AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು.

KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು
ನಾಲ್ಕು ವಿಕೆಟ್ ಪಡೆದು ಕೊಲ್ಕತ್ತಾ ನೈಟ್​ ರೈಡರ್ಸ್​ ಬ್ಯಾಟಿಂಗ್ ಬೆನ್ನೆಲುಬು ಮುರಿದ ರಾಹುಲ್ ಚಹರ್
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಚೆನ್ನೈ: ಮಂಗಳವಾರ ಇಲ್ಲಿನ ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವಿನ ಸನಿಹಕ್ಕೆ ಹೋಗಿ, ಕೊನೆಯ ಹಂತದಲ್ಲಿ ಹೀನಾಯ ಸೋಲು ಕಂಡಿತು. ಐಪಿಎಲ್ ರನ್ ವೇಗಕ್ಕೆ ಹೋಲಿಸಿದರೆ, ಸಣ್ಣದು ಎಂದೇ ಹೇಳಬಹುದಾದ ಮೊತ್ತವನ್ನು ಬೆನ್ನಟ್ಟಲು ಕೂಡ ಕೋಲ್ಕತ್ತಾಗೆ ಸಾಧ್ಯವಾಗದೇ ಹೋಯಿತು. ಆರಂಭಿಕವಾಗಿ ಉತ್ತಮ ಆಟವಾಡಿದ ಕೋಲ್ಕತ್ತಾ, ಮಧ್ಯಮ ಕ್ರಮಾಂಕದಲ್ಲಿ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. 30 ಬಾಲ್​ಗೆ 31 ರನ್ ಗಳಿಸಲೂ ಆಗದೆ ಪರದಾಡಿತು.

28 ಬಾಲ್​ಗೆ 31 ರನ್ ಗಳಿಸುವ ಸುಲಭ ಸವಾಲು ಕೋಲ್ಕತ್ತಾ ಮುಂದಿತ್ತು. ಈ ವೇಳೆ, ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್​ನಲ್ಲಿ ಇದ್ದರು. ಸಾಲದ್ದಕ್ಕೆ ಅವರಿಬ್ಬರೂ ಕೊನೆಯ ಓವರ್​ವರೆಗೆ ಆಟವಾಡಿದ್ದರು. ಇಷ್ಟಾದರೂ ಕೋಲ್ಕತ್ತಾ ತಂಡ 10 ರನ್​ಗಳ ಸೋಲು ಕಂಡಿತು! ಈ ಬಗ್ಗೆ ಹಿರಿಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಸಂಜಯ್ ಮಾಂಜ್ರೇಕರ್, ಆಕಾಶ್ ಛೋಪ್ರಾ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು. ಕೊನೆಯ ಓವರ್​ನಲ್ಲಿ ಕೋಲ್ಕತ್ತಾ 6 ಬಾಲ್​ಗೆ 15 ರನ್ ಗಳಿಸಬೇಕಾದ ಸ್ಥಿತಿ ಬಂತು. ಲಾಸ್ಟ್ ಓವರ್ ಬೌಲ್ ಮಾಡಿದ ಬೋಲ್ಟ್ ಮುಂಬೈಯನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾದರು.

ಈ ಹೀನಾಯ ಸೋಲಿನ ಬಗ್ಗೆ ಹಿರಿಯ ಕ್ರಿಕೆಟಿಗರ ಅಭಿಪ್ರಾಯವೇನು? ಮೊದಲ ಇನ್ನಿಂಗ್ಸ್ ಬೌಲ್ ಮಾಡಿದ ಕೋಲ್ಕತ್ತಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ನಿನ್ನೆ ಪಿಚ್ ಬೌಲಿಂಗ್​ಗೆ ಸಹಕರಿಸಿತ್ತು ಎಂಬ ಅಭಿಪ್ರಾಯ ಕೇಳಿಬಂದವು. ಈ ವಿಚಾರವಾಗಿ ಸಂಜಯ್ ಮಾಂಜ್ರೇಕರ್, ಇದು ಪಿಚ್​ನ ವಿಚಾರ ಎಂದಷ್ಟೇ ಸಾಧ್ಯವಿಲ್ಲ ಎಂದು ಹೀಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಇದು ಉಡಾಫೆ ಮನಸ್ಥಿತಿಯಿಂದ ಒದಗಿದ ಫಲಿತಾಂಶ ಎಂದು, ಮುಂಬೈ ಬೌಲರ್​ಗಳನ್ನು ಪ್ರಶಂಸಿಸಿದ್ದಾರೆ. ಆಕಾಶ್ ಛೋಪ್ರಾ, ಇದು ಹೇಗಾಯ್ತು? ‘ಇನ್ಕ್ರೆಡಿಬಲ್ ಪ್ರೀಮಿಯರ್ ಲೀಗ್’ ಎಂದು ನಿನ್ನೆಯ ಮ್ಯಾಚ್​ನ್ನು ಕುರಿತು ಹೇಳಿದ್ದಾರೆ. ವೆಂಕಟೇಶ್ ಪ್ರಸಾದ್ ಕೂಡ ಮುಂಬೈ ತಂಡದ ಆಟವನ್ನು ಹೊಗಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ

Published On - 3:26 pm, Wed, 14 April 21

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ