AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್

ಸ್ಮಿತ್ ಸಿಡ್ನಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಗಾರ್ಡ್ ಅನ್ನು ಬದಲಾಯಿಸಲಿಲ್ಲ, ಹಾಗೇನಾದರೂ ಆಗಿದ್ದರೆ ಇಂಡಿಯಾದ ಆಟಗಾರರು ಸುಮ್ಮನಿರುತ್ತಿದ್ದರೆ? ಟೆಸ್ಟ್ ಪಂದ್ಯಗಳು ನಡೆಯುವಾಗ ಸ್ಮಿತ್ ಹಾಗೆ ಕ್ರೀಸಿಗೆ ಬಂದು ಹೋಗುವುದನ್ನು ಮಾಡುತ್ತಿರುತ್ತಾರೆ ಎಂದು ಟಿಮ್ ಪೈನ್ ಹೇಳಿದ್ದಾರೆ.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್
ಟಿಮ್ ಪೈನ್ ಮತ್ತು ಸ್ಟೀವ್ ಸ್ಮಿತ್
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 12, 2021 | 7:36 PM

Share

ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್ ಅಳಿಸುತ್ತಿರುವುದು ವಿಡಿಯೊವೊಂದರಲ್ಲಿ ಸೆರೆಯಾದ ನಂತರ ಜನರರಿಂದ ತೀವ್ರ ಟೀಕೆಗೊಳಗಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ರಕ್ಷಣೆಗೆ ಟೀಮಿನ ನಾಯಕ ಟಿಮ್ ಪೈನ್ ಸೋಮವಾರ ಧಾವಿಸಿದ್ದಾರೆ.

ಸಿಡ್ನಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಪೈನ್, ‘ನಾನು ಸ್ಟೀವ್​ ಜೊತೆ ಮಾತಾಡಿದೆ, ಅವರು ತುಂಬಾ ಬೇಸರಗೊಂಡಿದ್ದಾರೆ. ಸ್ಟೀವ್ ಟೆಸ್ಟ್​ ಕ್ರಿಕೆಟ್ ಅಡುವುದನ್ನು ನೀವು ನೋಡಿರುವಿರಾದರೆ, ಅವರು ಹಾಗೆ ದಿನದಲ್ಲಿ ಐದಾರು ಸಲ ಕ್ರೀಸಿಗೆ ಬಂದು ಹೋಗುವುದನ್ನು ಗಮನಿಸಿರುತ್ತೀರಿ’ ಎಂದು ಹೇಳಿದರು.

‘ಅವರು ಯಾವಾಗಲೂ ಬ್ಯಾಟಿಂಗ್ ಕ್ರೀಸಿನಲ್ಲಿ ನಿಂತಿರುತ್ತಾರೆ. ಶ್ಯಾಡೊ ಬ್ಯಾಟಿಂಗ್ ಅಂತ ಹೇಳುತ್ತೀವಲ್ಲ, ಅದನ್ನವರು ಮಾಡುತ್ತಿರುತ್ತಾರೆ. ಅಂಥ ಹಲವಾರು ಕ್ರಿಯೆಗಳನ್ನು ಅವರು ಪ್ರತಿನಿತ್ಯ ಮಾಡುತ್ತಿರುತ್ತಾರೆ, ಬ್ಯಾಟಿಂಗ್ ಗಾರ್ಡನ್ನು ಆಗಾಗ ಮಾರ್ಕ್ ಮಾಡುವುದು ಅವುಗಳಲ್ಲೊಂದು’ ಎಂದು ಪೈನ್ ಹೇಳಿದ್ದಾರೆ.

ಸ್ಮಿತ್ ಗಾರ್ಡ್​ ಮಾರ್ಕ್​ಗಳನ್ನು ಅಳಿಸುವುದಾಗಲೀ, ಬದಲಾಯಿಸುವುದಾಗಲೀ ಮಾಡಿದ್ದರೆ, ಇಂಡಿಯಾದ ಆಟಗಾರರು ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿರುತ್ತಿದ್ದರು ಎಂದು ಪೈನ್ ಹೇಳಿದ್ದಾರೆ.

ಬ್ಯಾಟಿಂಗ್ ಗಾರ್ಡ್​ ಅಳಿಸುತ್ತಿರುವ ಸ್ಮಿತ್

‘ಸ್ಮಿತ್ ಖಂಡಿತವಾಗಿಯೂ ಗಾರ್ಡ್​ಗಳನ್ನು ಬದಲಾಯಸಿಲಿಲ್ಲ. ಹಾಗೇನಾದರೂ ಆಗಿದ್ದರೆ, ಇಂಡಿಯಾದ ಆಟಗಾರರು ಸುಮ್ಮನಿರುತ್ತಿದ್ದರೆ? ಆದರೆ ಟೆಸ್ಟ್ ಮತ್ತು ಸ್ಮಿತ್​ರೊಂದಿಗೆ ನಾನು ಆಡಿರುವ ಶೀಲ್ಡ್​ ಪಂದ್ಯಗಳಲ್ಲಿ ಹಾಗೆ ಮಾಡುವದನ್ನು ಅನೇಕ ಸಲ ನೋಡಿದ್ದೇನೆ. ಮೈದಾನದಲ್ಲಿರುವಾಗ ಅವರು ಕ್ರೀಸಿನ ಬಳಿ ಹೋಗಿ, ತಾನು ಬ್ಯಾಟಿಂಗ್ ಮಾಡುತ್ತಿರುವಂತೆ ಕಲ್ಪಿಸಿಕೊಂಡು ಹೇಗೆ ಆಡಬಹುದು ಅನ್ನುವುದನ್ನು ಮಂಥನ ಮಾಡುತ್ತಿರುತ್ತಾರೆ’ ಎಂದು ಪೈನ್ ಕೇಳಿದ್ದಾರೆ.

‘ಅವರು ಪಂತ್ ಬ್ಯಾಟಿಂಗ್ ಗಾರ್ಡ್​ ಅನ್ನು ಬದಲಾಯಿಸಿರುವ ಅಥವಾ ಅಂಥ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯೇ ಇಲ್ಲ. ಅವರ ಹಲವಾರು ಮ್ಯಾನರಿಸಂಗಳಲ್ಲಿ ಅದೂ ಒಂದು. ನಾನು ಮತ್ತೊಮ್ಮೆ ಹೇಳುತ್ತೇನೆ, ಸ್ಮಿತ್ ಬ್ಯಾಟಿಂಗ್​ ಗಾರ್ಡ್​ ಅನ್ನು ಬದಲಾಯಿಸೇ ಇಲ್ಲ,’ ಎಂದು ಪೈನ್ ಹೇಳಿದ್ದಾರೆ.

ವಿಡಿಯೋದಲ್ಲಿ ಬಟಾಬಯಲು.. ಆಸ್ಟ್ರೇಲಿಯಾ ಆಟಗಾರ ಸ್ಮಿತ್​ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು

Published On - 6:42 pm, Tue, 12 January 21

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?