AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು.

ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ
ಸೆಲ್ಫೀ ತೆಗೆದುಕೊಂಡ ರಿಯಾನ್​ ಪರಾಗ್​ ಮತ್ತು ತೇವಾಟಿಯಾ
ರಾಜೇಶ್ ದುಗ್ಗುಮನೆ
|

Updated on: Apr 24, 2021 | 10:05 PM

Share

ರಾಜಸ್ಥಾನ್​ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ನಡೆದ ಪಂದ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ರಿಯಾನ್ ಪರಾಗ್ ಹಾಗೂ ತೇವಾಟಿಯಾ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡಂತೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ನೈಟ್​ ರೈಡರ್ಸ್​ ಕಳಪೆ ಆರಂಭ ಕಂಡಿತ್ತು. ಎಲ್ಲರೂ ಬಹುಬೇಗ ಪೆವಿಲಿಯನ್​ ಸೇರಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್​ ಕಳಪೆ ಆರಂಭ ಕಂಡಿತ್ತು. ದಿನೇಶ್​ ಕಾರ್ತಿಕ್​, ರಸೆಲ್​ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿ ಕೆಕೆಆರ್​ ರನ್​ ಹೆಚ್ಚಿಸಿದ್ದರು. ಹೀಗಾಗಿ, ಇಂದಿನ ಪಂದ್ಯಗಳಲ್ಲಿ ಈ ವಿಕೆಟ್​ಗಳನ್ನು ಪಡೆಯೋದು ಆರ್​ಆರ್​ಗೆ ತುಂಬಾನೇ ಮುಖ್ಯವಾಗಿತ್ತು.

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು. ಎರಡನೇ ಬಾಲ್​ ಕೂಡ ಸಿಕ್ಸ್​ ಹೊಡೆಯೋಕೆ ಹೋದರು. ಆದರೆ, ಈ ಬಾಲ್​ ರಿಯಾನ್ ಪರಾಗ್ ಕೈ ಸೇರಿತ್ತು. ಈ ಖುಷಿಗೆ ರಿಯಾನ್ ಪರಾಗ್ ಹಾಗೂ ರಾಹುಲ್​ ತೇವಾಟಿಯಾ ಸೆಲ್ಫೀ ತೆಗೆದುಕೊಂಡಂತೆ ನಟಿಸಿದರು.

ಇದನ್ನೂ ಓದಿ: IPL 2021 RCB vs KKR: ಅಬ್ಬರಿಸಿದ ಆರ್ಸಿಬಿ ಆಪತ್ಭಾಂದವ! ಕೊನೆಯ 5 ಓವರ್​ಗಳಲ್ಲಿ ಕೆಕೆಆರ್​ ಬೌಲರ್​ಗಳಿಗೆ ನರಕ ತೋರಿಸಿದ ಡಿವಿಲಿಯರ್ಸ್

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?