
ಭಾರತ ತಂಡದ ( Team India) ಮುಖ್ಯ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಅವರ ಕಿರಿಯ ಪುತ್ರ 13 ವರ್ಷದ ಅನ್ವಯ್ ದ್ರಾವಿಡ್ಗೆ (Anvay Dravid) ಕರ್ನಾಟಕ ತಂಡದ ನಾಯಕತ್ವ ಒಲಿದು ಬಂದಿದೆ. 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅಪ್ಪನಂತೆ ಮಗ ಕೂಡ ಅದ್ಭುತ ಬ್ಯಾಟ್ಸ್ಮನ್ ಆಗಿದ್ದು, ಅವರು ವಿಕೆಟ್ ಕೀಪಿಂಗ್ಗೂ ಹೆಸರುವಾಸಿಯಾಗಿದ್ದಾರೆ. ಅನ್ವಯ್ ಅಲ್ಲದೆ ಅವರ ಅಣ್ಣ ಅಂದರೆ, ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಕೂಡ ಕ್ರಿಕೆಟ್ ಆಡುತ್ತಾರೆ. ಅವರೂ ಕೂಡ ಉತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಇದೀಗ ಮುಂಬರುವ ಅಂತರ ವಲಯ ಟೂರ್ನಿಯಲ್ಲಿ ನಾಯಕತ್ವದ ದೊಡ್ಡ ಜವಾಬ್ದಾರಿಯನ್ನು ಒಹಿಸಿಕೊಂಡಿರುವ ಅನ್ವಯ್ ದ್ರಾವಿಡ್ ತಮ್ಮ ನಾಯಕತ್ವದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕಾದುನೋಡಬೇಕಿದೆ.
ಇನ್ನು ಮನೆಯಲ್ಲಿ ದ್ರಾವಿಡ್ರಂತಹ ಕ್ರಿಕೆಟ್ ಕಲಿಸುವ ಗುರು ಇದ್ದರೆ ಎಂತವರೂ ಕೂಡ ಈ ಆಟದಲ್ಲಿ ನಿಪುಣರಾಗುತ್ತಾರೆ. ತಂದೆಯಿಂದ ಕ್ರಿಕೆಟ್ನ ಸೂಕ್ಷ್ಮಗಳನ್ನು ಕಲಿತುಕೊಂಡಿರುವ ಅನ್ವಯ್ ದ್ರಾವಿಡ್ಗೆ ಪ್ರಸ್ತುತ ಕರ್ನಾಟಕದ 14 ವರ್ಷದೊಳಗಿನವರ ತಂಡದ ನಾಯಕತ್ವವಹಿಸಲಾಗಿದೆ.
Big news: ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು! ತಂಡ ತೊರೆದು ಬೆಂಗಳೂರಿಗೆ ವಾಪಸ್
ವಿಶ್ವ ಕ್ರಿಕೆಟ್ನ “ದಿ ವಾಲ್” ಎಂದು ಕರೆಯಲ್ಪಡುವ ಕರ್ನಾಟಕದ ಪ್ರತಿಭೆ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ದ್ರಾವಿಡ್ ತಮ್ಮ ಬ್ಯಾಟಿಂಗ್ ನೆರವಿನಿಂದ ಭಾರತಕ್ಕೆ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದ್ರಾವಿಡ್, ಟೀಂ ಇಂಡಿಯಾ ಪರ 164 ಟೆಸ್ಟ್, 344 ಏಕದಿನ ಮತ್ತು 1 ಟಿ20 ಪಂದ್ಯವನ್ನು ಆಡಿದ್ದಾರೆ.
164 ಟೆಸ್ಟ್ ಪಂದ್ಯಗಳಲ್ಲಿ 52.3 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ದ್ರಾವಿಡ್ 13288 ರನ್ ಗಳಿಸಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳಲ್ಲಿ 10889 ರನ್ ಮತ್ತು 1 ಟಿ20 ಪಂದ್ಯದಲ್ಲಿ 31 ರನ್ ಗಳಿಸಿದ್ದಾರೆ. ದ್ರಾವಿಡ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 146 ಅರ್ಧಶತಕಗಳು ಮತ್ತು 48 ಶತಕಗಳನ್ನು ಗಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ