AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು.

ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ
ಸೆಲ್ಫೀ ತೆಗೆದುಕೊಂಡ ರಿಯಾನ್​ ಪರಾಗ್​ ಮತ್ತು ತೇವಾಟಿಯಾ
ರಾಜೇಶ್ ದುಗ್ಗುಮನೆ
|

Updated on: Apr 24, 2021 | 10:05 PM

Share

ರಾಜಸ್ಥಾನ್​ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ನಡೆದ ಪಂದ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ರಿಯಾನ್ ಪರಾಗ್ ಹಾಗೂ ತೇವಾಟಿಯಾ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡಂತೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ನೈಟ್​ ರೈಡರ್ಸ್​ ಕಳಪೆ ಆರಂಭ ಕಂಡಿತ್ತು. ಎಲ್ಲರೂ ಬಹುಬೇಗ ಪೆವಿಲಿಯನ್​ ಸೇರಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್​ ಕಳಪೆ ಆರಂಭ ಕಂಡಿತ್ತು. ದಿನೇಶ್​ ಕಾರ್ತಿಕ್​, ರಸೆಲ್​ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿ ಕೆಕೆಆರ್​ ರನ್​ ಹೆಚ್ಚಿಸಿದ್ದರು. ಹೀಗಾಗಿ, ಇಂದಿನ ಪಂದ್ಯಗಳಲ್ಲಿ ಈ ವಿಕೆಟ್​ಗಳನ್ನು ಪಡೆಯೋದು ಆರ್​ಆರ್​ಗೆ ತುಂಬಾನೇ ಮುಖ್ಯವಾಗಿತ್ತು.

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು. ಎರಡನೇ ಬಾಲ್​ ಕೂಡ ಸಿಕ್ಸ್​ ಹೊಡೆಯೋಕೆ ಹೋದರು. ಆದರೆ, ಈ ಬಾಲ್​ ರಿಯಾನ್ ಪರಾಗ್ ಕೈ ಸೇರಿತ್ತು. ಈ ಖುಷಿಗೆ ರಿಯಾನ್ ಪರಾಗ್ ಹಾಗೂ ರಾಹುಲ್​ ತೇವಾಟಿಯಾ ಸೆಲ್ಫೀ ತೆಗೆದುಕೊಂಡಂತೆ ನಟಿಸಿದರು.

ಇದನ್ನೂ ಓದಿ: IPL 2021 RCB vs KKR: ಅಬ್ಬರಿಸಿದ ಆರ್ಸಿಬಿ ಆಪತ್ಭಾಂದವ! ಕೊನೆಯ 5 ಓವರ್​ಗಳಲ್ಲಿ ಕೆಕೆಆರ್​ ಬೌಲರ್​ಗಳಿಗೆ ನರಕ ತೋರಿಸಿದ ಡಿವಿಲಿಯರ್ಸ್

Follow Us
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ
ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ?
ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ?
Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ
Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ