AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ: ನೇಥನ್ | Kohli is the best in business, will miss bowling to him: Nathan

ಭಾರತದ ಕ್ರಿಕೆಟ್ ಪ್ರೇಮಿಗಳು ಈ ವಾದವನ್ನು ಇಷ್ಟಪಡಲಾರರು, ಹಾಗಂತ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ವಿಷಯವೇನೆಂದರೆ, ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಎಲ್ಲ ಶ್ರೇಷ್ಠ ಬೌಲರ್​ಗಳನ್ನು ಚಚ್ಚಿ ಅವರ ವಿರುದ್ಧ ಸಾರ್ವಭೌಮತೆಯನ್ನು ಮೆರೆದಿದ್ದಾರೆ, ಆದರೆ, ಇವರು ಸ್ಪಿನ್ನರ್​ಗಳ ವಿರುದ್ಧ ಮಾತ್ರ ತಮ್ಮ ಖ್ಯಾತಿಯ ಆಟವಾಡಿಲ್ಲ. ತೆಂಡೂಲ್ಕರ್ ತಾವಾಡುತ್ತಿದ್ದ ದಿನಗಳಲ್ಲಿ ಲೆಗ್ ಸ್ಪಿನ್ನರ್​ಗಳನ್ನು ಮನಬಂದಂತೆ ದಂಡಿಸುತ್ತಿದ್ದರೂ ಅಷ್ಟೇ ಅಧಿಕಾರಯುತವಾಗಿ ಮುತ್ತಯ್ಯ ಮುರಳೀಧರನ್, ಸಕ್ಲೇನ್ ಮುಷ್ತಾಕ್ ಮತ್ತು ಸಯೀದ್ ಅಜ್ಮಲ್ ವಿರುದ್ಧ ಆಡುತ್ತಿರಲಿಲ್ಲ. ತೆಂಡೂಲ್ಕರ್ […]

ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ: ನೇಥನ್ | Kohli is the best in business, will miss bowling to him: Nathan
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2020 | 7:46 PM

Share

ಭಾರತದ ಕ್ರಿಕೆಟ್ ಪ್ರೇಮಿಗಳು ಈ ವಾದವನ್ನು ಇಷ್ಟಪಡಲಾರರು, ಹಾಗಂತ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ವಿಷಯವೇನೆಂದರೆ, ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಎಲ್ಲ ಶ್ರೇಷ್ಠ ಬೌಲರ್​ಗಳನ್ನು ಚಚ್ಚಿ ಅವರ ವಿರುದ್ಧ ಸಾರ್ವಭೌಮತೆಯನ್ನು ಮೆರೆದಿದ್ದಾರೆ, ಆದರೆ, ಇವರು ಸ್ಪಿನ್ನರ್​ಗಳ ವಿರುದ್ಧ ಮಾತ್ರ ತಮ್ಮ ಖ್ಯಾತಿಯ ಆಟವಾಡಿಲ್ಲ. ತೆಂಡೂಲ್ಕರ್ ತಾವಾಡುತ್ತಿದ್ದ ದಿನಗಳಲ್ಲಿ ಲೆಗ್ ಸ್ಪಿನ್ನರ್​ಗಳನ್ನು ಮನಬಂದಂತೆ ದಂಡಿಸುತ್ತಿದ್ದರೂ ಅಷ್ಟೇ ಅಧಿಕಾರಯುತವಾಗಿ ಮುತ್ತಯ್ಯ ಮುರಳೀಧರನ್, ಸಕ್ಲೇನ್ ಮುಷ್ತಾಕ್ ಮತ್ತು ಸಯೀದ್ ಅಜ್ಮಲ್ ವಿರುದ್ಧ ಆಡುತ್ತಿರಲಿಲ್ಲ. ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಭಾವಿಸುತ್ತಿದ್ದರಿಂದ, ಯಾರೂ ಅವರ ಈ ದೌರ್ಬಲ್ಯದ ಬಗ್ಗೆ ಮಾತಾಡುತ್ತಿರಲಿಲ್ಲ.

ಹಾಗೆಯೇ, ಕೊಹ್ಲಿ ಕೆಲವು ಸ್ಪಿನ್ನರುಗಳ ವಿರುದ್ಧ ವಲ್ನರೇಬಲ್ ಅನಿಸಿದ್ದ್ದಾರೆ. ವಿಶ್ವದ ಹೆಸರುವಾಸಿ ಸ್ಪಿನ್ನರ್​ಗಳೊಂದಿಗೆ, ಐಪಿಎಲ್ ಆಡುವ ಕೆಲ ಸ್ಥಳೀಯ ಸ್ಪಿನ್ನರ್​ಗಳು ಸಹ ಟೀಮ್ ಇಂಡಿಯಾದ ನಾಯಕನನ್ನು ಕಾಡಿದ್ದಾರೆ. ಬಿಡಿ, ಈ ವಿಷಯವನ್ನು ಮತ್ತೊಂದು ದಿನ ಸವಿಸ್ತಾರವಾಗಿ ಚರ್ಚಿಸೋಣ. 

ಇದನ್ನು ಉಲ್ಲೇಖಿಸುವ ಕಾರಣವೇನೆಂದರೆ, ಆಸ್ಟ್ರೇಲಿಯಾದ ನೇಥನ್ ಲಿಯಾನ್ ಪ್ರಸ್ತುತವಾಗಿ ವಿಶ್ವದ ಶ್ರೇಷ್ಠ ಆಫ್ ಸ್ಪಿನ್ನರ್​ಗಳಲ್ಲಿ ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಅವರು ಕೊಹ್ಲಿಗೆ ತೊಂದರೆಗಳನ್ನು ನೀಡಿದ್ದಾರೆ. ಭಾರತದ ನಾಯಕನನ್ನು ಆವರು 7 ಬಾರಿ ಔಟ್ ಮಾಡಿದ್ದಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಲಿಯಾನ್ ಮಾತ್ರ ಕೊಹ್ಲಿಯನ್ನು ವಿಶ್ವದ ಈಗಿನ ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ಪರಿಗಣಿಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಶುರುವಾಗುವ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ ಕೇವಲ ಮೊದಲ ಟೆಸ್ಟ್ ಮಾತ್ರ ಆಡಿ ಸ್ವದೇಶಕ್ಕೆ ವಾಪಸ್ಸಾಗುವುದು ಅವರಿಗೆ ನಿರಾಸೆ ಮೂಡಿಸಿದೆ. ಹಾಗಂತ, ಕೊಹ್ಲಿ ಅನುಪಸ್ಥಿಯಲ್ಲಿ ಅತಿಥೇಯರು ಸಂಪೂರ್ಣ ಮೇಲಗೈ ಸಾಧಿಸಲಿದ್ದಾರೆ ಎಂಬ ವಾದವನ್ನು ನೇಥನ್ ಒಪ್ಪುವುದಿಲ್ಲ. 

ಫಾಕ್ಸ್ ಸ್ಪೋರ್ಟ್ಸ್ ವಾಹಿನಿ ಜೊತೆ ಮಾತಾಡಿರುವ ನೇಥನ್; ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಸಹ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ಎಂದು ಹೇಳಿದ್ದಾರೆ.

‘‘ನಿಸ್ಸಂದೇಹವಾಗಿ ಕೊಹ್ಲಿ ಇಂದಿನ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲೊಬ್ಬರು. ಅವರು ಒಂದು ಟೆಸ್ಟನ್ನು ಮಾತ್ರ ಆಡಿ ವಾಪಸ್ಸು ಹೋಗಲಿರುವುದು ನಿರಾಸೆ ಮೂಡಿಸಿದೆ. ಬೆಸ್ಟ್ ಆಟಗಾರರಿಗೆ ಬೌಲ್ ಮಾಡುವ ಸವಾಲು ನನ್ನನ್ನು ಮತ್ತಷ್ಟು ಉತ್ತೇಜಿಸುತ್ತದೆ. ಆದರೆ, ಅವರ ಹೊರತಾಗಿ ಇಂಡಿಯಾ ಟೀಮಿನಲ್ಲಿ ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಮತ್ತು ಕೆಲವು ಯುವ ಆಟಗಾರರು ಕ್ವಾಲಿಟಿ ಬ್ಯಾಟ್ಸ್​ಮನ್​ಗಳಾಗಿದ್ದಾರೆ. ಕೊಹ್ಲಿಯ ಅನುಪಸ್ಥಿತಿ ಟೀಮಿನ ಬ್ಯಾಟಿಂಗ್ ಬಲವನ್ನು ದುರ್ಬಲಗೊಳಿಸಲಾರದು. ಆದರೆ ಕೊಹ್ಲಿಗೆ ಬೌಲಿಂಗ್ ಮಾಡುವುದನ್ನು ನಾನು ತಪ್ಪಿಸಿಕೊಳ್ಳವುದು ಬೇಸರ ಮೂಡಿಸಿದೆ,’’ ಅಂತ ಹೇಳಿದ್ದಾರೆ.

ಅಂದಹಾಗೆ, 2018-19 ಸಾಲಿನಲ್ಲಿ ಭಾರತ ಸರಣಿ ಗೆದ್ದಿದ್ದು ಕೊಹ್ಲಿಯ ಉತ್ಕೃಷ್ಟತೆಯಿಂದಲ್ಲ. ಆ ಸರಣಿಯಲ್ಲಿ ಅವರು ಗಳಿಸಿದ್ದು 282 ರನ್. ಆದರೆ ಸರಣಿಯುದ್ದಕ್ಕೂ ಚಾಂಪಿಯನ್​ನಂತೆ ಬ್ಯಾಟ್ ಮಾಡಿದ ಪೂಜಾರಾ 3 ಶತಕಗಳು ಸೇರಿದಂತೆ 521 ರನ್ ಬಾರಿಸಿದ್ದರು.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ