AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ

Ranji Trophy Elite 2025-26: ಜಮ್ಮು-ಕಾಶ್ಮೀರ ತಂಡವು ರಣಜಿ ಟೂರ್ನಿ ಆಡಲು ಶುರುವಾಗಿ 55 ವರ್ಷಗಳಾಗಿವೆ. ಈ ಐವತ್ತೈದು ವರ್ಷಗಳಲ್ಲಿ ಒಮ್ಮೆಯೂ ಸೆಮಿಫೈನಲ್​ಗೆ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಕಾಶ್ಮೀರಿ ಪಡೆ ಹೊಸ ಇತಿಹಾಸ ರಚಿಸಿದ್ದಾರೆ. ಅದು ಸಹ ಬಲಿಷ್ಠ ಮಧ್ಯ ಪ್ರದೇಶ್ ತಂಡಕ್ಕೆ ಸೋಲುಣಿಸುವ ಮೂಲಕ ಎಂಬುದು ವಿಶೇಷ.

ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ
Auqib Nabi
ಝಾಹಿರ್ ಯೂಸುಫ್
|

Updated on:Feb 09, 2026 | 1:40 PM

Share

ರಣಜಿ ಟೂರ್ನಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡ ಸೆಮಿಫೈನಲ್​ಗೆ ಪ್ರವೇಶಿಸಿದೆ. ಕಳೆದ 55 ವರ್ಷಗಳಿಂದ ರಣಜಿ ಪಂದ್ಯವಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಈ ಹಿಂದೆ ಹಲವು ಬಾರಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದರೂ ಸೆಮಿಫೈನಲ್ ಎಂಬುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಆಖಿಬ್ ನಬಿಯ ಮಾರಕ ದಾಳಿ ನೆರವಿನೊಂದಿಗೆ ಕಾಶ್ಮೀರಿ ಪಡೆ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಇಂದೋರ್​ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಮಧ್ಯ ಪ್ರದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಕೇವಲ 194 ರನ್​ಗಳಿಸಿ ಆಲೌಟ್ ಆಗಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಮಧ್ಯ ಪ್ರದೇಶ್ ತಂಡವು ಆಕಿಬ್ ನಬಿಯ ಕರಾರುವಕ್ಕಾದ ದಾಳಿಗೆ ತತ್ತರಿಸಿತು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 152 ರನ್​ಗಳು ಮಾತ್ರ. ಜಮ್ಮು-ಕಾಶ್ಮೀರ ಪರ 18.4 ಓವರ್​ಗಳನ್ನು ಎಸೆದ ಆಖಿಬ್ ನಬಿ ಕೇವಲ 40 ರನ್ ನೀಡಿ 7 ವಿಕೆಟ್ ಉರುಳಿಸಿ ಮಿಂಚಿದರು.

ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಜಮ್ಮು-ಕಾಶ್ಮೀರ ತಂಡವು 248 ರನ್​ಗಳಿಸಿ ಆಲೌಟ್ ಆದರು. ಈ ಮೂಲಕ ಮಧ್ಯ ಪ್ರದೇಶ್ ತಂಡಕ್ಕೆ ಒಟ್ಟು 290 ರನ್​ಗಳ ಗುರಿ ನೀಡಿದ್ದರು. ಈ ಗುರಿ ಬೆನ್ನತ್ತಿದ ಮಧ್ಯ ಪ್ರದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಮತ್ತೊಮ್ಮೆ ಆಖಿಬ್ ನಬಿ ಯಶಸ್ವಿಯಾದರು.

ಪರಿಣಾಮ ಮೂರನೇ ದಿನದಾಟದ ಅಂತ್ಯದ ವೇಳೆ ಮಧ್ಯ ಪ್ರದೇಶ್ ತಂಡವು 5 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿದ್ದರು. ಇನ್ನು ಕೊನೆಯ ದಿನದಾಟದಲ್ಲಿ ಸಂಘಟಿತ ದಾಳಿ ಸಂಘಟಿಸಿದ ಜಮ್ಮು-ಕಾಶ್ಮೀರ ಬೌಲರ್​ಗಳು ಉಳಿದ ಐವರನ್ನು ಔಟ್ ಮಾಡಿ ಮಧ್ಯ ಪ್ರದೇಶ್ ತಂಡವನ್ನು 234 ರನ್​ಗಳಿಗೆ ನಿಯಂತ್ರಿಸಿದರು. ಈ ಮೂಲಕ ಕಾಶ್ಮೀರಿ ಪಡೆ 56 ರನ್​ಗಳ ಜಯದೊಂದಿಗೆ ಇದೇ ಮೊದಲ ಬಾರಿಗೆ ರಣಜಿ ಟೂರ್ನಿಯ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ಕಬಳಿಸಿದ್ದ ಆಖಿಬ್ ನಬಿ ದ್ವಿತೀಯ ಇನಿಂಗ್ಸ್​​ನಲ್ಲಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಹೊಸ ಇತಿಹಾಸ ಬರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಧ್ಯ ಪ್ರದೇಶ್ ಪ್ಲೇಯಿಂಗ್ 11: ಹರ್ಷ್ ಗವಾಲಿ , ಯಶ್ ದುಬೆ , ಹಿಮಾಂಶು ಮಂತ್ರಿ (ವಿಕೆಟ್ ಕೀಪರ್ ), ಶುಭಂ ಶರ್ಮಾ , ರಜತ್ ಪಾಟಿದಾರ್ (ನಾಯಕ) , ವೆಂಕಟೇಶ್ ಅಯ್ಯರ್ , ರಾಮವೀರ್ ಗುಜ್ಜರ್ , ಸರಾಂಶ್ ಜೈನ್ , ಆರ್ಯನ್ ಪಾಂಡೆ , ಕುಮಾರ್ ಕಾರ್ತಿಕೇಯ , ಕುಲದೀಪ್ ಸೇನ್.

ಇದನ್ನೂ ಓದಿ: ಕೇವಲ 22 ಎಸೆತಗಳಲ್ಲಿ ಕ್ರಿಸ್ ಗೇಲ್ ಭರ್ಜರಿ ದಾಖಲೆ ಮುರಿದ ಹೆಟ್ಮೆಯರ್

ಜಮ್ಮು-ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ಯಾವರ್ ಹಸನ್ , ಶುಭಂ ಪುಂಡಿರ್ , ಪರಾಸ್ ಡೋಗ್ರಾ (ನಾಯಕ) , ಅಬ್ದುಲ್ ಸಮದ್ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್ ,ಆಖಿಬ್ ನಬಿ, ಯುಧ್ವೀರ್ ಸಿಂಗ್ ಚರಕ್ , ವಂಶಜ್ ಶರ್ಮಾ , ಸುನಿಲ್ ಕುಮಾರ್.

Published On - 1:39 pm, Mon, 9 February 26

ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು