AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Smash 2022: ಟಿ20 ಪಂದ್ಯದಲ್ಲಿ ಒಟ್ಟು 426 ರನ್: 2 ರನ್​ಗಳ ರೋಚಕ ಜಯ..!

Super Smash 2022: 215 ರನ್​ಗಳ ಬೃಹತ್ ಗುರಿ ಪಡೆದ ಸೆಂಟ್ರಲ್ ಡಿಸ್ಟಿಕ್ಸ್​​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗ್ರೇಗ್ ಹೇ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು.

Super Smash 2022: ಟಿ20 ಪಂದ್ಯದಲ್ಲಿ ಒಟ್ಟು 426 ರನ್: 2 ರನ್​ಗಳ ರೋಚಕ ಜಯ..!
Wellington team
TV9 Web
| Edited By: |

Updated on:Dec 27, 2022 | 3:28 PM

Share

Super Smash 2022: ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟಿ20 ಲೀಗ್​ನ 4ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸೆಂಟ್ರಲ್ ಡಿಸ್ಟ್ರಿಕ್ಸ್ ಹಾಗೂ ವೆಲ್ಲಿಂಗ್ಟನ್ ತಂಡಗಳು ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೆಂಟ್ರಲ್ ತಂಡದ ನಾಯಕ ಟಾಮ್ ಬ್ರೂಸ್ ಬೌಲಿಂಗ್ ಆಯ್ದುಕೊಂಡರು. ಆದರೆ ಪವರ್​ಪ್ಲೇನಲ್ಲೇ ನಾಯಕನ ನಿರ್ಧಾರ ತಪ್ಪು ಎಂಬಂತೆ ಫಿನ್ ಅಲೆನ್ ಹಾಗೂ ನಿಕ್ ಕೆಲ್ಲಿ ಬ್ಯಾಟ್ ಬೀಸಿದ್ದರು. ಏಕೆಂದರೆ ಮೊದಲ ವಿಕೆಟ್​ಗೆ ಈ ಜೋಡಿ 5.5 ಓವರ್​ಗಳಲ್ಲಿ 80 ರನ್​ ಚಚ್ಚಿದ್ದರು.

ಈ ಹಂತದಲ್ಲಿ 20 ಎಸೆತಗಳಲ್ಲಿ 4 ಸಿಕ್ಸ್​ ಹಾಗೂ 1 ಫೋರ್​ನೊಂದಿಗೆ 33 ರನ್ ಬಾರಿಸಿದ್ದ ಫಿನ್ ಅಲೆನ್ ಔಟಾದರು. ಇದಾಗ್ಯೂ ಸಿಡಿಲಬ್ಬರ ಮುಂದುವರೆಸಿದ ನಿಕ್ ಕೆಲ್ಲಿ 25 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 58 ರನ್ ಬಾರಿಸಿದರು. ಪರಿಣಾಮ 8 ಓವರ್​ ವೇಳೆ ವೆಲ್ಲಿಂಗ್ಟನ್ ತಂಡದ ಸ್ಕೋರ್ 100ರ ಗಡಿದಾಡಿತು. ಈ ಹಂತದಲ್ಲಿಟಾಮ್ ಬ್ರೂಸ್ ಎಸೆತದಲ್ಲಿ ಕೆಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಚಿನ್ ರವೀಂದ್ರ (16), ಟ್ರಾಯ್ ಜಾನ್ಸನ್ (35) ಹಾಗೂ ವ್ಯಾನ್ ಬ್ರೀಕ್ (21) ಉಪಯುಕ್ತ ಕಾಣಿಕೆ ನೀಡಿದರು. ಅದರಂತೆ ನಿದಿಗತ 20 ಓವರ್​ಗಳಲ್ಲಿ ವೆಲ್ಲಿಂಗ್ಟನ್ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 214 ಕ್ಕೆ ಬಂದು ನಿಂತಿತು.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ

215 ರನ್​ಗಳ ಬೃಹತ್ ಗುರಿ ಪಡೆದ ಸೆಂಟ್ರಲ್ ಡಿಸ್ಟಿಕ್ಸ್​​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗ್ರೇಗ್ ಹೇ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 29 ರನ್​ ಬಾರಿಸಿದ ಬೆನ್ ಸ್ಮಿತ್ ಕೂಡ ಪವರ್​ಪ್ಲೇ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಹಿರಿಯ ಆಟಗಾರ ರಾಸ್ ಟೇಲರ್ 5 ರನ್​ಗಳಿಸಿ ಇನಿಂಗ್ಸ್​ ಅಂತ್ಯಗೊಳಿಸಿದರು.ಇದಾಗ್ಯೂ ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಡೇನ್ ಕ್ಲೆವರ್ 32 ಎಸೆತಗಳಲ್ಲಿ 44 ರನ್​ ಬಾರಿಸಿದರು. ಕ್ಲೆವರ್​ಗೆ ಉತ್ತಮ ಸಾಥ್ ನೀಡಿದ ಜೋಶ್ ಕ್ಲಾರ್ಕ್​​ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವೆಲ್ಲಿಂಗ್ಟನ್ ಬೌಲರ್​ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಕ್ಲಾರ್ಕ್​ಸನ್ ಪಂದ್ಯದ ಗತಿಯನ್ನೇ ಬದಲಿಸುವ ಸೂಚನೆ ನೀಡಿದರು.

ಅಂತಿಮ ಹಂತದಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಆಕರ್ಷಕ ಫೋರ್ ಬಾರಿಸುವ ಮೂಲಕ ಸೆಂಟ್ರಲ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. 24 ಎಸೆತಗಳಲ್ಲಿ 55 ರನ್​ ಬಾರಿಸಿದ ಜೋಶ್ ಕ್ಲಾರ್ಕ್​ಸನ್ ಅಂತಿಮ ಹಂತದಲ್ಲಿ ಎಡವಿ ಔಟಾದರು. ಪರಿಣಾಮ ಕೊನೆಯ ಓವರ್​ನಲ್ಲಿ ಸೆಂಟ್ರಲ್ ತಂಡಕ್ಕೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಟಾಮ್ ಬ್ರೂಸ್ (43) ರನೌಟ್ ಆಗಿದ್ದು ಸೆಂಟ್ರಲ್ ತಂಡಕ್ಕೆ ಪಾಲಿಗೆ ದುಬಾರಿಯಾಯಿತು. ಅಂತಿಮವಾಗಿ ಸೆಂಟ್ರಲ್ ಡಿಸ್ಟಿಕ್ಸ್​ ತಂಡವು 2 ರನ್​ಗಳಿಂದ ವಿರೋಚಿತವಾಗಿ ಸೋಲೋಪ್ಪಿಕೊಳ್ಳಬೇಕಾಯಿತು. ಉಭಯ ತಂಡಗಳಿಂದ ಒಟ್ಟು 426 ರನ್​ ಮೂಡಿಬಂದಿರುವ ಈ ಪಂದ್ಯವು ಸೂಪರ್ ಸ್ಮ್ಯಾಶ್ ಲೀಗ್​ನ ಅತ್ಯಂತ ರೋಚಕ ಪಂದ್ಯವಾಗಿ ಗುರುತಿಸಿಕೊಂಡಿದೆ.

ಸೆಂಟ್ರಲ್ ಡಿಸ್ಟಿಕ್ಸ್ ಪ್ಲೇಯಿಂಗ್ 11:

ಬೆನ್ ಸ್ಮಿತ್ , ಗ್ರೆಗ್ ಹೇ , ಡೇನ್ ಕ್ಲೆವರ್ (ವಿಕೆಟ್ ಕೀಪರ್) , ರಾಸ್ ಟೇಲರ್ , ಟಾಮ್ ಬ್ರೂಸ್ (ನಾಯಕ) , ಜೋಶ್ ಕ್ಲಾರ್ಕ್​ಸನ್ , ಡೌಗ್ ಬ್ರೇಸ್ವೆಲ್ , ಬ್ರೆಟ್ ಜಾನ್ಸನ್ , ಜೇಡನ್ ಲೆನಾಕ್ಸ್ , ರೇಮಂಡ್ ಟೂಲ್ , ಬ್ರೆಟ್ ರಾಂಡೆಲ್. ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…

ವೆಲ್ಲಿಂಗ್ಟನ್ ಪ್ಲೇಯಿಂಗ್ 11:

ಫಿನ್ ಅಲೆನ್ , ನಿಕ್ ಕೆಲ್ಲಿ , ರಚಿನ್ ರವೀಂದ್ರ , ಟ್ರಾಯ್ ಜಾನ್ಸನ್ , ನಾಥನ್ ಸ್ಮಿತ್ , ಟಿಮ್ ರಾಬಿನ್ಸನ್ , ಕ್ಯಾಲಮ್ ಮೆಕ್ಲಾಚ್ಲಾನ್ (ವಿಕೆಟ್ ಕೀಪರ್) , ಆಡಮ್ ಮಿಲ್ನ್ , ಲೋಗನ್ ವ್ಯಾನ್ ಬೀಕ್ , ಪೀಟರ್ ಯಂಗ್​ಹಸ್ಬೆಂಡ್ (ನಾಯಕ) , ಮೈಕೆಲ್ ಸ್ನೆಡೆನ್.

Published On - 3:20 pm, Tue, 27 December 22

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ