AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manoj Bhandage IPL Auction 2025: ಕೊನೆಗೂ ಕನ್ನಡಿಗನನ್ನು ಖರೀದಿಸಲು ಮನಸು ಮಾಡಿದ ಆರ್​ಸಿಬಿ

Manoj Bhandage Auction Price: ವಾಸ್ತವವಾಗಿ ಮನೋಜ್ ಭಾಂಡಗೆ ಆರ್​ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್​ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್​ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ.

Manoj Bhandage IPL Auction 2025: ಕೊನೆಗೂ ಕನ್ನಡಿಗನನ್ನು ಖರೀದಿಸಲು ಮನಸು ಮಾಡಿದ ಆರ್​ಸಿಬಿ
ಮನೋಜ್ ಭಾಂಡಗೆ
ಪೃಥ್ವಿಶಂಕರ
|

Updated on: Nov 25, 2024 | 8:14 PM

Share

ಐಪಿಎಲ್ ಮೆಗಾ ಹರಾಜು ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇದೀಗ ದೇಶಿ ಆಟಗಾರರ ಹಾಗೂ ಬ್ಯಾಕ್ ಅಪ್ ಆಟಗಾರರ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ. ಇನ್ನು ನೆನ್ನಿಯಿಂದ ನಡೆಯುತ್ತಿರುವ ಈ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಗತ್ಯವಿರುವ ಆಟಗಾರರ ಖರೀದಿಯ ಜೊತೆಗೆ ಸ್ಥಳೀಯ ಆಟಗಾರರ ಅಂದರೆ ಆ ತಂಡ ಪ್ರತಿನಿಧಿಸುವ ರಾಜ್ಯದ ಯುವ ಪ್ರತಿಭಾನ್ವೀತ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿಸಿವೆ. ಆದರೆ ಆರ್​ಸಿಬಿ ಮಾತ್ರ ಆದ್ಯಾಕೋ ನಿನ್ನೆಯಿಂದಲೂ ಈ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೀಗ ಹರಾಜಿನ ಕೊನೆಯ ದಿನದಂದು ಕನ್ನಡಿಗನನ್ನು ಖರೀದಿಸಲು ಆರ್​ಸಿಬಿ ಮನಸು ಮಾಡಿದೆ. ಅದರಂತೆ ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಅವರನ್ನು ಮತ್ತೆ ಖರೀದಿಸುವ ಕೆಲಸವನ್ನು ಆರ್​ಸಿಬಿ ಮಾಡಿದೆ.

2ನೇ ಬಾರಿಗೆ ಆರ್​ಸಿಬಿ ಸೇರಿದ ಮನೋಜ್

ವಾಸ್ತವವಾಗಿ ಮನೋಜ್ ಭಾಂಡಗೆ ಆರ್​ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್​ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್​ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ. ಈ ಎರಡೂ ಆವೃತ್ತಿಗಳಲ್ಲೂ ಮನೋಜ್​ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.

ಮೂಲ ಬೆಲೆಗೆ ಖರೀದಿ

ಆದರೀಗ ಮನೋಜ್ ಮೇಲೆ ಮತ್ತೆ ಬಿಡ್ ಮಾಡಿರುವ ಆರ್​ಸಿಬಿ ಅವರ ಮೂಲ ಬೆಲೆ 30 ಲಕ್ಷಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ವಾಸ್ತವವಾಗಿ ಮನೋಜ್​ಗೂ ಮೊದಲು ಕರ್ನಾಟಕದ ಹಲವು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರು. ಆದರೆ ಆರ್​ಸಿಬಿ, ಅವರಲ್ಲಿ ಯಾರನ್ನು ಖರೀದಿಸುವ ಮನಸು ಮಾಡಲಿಲ್ಲ. ಹೀಗಾಗಿ ಆರ್​ಸಿಬಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಕನ್ನಡಿಗರ ಕಣ್ಣೊರೆಸುವ ಕೆಲಸಕ್ಕೆ ಮುಂದಾಗಿರುವ ಆರ್​ಸಿಬಿ, ಏಕೈಕ ಕನ್ನಡಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಮಹಾರಾಜ ಟ್ರೋಫಿಯಲ್ಲಿ ಅಬ್ಬರ

ಆರ್​ಸಿಬಿ ಈ ಖರೀದಿ ಮಾಡಲು ಕಾರಣವೂ ಇದ್ದು, ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯವಾಗಿತ್ತು. ಏಕೆಂದರೆ ಈ ಟೂರ್ನಿಯಲ್ಲಿ ಮೈಸೂರು ಪರ ಆಡಿದ 12 ಪಂದ್ಯಗಳಿಂದ ಮನೋಜ್, 25 ಸಿಕ್ಸರ್​ಗಳ ಸಹಿತ 292 ರನ್ ಕಲೆಹಾಕಿದ್ದರು.

ಮತ್ತೆ ಬೆಂಚ್ ಮೇಲೆ ಕೂರಿಸದಿರಲಿ

ಹಾಗೆಯೇ ಮಹಾರಾಜ ಟ್ರೋಫಿ 2024 ರಲ್ಲಿ 200ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಖ್ಯಾತಿಗೂ ಮನೋಜ್ ಭಾಂಡಗೆ ಪಾತ್ರರಾಗಿದ್ದರು. ಹೀಗಾಗಿ ಆರ್​ಸಿಬಿ, ಮನೋಜ್​ರನ್ನು ಖರೀದಿಸುವ ಕೆಲಸಕ್ಕೆ ಮುಂದಾಗಿದೆ. ಆದರೆ ಕಳೆದ ಎರಡು ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಮನೋಜ್​ರನ್ನು ಬೆಂಚ್ ಮೇಲೆ ಕೂರಿಸುವ ಕೆಲಸವನ್ನು ಆರ್​ಸಿಬಿ ಕೈಬಿಡಬೇಕು. ತಂಡದಲ್ಲಿರುವ ಏಕೈಕ ಕನ್ನಡಿಗ ಪ್ಲೇಯಿಂಗ್​ 11 ನಲ್ಲಿ ಅವಕಾಶ ಪಡೆಯುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ