
ಬೆಂಗಳೂರು (ಜೂ. 12): ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಜೂನ್ 20 ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಭರ್ಜರಿ ತಯಾರಿ ನಡೆಸುತ್ತಿದೆ. ತಂಡ ಘೋಷಣೆಯಾದಾಗಿನಿಂದ, ಲೀಡ್ಸ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ಗೆ ಭಾರತ ಹೇಗೆ ಆಡಬಹುದು ಎಂಬುದರ ಕುರಿತು ಬಹಳಷ್ಟು ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಕೆಲವು ಭಾರತೀಯ ತಾರೆಯರು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಅನಧಿಕೃತ ಟೆಸ್ಟ್ಗಳನ್ನು ಆಡಿದ್ದಾರೆ. ನಾರ್ಥಾಂಪ್ಟನ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದರು, ನಂತರ ಎರಡನೇ ಇನ್ನಿಂಗ್ಸ್ನಲ್ಲಿ 50 ಕ್ಕೂ ಹೆಚ್ಚು ಸ್ಕೋರ್ ಗಳಿಸಿದರು. ಇದು ಆರಂಭಿಕ ಆಟಗಾರನಾಗಿ ಅವರ ಸ್ಥಾನವನ್ನು ಬಹುತೇಕ ದೃಢಪಡಿಸಿದೆ.
ಯಶಸ್ವಿ ಜೈಸ್ವಾಲ್ ಜೊತೆಗೆ ಕೆಎಲ್ ರಾಹುಲ್ ಅವರನ್ನು ಆರಂಭಿಕ ಆಟಗಾರನಾಗಿ ಉಳಿಸಿಕೊಳ್ಳುವಂತೆ ಭಾರತದ ಮಾಜಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಒತ್ತಾಯಿಸಿದ್ದಾರೆ. ಗೌತಮ್ ಗಂಭೀರ್ ಅವರ ಆಪ್ತರಲ್ಲಿ ಒಬ್ಬರಾದ ಉತ್ತಪ್ಪ, ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೀಗೆ ಹೇಳಿದರು – ನನಗೆ ಆರಂಭದಲ್ಲಿ ಅತ್ಯುತ್ತಮವಾಗಿ ಆಡಬೇಕು ಮತ್ತು ಕೆಎಲ್ ರಾಹುಲ್ ಅಲ್ಲಿ ಓಪನರ್ ಆಗಬೇಕೆಂದು ನಾನು ಬಯಸುತ್ತೇನೆ. ಅವರು ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಮತ್ತು ಇಂಗ್ಲೆಂಡ್ನಲ್ಲಿ ಅವರು ಮೊದಲು ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ, ಭಾರತ ಅವರನ್ನು ಓಪನರ್ ಆಗಿ ಆಡಿಸಬೇಕು.
3 ನೇ ಸ್ಥಾನದಲ್ಲಿ, ಸಾಯಿ ಸುದರ್ಶನ್ ಅವರಂತಹ ಆಟಗಾರನನ್ನು ನಾನು ನೋಡಲು ಬಯಸುತ್ತೇನೆ. ಏಕೆಂದರೆ ಅವರು ತಾಂತ್ರಿಕವಾಗಿ ತುಂಬಾ ಒಳ್ಳೆಯವರು ಮತ್ತು ಅವರಿಗೆ ಸಾಕಷ್ಟು ಸಾಮರ್ಥ್ಯವಿದೆ. ಶುಭ್ಮನ್ ಗಿಲ್ ಖಂಡಿತವಾಗಿಯೂ 4 ನೇ ಸ್ಥಾನದಲ್ಲಿರುತ್ತಾರೆ. ನನ್ನ 5 ನೇ ಸ್ಥಾನದಲ್ಲಿ ಕರುಣ್ ನಾಯರ್ ಇರುತ್ತಾರೆ ಏಕೆಂದರೆ ನಿಮಗೆ ಆ ಸ್ಥಾನದಲ್ಲಿ ಆಡಲು ಸ್ವಲ್ಪ ಅನುಭವ ಬೇಕು ಎಂದರು. ಹಾಗೆಯೆ ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿ ಮತ್ತು ರವೀಂದ್ರ ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿದರು.
ICC Ranking: ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಿಲಕ್ ವರ್ಮಾ ಜಿಗಿತ, ಭಾರತದ ಮೂವರು ಟಾಪ್-6 ರಲ್ಲಿ
ನಂ. 6 ರಲ್ಲಿ ರಿಷಭ್ ಪಂತ್ ಆಡಬೇಕು. ಇದು ಅವರ ಅತ್ಯುತ್ತಮ ಸ್ಥಾನ ಎಂದು ನಾನು ಭಾವಿಸುತ್ತೇನೆ. 7 ನೇ ಸ್ಥಾನ ನಾನು ನಿತೀಶ್ ಕುಮಾರ್ ರೆಡ್ಡಿಗೆ ನೀಡುತ್ತೇನೆ. ಏಕೆಂದರೆ ಅವರು ಉತ್ತಮ ವೇಗದ ಬೌಲಿಂಗ್ ಆಲ್ರೌಂಡರ್, ನಮ್ಮ ನಾಲ್ಕನೇ ವೇಗದ ಬೌಲಿಂಗ್ ಆಯ್ಕೆ. ಇಲ್ಲಿ ಉತ್ತಪ್ಪ ಬ್ಯಾಟಿಂಗ್ನಲ್ಲಿ ಡೆಪ್ತ್ ತರಲು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಾರೆ, ಆದ್ದರಿಂದ ಅವರು ಕುಲದೀಪ್ ಯಾದವ್ ಅವರನ್ನು ತಂಡದಲ್ಲಿ ಇರಿಸಿಕೊಂಡಿಲ್ಲ.
ನಾನು ಜಡೇಜಾ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುತ್ತೇನೆ. ಆಗ ಬ್ಯಾಟಿಂಗ್ ಡೆಪ್ತ್ ಮತ್ತೆ ಹೆಚ್ಚಾಗುತ್ತದೆ, ಅವರು ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿಯೂ ರನ್ ಗಳಿಸಿದ್ದಾರೆ. ಆದ್ದರಿಂದ ನಾನು ಅವರನ್ನು 8 ನೇ ಸ್ಥಾನದಲ್ಲಿ ಇಡುತ್ತೇನೆ. ಕುಲದೀಪ್ ಯಾದವ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಯನ್ನು ಆಯ್ಕೆ ಮಾಡುತ್ತೇನೆ. ವೇಗದ ಬೌಲಿಂಗ್ನಲ್ಲಿ ಉತ್ತಪ್ಪ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರೆ.
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ಕರುಣ್ ನಾಯರ್, ರಿಷಭ್ ಪಂತ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ