Rohit Sharma: ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ರೋಹಿತ್: ಸಿಟ್ಟಿನಲ್ಲಿ ಚಹಲ್​ಗೆ ಹೇಳಿದ್ದೇನು ಗೊತ್ತಾ?

Yuzvendra Chahal and Rohit Sharma Video: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದು ಕ್ಷಣ ತಾಳ್ಮೆ ಕಳೆದುಕೊಂಡರು. ಯುಜ್ವೇಂದ್ರ ಚಹಲ್ ಮೇಲೆ ಸಿಟ್ಟಿಗೆದ್ದು ಅವರು ಏನು ಹೇಳಿದರು ಎಂಬುದನ್ನು ನೇವೇ ನೋಡಿ.

Rohit Sharma: ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ರೋಹಿತ್: ಸಿಟ್ಟಿನಲ್ಲಿ ಚಹಲ್​ಗೆ ಹೇಳಿದ್ದೇನು ಗೊತ್ತಾ?
Rohit Sharma and Yuzvendra Chahal
Follow us
| Updated By: Vinay Bhat

Updated on: Feb 10, 2022 | 12:16 PM

ಟೀಮ್ ಇಂಡಿಯಾ (Team India) ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ವಶಪಡಿಸಿಕೊಂಡ ಸಂಭ್ರಮದಲ್ಲಿದೆ. ಬುಧವಾರ ನಡೆದ ಎರಡನೇ ಏಕದಿನ ಕದನದಲ್ಲಿ ಭಾರತ 44 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಪ್ರಸಿದ್ಧ್ ಕೃಷ್ಣ (Prasidh Krishna) ಬೌಲಿಂಗ್ ದಾಳಿಗೆ ತತ್ತರಿಸಿದ ಕೆರಿಬಿಯನ್ನರು 200ರ ಗಡಿ ಮುಟ್ಟಲೂ ಸಾಧ್ಯವಾಗದೆ ಸೋಲುಂಡರು. ಭಾರತ 2-0 ಅಂತರದಿಂದ ಏಕದಿನ ಸರಣಿ ವಶಪಡಿಸಿಕೊಂಡಿದ್ದು ಕ್ಲೀನ್​ಸ್ವೀಪ್​ನತ್ತ ಚಿತ್ತ ನೆಟ್ಟಿದೆ. ಪರಿಪೂರ್ಣ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಮುನ್ನಡೆಸಿದ ಮೊದಲ ಸರಣಿಯಲ್ಲೇ ಭಾರತ ಬೊಂಬಾಟ್ ಪ್ರದರ್ಶನ ತೋರಿದೆ. ಹಿಟ್​ಮ್ಯಾನ್ ನಾಯಕತ್ವದ ವೈಖರಿ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಬೌಲರ್​ಗಳ ಉಪಯೋಗಿಸಿಕೊಂಡಿದ್ದಯ ಅತ್ಯುತ್ತಮವಾಗಿತ್ತು. ಸಾಮಾನ್ಯವಾಗಿ ಮೈದಾನದಲ್ಲಿ ಕೂಲ್ ಆಗೇ ಇರುವ ರೋಹಿತ್ ಎರಡನೇ ಏಕದಿನ ಪಂದ್ಯದಲ್ಲಿ ಮಾತ್ರ ಕೊಂಚ ಅಗ್ರೆಸಿವ್ ಆಗಿದ್ದರು. ಒಂದು ಹಂತದಲ್ಲಿ ಆಟಗಾರನ ಮೇಲೆ ತಾಳ್ಮೆಯನ್ನೂ ಕಳೆದುಕೊಂಡರು.

ಹೌದು, ಭಾರತ ಎರಡನೇ ಏಕದಿನ ಪಂದ್ಯ ಗೆದ್ದ ಕ್ರೆಡಿಟ್ ಬೌಲರ್​ಗಳಿಗೆ ಮತ್ತು ನಾಯಕನಿಗೆ ಸಲ್ಲಬೇಕು ಎಂದರೆ ತಪ್ಪಾಗಲಾರದು. ಯಾಕಂದ್ರೆ ನಾಯಕ ಬೌಲರ್​ಗಳನ್ನು ಉಪಯೋಗಿಸಕೊಂಡ ರೀತಿ ಮತ್ತು ಬೌಲರ್​ಗಳು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯಿಂದ ಎದುರಾಳಿ ವಿಕೆಟ್​ಗಳು ಉರುಳುತ್ತಾ ಸಾಗಿದವು. ಅದರಂತೆ ಪಂದ್ಯದ ಮಹತ್ವದ ಘಟ್ಟದಲ್ಲಿ ರೋಹಿತ್ ಅವರು 45ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್​ಗೆ ನೀಡಿದರು. ಹಿಟ್​ಮ್ಯಾನ್ ತಾಳ್ಮೆ ಕಳೆದುಕೊಂಡಿದ್ದು ಇದೇ ಸಂದರ್ಭದಲ್ಲಿ.

2 ಸಿಕ್ಸ್ ಸಿಡಿಸಿ ಗೆಲುವಿಗೆ ಎದುರಾಗಿ ನಿಂತಿದ್ದ ಓಡೆನ್ ಸ್ಮಿತ್ ವಿಕೆಟ್ ಭಾರತಕ್ಕೆ ತುಂಬಾನೆ ಮುಖ್ಯವಾಗಿತ್ತು. ಹೀಗಾಗಿ ಸುಂದರ್ ಅವರನ್ನು ಕರೆತಂದ ರೋಹಿತ್ ಫೀಲ್ಡ್ ಸೆಟ್ ಮಾಡುತ್ತಿದ್ದರು. ಆಗ ಚಹಲ್ ಅವರ ವರ್ಥನೆ ಕಂಡು ಹಿಟ್​ಮ್ಯಾನ್ ಸಿಟ್ಟಿಗೆದ್ದರು. ಹಿಂದೆ ಹೋಗು, ಏನಾಗಿದೆ ನಿನಗೆ, ನೀನು ಯಾಕೆ ಸರಿಯಾಗಿ ಓಡುತ್ತಿಲ್ಲ? ಎಂದು ಸಿಟ್ಟಿನಲ್ಲಿ ಗದರಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂದ್ಯ ಮುಗಿದ ಬಳಿಕ ರೋಹಿತ್ ಭಾರತದ ಬೌಲಿಂಗ್ ಪಡೆಯನ್ನು ಹಾಡಿಹೊಗಳಿದರು. “ಸರಣಿಯನ್ನು ಕೈವಶ ಮಾಡಿಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ. ಈ ಪಂದ್ಯದಲ್ಲಿ ನಮಗೆ ಕೆಲ ಸವಾಲುಗಳಿದ್ದವು. ನಮ್ಮ ಬೌಲಿಂಗ್ ಪಡೆ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರಿತು. ಸೂರ್ಯಕುಮಾರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸಮಯವನ್ನು ತೆಗೆದುಕೊಂಡು ತಂಡ ಅವರಿಂದ ಏನು ಭಯಸುತ್ತಿದೆ ಎಂಬುದನ್ನು ಅರಿತು ಆಟವಾಡಿದ್ದಾರೆ. ಕೆಎಲ್ ರಾಹುಲ್ ಕೂಡ ಟಾಪ್ ಆರ್ಡರ್, ಮಧ್ಯಮ ಕ್ರಮಾಂಕ ಯಾವುದೇ ಸ್ಥಾನ ಕೊಟ್ಟರು ಅದ್ಭುತ ಆಟವಾಡುತ್ತಿದ್ದಾರೆ,” ಎಂದು ಹೇಳಿದರು.

IND vs WI: ಭಾರತ vs ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಮಾಹಿತಿ

Virat Kohli Catch: ವಿರಾಟ್ ಕೊಹ್ಲಿ ಹಿಡಿದ ಸ್ಟನ್ನಿಂಗ್ ಕ್ಯಾಚ್​ ಕಂಡು ದಂಗಾದ ರೋಹಿತ್ ಮಾಡಿದ್ದೇನು ನೋಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ