AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajvardhan Hangargekar: ವಯಸ್ಸಿನ ವಂಚನೆ ಆರೋಪ; ಸಿಎಸ್​ಕೆ ಆಟಗಾರನ ವಿರುದ್ಧ ಬಿಸಿಸಿಐಗೆ ದೂರು!

U-19 World Cup: ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8 ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ.

Rajvardhan Hangargekar: ವಯಸ್ಸಿನ ವಂಚನೆ ಆರೋಪ; ಸಿಎಸ್​ಕೆ ಆಟಗಾರನ ವಿರುದ್ಧ ಬಿಸಿಸಿಐಗೆ ದೂರು!
ರಾಜವರ್ಧನ್ ಹಂಗರ್ಗೇಕರ್
TV9 Web
| Updated By: ಪೃಥ್ವಿಶಂಕರ|

Updated on: Feb 18, 2022 | 3:24 PM

Share

ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಅಂಡರ್-19 ವಿಶ್ವಕಪ್ ( Under-19 World Cup)ಗೆದ್ದುಕೊಟ್ಟಿದ್ದ ಆಟಗಾರ ವಯೋಮಾನ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವೇಗದ ಬೌಲರ್ ರಾಜವರ್ಧನ್ ಹಂಗರ್ಗೇಕರ್ (Rajvardhan Hangargekar)ಅವರು ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಅಂಡರ್-19 ವಿಶ್ವಕಪ್ ಆಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಂಗರ್ಗೆಕರ್ ಅವರ ನಿಜವಾದ ವಯಸ್ಸು 21 ವರ್ಷಗಳು ಮತ್ತು ಇದರ ಹೊರತಾಗಿಯೂ ಅವರು ಅಂಡರ್-19 ವಿಶ್ವಕಪ್ ಆಡಿದರು. ಹಂಗರ್ಗೇಕರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಜೊತೆಗೆ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್ ಗೆದ್ದಿತು. ಹಂಗೇಕರ್ ತಮ್ಮ ನಿಜವಾದ ವಯಸ್ಸನ್ನು ಮರಿಮಾಚಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಮಾಡಿದ್ದಾರೆ. ಈ ಐಎಎಸ್ ಅಧಿಕಾರಿ ಬಿಸಿಸಿಐಗೆ ಪತ್ರ ಬರೆದಿದ್ದು, ಅದರಲ್ಲಿ ಹಂಗೇಕರ್ ವಿರುದ್ಧ ಸಾಕ್ಷ್ಯವನ್ನೂ ಕಳುಹಿಸಿದ್ದಾರೆ.

ಸಾಮ್ನಾ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಓಂಪ್ರಕಾಶ್ ಬಕೋರಿಯಾ ಅವರು ಬಿಸಿಸಿಐಗೆ ಬರೆದ ಪತ್ರದಲ್ಲಿ ಧರಾಶಿವ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಗುಪ್ತಾ ಅವರು ರಾಜವರ್ಧನ್ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕವನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ರಾಜ್ಯವರ್ಧನ್ ಧರಶಿವ್‌ನ ಟೆರ್ನಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ. ಜನವರಿ 14 ಮತ್ತು ಫೆಬ್ರವರಿ 5 ರ ನಡುವೆ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ನಡೆಯುವ ವೇಳೆಗೆ ರಾಜ್ಯವರ್ಧನ್ ಹಂಗೇರ್‌ಗೆಕರ್ ಅವರ ವಯಸ್ಸು 21 ವರ್ಷಗಳು ಎಂಬುದು ಸಾಭೀತಾಗಿದೆ.

ಹಂಗೇಕರ್​ಗೆ ದೊಡ್ಡ ನಷ್ಟ

ಬಿಸಿಸಿಐ ತನಿಖೆಯಲ್ಲಿ ಹಂಗೇಕರ್ ತಪ್ಪಿತಸ್ಥರೆಂದು ಕಂಡುಬಂದರೆ, ಈ ಆಟಗಾರನನ್ನು ಕ್ರಿಕೆಟ್​ನಿಂದ ಸಹ ನಿಷೇಧಿಸಬಹುದು. 2017-18ರಲ್ಲಿ ವಿಶ್ವಕಪ್ ಗೆದ್ದ ತಂಡದ ಆರಂಭಿಕ ಆಟಗಾರ ಮಂಜೋತ್ ಕಲ್ರಾ ಕೂಡ ವಯಸ್ಸಿನ ವಿವಾದದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಹೀಗಾದರೆ ಹಂಗೇಕರ್‌ಗೆ ದೊಡ್ಡ ಹಿನ್ನಡೆಯಾಗಲಿದೆ. ಅಷ್ಟೇ ಅಲ್ಲ, ಈ ಆಟಗಾರನ ಐಪಿಎಲ್ ಒಪ್ಪಂದವೂ ರದ್ದಾಗಬಹುದು.

ಚೆನ್ನೈ ಸೂಪರ್ ಕಿಂಗ್ಸ್ ಹಂಗರ್‌ಗೇಕರ್‌ರನ್ನು ಹೊರಹಾಕುತ್ತದೆಯೇ?

ಐಪಿಎಲ್ 2022ರ ಹರಾಜಿನಲ್ಲಿಯೂ ಹಂಗರ್‌ಗೇಕರ್ ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ಹಂಗೇಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿಗೆ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಖರೀದಿಸಲು ಬಿಡ್ ಮಾಡಿತು ಆದರೆ ಅಂತಿಮವಾಗಿ ಚೆನ್ನೈ ಗೆದ್ದಿತು. ಆದರೆ, ಈಗ ಈ ವಿವಾದದ ನಂತರ ಹಂಗೇಕರ್‌ಗೆ ಏನಾಗುತ್ತದೆ ಎಂಬುದು ಕಾದು ನೋಡಬೇಕಾದ ವಿಷಯ. ವಯಸ್ಸಿನ ವಂಚನೆ ಪ್ರಕರಣದಲ್ಲಿ ಬಿಸಿಸಿಐ ಆಗಾಗ ದೊಡ್ಡ ಕ್ರಮ ಕೈಗೊಳ್ಳುತ್ತದೆ.

ಇದನ್ನೂ ಓದಿ:Ranji Trophy: ಕಳಪೆ ಫಾರ್ಮ್​ನಿಂದ ಹೊರ ಬಂದ ರಹಾನೆ; ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಅಜಿಂಕ್ಯ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ