Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash Dhull, IPL 2022 Auction: ಟಿ20 ವಿಶ್ವಕಪ್ ಗೆದ್ದ ಯುವ ನಾಯಕ ಡೆಲ್ಲಿ ಪಾಲು! ಕೊಟ್ಟ ಹಣವೆಷ್ಟು ಗೊತ್ತಾ?

Yash Dhull, IPL 2022 Auction: ಯಶ್ ಧುಲ್ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡ ವಿಶ್ವಕಪ್‌ಗೆ ಮುನ್ನ ಅಂಡರ್-19 ಏಷ್ಯಾಕಪ್ ಗೆದ್ದುಕೊಂಡಿತ್ತು

Yash Dhull, IPL 2022 Auction: ಟಿ20 ವಿಶ್ವಕಪ್ ಗೆದ್ದ ಯುವ ನಾಯಕ ಡೆಲ್ಲಿ ಪಾಲು! ಕೊಟ್ಟ ಹಣವೆಷ್ಟು ಗೊತ್ತಾ?
ಯಶ್ ಧುಲ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 13, 2022 | 4:10 PM

ಭಾರತಕ್ಕೆ ಅಂಡರ್-19 ವಿಶ್ವಕಪ್ (ICC U-19 World Cup 2022 ಗೆದ್ದು ಕೊಟ್ಟ ನಾಯಕ ಯಶ್ ಧುಲ್ (Yash Dhull)ಗೆ ಅದೃಷ್ಟ ಖುಲಾಯಿಸಿದೆ. ಭಾರತದ ಜೂನಿಯರ್ ತಂಡದ ನಾಯಕ ಮತ್ತು ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ತಂಡವನ್ನು ಐದನೇ ಬಾರಿಗೆ ವಿಶ್ವ ಚಾಂಪಿಯನ್‌ನನ್ನಾಗಿ ಮಾಡಿದರು ಮತ್ತು ಸ್ವತಃ ಬ್ಯಾಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಅವರ ಡಬಲ್ ಯಶಸ್ಸಿನ ಪರಿಣಾಮವು ಐಪಿಎಲ್ 2022 ರ ಹರಾಜಿನಲ್ಲಿ (IPL 2022 Auction) ಗೋಚರಿಸಿದೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 50 ಲಕ್ಷಕ್ಕೆ ಖರೀದಿಸಿದೆ. ಐಪಿಎಲ್ ಹರಾಜಿನಲ್ಲಿ ಅವರನ್ನು ಖರೀದಿಸುವ ಬಗ್ಗೆ ಫ್ರಾಂಚೈಸಿಗಳ ನಡುವೆ ಹೆಚ್ಚಿನ ಪೈಪೋಟಿ ಇರಲಿಲ್ಲ. ದೆಹಲಿ ಹೊರತುಪಡಿಸಿ, ಪಂಜಾಬ್ ಕಿಂಗ್ಸ್ ಅವರ ಮೇಲೆ ಮಾತ್ರ ಬಿಡ್ ಮಾಡಿದೆ.

ಬಲಗೈ ಬ್ಯಾಟ್ಸ್‌ಮನ್ ಯಶ್ ಧುಲ್ ಭಾರತವನ್ನು 19 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಮಾಡಿದ ಐದನೇ ನಾಯಕರಾಗಿದ್ದಾರೆ. ಜೊತೆಗೆ ದೆಹಲಿಯಿಂದ ಬಂದ ಮೂರನೇ ನಾಯಕ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ (2008) ಮತ್ತು ಉನ್ಮುಕ್ತ್ ಚಂದ್ (2012) ಈ ಅದ್ಭುತವನ್ನು ಮಾಡಿದ್ದರು. ಈ ಇಬ್ಬರೂ ಆಟಗಾರರನ್ನು ಫ್ರಾಂಚೈಸಿಗಳು ಕೂಡ ಖರೀದಿಸಿದ್ದವು. ಆದರೆ, ವಿರಾಟ್ ಮತ್ತು ಉನ್ಮುಕ್ತ್ ಗಿಂತ ಯಶ್ ಹೆಚ್ಚು ಹಣ ಪಡೆದಿದ್ದಾರೆ. 19ರ ಹರೆಯದ ಈ ದಿಲ್ಲಿ ಬ್ಯಾಟ್ಸ್‌ಮನ್ ಇತ್ತೀಚೆಗೆ ದೆಹಲಿ ರಣಜಿ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

U-19 ವಿಶ್ವಕಪ್‌ನಲ್ಲಿ ಬಲವಾದ ಪ್ರದರ್ಶನ ಯಶ್ ಧುಲ್ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡ ವಿಶ್ವಕಪ್‌ಗೆ ಮುನ್ನ ಅಂಡರ್-19 ಏಷ್ಯಾಕಪ್ ಗೆದ್ದುಕೊಂಡಿತ್ತು. ಹೀಗಿರುವಾಗ ಎಲ್ಲರ ಗಮನ ಭಾರತದ ಯುವ ಬ್ಯಾಟ್ಸ್ ಮನ್ ಮೇಲಿತ್ತು. ನಾಯಕತ್ವದಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಧುಲ್ ತಮ್ಮ ಕೈಚಳಕ ತೋರಿದರು. ವಿಶ್ವಕಪ್‌ನಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೂ 4 ಪಂದ್ಯಗಳಲ್ಲಿ ಯಶ್ ಧುಲ್ 229 ರನ್ ಗಳಿಸಿದರು, ಅದರಲ್ಲಿ ಅವರ ಸರಾಸರಿ 76 ಕ್ಕಿಂತ ಹೆಚ್ಚಿತ್ತು. ಧುಲ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 110 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ ಆಡಿದರು. ಇದು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು. ಯಶ್ ಧುಲ್ ಇದುವರೆಗೆ ಯಾವುದೇ ಲಿಸ್ಟ್ ಎ, ಟಿ20 ಅಥವಾ ಫಸ್ಟ್ ಕ್ಲಾಸ್ ಪಂದ್ಯವನ್ನು ಆಡಿಲ್ಲ. ಆದಾಗ್ಯೂ, ಫೆಬ್ರವರಿ 17 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಲ್ಲಿ ಅವರು ದೆಹಲಿಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ:Chetan Sakariya, IPL 2022 Auction: ಕಷ್ಟದಲ್ಲಿ ಅರಳಿದ ಪ್ರತಿಭೆಗೆ 4.20 ಕೋಟಿ ಕೊಟ್ಟು ಖರೀದಿಸಿದ ಡೆಲ್ಲಿ

ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ