AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಅಫ್ಘಾನಿಸ್ತಾನ್​ ತಂಡದ ಮೂವರು ಆಟಗಾರರು ಐಪಿಎಲ್​ಗೆ ಅನುಮಾನ

IPL 2024: ನವೀನ್ ಉಲ್ ಹಕ್ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಹಾಗೆಯೇ ಫಝಲ್​ಹಕ್ ಫಾರೂಖಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇನ್ನು ಮುಜೀಬ್ ಉರ್ ರೆಹಮಾನ್ ಈ ಬಾರಿಯ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.

IPL 2024: ಅಫ್ಘಾನಿಸ್ತಾನ್​ ತಂಡದ ಮೂವರು ಆಟಗಾರರು ಐಪಿಎಲ್​ಗೆ ಅನುಮಾನ
Naveen
TV9 Web
| Edited By: |

Updated on: Dec 26, 2023 | 9:59 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಗಾಗಿ ಭರ್ಜರಿ ಸಿದ್ಧತೆಯಲ್ಲಿದ್ದ ಮೂವರು ಆಟಗಾರರಿಗೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ಬಿಗ್ ಶಾಕ್ ನೀಡಿದೆ. ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್​ಹಕ್ ಫಾರೂಖಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಎಸಿಬಿ ನಿರಾಕರಿಸಿದೆ.

ಈ ಮೂವರು ಆಟಗಾರರು ಅಫ್ಘಾನ್ ತಂಡದ ಕೇಂದ್ರೀಯ ಒಪ್ಪಂದದಿಂದ ಬಿಡುಗಡೆಯಾಗಲು ಬಯಸಿದ್ದರು. ಫ್ರಾಂಚೈಸಿ ಲೀಗ್​ನಲ್ಲಿ ಭಾಗವಹಿಸಲು ಇಂತಹ ನಿರ್ಧಾರಕ್ಕೆ ಬಂದಿದ್ದರು. ಆದರೆ ರಾಷ್ಟ್ರೀಯ ತಂಡಕ್ಕಿಂತ ಫ್ರಾಂಚೈಸಿ ಲೀಗ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದ್ದಾರೆಂಬ ಕಾರಣಕ್ಕೆ ಇದೀಗ ಈ ಮೂವರು ಆಟಗಾರರಿಗೆ ಎನ್​ಒಸಿ ನೀಡದಿರಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ನಿರ್ಧರಿಸಿದೆ.

ಅದರಂತೆ ನವೀನ್ ಉಲ್ ಹಕ್, ಫಝಲ್​ಹಕ್ ಫಾರೂಖಿ ಹಾಗೂ ಮುಜೀಬ್​ ಉರ್ ರೆಹಮಾನ್​ಗೆ ಮುಂದಿನ 2 ವರ್ಷಗಳ ಕಾಲ ನಿರಾಕ್ಷೇಪಣಾ ಪತ್ರ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್​ ಮಂಡಳಿ ತಿಳಿಸಿದೆ.

ಅಂದರೆ ಈ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಬೇಕಿದ್ದರೆ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ಎನ್​ಒಸಿ ಪಡೆಯಬೇಕು. ಆದರೆ ಇದೀಗ ಈ ಮೂವರನ್ನು 2 ವರ್ಷಗಳ ಕಾಲ ಫ್ರಾಂಚೈಸಿ ಲೀಗ್​ನಿಂದ ಬ್ಯಾನ್ ಮಾಡಿ ಶಿಸ್ತು ಕ್ರಮ ಕೈಗೊಳ್ಳಲು ಎಸಿಬಿ ನಿರ್ಧರಿಸಿದೆ.ಇದರಿಂದಾಗಿ ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್​ಹಕ್ ಫಾರೂಖಿ ಮುಂಬರುವ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ನವೀನ್ ಉಲ್ ಹಕ್ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಹಾಗೆಯೇ ಫಝಲ್​ಹಕ್ ಫಾರೂಖಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇನ್ನು ಮುಜೀಬ್ ಉರ್ ರೆಹಮಾನ್ ಈ ಬಾರಿಯ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.

ಇದೀಗ ಈ ಮೂವರು ಆಟಗಾರರ ಮೇಲೆ ಎಸಿಬಿ ಬ್ಯಾನ್ ವಿಧಿಸಿದೆ. ಒಂದು ವೇಳೆ ಈ ಆಟಗಾರರಿಗೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ಎನ್​ಒಸಿ ನೀಡಲು ನಿರಾಕರಿಸಿದರೆ, ಐಪಿಎಲ್​ ಫ್ರಾಂಚೈಸಿಗಳು ಇವರ ಬದಲಿ ಆಟಗಾರರನ್ನು ಆಯ್ಕೆ ಮಾಡಲಿದೆ.

ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

ಐಪಿಎಲ್​ನಲ್ಲಿರುವ ಅಫ್ಘಾನಿಸ್ತಾನ್ ಆಟಗಾರರು:

  • ರಶೀದ್ ಖಾನ್ (ಗುಜರಾತ್ ಟೈಟಾನ್ಸ್​)
  • ಮೊಹಮ್ಮದ್ ನಬಿ (ಮುಂಬೈ ಇಂಡಿಯನ್ಸ್​)
  • ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್​)
  • ರಹಮಾನುಲ್ಲಾ ಗುರ್ಬಾಝ್ (ಕೊಲ್ಕತ್ತಾ ನೈಟ್ ರೈಡರ್ಸ್​)
  • ನವೀನ್ ಉಲ್ ಹಕ್ (ಲಕ್ನೋ ಸೂಪರ್ ಜೈಂಟ್ಸ್​)
  • ಫಝಲ್​ಹಕ್ ಫಾರೂಖಿ (ಸನ್​ರೈಸರ್ಸ್​ ಹೈದರಾಬಾದ್)
  • ಅಝ್ಮತುಲ್ಲಾ ಒಮರ್​ಝಾಹಿ (ಗುಜರಾತ್ ಟೈಟಾನ್ಸ್​)
  • ಮುಜೀಬ್ ಉರ್ ರೆಹಮಾನ್ (ಕೊಲ್ಕತ್ತಾ ನೈಟ್ ರೈಡರ್ಸ್​)
Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’