AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi 2021: ನಾಳೆಯಿಂದ ಕಬಡ್ಡಿ ಕಲರವ: ಬೆಂಗಳೂರು ಬುಲ್ಸ್ ಸಂಭಾವ್ಯ ಪ್ಲೇಯಿಂಗ್ ಸೆವೆನ್

Begaluru Bulls Team: ಬೆಂಗಳೂರು ಬುಲ್ಸ್ ತಂಡ ಹೀಗಿದೆ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್

Pro Kabaddi 2021: ನಾಳೆಯಿಂದ ಕಬಡ್ಡಿ ಕಲರವ: ಬೆಂಗಳೂರು ಬುಲ್ಸ್ ಸಂಭಾವ್ಯ ಪ್ಲೇಯಿಂಗ್ ಸೆವೆನ್
Pro Kabaddi 2021
TV9 Web
| Edited By: |

Updated on: Dec 21, 2021 | 8:44 PM

Share

ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೋ ಕಬಡ್ಡಿ ಲೀಗ್ ಸೀಸನ್ 8 ಗೆ ಬುಧವಾರದಿಂದ ಚಾಲನೆ ಸಿಗಲಿದೆ. ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಕೊರೋನಾಂತಕದ ಕಾರಣ ಈ ಬಾರಿ ಪ್ರೇಕ್ಷಕರಿಗೆ ಅವಕಾಶವಿಲ್ಲ. ಇನ್ನು ಲೀಗ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಬೆಂಗಳೂರು ಬುಲ್ಸ್ ತಂಡದ ಸಂಭಾವ್ಯ ಪ್ಲೇಯಿಂಗ್ 7 ಹೀಗಿರಲಿದೆ.

ಲೆಫ್ಟ್ ಕಾರ್ನರ್ – ಅಮಿತ್ ಶೆರಾನ್ ಕಳೆದೆರಡು ಸೀಸನ್​ನಲ್ಲಿ ಬೆಂಗಳೂರು ಬುಲ್ಸ್ ತಂಡದ ಎಡ ಮೂಲೆಯ ಡಿಫೆಂಡರ್ ಆಗಿದ್ದ ಅಮಿತ್ ಶೆರಾನ್ ಸ್ಥಿರ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಯು ಮುಂಬಾ ವಿರುದ್ದದ ಮೊದಲ ಪಂದ್ಯದಲ್ಲೂ ಲೆಫ್ಟ್ ಕಾರ್ನರ್​ ಅಮಿತ್ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಈ ಹಿಂದೆ ಅಮಿತ್ 24 ಪಂದ್ಯಗಳಲ್ಲಿ ಒಟ್ಟು 50 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

ಲೆಫ್ಟ್ ಇನ್ – ಚಂದ್ರನ್ ರಂಜಿತ್ ಮಾಜಿ ದಬಾಂಗ್ ಡೆಲ್ಲಿ ರೈಡರ್ ಚಂದ್ರನ್ ರಂಜಿತ್ ಅವರು ಈ ಬಾರಿ ಬುಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಚಂದ್ರನ್ ರಂಜಿತ್ ಪವನ್ ಕುಮಾರ್ ಶೆಹ್ರಾವತ್‌ಗೆ ಸರಿಯಾದ ಜೋಡಿಯಾಗಲಿದ್ದಾರೆ. ಡಿಫೆಂಡರ್‌ಗಳನ್ನು ಬೆರಗುಗೊಳಿಸುವ ತೀಕ್ಷ್ಣ ರೈಡರ್ ಆಗಿರುವ ರಂಜಿತ್ ಲೆಫ್ಟ್ ಇನ್​ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೆಫ್ಟ್ ಕವರ್ – ಮಹೇಂದರ್ ಸಿಂಗ್ ಮಹೇಂದರ್ ಸಿಂಗ್ ಲೆಫ್ಟ್ ಕವರ್​ನ ಬಲಿಷ್ಠ ಡಿಫೆಂಡರ್. ಕಳೆದ ಸೀಸನ್​ನಲ್ಲಿ 21 ಪಂದ್ಯಗಳಲ್ಲಿ 61 ಟ್ಯಾಕಲ್ ಪಾಯಿಂಟ್‌ಗಳನ್ನು ಕೂಡ ಗಳಿಸಿದ್ದಾರೆ. ಹೀಗಾಗಿ ಈ ಬಾರಿ ಮಹೇಂದರ್ ಸಿಂಗ್ ಲೆಫ್ಟ್ ಕವರ್​ನಲ್ಲಿ ಆಡಲಿದ್ದಾರೆ.

ಸೆಂಟರ್- ದೀಪಕ್ ನರ್ವಾಲ್ ಮಾಜಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಆಟಗಾರ ದೀಪಕ್ ನರ್ವಾಲ್ ಈ ಬಾರಿ ಬೆಂಗಳೂರು ಬುಲ್ಸ್ ಪರ ಆಡಲಿದ್ದಾರೆ. 19 ಪಂದ್ಯಗಳಲ್ಲಿ 79 ರೇಡ್ ಪಾಯಿಂಟ್​ಗಳಿಸಿರುವ ದೀಪಕ್, ಪವನ್ ಶೆಹ್ರಾವತ್ ಮತ್ತು ಚಂದ್ರನ್ ರಂಜಿತ್ ಅವರೊಂದಿಗೆ ಮೂರನೇ ರೈಡರ್ ಆಗಿ ಕಾರ್ಯನಿರ್ವಹಿಸಬಹುದು.

ರೈಟ್ ಕವರ್ – ಡಾಂಗ್ ಜಿಯೋನ್ ಲೀ ಬೆಂಗಳೂರು ಬುಲ್ಸ್ ಪರ ವಿದೇಶಿ ಆಟಗಾರನಾಗಿ ಡಾಂಗ್ ಜಿಯೋನ್ ಲೀ ಕಣಕ್ಕಿಳಿಯಬಹುದು. ಲೀ ಅತ್ಯುತ್ತಮ ರೈಡರ್ ಜೊತೆಗೆ ರೈಟ್ ಕವರ್​ನಲ್ಲಿ ಚಾಣಾಕ್ಷ ಆಟಗಾರ. ಹೀಗಾಗಿ ಇವರು ಕೂಡ ಪ್ಲೇಯಿಂಗ್ 7 ನಲ್ಲಿ ಕಾಣಿಸಿಕೊಳ್ಳಬಹುದು.

ರೈಟ್ ಕಾರ್ನರ್ – ಸೌರಭ್ ನಂದಲ್ ಪ್ರೊ ಕಬಡ್ಡಿ ಸೀಸನ್ 7 ರಲ್ಲಿ ಬೆಂಗಳೂರು ಬುಲ್ಸ್‌ಗಾಗಿ ತನ್ನ ಚೊಚ್ಚಲ ಅಭಿಯಾನದಲ್ಲಿ ಸೌರಭ್ ನಂದಲ್ ಬಲಿಷ್ಠ ರೈಟ್ ಕಾರ್ನರ್‌ ಆಟಗಾರನಾಗಿದ್ದರು. ಅಮಿತ್ ಶೆರಾನ್ ಅವರೊಂದಿಗೆ ಬಲವಾದ ಕಾರ್ನರ್ ರಕ್ಷಣಾತ್ಮಕ ಜೋಡಿ. ಹೀಗಾಗಿ ಸೌರಭ್ ನಂದಲ್ ಕೂಡ ಮೊದಲ ಪಂದ್ಯದಲ್ಲಿ ಅವಕಾಶ ಪಡೆಯಬಹುದು.

ರೈಟ್ ಇನ್- ಪವರ್ ಶೆಹ್ರಾವತ್ ಇನ್ನು ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಕಳೆದ ಕೆಲವು ಸೀಸನ್​ಗಳಿಂದ ರೈಟ್ ಇನ್​ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರು ಈ ಸಲ ಕೂಡ ರೈಟ್ ಇನ್ ಆಟಗಾರನಾಗಿ ಅಂಗಳಕ್ಕೆ ಇಳಿಯಲಿದ್ದಾರೆ.

ಬೆಂಗಳೂರು ಬುಲ್ಸ್ ತಂಡ ಹೀಗಿದೆ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ

(Pro Kabaddi 2021: Predicting the playing 7 for Bengaluru Bulls)

ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್