ನಾಯಿ ಬಾಲ ಯಾವತ್ತಿದ್ರೂ ಡೊಂಕು… ಪಾಕ್ ವಿರುದ್ಧ ಕ್ರಿಕೆಟಿಗರ ಆಕ್ರೋಶ
India vs Pakistan: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ್ ಭಾರತದ ಮೇಲೆ ದಾಳಿ ನಡೆಸಿದೆ. ಜಮ್ಮುವಿನ ಆರ್ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್ಎಫ್ ಎಸ್ಐ ಎಂಡಿ ಇಮ್ತಿಯಾಜ್ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 7 ಸೈನಿಕರು ಗಾಯಗೊಂಡಿದ್ದಾರೆ. ಇದೀಗ ಈ ಹೇಯ ಕೃತ್ಯವನ್ನು ಟೀಮ್ ಇಂಡಿಯಾ ಕ್ರಿಕೆಟಿಗರು ಖಂಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಕದನ ವಿರಾಮದ ಘೋಷಣೆ ಬೆನ್ನಲ್ಲೇ ಪಾಕ್ ಸೇನೆಯು ಜಮ್ಮು-ಕಾಶ್ಮೀರದ ಮೇಲೆ ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನದ ಈ ಹೇಯ ಕೃತ್ಯಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಅದರಲ್ಲೂ ಯುಜ್ವೇಂದ್ರ ಚಹಲ್, ಸೆಹ್ವಾಗ್ ಹಾಗೂ ರಾಹುಲ್ ತೆವಾಠಿಯಾ ಗಾದೆ ಮಾತಿನೊಂದಿಗೆ ಪಾಕ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ವೀರೇಂದ್ರ ಸೆಹ್ವಾಗ್, ನಾಯಿ ಬಾಲ ಯಾವತ್ತಿದ್ರೂ ಡೊಂಕು, ಇವರು ಯಾವತ್ತೂ ಸುಧಾರಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
— Virrender Sehwag (@virendersehwag) May 10, 2025
ಇಂತಹದ್ದೇ ಪೋಸ್ಟ್ ಅನ್ನು ಯುಜ್ವೇಂದ್ರ ಚಹಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ನಾಯಿ ಬಾಲ ಯಾವತ್ತಿದ್ರೂ ಡೊಂಕು ಎಂದು ಪಾಕಿಸ್ತಾನವನ್ನು ನಾಯಿಗೆ ಹೋಲಿಸಿದ್ದಾರೆ.
Yuzvendra chahal Instagram Story #ceasefire #IndiaPakistanWar2025 pic.twitter.com/9ssIzG7ow0
— Aryan dwivedi (@dwivediaryan24) May 10, 2025
ಇನ್ನು ರಾಹುಲ್ ತೆವಾಠಿಯಾ ಕೂಡ ನಾಯಿ ಬಾಲ ಯಾವತ್ತಿದ್ರೂ ಡೊಂಕು ಎಂಬ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪಾಕಿಸ್ತಾನದ ಹೇಯ ಕೃತ್ಯವನ್ನು ಖಂಡಿಸಿದ್ದಾರೆ.
Rahul Tewatia pic.twitter.com/B9YT0beGnK
— The Meme Machine (@MemeMachine62) May 10, 2025
ಇದೀಗ ಈ ಪೋಸ್ಟರ್ಗಳು ವೈರಲ್ ಆಗಿದ್ದು, ಕದನ ವಿರಾಮಕ್ಕೆ ಗೋಗರೆದು ಮತ್ತೆ ಖ್ಯಾತೆ ತೆಗೆದ ಪಾಕಿಸ್ತಾನ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಅತ್ತ ಪಾಕಿಸ್ತಾನ್ ಕದನ ವಿರಾಯ ಉಲ್ಲಂಘಿಸಿದ ಬೆನ್ನಲ್ಲೇ ಪ್ರತಿದಾಳಿ ನಡೆಸುವಂತೆ ಭಾರತೀಯ ಸೈನಿಕರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಉಭಯ ದೇಶಗಳ ಗಡಿಭಾಗದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೂರಿದೆ.
ಐಪಿಎಲ್ ಯಾವಾಗ ಶುರು?
ಈ ಬಾರಿಯ ಐಪಿಎಲ್ನಲ್ಲಿ ಯುಜ್ವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದರೆ, ರಾಹುಲ್ ತೆವಾಠಿಯಾ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ. ಇದೀಗ ಕದನ ವಿರಾಮ ಘೋಷಣೆಯಾದ ಹಿನ್ನಲೆ ಮುಂದಿನ ವಾರದಿಂದ ಟೂರ್ನಿ ಪುನರಾರಂಭವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!
ಪ್ರಸ್ತುತ ಮಾಹಿತಿ ಪ್ರಕಾರ, ಮುಂದಿನ ಗುರುವಾರ ಅಥವಾ ಶುಕ್ರವಾರ ಐಪಿಎಲ್ಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೆ ಇದಕ್ಕಾಗಿ ಕೇಂದ್ರ ಅನುಮತಿಯನ್ನು ಪಡೆಯಲಿದ್ದಾರೆ. ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದರೆ ಮೇ 15 ಅಥವಾ 16 ರಿಂದ ಐಪಿಎಲ್ ಸೀಸನ್-18 ಮತ್ತೆ ಶುರುವಾಗಲಿದೆ. ಈ ಮುಲಕ 17 ಪಂದ್ಯಗಳನ್ನು ಆಯೋಜಿಸಿ ಮೇ ತಿಂಗಳಲ್ಲೇ ಟೂರ್ನಿಯನ್ನು ಪೂರ್ಣಗೊಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.