AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಹೊಸ ಜರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್.. ಜರ್ಸಿಯ ವಿಶೇಷತೆ ಏನು ಗೊತ್ತಾ?

IPL 2021: ಐದು ಬಾರಿ ವಿಜೇತ ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನ್ಯೂಜೆರ್ಸಿಯನ್ನು ನೋಡಬಹುದು.

IPL 2021: ಹೊಸ ಜರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್.. ಜರ್ಸಿಯ ವಿಶೇಷತೆ ಏನು ಗೊತ್ತಾ?
ಹೊಸ ಜರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್
ಪೃಥ್ವಿಶಂಕರ
|

Updated on: Mar 27, 2021 | 6:42 PM

Share

ಐಪಿಎಲ್‌ನ 14 ನೇ ಸೀಸನ್ ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತಿದೆ. ಕಪ್ ಗೆಲ್ಲುವ ಉದ್ದೇಶದಿಂದ ಹಾಲಿ ವಿಜೇತ ಮುಂಬೈ ಇಂಡಿಯನ್ಸ್ ಈ ಬಾರಿ ಮೈದಾನಕ್ಕಿಳಿಯುತ್ತಿದೆ. ಮುಂಬೈ ಕಳೆದ ಎರಡು ಆವೃತ್ತಿಗಳಲ್ಲಿ ನಿರಂತರವಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಈ ಬಾರಿ ಮುಂಬೈ ಪ್ರಶಸ್ತಿಯನ್ನು ಗೆದ್ದರೆ, ಅದು ಅವರ ಆರನೇ ಪ್ರಶಸ್ತಿಯಾಗಿದೆ. 14ನೇ ಆವೃತ್ತಿಯ ಆರಂಭಕ್ಕು ಮೊದಲು ತಂಡವು ತನ್ನಲ್ಲಿಯೇ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಆವೃತ್ತಿಯಲ್ಲಿ ತಂಡವು ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ಕಿತ್ತಳೆ ಬಣ್ಣವು ಗೋಚರಿಸುತ್ತದೆ ಮುಂಬಯಿಯ ಜರ್ಸಿ ಮೊದಲಿಗಿಂತಲೂ ಸರಳವಾಗಿದೆ, ಹೊಸ ಜೆರ್ಸಿಯಲ್ಲಿ ಬ್ರಹ್ಮಾಂಡದ ಐದು ಪ್ರಮುಖ ಅಂಶಗಳು ಸೇರಿವೆ. ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಒಳಗೊಂಡಿರುವುದರ ಜೊತೆಗೆ ಫ್ರ್ಯಾಂಚೈಸ್‌ನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಮುಂಬೈನ ಈ ಜರ್ಸಿಯಲ್ಲಿ ನೀಲಿ ಬಣ್ಣಕ್ಕೆ ಹೆಚ್ಚುವರಿಯಾಗಿ, ಕಾಲರ್ ಅಡಿಯಲ್ಲಿ ಮತ್ತು ತೋಳುಗಳ ಅಂಚಿನಲ್ಲಿ ಕಿತ್ತಳೆ ಬಣ್ಣವು ಗೋಚರಿಸುತ್ತದೆ. ಜೆರ್ಸಿಯ ಎದೆಯ ಭಾಗದ ಎಡ ಬದಿಯಲ್ಲಿ ಮುಂಬೈ ಇಂಡಿಯನ್ಸ್ ಲೋಗೋ ಇದೆ. ಬಲಗಡೆ ಹೋಟೆಲ್ ಬ್ರ್ಯಾಂಡ್‌ ಮ್ಯಾರಿಯಟ್ ಬನ್‌ವೋಯ್ ಲೋಗೋ ಇದೆ. ಜೆರ್ಸಿಯ ಭುಜ ಮತ್ತು ಸೊಂಟದ ಭಾಗದಲ್ಲಿ ಚಿನ್ನದ ಬಣ್ಣದಲ್ಲಿ ಗೆರೆಗಳ ವಿನ್ಯಾಸವಿದೆ. ಹಿಂದಿನ ಜೆರ್ಸಿಗಳಲ್ಲಿ ಬಂಗಾರದ ಬಣ್ಣದ ರೇಖೆಗಳ ವಿನ್ಯಾಸ ಗಾಢವಾಗಿತ್ತು. ಆದರೆ ಈ ಬಾರಿ ತೆಳ್ಳಗಿನ ಗೆರೆಗಳಲ್ಲಿ ವಿನ್ಯಾಸವಿದೆ.

ಹೊಸ ಜರ್ಸಿ ವೀಡಿಯೊ ಟ್ವಿಟ್ಟರ್ನಲ್ಲಿ ಐದು ಬಾರಿ ವಿಜೇತ ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನ್ಯೂಜೆರ್ಸಿಯನ್ನು ನೋಡಬಹುದು. ಈ ವಿಡಿಯೋದಲ್ಲಿ ಮುಂಬೈ ತಂಡದ ಅನೇಕ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಕ್ರುನಾಲ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ತಂಡದ ಹೊಸ ಜರ್ಸಿಯನ್ನು ವೀಡಿಯೊದ ಕೊನೆಯಲ್ಲಿ ತೋರಿಸಲಾಗಿದೆ. ಜರ್ಸಿಗೆ ಸಂಬಂಧಿಸಿದಂತೆ, ತಂಡದ ವಕ್ತಾರರು, ಮುಂಬೈ ಇಂಡಿಯನ್ಸ್ ಪ್ರತಿವರ್ಷ ತನ್ನ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತಿದೆ. ಇದು ನಮ್ಮ ಪ್ರಮುಖ ಮೌಲ್ಯಗಳು ಮತ್ತು ಸಿದ್ಧಾಂತಗಳನ್ನು ಆಧರಿಸಿದೆ. ನಮ್ಮ ಐದು ಐಪಿಎಲ್ ಶೀರ್ಷಿಕೆಗಳು ಈ ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಈ ವರ್ಷ ನಮ್ಮ ಹೊಸ ಜರ್ಸಿ ಮೂಲಕ ಅದನ್ನು ತೋರಿಸಲು ನಾವು ಸಮರ್ಥರಾಗಿದ್ದೇವೆ.

ಮುಂಬೈ ವೇಳಾಪಟ್ಟಿ ಹೀಗಿದೆ. ಹಾಲಿ ಚಾಂಪಿಯನ್ ಮುಂಬೈ ಮೊದಲ ಪಂದ್ಯವನ್ನು ಏಪ್ರಿಲ್ 9 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಮುಂಬೈ ಮುಂದಿನ ನಾಲ್ಕು ಪಂದ್ಯಗಳನ್ನು ಈ ಮೈದಾನದಲ್ಲಿ ಆಡಲಿದೆ. ಬೆಂಗಳೂರಿನ ನಂತರ ಮುಂಬೈ ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ. ಮುಂದಿನ ನಾಲ್ಕು ಪಂದ್ಯಗಳನ್ನು ದೆಹಲಿಯಲ್ಲಿ ಮುಂಬೈ ಆಡಲಿದ್ದು, ಅಲ್ಲಿ ಅವರು ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ತಂಡಗಳ ಎದುರು ಆಡಲಿದ್ದಾರೆ. ನಂತರ ತಂಡವು ಕೋಲ್ಕತ್ತಾ, ಪಂಜಾಬ್ ಮತ್ತು ಚೆನ್ನೈ ಎದುರು ಕೋಲ್ಕತ್ತಾದಲ್ಲಿ ಸೆಣಸಲಿದೆ. ಕೋಲ್ಕತ್ತಾದಲ್ಲಿ ತನ್ನ ಕೊನೆಯ ಹಂತದ ಪಂದ್ಯವನ್ನು ಆಡಲಿದ್ದು, ಅಲ್ಲಿ ಬೆಂಗಳೂರು ಮತ್ತು ದೆಹಲಿಯನ್ನು ಎದುರಿಸಲಿದೆ.

ಇದನ್ನೂ ಓದಿ:IPL 2021: ಆರ್​ಸಿಬಿ 15 ಕೋಟಿ ಕೊಟ್ಟು ಖರೀದಿಸಿದ್ದ ನ್ಯೂಜಿಲ್ಯಾಂಡ್​ ವೇಗಿಗೆ ಶಾಕ್​ ಮೇಲೆ ಶಾಕ್!

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ