಗ್ಯಾಸ್​ ಸಿಲಿಂಡರ್ ಎಫೆಕ್ಟ್: ಏಕೆ ಗೊತ್ತಾ?
ಗವಿಮಠ ದಾಸೋಹಕ್ಕೆ ತಟ್ಟದ ಗ್ಯಾಸ್​ ಸಿಲಿಂಡರ್ ಎಫೆಕ್ಟ್: ಏಕೆ ಗೊತ್ತಾ?
ಶಾಸಕ ಯತ್ನಾಳ್​​ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!
ಶಾಸಕ ಯತ್ನಾಳ್​​ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!
ಕೊಲ್ಲಂನಲ್ಲಿ ಗ್ಯಾಂಗ್‌ಸ್ಟರ್ ಅಲುವಾ ಅತುಲ್ ಬರ್ಬರ ಹತ್ಯೆ
ಕೊಲ್ಲಂನಲ್ಲಿ ಗ್ಯಾಂಗ್‌ಸ್ಟರ್ ಅಲುವಾ ಅತುಲ್ ಬರ್ಬರ ಹತ್ಯೆ
ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ ಮಾಡಿದ ಒಂಟಿ ದಂತದ ಕಾಡಾನೆ
ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ ಮಾಡಿದ ಒಂಟಿ ದಂತದ ಕಾಡಾನೆ
ಅಡ್ಡಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಬಸ್
ಅಡ್ಡಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಬಸ್
ಕಾಂಗ್ರೆಸ್​​ ಶಾಸಕರ ಖರೀದಿಗೆ ಬಿಜೆಪಿ ಯತ್ನ: ಡಿಕೆಶಿ ಸ್ಫೋಟಕ ಆರೋಪ
ಕಾಂಗ್ರೆಸ್​​ ಶಾಸಕರ ಖರೀದಿಗೆ ಬಿಜೆಪಿ ಯತ್ನ: ಡಿಕೆಶಿ ಸ್ಫೋಟಕ ಆರೋಪ
ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳ ಒಂದು ಮಾಡಿದ ನ್ಯಾಯಾಧೀಶರು!
ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳ ಒಂದು ಮಾಡಿದ ನ್ಯಾಯಾಧೀಶರು!
ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್
ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್
ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು
ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು
ವಾರ ಭವಿಷ್ಯ; ಈ ರಾಶಿಗೆ ಈ ವಾರ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಪ್ರಗತಿ
ವಾರ ಭವಿಷ್ಯ; ಈ ರಾಶಿಗೆ ಈ ವಾರ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಪ್ರಗತಿ