AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಮಳೆಯಿಂದ ಓವರ್​ ಕಡಿತಗೊಳಿಸಿದರೆ..? ಇಲ್ಲಿದೆ ಆರ್​ಸಿಬಿ ಪ್ಲೇಆಫ್​ ಲೆಕ್ಕಾಚಾರ

IPL 2024 RCB vs CSK Playoff Scenario: ಆರ್​ಸಿಬಿ ಪ್ಲೇಆಫ್‌ಗೇರಬೇಕೆಂದರೆ ಈ ಪಂದ್ಯದಲ್ಲಿ ಚೆನ್ನೈ ತಂಡವನ್ನು 18 ರನ್ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಬೇಕು. ಇದು ಸಾಧ್ಯವಾದರೆ ಆರ್​ಸಿಬಿಯ ನೆಟ್​ ರನ್​ರೇಟ್​ ಸಿಎಸ್​ಕೆಗಿಂತ ಉತ್ತಮವಾಗುವುದಲ್ಲದೆ, ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆಯಲ್ಲಿದೆ.

IPL 2024: ಮಳೆಯಿಂದ ಓವರ್​ ಕಡಿತಗೊಳಿಸಿದರೆ..? ಇಲ್ಲಿದೆ ಆರ್​ಸಿಬಿ ಪ್ಲೇಆಫ್​ ಲೆಕ್ಕಾಚಾರ
ಆರ್​ಸಿಬಿ- ಸಿಎಸ್​ಕೆ
Follow us
ಪೃಥ್ವಿಶಂಕರ
|

Updated on: May 17, 2024 | 5:02 PM

ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವೆ ನಾಳೆ ಅಂದರೆ, ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಕದನ ನಡೆಯಲ್ಲಿದೆ. ಪ್ಲೇಆಫ್‌ಗೇರಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗು ಅತ್ಯವಶ್ಯಕವಾಗಿದೆ. ಆದರೆ ಈ ಪಂದ್ಯದ ಮೇಲೆ ಮಳೆಯ ಕರಿನೆರಳು ಆವರಿಸಿದೆ. ಇದು ಆರ್​ಸಿಬಿ (RCB) ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​ಕೆ ತಂಡ ನಾಲ್ಕನೇ ತಂಡವಾಗಿ ಸುಲಭವಾಗಿ ಪ್ಲೇಆಫ್‌ಗೇರಲಿದೆ. ಇತ್ತ ಆರ್​ಸಿಬಿ ಮತ್ತೊಮ್ಮೆ ಖಾಲಿ ಕೈಯಲ್ಲಿ ಲೀಗ್​ನಿಂದ ಹೊರಬೀಳಬೇಕಿದೆ. ಅದೃಷ್ಟವಶಾತ್ ಪಂದ್ಯದ ದಿನ ಮಳೆ ಬಾರದೆ ಪಂದ್ಯ ನಡೆದರೂ ಆರ್​ಸಿಬಿ ಪ್ಲೇಆಫ್‌ಗೇರುವ ಹಾದಿ ಅಷ್ಟು ಸುಲಭವಾಗಿಲ್ಲ. ಏಕೆಂದರೆ ಆರ್​ಸಿಬಿಗಿಂತ, ಸಿಎಸ್​​ಕೆ ಈಗಾಗಲೇ ಒಂದು ಪಂದ್ಯವನ್ನು ಅಧಿಕವಾಗಿ ಗೆದ್ದಿರುವುದು ಮತ್ತು ಅದರ ನೆಟ್​ ರನ್​ರೇಟ್ (NRR)​ ಕೂಡ ಆರ್​ಸಿಬಿಗಿಂತ ಉತ್ತಮವಾಗಿರುವುದು.

ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಆರ್​ಸಿಬಿ ಕೇವಲ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಈಗ ಚೆನ್ನೈ ಮುಂದಿನ ಸುತ್ತಿಗೆ ತಲುಪಲು ಕೇವಲ ಒಂದು ಜಯದ ಅಗತ್ಯವಿದೆ. ಆದರೆ ಬೆಂಗಳೂರಿಗೆ ಗೆಲುವಿನ ಅವಶ್ಯಕತೆ ಮಾತ್ರವಲ್ಲದೆ ಚೆನ್ನೈ ಅನ್ನು ನಿರ್ದಿಷ್ಟ ಅಂತರದಿಂದ ಸೋಲಿಸಬೇಕಾಗಿದೆ. ಅಂದರೆ, ಬೆಂಗಳೂರು ಆ ಅಂತರವನ್ನು ಸಾಧಿಸದಿದ್ದರೆ, ಸೋಲಿನ ಹೊರತಾಗಿಯೂ ಚೆನ್ನೈ ಪ್ಲೇಆಫ್ ತಲುಪುತ್ತದೆ.

ಪಂದ್ಯಕ್ಕೆ ಮಳೆಯ ಆತಂಕ

ಆರ್​ಸಿಬಿ ಪ್ಲೇಆಫ್‌ಗೇರಬೇಕೆಂದರೆ ಈ ಪಂದ್ಯದಲ್ಲಿ ಚೆನ್ನೈ ತಂಡವನ್ನು 18 ರನ್ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಬೇಕು. ಇದು ಸಾಧ್ಯವಾದರೆ ಆರ್​ಸಿಬಿಯ ನೆಟ್​ ರನ್​ರೇಟ್​ ಸಿಎಸ್​ಕೆಗಿಂತ ಉತ್ತಮವಾಗುವುದಲ್ಲದೆ, ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆಯಲ್ಲಿದೆ. ಆದರೆ ಮೇ 18 ರಿಂದ 20 ರವರೆಗೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದಕ್ಕಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 18ರಂದೇ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯ ನಡೆಯಲ್ಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯವನ್ನು ಸಂಪೂರ್ಣವಾಗಿ ರದ್ದುಪಡಿಸಬಹುದು ಅಥವಾ ಸಮಯಕ್ಕನುಗುಣವಾಗಿ ಓವರ್‌ಗಳನ್ನು ಕಡಿತಗೊಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಆರ್​ಸಿಬಿ ಪ್ಲೇಆಫ್‌ಗೇರಲು ಏನು ಮಾಡಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಓವರ್‌ಗಳನ್ನು ಕಡಿತಗೊಳಿಸಿದರೆ ಆರ್​ಸಿಬಿ ಹೇಗೆ ಗೆಲ್ಲಬೇಕು?

ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ, ಆರ್‌ಸಿಬಿ ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದನ್ನು ನೋಡುವುದಾದರೆ.. ಪಂದ್ಯ 20 ಓವರ್‌ಗಳದ್ದಾಗಿದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಸಿಎಸ್​ಕೆ ತಂಡವನ್ನು 182 ರನ್‌ಗಳಿಗೆ ನಿರ್ಬಂಧಿಸಬೇಕಾಗುತ್ತದೆ. ಅಂದರೆ 18 ರನ್‌ಗಳಿಂದ ಸೋಲಿಸಬೇಕು. ಒಂದು ವೇಳೆ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಟಾರ್ಗೆಟ್ ನೀಡಿದರೆ, ಆರ್‌ಸಿಬಿ ಈ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಅಂದರೆ 18.1 ಓವರ್‌ಗಳಲ್ಲಿ ಸಾಧಿಸಬೇಕಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ ಆಗ ಆರ್​ಸಿಬಿ ಏನು ಮಾಡುಬೇಕು ಎಂಬುದನ್ನು ನೋಡುವುದಾದರೆ..

  • ಮಳೆಯಿಂದಾಗಿ ಪಂದ್ಯವನ್ನು ತಲಾ 15 ಓವರ್‌ಗಳಿಗೆ ಸೀಮಿತಗೊಳಿಸಿದರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 170 ರನ್ ಗಳಿಸಿದರೆ, ಚೆನ್ನೈ ತಂಡವನ್ನು 152 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಒಂದು ವೇಳೆ ಸಿಎಸ್​ಕೆ ಮೊದಲು ಬ್ಯಾಟಿಂಗ್ ಮಾಡಿ 170 ರನ್ ಕಲೆಹಾಕಿದರೆ, ಆರ್​ಸಿಬಿ ಈ ಗುರಿಯನ್ನು 13.1 ಓವರ್‌ಗಳಲ್ಲಿ ಸಾಧಿಸಬೇಕಾಗಿದೆ.
  • ಒಂದು ವೇಳೆ ಪಂದ್ಯ ತಲಾ 10 ಓವರ್‌ಗಳಿಗೆ ಸೀಮಿತಗೊಂಡರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 100 ರನ್ ಗಳಿಸಿದರೆ, ಚೆನ್ನೈ ತಂಡವನ್ನು 82 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿ 100 ರನ್ ಟಾರ್ಗೆಟ್ ನೀಡಿದರೆ, ಆರ್​ಸಿಬಿ 8.1 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಬೇಕಾಗಿದೆ.
  • ಅಂತಿಮವಾಗಿ ಪಂದ್ಯ ತಲಾ 5 ಓವರ್‌ಗಳಿಗೆ ಸೀಮಿತಗೊಂಡರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 50 ರನ್ ಗಳಿಸಿತು ಎಂದಿಟ್ಟುಕೊಳ್ಳೋಣ, ಆಗ ಚೆನ್ನೈ ತಂಡವನ್ನು 32 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 50 ರನ್ ಗಳಿಸಿದರೆ, ಆಗ ಆರ್​ಸಿಬಿ 3.1 ಓವರ್‌ಗಳಲ್ಲಿ ಈ ರನ್ ಬಾರಿಸಬೇಕಾಗುತ್ತದೆ. ಆಗ ಮಾತ್ರ ತಂಡ ನೆಟ್​ ರನ್​ರೇಟ್ ಆಧಾರದ ಮೇಲೆ ಪ್ಲೇಆಫ್‌ಗೇರಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ