AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿ: ಕಾರಣವೇನು ಗೊತ್ತಾ?

IPL 2021 Rcb: ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್​ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು.

Virat Kohli: ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿ: ಕಾರಣವೇನು ಗೊತ್ತಾ?
Virat Kohli-umpire fight
TV9 Web
| Edited By: |

Updated on: Oct 12, 2021 | 4:34 PM

Share

ಇಂಡಿಯನ್ ಪ್ರೀಮಿಯರ್​ ಲೀಗ್​ನ (IPL 2021) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ (RCB) ಕೆಕೆಆರ್ (KKR) ವಿರುದ್ದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ಮೂಡಿಬಂದಿತು. ಅದರ ಜೊತೆಗೆ ಪಂದ್ಯವು ಹೈಡ್ರಾಮಗಳಿಗೂ ಸಾಕ್ಷಿಯಾಯಿತು. ಅಂಪೈರ್ ನೀಡಿದ ತೀರ್ಪುಗಳ ಬಗ್ಗೆ ಕೊನೆಯ ಬಾರಿ ನಾಯಕನಾಗಿ ಮೈದಾನದಲ್ಲಿದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಂಪೈರ್​ ವಿರುದ್ದ ಕೆಂಡಕಾರಿದ ಕೊಹ್ಲಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಕೊಹ್ಲಿ ಕುಪಿತಗೊಳ್ಳಲು ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.

ಕೊಹ್ಲಿ ಮೈದಾನದಲ್ಲೇ ಕೋಪಗೊಳ್ಳಲು ಮುಖ್ಯ ಕಾರಣ ಫೀಲ್ಡ್​ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿರೇಂದರ್ ಶರ್ಮಾ. ಅವರು ನೀಡುತ್ತಿದ್ದ ತೀರ್ಪುಗಳ ವಿರುದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ವಿರೇಂದರ್ ಶರ್ಮಾ ನೀಡಿದ ಮೂರು ತೀರ್ಪುಗಳು ತಪ್ಪಾಗಿತ್ತು. ಆ ಮೂರು ತೀರ್ಪುಗಳು ಆರ್​ಸಿಬಿ ವಿರುದ್ದವೇ ಆಗಿತ್ತು ಎಂಬುದು ವಿಶೇಷ.

ಆರ್​ಸಿಬಿ ಬ್ಯಾಟಿಂಗ್ ವೇಳೆ ಎರಡು ಬಾರಿ ವಿರೇಂದರ್ ಶರ್ಮಾ ತಪ್ಪು ತೀರ್ಪು ನೀಡಿದ್ದರು. ಮೊದಲು ಶಹಬಾಜ್ ಅಹ್ಮದ್ ಮತ್ತು ಹರ್ಷಲ್ ಪಟೇಲ್ ಅವರನ್ನೂ ಎಲ್​ಬಿಡ್ಲ್ಯೂ ಔಟೆಂದು ಬೆರಳೆತ್ತಿದ್ದರು. ಆದರೆ ಈ ವೇಳೆ ಆಟಗಾರರು ಡಿಆರ್​ಎಸ್​ ಮೊರೆ ಹೋಗಿದ್ದರು. 3ನೇ ಅಂಪೈರ್ ಪರಿಶೀಲನೆ ವೇಳೆ ಫೀಲ್ಡ್ ಅಂಪೈರ್ ತೀರ್ಪು ತಪ್ಪು ಎಂಬುದು ಸ್ಪಷ್ಟವಾಗಿತ್ತು. ಆ ಬಳಿಕ ವಿರೇಂದರ್ ಶರ್ಮಾ ತಮ್ಮ ತೀರ್ಪನ್ನು ಬದಲಿಸಿದ್ದರು.

ಇದಾದ ಬಳಿಕ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಕೆಕೆಆರ್ ಇನಿಂಗ್ಸ್​ ವೇಳೆ ಕೂಡ ವಿರೇಂದರ್ ಶರ್ಮಾ ತಪ್ಪು ನಿರ್ಣಯ ಪುನಾವರ್ತನೆ ಆಗಿತ್ತು. ಚಹಲ್ ಬೌಲಿಂಗ್​ನಲ್ಲಿ ಕೆಕೆಆರ್ ಬ್ಯಾಟರ್ ರಾಹುಲ್ ತ್ರಿಪಾಠಿ ಎಲ್​ಬಿಡಬ್ಲ್ಯೂ ಆಗಿದ್ದರು. ಚಹಲ್ ಸೇರಿದಂತೆ ಆರ್​ಸಿಬಿ ಆಟಗಾರರು ಅಂಪೈರ್​ಗೆ ಬಲವಾದ ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು. ಕೊನೆಗೆ ಆರ್​ಸಿಬಿ ನಾಯಕ ಡಿಆರ್​ಎಸ್ ಹೋದರು. 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್​ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು. ಅದರಲ್ಲೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಂಪೈರ್ ನೀಡುತ್ತಿದ್ದ ತಪ್ಪು ನಿರ್ಧಾರ ಕ್ಯಾಪ್ಟನ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕೆರಳಿಸಿತ್ತು. 3 ಬಾರಿ ಕೂಡ ಆರ್​ಸಿಬಿ ವಿರುದ್ದ ತಪ್ಪು ತೀರ್ಪು ನೀಡಿರುವ ಬಗ್ಗೆ ಕೊಹ್ಲಿ ಮೈದಾನದಲ್ಲೇ ಅಂಪೈರ್ ವಿರೇಂದರ್ ಶರ್ಮಾಗೆ ಬೆಂಡೆತ್ತಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ 

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(Virat Kohli involved in heated exchange with umpire during RCB vs KKR match)

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?