AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS 2nd ODI: ಟೀಮ್ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಗಿಲ್: ಏನು ಹೇಳಿದ್ರು?

Shubman Gill Post Match presentation, India vs Australia 2nd ODI: ಭಾರತ vs ಆಸ್ಟ್ರೇಲಿಯಾ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್‌ಗಳಿಂದ ಸೋತಿತು. ಸತತ ಎರಡು ಸೋಲುಗಳ ನಂತರ, ಸರಣಿ ಕೂಡ ಕಳೆದುಕೊಂಡಿದೆ. ಏತನ್ಮಧ್ಯೆ, ಪಂದ್ಯದ ನಂತರ ನಾಯಕ ಶುಭ್ಮನ್ ಗಿಲ್ ತಂಡದ ಸೋಲಿಗೆ ಕಾರಣ ವಿವರಿಸಿದ್ದಾರೆ.

IND vs AUS 2nd ODI: ಟೀಮ್ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಗಿಲ್: ಏನು ಹೇಳಿದ್ರು?
Shubman Gill Post Match Presentation
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Oct 24, 2025 | 7:45 AM

Share

ಬೆಂಗಳೂರು (ಅ. 24): ಯುವ ನಾಯಕ ಶುಭ್​ಮನ್ ಗಿಲ್ (Shubman Gill) ನೇತೃತ್ವದ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಗುರುವಾರ ಅಡಿಲೇಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಸೋಲಿನೊಂದಿಗೆ, ಭಾರತ ತಂಡವು ಸರಣಿಯನ್ನು ಸಹ ಕಳೆದುಕೊಂಡಿತು. ಆಸ್ಟ್ರೇಲಿಯಾ ಈ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಗಿಲ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾದಿಂದ ಅಭಿಮಾನಿಗಳು ಗೆಲುವು ನಿರೀಕ್ಷಿಸಿದ್ದರು, ಆದರೆ ಫಲಿತಾಂಶವು ವಿರುದ್ಧವಾಗಿದೆ. ಗಿಲ್ ನಾಯಕತ್ವದಲ್ಲಿ ವಿಫಲರಾಗುವುದಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಅವರ ಕಡೆಯಿಂದ ಯಾವುದೇ ಮಹತ್ವದ ಕೊಡುಗೆ ಬಂದಿಲ್ಲ.

ಪಂದ್ಯದ ನಂತರ ಶುಭ್​ಮನ್ ಗಿಲ್ ಹೇಳಿದ್ದೇನು?

ಎರಡನೇ ಏಕದಿನ ಪಂದ್ಯವನ್ನು ಎರಡು ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ಸರಣಿಯಲ್ಲಿ ಸರ್ವತೋಮುಖ ಪ್ರದರ್ಶನದೊಂದಿಗೆ ಅಜೇಯ ಮುನ್ನಡೆ ಸಾಧಿಸಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋತಿತ್ತು. 78 ಎಸೆತಗಳಲ್ಲಿ ಅದ್ಭುತ 74 ರನ್ ಗಳಿಸಿದ ಮ್ಯಾಥ್ಯೂ ಶಾರ್ಟ್ ಅವರ ಒಂದು ಅವಕಾಶ ಸೇರಿದಂತೆ ಭಾರತೀಯ ಫೀಲ್ಡರ್‌ಗಳು ಕನಿಷ್ಠ ಮೂರು ಅವಕಾಶಗಳನ್ನು ತಪ್ಪಿಸಿಕೊಂಡರು. “ನಾವು ಉತ್ತಮ ಪ್ರಮಾಣದ ರನ್‌ಗಳನ್ನು ಗಳಿಸಿದ್ದೆವು. ಆದರೆ ನೀವು ಆ ರೀತಿಯ ಸ್ಕೋರ್ ಅನ್ನು ರಕ್ಷಿಸಿಕೊಂಡು ನಂತರ ಕೆಲವು ಅವಕಾಶಗಳನ್ನು ಕಳೆದುಕೊಂಡಾಗ ಗೆಲುವು ಎಂದಿಗೂ ಸುಲಭವಲ್ಲ” ಎಂದು ಗಿಲ್ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.

ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣ ಮತ್ತು ಸಾಕಷ್ಟು ರನ್ ಗಳಿಸಲು ಸಾಧ್ಯವಾಗದ ಕಾರಣ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ತಮ್ಮ ತಂಡ ಕಳೆದುಕೊಂಡಿತು ಎಂದು ಭಾರತೀಯ ನಾಯಕ ಶುಭ್​ಮನ್ ಗಿಲ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ
Image
ಪಾಕಿಸ್ತಾನದ ಸೋಲು ಭಾರತಕ್ಕೆ ಲಾಭವಾಯ್ತು
Image
ಟೀಂ ಇಂಡಿಯಾಕ್ಕೆ ಮುಳುವಾಗ್ತಿದ್ಯಾ ಗೌತಮ್ ಗಂಭೀರ್ ಹಠಮಾರಿತನ
Image
3ಕ್ಯಾಚ್ ಡ್ರಾಪ್, 1 ರನೌಟ್.. ಭಾರತ ಪಂದ್ಯ ಸೋತಿದ್ದು ಎಲ್ಲಿ?
Image
ವಿಶ್ವಕಪ್​ನಲ್ಲಿ 14ನೇ ಏಕದಿನ ಶತಕ ಬಾರಿಸಿದ ಸ್ಮೃತಿ ಮಂಧಾನ

WTC Points Table: ಆಫ್ರಿಕಾ ವಿರುದ್ಧ ಸೋತು ಭಾರತಕ್ಕೆ ಭರ್ಜರಿ ಲಾಭ ಮಾಡಿಕೊಟ್ಟ ಪಾಕಿಸ್ತಾನ

ಟಾಸ್ ಸೋತ ಬಗ್ಗೆ ಕ್ಯಾಪ್ಟನ್ ಗಿಲ್ ಹೇಳಿದ್ದೇನು?

ಶುಭ್​ಮನ್ ಗಿಲ್ ಸತತ ಎರಡನೇ ಟಾಸ್ ಸೋತರು. ಎರಡೂ ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಗಿತ್ತು. ಇದರ ಬಗ್ಗೆ ಕೇಳಿದಾಗ, ಕ್ಯಾಪ್ಟನ್ ಗಿಲ್ ಮಳೆಯಿಂದಾಗಿ ಮೊದಲ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿತ್ತು ಎಂದು ಹೇಳಿದರು, ಆದರೆ ಈ ಪಂದ್ಯದಲ್ಲಿ ಹಾಗಾಗಲಿಲ್ಲ. ಎರಡೂ ತಂಡಗಳಿಗೆ ಪೂರ್ಣ 50 ಓವರ್‌ಗಳನ್ನು ಆಡಲು ಅವಕಾಶ ಸಿಕ್ಕಿದ್ದು ಖಂಡಿತವಾಗಿಯೂ ಒಳ್ಳೆಯದು. ಆರಂಭಿಕ ಹಂತದಲ್ಲಿ ಬೌಲರ್‌ಗಳಿಗೆ ವಿಕೆಟ್ ಸಹಾಯಕವಾಗಿತ್ತು, ಆದರೆ 15-20 ಓವರ್‌ಗಳ ನಂತರ, ವಿಕೆಟ್ ಸೆಟ್ ಆಯಿತು ಎಂದು ಅವರು ಹೇಳಿದರು.

ರೋಹಿತ್ ಶರ್ಮಾಗೆ ಪ್ರಶಂಸೆ

26 ವರ್ಷದ ಗಿಲ್, ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ 73 ರನ್‌ಗಳ ಹೋರಾಟದ ಇನ್ನಿಂಗ್ಸ್ ಅನ್ನು ಶ್ಲಾಘಿಸುತ್ತಾ, “ಬಹಳ ಸಮಯದ ನಂತರ ಮತ್ತೆ ತಂಡಕ್ಕೆ ಮರಳುವುದು ಎಂದಿಗೂ ಸುಲಭವಲ್ಲ. ಆರಂಭಿಕ ಹಂತ ಸ್ವಲ್ಪ ಸವಾಲಿನದ್ದಾಗಿತ್ತು, ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿದರು, ಅವರು ದೊಡ್ಡ ಇನ್ನಿಂಗ್ಸ್ ಅನ್ನು ತಪ್ಪಿಸಿಕೊಂಡರು ಎಂದು ನಾನು ಹೇಳುತ್ತೇನೆ.” ಎಂಬ ಅಭಿಪ್ರಾಯ ಹೊರಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!