AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾನಿಯಾ ಮಿರ್ಜಾ ಸೋದರಿ ಆನಂ ಮದುವೆಯಾಗುತ್ತಿರುವುದು ಇದೇ ಕ್ರಿಕೆಟ್ ಆಟಗಾರನನ್ನು!

ಆನಂ ಮಿರ್ಜಾ –ಸಾನಿಯಾ ಮಿರ್ಜಾರ ಖಾಸಾ ಸಹೋದರಿ. ಭಾರತೀಯ ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್​ರನ್ನು ಮದುವೆಯಾಗಿ ಒಂದು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಇದೀಗ ಮಿರ್ಜಾ ಕುಟುಂಬದಲ್ಲಿ ಮತ್ತೊಂದು ಸಂತಸದ ಹೊನಲು ಹರಿದಿದೆ. ಸಾನಿಯಾ ತಂಗಿ ಆನಂ, ಇದೇ ವರ್ಷಾಂತ್ಯ ಮದುವೆಯಾಗಲಿದ್ದಾರೆ. ಹೌದು, ಆನಂ ಮದುವೆ ಆಗುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಅವರ ಹಿರಿಯ ಪುತ್ರ ಆಸಾದುದ್ದೀನ್ ಅವ್ರನ್ನ. ಇನ್ನು, ಮೊಹಮೊದ್ ಅಸಾದುದ್ದೀನ್ ಮಸೂದಿ […]

ಸಾನಿಯಾ ಮಿರ್ಜಾ ಸೋದರಿ ಆನಂ ಮದುವೆಯಾಗುತ್ತಿರುವುದು ಇದೇ ಕ್ರಿಕೆಟ್ ಆಟಗಾರನನ್ನು!
Follow us
ಸಾಧು ಶ್ರೀನಾಥ್​
|

Updated on:Oct 08, 2019 | 11:11 AM

ಆನಂ ಮಿರ್ಜಾ –ಸಾನಿಯಾ ಮಿರ್ಜಾರ ಖಾಸಾ ಸಹೋದರಿ. ಭಾರತೀಯ ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್​ರನ್ನು ಮದುವೆಯಾಗಿ ಒಂದು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಇದೀಗ ಮಿರ್ಜಾ ಕುಟುಂಬದಲ್ಲಿ ಮತ್ತೊಂದು ಸಂತಸದ ಹೊನಲು ಹರಿದಿದೆ. ಸಾನಿಯಾ ತಂಗಿ ಆನಂ, ಇದೇ ವರ್ಷಾಂತ್ಯ ಮದುವೆಯಾಗಲಿದ್ದಾರೆ. ಹೌದು, ಆನಂ ಮದುವೆ ಆಗುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಅವರ ಹಿರಿಯ ಪುತ್ರ ಆಸಾದುದ್ದೀನ್ ಅವ್ರನ್ನ. ಇನ್ನು, ಮೊಹಮೊದ್ ಅಸಾದುದ್ದೀನ್ ಮಸೂದಿ ಅವರು ಅಜರುದ್ದೀನ್ ಮತ್ತು ಅವರ ಮೊದಲ ಪತ್ನಿ ನೌರಿನ್​ರ ಇಬ್ಬರು ಪುತ್ರರಲ್ಲಿ ಒಬ್ಬರು. ಮತ್ತೊಬ್ಬ ಪುತ್ರ ಅಜಾದುದ್ದೀನ್ ನಡುರಾತ್ರಿ ನಡೆದ ಭೀಕರ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

ಅಸಾದುದ್ದೀನ್ ಸಹ ಕ್ರಿಕೆಟರ್ ಆಗಿದ್ದು, ಗೋವಾ ಪರ ಆಡ್ತಾರೆ. ಅಲ್ಲಿಗೆ ಅಪ್ಪಟ ಕ್ರೀಡಾ ಮನೆತನದ ಮಿರ್ಜಾ ಕುಟುಂಬದ ಇಬ್ಬರೂ ಅಳಿಯಂದಿರು ಕ್ರಿಕೆಟ್ ಆಟಗಾರರೇ ಆಗಿದ್ದಾರೆ. ಆನಂ ಮಿರ್ಜಾ ಯಾವುದೇ ಕ್ರೀಡಾಪಟು ಅಲ್ಲವಾದರೂ ಹವ್ಯಾಸಿ ಪತ್ರಕರ್ತೆಯಾಗಿದ್ದಾರೆ.

Published On - 9:30 pm, Mon, 7 October 19

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು