AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

#BanPakCricket! ಬದ್ಧ ವೈರಿಗಳ ಮಿನಿ ಸಮರಕ್ಕೂ ಮುನ್ನ ಭಾರತದಲ್ಲಿ ಟ್ರೆಂಡ್ ಆಯ್ತು “ಬ್ಯಾನ್ ಪಾಕ್ ಕ್ರಿಕೆಟ್”

T20 World Cup: ಪಾಕಿಸ್ತಾನವು ಗಡಿಯಲ್ಲಿ ಭಾರತದೊಂದಿಗೆ ನಿರಂತರವಾಗಿ ಯುದ್ಧಗಳನ್ನು ಮಾಡುತ್ತಿದೆ. ಇದನ್ನು ಭಾರತೀಯ ಅಭಿಮಾನಿಗಳು ಗಮನದಲ್ಲಿಟ್ಟುಕೊಂಡು, ಈ ಸ್ಪರ್ಧೆಯಲ್ಲಿ ಪರಮ ವೈರಿ ವಿರುದ್ಧ ಆಡದಂತೆ ಮತ್ತು ಈ ರೀತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಎದುರೇಟು ನೀಡುವಂತೆ ಭಾರತವನ್ನು ಒತ್ತಾಯಿಸಿದ್ದಾರೆ.

#BanPakCricket! ಬದ್ಧ ವೈರಿಗಳ ಮಿನಿ ಸಮರಕ್ಕೂ ಮುನ್ನ ಭಾರತದಲ್ಲಿ ಟ್ರೆಂಡ್ ಆಯ್ತು ಬ್ಯಾನ್ ಪಾಕ್ ಕ್ರಿಕೆಟ್
ಭಾರತ- ಪಾಕ್ ಪಂದ್ಯಕ್ಕೆ ಭಾರತದಲ್ಲಿ ವಿರೋದ
TV9 Web
| Updated By: ಪೃಥ್ವಿಶಂಕರ|

Updated on:Oct 17, 2021 | 8:33 PM

Share

ಐಸಿಸಿ ಟಿ 20 ವಿಶ್ವಕಪ್ ಇಂದು ಯುಎಇ ಮತ್ತು ಒಮಾನ್‌ನಲ್ಲಿ ಅರ್ಹತಾ ಪಂದ್ಯಗಳೊಂದಿಗೆ ಆರಂಭವಾಗಿದೆ. ಸೂಪರ್ 12 ಹಂತವು ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ. ಭಾರತ ಮತ್ತು ಪಾಕಿಸ್ತಾನವು ಅಕ್ಟೋಬರ್ 24 ರಂದು ದುಬೈನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಆಟಕ್ಕೆ ಮುಂಚಿತವಾಗಿ #ಬಾಯ್ಕಾಟ್ ಪಾಕಿಸ್ತಾನ ಟ್ವಿಟ್ಟರ್‌ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಗಡಿಯಲ್ಲಿ ಉಗ್ರ ಚಟುವಟಿಕೆಗಳಿಂದಾಗಿ ಬೇಸತ್ತಿರುವ ಭಾರತೀಯ ಅಭಿಮಾನಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮತ್ತು ತಮ್ಮ ಪರಮ ವಿರೋಧಿಗಳ ಎದುರು ಆಡಬೇಡಿ ಎಂದು ಟೀಂ ಇಂಡಿಯಾವನ್ನು ಕೇಳಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ದೇಶವು ಅಪಾಯಕ್ಕೆ ಸಿಲುಕುತ್ತಿರುವುದರಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ತುಂಬಾ ಕಡಿಮೆಯಾಗಿದೆ. ಪಾಕಿಸ್ತಾನದಲ್ಲಿ ಆಡಲು ತಂಡಗಳು ಹಿಂಜರಿಯುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಪಾಕಿಸ್ತಾನದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡುವುದರಿಂದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಮ್ಮ ಹೆಸರನ್ನು ಹಿಂಪಡೆದವು.

ಪಾಕಿಸ್ತಾನವು ಗಡಿಯಲ್ಲಿ ಭಾರತದೊಂದಿಗೆ ನಿರಂತರವಾಗಿ ಯುದ್ಧಗಳನ್ನು ಮಾಡುತ್ತಿದೆ. ಇದನ್ನು ಭಾರತೀಯ ಅಭಿಮಾನಿಗಳು ಗಮನದಲ್ಲಿಟ್ಟುಕೊಂಡು, ಈ ಸ್ಪರ್ಧೆಯಲ್ಲಿ ಪರಮ ವೈರಿ ವಿರುದ್ಧ ಆಡದಂತೆ ಮತ್ತು ಈ ರೀತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಎದುರೇಟು ನೀಡುವಂತೆ ಭಾರತವನ್ನು ಒತ್ತಾಯಿಸಿದ್ದಾರೆ.

ಬಹು ನಿರೀಕ್ಷಿತ ಘರ್ಷಣೆಗೆ ಮುನ್ನ, ಭಾರತೀಯ ಸೈನಿಕರ ಮೇಲೆ ಎಲ್‌ಇಟಿಯ ಪಾಕಿಸ್ತಾನದ ಭಯೋತ್ಪಾದಕ ಗುಂಪು ನಡೆಸಿದ ದಾಳಿಯನ್ನು ಭಾರತೀಯರು ಖಂಡಿಸಿದರು. ಈಗ ಭಯೋತ್ಪಾದನೆಗೆ ಆತಿಥ್ಯ ವಹಿಸುವ ರಾಷ್ಟ್ರದ ವಿರುದ್ಧ ಪಂದ್ಯವನ್ನು ಆಡಲು ಸಾಧ್ಯವಿಲ್ಲದ ಕಾರಣ ಪಾಕಿಸ್ತಾನ ಕ್ರಿಕೆಟ್ ಅನ್ನು ನಿಷೇಧಿಸಲು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನ ನಾಯಕ ಬಾಬರ್ ಅಜಮ್ ಮುಂಬರುವ ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವ ವಿಶ್ವಾಸ ಹೊಂದಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಹಿಂದಿನ ಐದು ಪಂದ್ಯಗಳಲ್ಲಿ ಸೋತಿದೆ. ಈ ಬಗ್ಗೆ ಮಾತನಾಡಿರುವ ಬಾಬರ್, ನಾಯಕನಾಗಿ ಟಿ 20 ವಿಶ್ವಕಪ್‌ಗೆ ಹೋಗಲು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಪ್ರತಿಯೊಂದು ಆಟದ ಒತ್ತಡ ಮತ್ತು ಹೆಚ್ಚಿನ ತೀವ್ರತೆಯನ್ನು ನಾವು ತಿಳಿದಿದ್ದೇವೆ, ವಿಶೇಷವಾಗಿ ಮೊದಲನೆಯ ಪಂದ್ಯ. ಆಶಾದಾಯಕವಾಗಿ, ನಾವು ಪಂದ್ಯವನ್ನು ಗೆಲ್ಲಬಹುದು ಮತ್ತು ಆವೇಗವನ್ನು ಮುಂದುವರಿಸಬಹುದು.

ನಾವು ಕಳೆದ 3-4 ವರ್ಷಗಳಿಂದ ಯುಎಇಯಲ್ಲಿ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ಪರಿಸ್ಥಿತಿಗಳು ನಮಗೆ ಚೆನ್ನಾಗಿ ತಿಳಿದಿದೆ. ವಿಕೆಟ್ ಹೇಗೆ ವರ್ತಿಸುತ್ತದೆ ಮತ್ತು ಬ್ಯಾಟರ್‌ಗಳು ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿದೆ. ಯಾರು ಉತ್ತಮ ಕ್ರಿಕೆಟ್ ಆಡುತ್ತಾರೆ, ಪಂದ್ಯವನ್ನು ಗೆಲ್ಲುತ್ತಾರೆ. ನೀವು ನನ್ನನ್ನು ಕೇಳಿದರೆ, ನಾವು ಗೆಲ್ಲುತ್ತೇವೆ ಎಂದು ಐಸಿಸಿ ಹೇಳಿರುವಂತೆ ಬಾಬರ್ ಅಜಮ್ ಹೇಳಿದರು.

Published On - 8:29 pm, Sun, 17 October 21

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?