AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ನಲ್ಲಿ 10 ಹೊಸ ನಿಯಮಗಳು ಜಾರಿ!

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್​ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಗಳೊಂದಿಗೆ ಐಸಿಸಿಯ 10 ಹೊಸ ನಿಯಮಗಳು ಜಾರಿಯಾಗಲಿದೆ.

ಟಿ20 ವಿಶ್ವಕಪ್​ನಲ್ಲಿ 10 ಹೊಸ ನಿಯಮಗಳು ಜಾರಿ!
T20 World Cup 2026
ಝಾಹಿರ್ ಯೂಸುಫ್
|

Updated on:Feb 05, 2026 | 11:54 AM

Share

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ 20 ತಂಡಗಳ ಚುಟಕು ಮಹಾ ಸಮರಕ್ಕೂ ಮುನ್ನವೇ ಐಸಿಸಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕ ಹಾಗೂ ನ್ಯಾಯಯುತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಜಾರಿಯಲ್ಲಿರುವ ಹೊಸ ನಿಯಮಗಳಾವುವು ಎಂದು ನೋಡುವುದಾದರೆ…

  1. ಸ್ಟಾಪ್ ಕ್ಲಾಕ್ ನಿಯಮ: ಓವರ್‌ಗಳ ನಡುವೆ ಕಡ್ಡಾಯ 60-ಸೆಕೆಂಡ್‌ಗಳ “ಸ್ಟಾಪ್ ಕ್ಲಾಕ್” ಈಗ ಜಾರಿಯಲ್ಲಿರಲಿದೆ. ಅಂದರೆ ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಫೀಲ್ಡಿಂಗ್ ತಂಡವು ಮುಂದಿನ ಓವರ್ ಎಸೆಯಲು ಸಿದ್ಧರಾಗಿರಬೇಕು.
  2. 5 ರನ್​ಗಳ ಪೆನಾಲ್ಟಿ: ಸ್ಟಾಪ್ ಕ್ಲಾಕ್ ನಿಯಮವನ್ನು ಉಲ್ಲಂಘಿಸಿದರೆ, ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಆ ನಂತರದ ಉಲ್ಲಂಘನೆಗಳಿಗೆ ಪ್ರತಿ ಬಾರಿ 5 ರನ್‌ಗಳ ದಂಡ ವಿಧಿಸಲಾಗುತ್ತದೆ.
  3. ಬೌಂಡರಿ ಫೀಲ್ಡಿಂಗ್ ನಿಯಮ: ಬೌಂಡರಿಯ ಆಚೆ ಚೆಂಡನ್ನು ತಡೆಯಲು ಫೀಲ್ಡರ್‌ಗಳು ಮೈದಾನದ ಒಳಗಿನಿಂದ ಹಾರಿರಬೇಕು. ಅವರು ಚೆಂಡನ್ನು ಹಿಂದಕ್ಕೆ ತಳ್ಳಲು ಬೌಂಡರಿಯ ಹೊರಗಿನಿಂದ ಹಾರಿದರೆ, ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ.
  4. ಶಾರ್ಟ್ ರನ್ ಪೆನಾಲ್ಟಿ: ಬ್ಯಾಟ್ಸ್​ಮನ್ ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿದರೆ, ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಇದನ್ನು ಫೀಲ್ಡ್ ಅಂಪೈರ್ ನಿರ್ಧರಿಸಲಿದ್ದಾರೆ.
  5. ಬ್ಯಾಟರ್ ಆಯ್ಕೆ: ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿ ಸ್ಟ್ರೈಕ್​ ನೀಡಲು ಯತ್ನಿಸಿದರೆ, ಅದನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮುಂದಿನ ಎಸೆತಕ್ಕೆ ಯಾವ ಬ್ಯಾಟರ್ ಸ್ಟ್ರೈಕ್ ತೆಗೆದುಕೊಳ್ಳಬೇಕೆಂದು ಆಯ್ಕೆ ಮಾಡುವ ಹಕ್ಕು ಫೀಲ್ಡಿಂಗ್ ತಂಡದ ನಾಯಕನಿಗೆ ನೀಡಲಾಗುತ್ತದೆ.
  6. ಕನ್ಕ್ಯುಶನ್ ಬದಲಿ ಆಟಗಾರರು: ಸಮಾನ ಬದಲಿ ಆಟಗಾರರು ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಂಡಗಳು ಈಗ ಐದು ನಿರ್ದಿಷ್ಟ ಬದಲಿ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಈ ಬದಲಿ ಆಟಗಾರರ ಪಟ್ಟಿಯಲ್ಲಿ ವಿಕೆಟ್ ಕೀಪರ್, ಬ್ಯಾಟರ್, ವೇಗದ ಬೌಲರ್, ಸ್ಪಿನ್ನರ್ ಮತ್ತು ಆಲ್-ರೌಂಡರ್ ಇರಲೇಬೇಕು. ಇವರಲ್ಲಿ ಆಯಾ ಆಟಗಾರರ ಪಾತ್ರದ ಬದಲಿಗೆ ಕನ್ಕ್ಯುಶನ್ ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.
  7. ಡಿಆರ್‌ಎಸ್ (DRS) ಬದಲಾವಣೆ: ಡಿಆರ್​ಎಸ್ ರಿವ್ಯೂ ವೇಳೆ “ಅಂಪೈರ್ಸ್ ಕಾಲ್” (Umpire’s Call) ಬಂದರೆ ಇನ್ನು ಮುಂದೆ ರಿವ್ಯೂ ಕಳೆದುಕೊಳ್ಳುವುದಿಲ್ಲ. ಇದರ ಹೊರತಾಗಿ ಒಂದು ತಂಡಕ್ಕೆ ಇನಿಂಗ್ಸ್​ಗೆ 2 ಡಿಆರ್​ಎಸ್​ ಆಯ್ಕೆಗಳು ಮಾತ್ರ ಇರಲಿದೆ.
  8. ಬಾಲ್ ಸೆಟಲ್ಮೆಂಟ್ ನಿಯಮ: ಇನ್ನು ಮುಂದೆ ಚೆಂಡು ಬೌಲರ್ ಅಥವಾ ವಿಕೆಟ್ ಕೀಪರ್ ಅನ್ನು ತಲುಪಿದಾಗ ಮಾತ್ರ ಸೆಟಲ್ಡ್ ಎಂದು ಪರಿಗಣಿಸುವ ಅಗತ್ಯವಿಲ್ಲ. ಮೈದಾನದಲ್ಲಿ ಸ್ಥಿರವಾಗಿರುವ ಯಾವುದೇ ಫೀಲ್ಡರ್ ಅನ್ನು ತಲುಪಿದರೆ ಅಂಪೈರ್ ಚೆಂಡನ್ನು ಡೆಡ್ ಅಥವಾ ಸೆಟಲ್ಡ್ ಎಂದು ಪರಿಗಣಿಸಬಹುದು.
  9. ವಿಕೆಟ್ ಕೀಪಿಂಗ್ ನಿಯಮ ಬದಲಾವಣೆ: ಬೌಲರ್ ಚೆಂಡನ್ನು ಎಸೆಯುವ ಮುನ್ನ ವಿಕೆಟ್ ಕೀಪರ್​ನ ಕೈಗಳು ಸ್ಟಂಪ್‌ಗಳ ಮುಂದೆ ಇದ್ದರೆ, ಅದು ನೋ ಬಾಲ್ ಅಲ್ಲ. ಹಾಗೆಯೇ ಬೌಲರ್ ರನ್-ಅಪ್‌ನಲ್ಲಿದ್ದಾಗಲೂ ಕೀಪರ್‌ನ ಕೈಗವಸುಗಳು ಸ್ಟಂಪ್‌ಗಳ ಮುಂದೆ ಇದ್ದರೆ ಅದನ್ನೂ ಸಹ ನೋ-ಬಾಲ್ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಚೆಂಡನ್ನು ಬೌಲ್ ಮಾಡಿದ ನಂತರ, ಕೀಪರ್‌ನ ಕೈಗಳು ಸ್ಟಂಪ್‌ಗಳ ಹಿಂದೆ ಇರಬೇಕು. ಅಂದರೆ ಬೌಲರ್​ ಚೆಂಡನ್ನು ಎಸೆದ ಬಳಿಕ ವಿಕೆಟ್ ಕೀಪರ್​ನ ಗ್ಲೌಸ್ ಸ್ಟಂಪ್​ಗಳ ಮುಂದೆ ಇರಬಾರದು.
  10. ಸ್ಟಂಪ್ ಔಟ್ – ರನೌಟ್ ನಿಯಮ: ರನ್ ಔಟ್ ಅಥವಾ ಸ್ಟಂಪಿಂಗ್ ಸಮಯದಲ್ಲಿ ಫೀಲ್ಡರ್ ಅಥವಾ ಕೀಪರ್ ಚೆಂಡನ್ನು ಸಂಪೂರ್ಣವಾಗಿ ತಮ್ಮ ಕೈಯಲ್ಲಿ ಹೊಂದಿರಬೇಕು ಎಂದು ಎಂಸಿಸಿ ಸ್ಪಷ್ಟಪಡಿಸಿದೆ. ಅಂದರೆ ಕ್ಯಾಚ್ ಸಮಯದಲ್ಲಿ ಹೇಗೆ ಚೆಂಡು ಸಂಪೂರ್ಣವಾಗಿ ಆಟಗಾರನ ಕೈಯಲ್ಲಿರಬೇಕೋ, ಅದೇ ರೀತಿ ಇನ್ಮುಂದೆ ಸ್ಟಂಪಿಂಗ್ ಮತ್ತು ರನೌಟ್​ಗಳ ಸಮಯದ ವಿಕೆಟ್ ಕೀಪರ್ ಹಾಗೂ ಫೀಲ್ಡರ್​ ಚೆಂಡಿನ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ತಿಳಿಸಲಾಗಿದೆ.

Published On - 11:53 am, Thu, 5 February 26

Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ
ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ
ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ಮನೆ ಮಾಲೀಕ
ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ಮನೆ ಮಾಲೀಕ
ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ದೇವಸ್ಥಾನದ ಬಗ್ಗೆ ಹೇಳಿದ ಶೈನ್
ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ದೇವಸ್ಥಾನದ ಬಗ್ಗೆ ಹೇಳಿದ ಶೈನ್
Video: ಲಿಫ್ಟ್​ ಒಳಗೆ ಹೈಡ್ರೋಜನ್ ಬಲೂನ್​ಗಳು ಸ್ಫೋಟ
Video: ಲಿಫ್ಟ್​ ಒಳಗೆ ಹೈಡ್ರೋಜನ್ ಬಲೂನ್​ಗಳು ಸ್ಫೋಟ
ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಯುವತಿ ಮುಖಕ್ಕೆ ಗುಟ್ಕಾ ಉಗಿದ ಮಂಗಳಮುಖಿ
ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಯುವತಿ ಮುಖಕ್ಕೆ ಗುಟ್ಕಾ ಉಗಿದ ಮಂಗಳಮುಖಿ
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ