Ratan Tata: ಭಾರತ ಕ್ರಿಕೆಟ್​ಗೆ ರತನ್ ಟಾಟಾ ನೀಡಿದ ಮಹಾನ್ ಕೊಡುಗೆ ಏನು ಗೊತ್ತಾ?

Ratan Tata and cricket: ಭಾರತಕ್ಕೆ ಕ್ರಿಕೆಟ್​ ಕಾಲಿಟ್ಟು ವರ್ಷಗಳೇ ಕಳೆದಿದ್ದರೂ, 1983 ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕವಷ್ಟೇ ದೇಶದಲ್ಲಿ ಅದರ ಜನಪ್ರಿಯತೆ ಹೆಚ್ಚಾಯಿತು. ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾರೂ ಊಹಿಸದ ಸಾಧನೆಯನ್ನು ಮಾಡಿತ್ತು. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾದ ಚೊಚ್ಚಲ ವಿಶ್ವಕಪ್​ನ ಅವಿಸ್ಮರಣೀಯ ವಿಜಯಕ್ಕೆ ರತನ್ ಟಾಟಾ ಅವರ ಕೊಡುಗೆ ಗಮನಾರ್ಹವಾಗಿದೆ.

Ratan Tata: ಭಾರತ ಕ್ರಿಕೆಟ್​ಗೆ ರತನ್ ಟಾಟಾ ನೀಡಿದ ಮಹಾನ್ ಕೊಡುಗೆ ಏನು ಗೊತ್ತಾ?
ರತನ್ ಟಾಟಾ ಮತ್ತು ಕ್ರಿಕೆಟ್
Follow us
|

Updated on:Oct 10, 2024 | 3:13 PM

ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ತಮ್ಮ 86 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಟಾಟಾ ಅವರು ಇಹಲೋಕದ ವ್ಯವಹಾರವನ್ನು ಮುಗಿಸಿ ಹೊರಟಿದ್ದಾರೆ. ಮಧ್ಯಮ ವರ್ಗದ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದ ಟಾಟಾ ಅವರು ಉದ್ಯಮದಲ್ಲಿ ಮಾತ್ರವಲ್ಲದೆ ವಿವಿದ ಕ್ಷೇತ್ರಗಳಲ್ಲೂ ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಮಾಡಿದ್ದರು. ಅದರಲ್ಲೂ ಪ್ರಸ್ತುತ ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಭಾರತ ಕ್ರಿಕೆಟ್​ಗೆ ಟಾಟಾ ನೀಡಿದ ಕೊಡುಗೆ ಅಪಾರ.

ಭಾರತಕ್ಕೆ ಕ್ರಿಕೆಟ್​ ಕಾಲಿಟ್ಟು ವರ್ಷಗಳೇ ಕಳೆದಿದ್ದರೂ, 1983 ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕವಷ್ಟೇ ದೇಶದಲ್ಲಿ ಅದರ ಜನಪ್ರಿಯತೆ ಹೆಚ್ಚಾಯಿತು. ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾರೂ ಊಹಿಸದ ಸಾಧನೆಯನ್ನು ಮಾಡಿತ್ತು. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾದ ಚೊಚ್ಚಲ ವಿಶ್ವಕಪ್​ನ ಅವಿಸ್ಮರಣೀಯ ವಿಜಯಕ್ಕೆ ರತನ್ ಟಾಟಾ ಅವರ ಕೊಡುಗೆ ಗಮನಾರ್ಹವಾಗಿದೆ. ಟಾಟಾ ಒಡೆತನದ ಸಂಸ್ಥೆಗಳ ಸಹಾಯದಿಂದ ಕ್ರಿಕೆಟ್​ನಲ್ಲಿ ಪರಿಣಿತಿ ಪಡೆದ ಸ್ಟಾರ್ ಆಟಗಾರರು 1983 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಅವರುಗಳಲ್ಲಿ ಪ್ರಮುಖರು ಮೊಹಿಂದರ್ ಅಮರನಾಥ್, ರವಿಶಾಸ್ತ್ರಿ ಮತ್ತು ಸಂದೀಪ್ ಪಾಟೀಲ್.

1983 ವಿಶ್ವಕಪ್ ಹೀರೋಗಳಿಗೆ ಟಾಟಾ ನೆರವು

ವಾಸ್ತವವಾಗಿ 1983 ರ ವಿಶ್ವಕಪ್‌ಗೆ ಮೊದಲು ಮೊಹಿಂದರ್ ಅಮರನಾಥ್ ಅವರು ಟಾಟಾ ಒಡೆತನದ ಏರ್ ಇಂಡಿಯಾ ಪರ ಆಡಿದ್ದರೆ, ಸಂದೀಪ್ ಪಾಟೀಲ್ ಟಾಟಾ ಆಯಿಲ್ ಮಿಲ್ಸ್‌ ಪರ, ರವಿಶಾಸ್ತ್ರಿ ಟಾಟಾ ಸ್ಟೀಲ್ ಪರ ಆಡುತ್ತಿದ್ದರು. ಹೀಗಾಗಿ, ಎಲ್ಲಾ ಮೂರು ಆಟಗಾರರು ಟಾಟಾ ಬೆಂಬಲಿತ ದೇಶೀಯ ತಂಡಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಟಾಟಾ ಅವರ ಬೆಂಬಲದಿಂದಲೇ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆಯಲು ಸಾಧ್ಯವಾಯಿತು.

ಟಾಟಾ ನೆರವಿನಿಂದ ಬೆಳೆದ ಕ್ರಿಕೆಟಿಗರಿವರು

ಭಾರತೀಯ ಕ್ರಿಕೆಟ್‌ಗೆ ಟಾಟಾ ಅವರ ಕೊಡುಗೆ ಇದಕ್ಕಷ್ಟೇ ಸೀಮಿತವಾಗಿಲ್ಲ. ಈ ಮೂವರು ಕ್ರಿಕೆಟಿಗರನ್ನು ಹೊರತುಪಡಿಸಿ, ಫಾರೂಕ್ ಇಂಜಿನಿಯರ್ (ಟಾಟಾ ಮೋಟಾರ್ಸ್), ಜಾವಗಲ್ ಶ್ರೀನಾಥ್ (ಇಂಡಿಯನ್ ಏರ್‌ಲೈನ್ಸ್), ಸಂಜಯ್ ಮಂಜ್ರೇಕರ್ (ಏರ್ ಇಂಡಿಯಾ), ಕಿರಣ್ ಮೋರ್ (ಟಿಎಸ್‌ಸಿ), ರುಸಿ ಸೂರ್ತಿ (ಐಎಚ್‌ಸಿಎಲ್), ಸಂದೀಪ್ ಪಾಟೀಲ್, ವಿವಿಎಸ್ ಲಕ್ಷ್ಮಣ್ (ಇಂಡಿಯನ್ ಏರ್‌ಲೈನ್ಸ್), ಯುವರಾಜ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಹರ್ಭಜನ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಸುರೇಶ್ ರೈನಾ (ಏರ್ ಇಂಡಿಯಾ), ರಾಬಿನ್ ಉತ್ತಪ್ಪ (ಏರ್ ಇಂಡಿಯಾ), ಮೊಹಮ್ಮದ್ ಕೈಫ್ (ಇಂಡಿಯನ್ ಏರ್ಲೈನ್ಸ್), ನಿಖಿಲ್ ಚೋಪ್ರಾ (ಇಂಡಿಯನ್ ಏರ್ಲೈನ್ಸ್), ಇರ್ಫಾನ್ ಪಠಾಣ್ (ಏರ್ ಇಂಡಿಯಾ), ಆರ್.ಪಿ. ಸಿಂಗ್ (ಟಾಟಾ ಗ್ರೂಪ್‌) ಕೂಡ ಟಾಟಾ ಒಡೆತನದ ಸಂಸ್ಥೆಗಳ ಸಹಕಾರದಿಂದ ಕ್ರಿಕೆಟ್​ನಲ್ಲಿ ತಮ್ಮದೇ ಛಾಪು ಮೂಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 10 October 24

ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು