AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಜ್​ರನ್ನು ಸೋಲಿಸಲು ಬೇಕಾದ ಜಾವೆಲಿನ್ ಪಾಕಿಸ್ತಾನದಲ್ಲಿ ಲಭ್ಯವಿಲ್ಲ, ನಾವೇನು ​​ಮಾಡಬೇಕು?- ಅರ್ಷದ್ ನದೀಮ್ ಅಳಲು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ಜಾವಲಿನ್‌ಗಳು ಪಾಕಿಸ್ತಾನದಲ್ಲಿ ಕಾಣಸಿಗುವುದಿಲ್ಲ. ಅವುಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಒಂದು ಜಾವೆಲಿನ್ ಮೌಲ್ಯ ನಾಲ್ಕು ಲಕ್ಷ ರೂಪಾಯಿ. ನಮ್ಮ ದೇಶದಲ್ಲಿ ಈವರೆಗೆ ಇಂತಹ ಜಾವೆಲಿನ್ ಬಂದಿಲ್ಲ ಎಂದಿದ್ದಾರೆ.

ನೀರಜ್​ರನ್ನು ಸೋಲಿಸಲು ಬೇಕಾದ ಜಾವೆಲಿನ್ ಪಾಕಿಸ್ತಾನದಲ್ಲಿ ಲಭ್ಯವಿಲ್ಲ, ನಾವೇನು ​​ಮಾಡಬೇಕು?- ಅರ್ಷದ್ ನದೀಮ್ ಅಳಲು
Arshad Nadeem
TV9 Web
| Edited By: |

Updated on: Jul 22, 2022 | 5:05 PM

Share

ಪಾಕಿಸ್ತಾನದ ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್ (Arshad Nadeem) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅರ್ಷದ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, 81.71 ಮೀಟರ್‌ ಜಾವೆಲಿನ್ ಎಸೆಯುವುದರೊಂದಿಗೆ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಅಗ್ರ 12 ಆಟಗಾರರು ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದು, ಅವರಲ್ಲಿ ಒಬ್ಬರಾದ ಅರ್ಷದ್ ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅರ್ಷದ್, ನೀರಜ್ ಚೋಪ್ರಾ (Neeraj Chopra) ಅವರನ್ನು ಸೋಲಿಸಲಿದ್ದಾರೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ. ಆದರೆ, ಪಾಕಿಸ್ತಾನದಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅರ್ಷದ್ ತಮ್ಮ ಅಸಹಾಯಕತೆಯನ್ನು ಸುದ್ದಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ಹೆಚ್ಚು ಅಥ್ಲೆಟಿಕ್ಸ್ ಮೈದಾನವಿಲ್ಲ

ಈ ಕಾರ್ಯಕ್ರಮದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕುರಿತು ಮಾತನಾಡುತ್ತಿದ ಅರ್ಷದ್, ನಾನು ತನ್ನ ಪ್ರಾಯೋಜಕರ ಸಹಾಯದಿಂದ ಕೆಲವೊಮ್ಮೆ ವಿದೇಶದಲ್ಲಿ ತರಬೇತಿ ಪಡೆಯುತ್ತೇನೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಜಾವಲಿನ್‌ಗಳು ನಮ್ಮ ದೇಶದಲ್ಲಿ ತರಬೇತಿಗೆ ಲಭ್ಯವಿಲ್ಲ ಎಂದು ಅರ್ಷದ್ ಈ ಹಿಂದೆ ಹೇಳಿದ್ದರು. ಈಗ ಪರಿಸ್ಥಿತಿ ಬದಲಾಗಿದೆಯೇ ಎಂದು ಕೇಳಿದಾಗ. ಈಗ ನೋಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ಜಾವಲಿನ್‌ಗಳು ಪಾಕಿಸ್ತಾನದಲ್ಲಿ ಕಾಣಸಿಗುವುದಿಲ್ಲ. ಅವುಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಒಂದು ಜಾವೆಲಿನ್ ಮೌಲ್ಯ ನಾಲ್ಕು ಲಕ್ಷ ರೂಪಾಯಿ. ನಮ್ಮ ದೇಶದಲ್ಲಿ ಈವರೆಗೆ ಇಂತಹ ಜಾವೆಲಿನ್ ಬಂದಿಲ್ಲ. ನಮ್ಮಲ್ಲಿ ಹೆಚ್ಚು ಅಥ್ಲೆಟಿಕ್ಸ್ ಮೈದಾನವಿಲ್ಲ. ಎಲ್ಲರೂ ಒಂದೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಸರಕಾರ ಯೋಚಿಸಬೇಕು ಎಂದಿದ್ದಾರೆ.

ಇದನ್ನೂ ಓದಿ
Image
BCCI: ಎರಡು ಪ್ರಮುಖ ದೇಶೀ ಕ್ರಿಕೆಟ್ ಪಂದ್ಯಾವಳಿಗಳು ಪುನರಾರಂಭ: ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ ಬಿಸಿಸಿಐ
Image
Virat Kohli: ಒಂದು ಇನ್ಸ್ಟಾಗ್ರಾಂ ಪೋಸ್ಟ್​ಗೆ ಕೊಹ್ಲಿ ಪಡೆಯುವ ಹಣದಲ್ಲಿ ನಾವು ನೀವು ಇಡೀ ಜೀವನವನ್ನೇ ಕಳೆಯಬಹುದು..!
Image
CWG 2022: ನೀರಜ್ ಚೋಪ್ರಾ ನಮ್ಮ ಸ್ಫೂರ್ತಿ; ಚಿನ್ನ ಗೆಲ್ಲುವುದೇ ತಂಡದ ಗುರಿ ಎಂದ ಸ್ಮೃತಿ ಮಂಧಾನ

ನೀರಜ್ ತನ್ನ ಪ್ರತಿಸ್ಪರ್ಧಿಯಲ್-ನದೀಮ್

ಈ ಹಿಂದೆ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನದೀಮ್ 84.62 ಮೀಟರ್ ಜಾವೆಲಿನ್ ಎಸೆದು ಐದನೇ ಸ್ಥಾನ ಪಡೆದಿದ್ದರು. ಮತ್ತೊಂದೆಡೆ ಭಾರತದ ನೀರಜ್ 87.58 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿ ನೀರಜ್‌ರನ್ನು ಹಿಂದಿಕ್ಕಲು ಸಾಧ್ಯವೇ ಎಂದು ಅರ್ಷದ್‌ಗೆ ಕೇಳಲಾಯಿತು. ಇದಕ್ಕೆ ಅರ್ಷದ್ ಸ್ಪಷ್ಟ ಉತ್ತರ ನೀಡಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ನಡುವೆ ಹೆಚ್ಚಿನ ವ್ಯತ್ಯಾಸವಿರಲಿಲ್ಲ ಆದರೆ ನಾನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ ಎಂದು ಅರ್ಷದ್ ಹೇಳಿದರು. ಜೊತೆಗೆ ನಾನೇ ನನ್ನ ಎದುರಾಳಿ ಎಂದು ಹೇಳುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟರು.

ನೀರಜ್ ಜಾವೆಲಿನ್ ಮಾಯ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನೀರಜ್ ಚೋಪ್ರಾ, ನಾನು ಫೈನಲ್ಸ್ ಥ್ರೋ ಎಸೆಯಲು ಹೋದಾಗ ನನ್ನ ಜಾವೆಲಿನ್ ಕಾಣಿಸುತ್ತಿರಲಿಲ್ಲ. ಎಲ್ಲಿ ಎಂದು ಹುಡುಕಲು ಆರಂಭಿಸಿದಾಗ ಅದು ಪಾಕಿಸ್ತಾನದ ಜಾವಲಿನ್ ಆಟಗಾರ ಅರ್ಷದ್ ನದೀಮ್ ಕೈಯಲ್ಲಿತ್ತು. ಕೇಳಿದ ನಂತರ ಅವರು ಅದನ್ನು ನನಗೆ ಹಿಂದಿರುಗಿಸಿದ್ದರು. ಎಂಬ ತಮಾಷೆಯ ವಿಚಾರವನ್ನು ಭಾರತೀಯ ಅಭಿಮಾನಿಗಳ ಮುಂದಿಟ್ಟಿದ್ದರು. ಆದಾಗ್ಯೂ, ಈ ಘಟನೆ ಕೇಳಿದ ಬಳಿಕ ಭಾರತೀಯ ಅಭಿಮಾನಿಗಳು ನದೀಮ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು. ಇದನ್ನು ಗಮನಿಸಿದ ನೀರಜ್, ಅರ್ಷದ್ ನನ್ನ ಜಾವೆಲಿನ್​ನ್ನು ಉದ್ದೇಶ ಪೂರ್ವಕವಾಗಿ ತೆಗೆದುಕೊಂಡಿರಲಿಲ್ಲ ಎಂದು ಹೇಳುವ ಮೂಲಕ ಅರ್ಷದ್ ನೆರೆವಿಗೆ ಬಂದಿದ್ದರು.

ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ