AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: ಮೊದಲು ಶತಕ.. ಈಗ 5 ವಿಕೆಟ್! ರಣಜಿ ಸೆಮಿಫೈನಲ್​ನಲ್ಲಿ ಅಬ್ಬರಿಸಿದ ಆರ್​ಸಿಬಿ ಆಟಗಾರ

Ranji Trophy: ಮಧ್ಯಪ್ರದೇಶದ ತಂಡ ದೊಡ್ಡ ಮೊತ್ತ ಗಳಿಸಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ನಾಲ್ಕನೇ ದಿನವಾದ ಶುಕ್ರವಾರ ಅಹ್ಮದ್ ಇಡೀ ಕಥೆಯನ್ನೇ ಬದಲಿಸಿದರು.

Ranji Trophy: ಮೊದಲು ಶತಕ.. ಈಗ 5 ವಿಕೆಟ್! ರಣಜಿ ಸೆಮಿಫೈನಲ್​ನಲ್ಲಿ ಅಬ್ಬರಿಸಿದ ಆರ್​ಸಿಬಿ ಆಟಗಾರ
ಶಹಬಾಜ್ ಅಹಮದ್
TV9 Web
| Edited By: |

Updated on: Jun 17, 2022 | 4:41 PM

Share

IPL-2022 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore) ಹೊಸ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಸಾರಥ್ಯದಲ್ಲಿ ಪ್ಲೇ ಆಫ್‌ಗೆ ಕಾಲಿಟ್ಟಿತು. ಆದರೆ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ, ಅದರ ಪ್ರದರ್ಶನ ಉತ್ತಮವಾಗಿತ್ತು. ಇದರಲ್ಲಿ ಯುವ ಆಟಗಾರನೊಬ್ಬ ಬಹುಮುಖ್ಯ ಪಾತ್ರವನ್ನು ಹೊಂದಿದ್ದು, ದಿನೇಶ್ ಕಾರ್ತಿಕ್ ಜೊತೆಗೆ ಫಿನಿಶಿಂಗ್ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ಆ ಆಟಗಾರ ಈಗ ತಮ್ಮ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಈ ಆಟಗಾರನ ಹೆಸರು ಶಹಬಾಜ್ ಅಹಮದ್ (Shahbaz Ahmed). ಐಪಿಎಲ್‌ನಲ್ಲಿ ಅಹ್ಮದ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಸ್ತುತ ಅವರು ರಣಜಿ ಟ್ರೋಫಿ (Ranji Trophy)ಯ ಸೆಮಿಫೈನಲ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಬಂಗಾಳ ತಂಡ ಮಧ್ಯಪ್ರದೇಶವನ್ನು ಎದುರಿಸುತ್ತಿದೆ. ಅಹ್ಮದ್ ತಮ್ಮ ಸ್ಪಿನ್‌ನಲ್ಲಿ ಮಧ್ಯಪ್ರದೇಶದ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಿದ್ದಾರೆ.

ಮಧ್ಯಪ್ರದೇಶ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 281 ರನ್ ಗಳಿಸಿತ್ತು. ಪಂದ್ಯದ ಮೂರನೇ ದಿನ ಅಂದರೆ ಗುರುವಾರದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಇದಾದ ನಂತರ ಮಧ್ಯಪ್ರದೇಶದ ತಂಡ ದೊಡ್ಡ ಮೊತ್ತ ಗಳಿಸಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ನಾಲ್ಕನೇ ದಿನವಾದ ಶುಕ್ರವಾರ ಅಹ್ಮದ್ ಇಡೀ ಕಥೆಯನ್ನೇ ಬದಲಿಸಿದರು.

ಇದನ್ನೂ ಓದಿ:Ranji Trophy: ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ರೀಡಾ ಸಚಿವರ ನೆರವು; ರಣಜಿ ಸೆಮಿಫೈನಲ್​ನಲ್ಲಿ ಮನೋಜ್ ಅಬ್ಬರ

ಇದನ್ನೂ ಓದಿ
Image
ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ; ಒಂದೇ ತಂಡದಲ್ಲಿ ಆಡಲಿದ್ದಾರೆ ಕೊಹ್ಲಿ- ಬಾಬರ್! ಪಂದ್ಯ ಯಾವಾಗ ಗೊತ್ತಾ?
Image
IND vs SA: ಇಂದು ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಬಲ್ಲ ಐವರು ಕ್ರಿಕೆಟಿಗರಿವರು..!
Image
WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ

ಐದು ವಿಕೆಟ್

ರಜತ್ ಪಾಟಿದಾರ್ ಮತ್ತು ಆದಿತ್ಯ ಶ್ರೀವಾಸ್ತವ ಮಧ್ಯಪ್ರದೇಶ ಪರ ದಿನದಾಟವನ್ನು ಪ್ರಾರಂಭಿಸಿದರು. ರಜತ್ 63 ಮತ್ತು ಆದಿತ್ಯ 34 ರನ್ ಗಳಿಸಿದರು. ರಜತ್ ಆರ್‌ಸಿಬಿಯಲ್ಲಿ ಅಹ್ಮದ್ ಜೊತೆ ಆಡಿದ್ದರು. ಅಹ್ಮದ್ ಅವರನ್ನು ದಿನದ ಮೊದಲ ಬಲಿಪಶುವನ್ನಾಗಿ ಮಾಡಿ ಮೂರನೇ ಹೊಡೆತವನ್ನು ನೀಡಿದರು. ರಜತ್ 79 ರನ್ ಗಳಿಸಿ ಅಹ್ಮದ್ ಎಸೆತದಲ್ಲಿ ಎಲ್ಬಿಡಬ್ಲ್ಯು ಆದರು. ಇದಾದ ನಂತರ ಅವರು ಅಕ್ಷತಾ ರಘುವಂಶಿಯನ್ನು ತಮ್ಮ ಮುಂದಿನ ಬಲಿಪಶುವನ್ನಾಗಿ ಮಾಡಿದರು. ಅಕ್ಷತಾ ಕೇವಲ ನಾಲ್ಕು ರನ್ ಗಳಿಸಲು ಸಾಧ್ಯವಾಯಿತು. ಸಾರಾಂಶ ಜೈನ್ ಅವರನ್ನು 11 ರನ್​ಗಳಿಗೆ ಅಹ್ಮದ್ ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ನಂತರ ಅವರು ಪುನೀತ್ ಡೇಟ್ ಮತ್ತು ಕುಮಾರ್ ಕಾರ್ತಿಕೇಯ ಅವರ ವಿಕೆಟ್ ಪಡೆದರು. ಅಹ್ಮದ್ ಬೌಲಿಂಗ್​ನಲ್ಲಿ ಮಾತ್ರವಲ್ಲದೆ ಬ್ಯಾಟ್‌ನಲ್ಲೂ ಅಬ್ಬರಿಸಿದರು. ಅಹ್ಮದ್ ಬ್ಯಾಟಿಂಗ್​ನಲ್ಲಿ ಬಂಗಾಳದ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್ ಗಳಿಸಿದರು. ಇದರ ಆಧಾರದ ಮೇಲೆ ಬಂಗಾಳ 273 ರನ್‌ಗಳಿಗೆ ತಲುಪಲು ಸಾಧ್ಯವಾಯಿತು.

ಪ್ರಮಾಣಿಕ್ ಕೂಡ ಅದ್ಭುತ ಪ್ರದರ್ಶನ

ಅಹ್ಮದ್ ಹೊರತಾಗಿ ಪ್ರದೀಪ್ತ ಪ್ರಮಾಣಿಕ್ ಕೂಡ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದರು. ಅವರು ಮಧ್ಯಪ್ರದೇಶದ ನಾಯಕ ಆದಿತ್ಯ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಆದಿತ್ಯ 82 ರನ್‌ಗಳ ಇನ್ನಿಂಗ್ಸ್ ಆಡಿದರು ಆದರೆ ಇದಕ್ಕಾಗಿ 225 ಎಸೆತಗಳನ್ನು ಎದುರಿಸಿದರು. ಅನುಭವ್ ಅಗರ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಪ್ರಮಾಣಿಕ್ ಮಧ್ಯಪ್ರದೇಶದ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಅಹ್ಮದ್ 41 ಓವರ್​ಗಳಲ್ಲಿ 79 ರನ್ ನೀಡಿ ಐದು ವಿಕೆಟ್ ಪಡೆದರೆ, ಪ್ರಮಾಣಿಕ್ 31.2 ಓವರ್ ಗಳಲ್ಲಿ 65 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ