ಎಂಎಸ್ ಧೋನಿಗಾಗಿ ಕಾದ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಬ್ಯಾಡ್ ನ್ಯೂಸ್

ಎಂಎಸ್ ಧೋನಿ ಸ್ನಾಯು ಸೆಳೆತದಿಂದಾಗಿ ಐಪಿಎಲ್‌ನ ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರ ಕಮ್‌ಬ್ಯಾಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿಎಸ್‌ಕೆ ಕೋಚ್ ಮೈಕಲ್ ಹಸ್ಸಿ, ಧೋನಿ ಶೇ.100ರಷ್ಟು ಫಿಟ್ ಆಗುವವರೆಗೂ ಆಡುವುದಿಲ್ಲ ಎಂದಿದ್ದಾರೆ. ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೂ, ರನ್ನಿಂಗ್ ಸಾಮರ್ಥ್ಯವೇ ಸದ್ಯದ ಪ್ರಶ್ನೆ. ಅವರ ಮೈದಾನಕ್ಕೆ ಮರಳುವ ದಿನಾಂಕ ಇನ್ನೂ ಅನಿಶ್ಚಿತವಾಗಿದೆ.

ಎಂಎಸ್ ಧೋನಿಗಾಗಿ ಕಾದ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಬ್ಯಾಡ್ ನ್ಯೂಸ್
ಧೋನಿ

Updated on: Apr 24, 2026 | 11:49 AM

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸಮನ್ ಹಾಗೂ ಕೀಪರ್ ಎಂಸ್ ಧೋನಿಗೆ ಸ್ನಾಯು ಸೆಳೆತವಿದ್ದು, ಐಪಿಎಲ್ ಆರಂಭ ಆದ ಮೊದಲ ಎರಡು ವಾರ ಅವರು ಲಭ್ಯವಿರುವುದಿಲ್ಲ ಎಂದು ಕೇಳಿ ಅಭಿಮಾನಿಗಳು ಬೇಸರಗೊಂಡರು. ಆದರೆ, ಈಗ ಧೋನಿ ಈಗ ಸತತ ಏಳು ಮ್ಯಾಚ್​​ಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಈಗ ಅವರ ಬರುವಿಕೆಗಾಗಿ ಕಾದು ಕುಳಿತ ಫ್ಯಾನ್ಸ್​​ಗೆ ಬೇಸರ ಆಗುವ ಸುದ್ದಿಯೊಂದು ಬಂದಿದೆ.

ಧೋನಿ ಅವರು ಇತ್ತೀಚೆಗೆ ಪ್ರ್ಯಾಕ್ಟಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಧೋನಿ ಮುಂಬೈ ವಿರುದ್ಧದ ಪಂದ್ಯಕ್ಕೆ ಫೀಲ್ಡ್​ಗೆ ಇಳಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಮುಂಬೈ ವಿರುದ್ಧದ ಪಂದ್ಯ ಮಿಸ್ ಮಾಡಿಕೊಂಡಿದ್ದಾರೆ. ಅವರು ಫೀಲ್ಡ್​​ಗೆ ಇಳಿಯದ್ದಕ್ಕೆ ಕಾರಣ ಸಿಕ್ಕಿದೆ.

ಸಿಎಸ್​​ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಈ ವಿಷಯ ರಿವೀಲ್ ಮಾಡಿದ್ದಾರೆ. ‘ಧೋನಿ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರು ನೂರಕ್ಕೆ ನೂರು ಪರ್ಸೆಂಟ್ ರೆಡಿ ಆದರು ಎಂದು ಅನಿಸುವವರೆಗೂ ಅವರು ಮೈದಾನಕ್ಕೆ ಇಳಿಯುವುದಿಲ್ಲ’ ಎಂದಿದ್ದಾರೆ.

‘ಧೋನಿ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂಬುದು ನಿಜ. ಅವರು ಸಾಧ್ಯವಾದಷ್ಟು ಬೇಗ ತಂಡಕ್ಕೆ ಮರಳಲು ಶ್ರಮಿಸುತ್ತಿದ್ದಾರೆ. ಅಭಿಮಾನಿಗಳು ಎಂಎಸ್ ಧೋನಿ ಮತ್ತೆ ಮೈದಾನಕ್ಕೆ ಇಳಿಯವುದನ್ನು ನೋಡಲು ಕಾದಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲಿ ಅದು ಘಟಿಸಬಹುದು. ಆದರೆ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಂಪೂರ್ಣವಾಗಿ ಚೇತರಿಕೆ ಕಾಣಬೇಕಿದೆ’ ಎಂದು ಮೈಕಲ್ ಹಸ್ಸಿ ಹೇಳಿದ್ದಾರೆ.

‘ನೆಟ್ ಪ್ರ್ಯಾಕ್ಟಿಸ್​​​ನಲ್ಲಿ ಧೋನಿ ಬ್ಯಾಟಿಂಗ್ ಉತ್ತಮವಾಗಿ ಮಾಡುತ್ತಿದ್ದಾರೆ ನಿಜ. ಆದರೆ, ರನ್ ತೆಗೆಯಲು ಅವರಿಂದ ಓಡಲು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ’ ಎಂದಿದ್ದಾರೆ.

ಇದನ್ನೂ ಓದಿ: ಧೋನಿ ಇಲ್ಲದೆ ಸಿಎಸ್​ಕೆ ನಿಷ್ಪ್ರಯೋಜಕ: ರುತುರಾಜ್-ಸ್ಯಾಮ್ಸನ್​ಗೆ 36 ಕೋಟಿ ಹಾಕಿದ್ದು ವೇಸ್ಟ್..?

ಧೋನಿ ಸಂಪೂರ್ಣವಾಗಿ ಚೇತರಿಕೆ ಕಾಣೋದು ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಮುಂದಿನ ಪಂದ್ಯದಲ್ಲೇ ಅವರು ಮೈದಾನಕ್ಕೆ ಇಳಿಯಬಹುದು ಅಥವಾ ಇನ್ನೂ ಕೆಲವು ಪಂದ್ಯ ಅವರು ಫೀಲ್ಡ್​​ಗೆ ಇಳಿಯಲು ಸಾಧ್ಯವಾಗದೆ ಇರಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಯಲಿದೆ. ಲೀಗ್ ಪಂದ್ಯಗಳಲ್ಲಿ ಚೆನ್ನೈಗೆ ಇನ್ನು ಏಳು ಮ್ಯಾಚ್​​ಗಳು ಉಳಿದಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us