AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು.

KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು
ನಾಲ್ಕು ವಿಕೆಟ್ ಪಡೆದು ಕೊಲ್ಕತ್ತಾ ನೈಟ್​ ರೈಡರ್ಸ್​ ಬ್ಯಾಟಿಂಗ್ ಬೆನ್ನೆಲುಬು ಮುರಿದ ರಾಹುಲ್ ಚಹರ್
TV9 Web
| Edited By: |

Updated on:Apr 05, 2022 | 12:36 PM

Share

ಚೆನ್ನೈ: ಮಂಗಳವಾರ ಇಲ್ಲಿನ ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವಿನ ಸನಿಹಕ್ಕೆ ಹೋಗಿ, ಕೊನೆಯ ಹಂತದಲ್ಲಿ ಹೀನಾಯ ಸೋಲು ಕಂಡಿತು. ಐಪಿಎಲ್ ರನ್ ವೇಗಕ್ಕೆ ಹೋಲಿಸಿದರೆ, ಸಣ್ಣದು ಎಂದೇ ಹೇಳಬಹುದಾದ ಮೊತ್ತವನ್ನು ಬೆನ್ನಟ್ಟಲು ಕೂಡ ಕೋಲ್ಕತ್ತಾಗೆ ಸಾಧ್ಯವಾಗದೇ ಹೋಯಿತು. ಆರಂಭಿಕವಾಗಿ ಉತ್ತಮ ಆಟವಾಡಿದ ಕೋಲ್ಕತ್ತಾ, ಮಧ್ಯಮ ಕ್ರಮಾಂಕದಲ್ಲಿ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. 30 ಬಾಲ್​ಗೆ 31 ರನ್ ಗಳಿಸಲೂ ಆಗದೆ ಪರದಾಡಿತು.

28 ಬಾಲ್​ಗೆ 31 ರನ್ ಗಳಿಸುವ ಸುಲಭ ಸವಾಲು ಕೋಲ್ಕತ್ತಾ ಮುಂದಿತ್ತು. ಈ ವೇಳೆ, ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್​ನಲ್ಲಿ ಇದ್ದರು. ಸಾಲದ್ದಕ್ಕೆ ಅವರಿಬ್ಬರೂ ಕೊನೆಯ ಓವರ್​ವರೆಗೆ ಆಟವಾಡಿದ್ದರು. ಇಷ್ಟಾದರೂ ಕೋಲ್ಕತ್ತಾ ತಂಡ 10 ರನ್​ಗಳ ಸೋಲು ಕಂಡಿತು! ಈ ಬಗ್ಗೆ ಹಿರಿಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಸಂಜಯ್ ಮಾಂಜ್ರೇಕರ್, ಆಕಾಶ್ ಛೋಪ್ರಾ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು. ಕೊನೆಯ ಓವರ್​ನಲ್ಲಿ ಕೋಲ್ಕತ್ತಾ 6 ಬಾಲ್​ಗೆ 15 ರನ್ ಗಳಿಸಬೇಕಾದ ಸ್ಥಿತಿ ಬಂತು. ಲಾಸ್ಟ್ ಓವರ್ ಬೌಲ್ ಮಾಡಿದ ಬೋಲ್ಟ್ ಮುಂಬೈಯನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾದರು.

ಈ ಹೀನಾಯ ಸೋಲಿನ ಬಗ್ಗೆ ಹಿರಿಯ ಕ್ರಿಕೆಟಿಗರ ಅಭಿಪ್ರಾಯವೇನು? ಮೊದಲ ಇನ್ನಿಂಗ್ಸ್ ಬೌಲ್ ಮಾಡಿದ ಕೋಲ್ಕತ್ತಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ನಿನ್ನೆ ಪಿಚ್ ಬೌಲಿಂಗ್​ಗೆ ಸಹಕರಿಸಿತ್ತು ಎಂಬ ಅಭಿಪ್ರಾಯ ಕೇಳಿಬಂದವು. ಈ ವಿಚಾರವಾಗಿ ಸಂಜಯ್ ಮಾಂಜ್ರೇಕರ್, ಇದು ಪಿಚ್​ನ ವಿಚಾರ ಎಂದಷ್ಟೇ ಸಾಧ್ಯವಿಲ್ಲ ಎಂದು ಹೀಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಇದು ಉಡಾಫೆ ಮನಸ್ಥಿತಿಯಿಂದ ಒದಗಿದ ಫಲಿತಾಂಶ ಎಂದು, ಮುಂಬೈ ಬೌಲರ್​ಗಳನ್ನು ಪ್ರಶಂಸಿಸಿದ್ದಾರೆ. ಆಕಾಶ್ ಛೋಪ್ರಾ, ಇದು ಹೇಗಾಯ್ತು? ‘ಇನ್ಕ್ರೆಡಿಬಲ್ ಪ್ರೀಮಿಯರ್ ಲೀಗ್’ ಎಂದು ನಿನ್ನೆಯ ಮ್ಯಾಚ್​ನ್ನು ಕುರಿತು ಹೇಳಿದ್ದಾರೆ. ವೆಂಕಟೇಶ್ ಪ್ರಸಾದ್ ಕೂಡ ಮುಂಬೈ ತಂಡದ ಆಟವನ್ನು ಹೊಗಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ

Published On - 3:26 pm, Wed, 14 April 21

Follow Us
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ