AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ: ಬಂದೂಕಿಗೆ ಪೂಜೆ, ಗುಂಡು ಹೊಡೆದು ಶೌರ್ಯ ಮೆರೆದ ಕೊಡವರು

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ ನಡೆಯುತ್ತದೆ. ಈ ಕೋವಿ ಹಬ್ಬದಲ್ಲಿ ಕೊಡಗಿನ ಮೂಲನಿವಾಸಿಗಳ ಬಳಿಯಿರುವ ಬಂದೂಕನ್ನು ಪೂಜಿಸಲಾಗುತ್ತದೆ. ಬ್ರಿಟಿಷರ ಕಾಲದಿಂದಲೇ ಕೊಡಗಿನ ಮೂಲನಿವಾಸಿಗಳಿಗೆ ಬಂದೂಕು ಹೊಂದುವ ವಿಶೇಷ ಅಧಿಕಾರವಿರುವುದು ಈ ಹಬ್ಬದ ವಿಶೇಷ. ಇದು ಕೊಡವರ ಸಾಂಸ್ಕೃತಿಕ ಹೆಗ್ಗಳಿಕೆ ಆಗಿದೆ. ಈ ಹಬ್ಬದ ಚಿತ್ರನೋಟ ಇಲ್ಲಿದೆ ನೋಡಿ.

Gopal AS
| Edited By: |

Updated on: Dec 18, 2025 | 5:02 PM

Share
ಕಾಫಿ ಕಣಿವೆ, ಹಾಕಿ ತವರು, ಮಂಜಿನ ನಗರಿ ಎಂದೆಲ್ಲಾ ಫೇಮಸ್ ಆಗಿರುವ ಕೊಡಗು ಜಿಲ್ಲೆಯ ಮತ್ತೊಂದು ಹೆಗ್ಗಳಿಕೆ ಅಂದರೆ ಕೋವಿ ಹಬ್ಬ. ಈ ದಕ್ಷಿಣದ ಕಾಶ್ಮೀರದ ಮೂಲನಿವಾಸಿಗಳು ಕೋವಿ ಪ್ರಿಯರು. ಹಾಗಾಗಿ ಇಲ್ಲಿ ಪ್ರತಿ ವರ್ಷ ಕೋವಿ ಹಬ್ಬ ಮಾಡಲಾಗುತ್ತದೆ. ಆ ಹಬ್ಬದ ಒಂದು ಝಲಕ್​ ಇಲ್ಲಿದೆ ನೋಡಿ.

ಕಾಫಿ ಕಣಿವೆ, ಹಾಕಿ ತವರು, ಮಂಜಿನ ನಗರಿ ಎಂದೆಲ್ಲಾ ಫೇಮಸ್ ಆಗಿರುವ ಕೊಡಗು ಜಿಲ್ಲೆಯ ಮತ್ತೊಂದು ಹೆಗ್ಗಳಿಕೆ ಅಂದರೆ ಕೋವಿ ಹಬ್ಬ. ಈ ದಕ್ಷಿಣದ ಕಾಶ್ಮೀರದ ಮೂಲನಿವಾಸಿಗಳು ಕೋವಿ ಪ್ರಿಯರು. ಹಾಗಾಗಿ ಇಲ್ಲಿ ಪ್ರತಿ ವರ್ಷ ಕೋವಿ ಹಬ್ಬ ಮಾಡಲಾಗುತ್ತದೆ. ಆ ಹಬ್ಬದ ಒಂದು ಝಲಕ್​ ಇಲ್ಲಿದೆ ನೋಡಿ.

1 / 6
ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಂದೂಕನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಕೊಡಗು ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡು ಸಮೀಪ ಗನ್ ಕಾರ್ನಿವಲ್ ಆಯೋಜಿಸಲಾಗಿತ್ತು.

ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಂದೂಕನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಕೊಡಗು ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡು ಸಮೀಪ ಗನ್ ಕಾರ್ನಿವಲ್ ಆಯೋಜಿಸಲಾಗಿತ್ತು.

2 / 6
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದ ಜನರು ತಮ್ಮ ವಿವಿಧ ಕೋವಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಡಗಿನ ಮದುವೆಗಳಲ್ಲಿ ಕಂಡು ಬರು ಸಾಂಪ್ರದಾಯಿಕ ಬಾಳೆ ಕಡಿಯುವ ಪದ್ಧತಿ ಆಚರಿಸಿ ಸಂಭ್ರಮಿಸಿದರು. 

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದ ಜನರು ತಮ್ಮ ವಿವಿಧ ಕೋವಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಡಗಿನ ಮದುವೆಗಳಲ್ಲಿ ಕಂಡು ಬರು ಸಾಂಪ್ರದಾಯಿಕ ಬಾಳೆ ಕಡಿಯುವ ಪದ್ಧತಿ ಆಚರಿಸಿ ಸಂಭ್ರಮಿಸಿದರು. 

3 / 6
ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಕರು. ಇವರ ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ನಂಟು ಹೊಂದಿರುತ್ತವೆ. ವಾರದ ಹಿಂದಷ್ಟೇ ಹುತ್ತರಿ ಹಬ್ಬ ಕೂಡ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸುವ ಮೂಲಕ ಹಬ್ಬ ಆಚರಿಸುತ್ತಾರೆ.

ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಕರು. ಇವರ ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ನಂಟು ಹೊಂದಿರುತ್ತವೆ. ವಾರದ ಹಿಂದಷ್ಟೇ ಹುತ್ತರಿ ಹಬ್ಬ ಕೂಡ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸುವ ಮೂಲಕ ಹಬ್ಬ ಆಚರಿಸುತ್ತಾರೆ.

4 / 6
ಬಂದೂಕನ್ನು ಬರೀ ಪೂಜಿಸುವುದಷ್ಟೇ ಅಲ್ಲದೆ, ತೆಂಗಿನ ಕಾಯಿಗೆ ಗುಂಡು ಹೊಡೆದು ಬಹುಮಾನ ಗೆದ್ದು ಸಂಭ್ರಮಿಸಿದರು. ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಗುರಿ ಇಟ್ಟು ಗುಂಡು ಹೊಡೆದು ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.

ಬಂದೂಕನ್ನು ಬರೀ ಪೂಜಿಸುವುದಷ್ಟೇ ಅಲ್ಲದೆ, ತೆಂಗಿನ ಕಾಯಿಗೆ ಗುಂಡು ಹೊಡೆದು ಬಹುಮಾನ ಗೆದ್ದು ಸಂಭ್ರಮಿಸಿದರು. ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಗುರಿ ಇಟ್ಟು ಗುಂಡು ಹೊಡೆದು ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.

5 / 6
ಇನ್ನು ವಿಶೇಷ ಅಂದರೆ ಇಡೀ ದೇಶದಲ್ಲಿ ಕೊಡಗಿನ ಪ್ರತಿಯೊಬ್ಬ ಮೂಲನಿವಾಸಿಗಳಿಗೆ ಮಾತ್ರ ಬಂದೂಕು ಹೊಂದುವ ವಿಶೇಷ ಅಧಿಕಾರ ಮತ್ತು ಹಕ್ಕನ್ನು ನೀಡಲಾಗಿದೆ. ಹಿಂದೆ ಬ್ರಿಟಿಷರ ಅವಧಿಯಲ್ಲಿ ಈ ಹಕ್ಕು ಕೊಡಗಿನ ಜನರಿಗೆ ನಿಡಲಾಗಿದ್ದು, ಅದು ಇಂದಿಗೂ ಮುಂದುವರೆದಿರುವುದು ವಿಶೇಷ.

ಇನ್ನು ವಿಶೇಷ ಅಂದರೆ ಇಡೀ ದೇಶದಲ್ಲಿ ಕೊಡಗಿನ ಪ್ರತಿಯೊಬ್ಬ ಮೂಲನಿವಾಸಿಗಳಿಗೆ ಮಾತ್ರ ಬಂದೂಕು ಹೊಂದುವ ವಿಶೇಷ ಅಧಿಕಾರ ಮತ್ತು ಹಕ್ಕನ್ನು ನೀಡಲಾಗಿದೆ. ಹಿಂದೆ ಬ್ರಿಟಿಷರ ಅವಧಿಯಲ್ಲಿ ಈ ಹಕ್ಕು ಕೊಡಗಿನ ಜನರಿಗೆ ನಿಡಲಾಗಿದ್ದು, ಅದು ಇಂದಿಗೂ ಮುಂದುವರೆದಿರುವುದು ವಿಶೇಷ.

6 / 6
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು
ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು