Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ಓವರ್‌, ಕೇವಲ ಒಂದು ಬೌಂಡರಿ, 19 ಹೆಚ್ಚುವರಿ ರನ್; ಈ ಟಿ-20 ಪಂದ್ಯದ ವಿಶೇಷತೆಗಳು ಒಂದೆರಡಲ್ಲ

ನೈಜೀರಿಯನ್ನರು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 52 ರನ್ ಗಳಿಸಿದರು ಮತ್ತು 8 ವಿಕೆಟ್‌ಗಳನ್ನು ಕಳೆದುಕೊಂಡರು. ಈ ಹಂತದಲ್ಲಿ ತಂಡದಿಂದ ಕೇವಲ ಒಂದು ಬೌಂಡರಿ ಮಾತ್ರ ಬಂದಿತು.

20 ಓವರ್‌, ಕೇವಲ ಒಂದು ಬೌಂಡರಿ, 19 ಹೆಚ್ಚುವರಿ ರನ್; ಈ ಟಿ-20 ಪಂದ್ಯದ ವಿಶೇಷತೆಗಳು ಒಂದೆರಡಲ್ಲ
ನೈಜೀರಿಯಾ ವರ್ಸಸ್ ನಮೀಬಿಯಾ
Follow us
ಪೃಥ್ವಿಶಂಕರ
| Updated By: Skanda

Updated on: Jun 08, 2021 | 8:22 AM

ಟಿ 20 ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದೆ. ಬೌಲರ್‌ಗಳಿಗೆ ಅವಕಾಶವಿಲ್ಲ ಎನ್ನುವವರು ಈ ಪಂದ್ಯವನ್ನು ನೋಡಬೇಕು. ಇದು ಆಫ್ರಿಕನ್ ನೆಲದಲ್ಲಿ ನಡೆದ ಪಂದ್ಯವಾಗಿತ್ತು. 20 ಓವರ್ ಆಡಿದ ತಂಡ ಕೇವಲ ಒಂದು ಬೌಂಡರಿ ಮಾತ್ರ ಗಳಿಸಲು ಶಕ್ತವಾಯಿತು. 10 ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡಿ ಕೇವಲ ಒಂದು ಬೌಂಡರಿ ಗಳಿಸಿದರು. ನೈಜೀರಿಯಾ ವುಮೆನ್ ವರ್ಸಸ್ ನಮೀಬಿಯಾ ನಡುವಿನ ಮಹಿಳಾ ಟಿ 20 ಪಂದ್ಯದಲ್ಲಿ ನಡೆದ ಘಟನೆ ಇದು. ರುವಾಂಡನ್ ಪಿಚ್‌ನಲ್ಲಿ ಈ ಪಂದ್ಯ ನಡೆಯಿತು. ನೈಜೀರಿಯನ್ನರು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 52 ರನ್ ಗಳಿಸಿದರು ಮತ್ತು 8 ವಿಕೆಟ್‌ಗಳನ್ನು ಕಳೆದುಕೊಂಡರು. ಈ ಹಂತದಲ್ಲಿ ತಂಡದಿಂದ ಕೇವಲ ಒಂದು ಬೌಂಡರಿ ಮಾತ್ರ ಬಂದಿತು. ಆಶ್ಚರ್ಯಕರ ಸಂಗತಿಯೆಂದರೆ ನೈಜೀರಿಯಾದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲಲು ಹೆಣಗಾಡುತ್ತಿರುವಂತೆ ಕಾಣುತ್ತಿತ್ತು. ಆದರೆ ಯಾರೂ ಕೂಡ ಡಬಲ್ ಫಿಗರ್ ದಾಟಲು ಸಾಧ್ಯವಾಗಲಿಲ್ಲ.

10 ಬ್ಯಾಟ್ಸ್‌ಮನ್‌, 20 ಓವರ್‌, ಕೇವಲ ಒಂದು ಬೌಂಡರಿ ನೈಜೀರಿಯನ್ ತಂಡದ ಪರ ವೈಯಕ್ತಿಕವಾಗಿ ದಾಖಲಾದ ಅತಿದೊಡ್ಡ ಸ್ಕೋರ್ 7 ರನ್ ಆಗಿದೆ. ನೈಜೀರಿಯನ್ ತಂಡದ ನಾಯಕಿ ಈ ರನ್ ಬಾರಿಸಿದರು. ಅವರೊಂದಿಗೆ ಮತ್ತೊಬ್ಬ ಆಟಗಾರ್ತಿ 7 ರನ್ ಗಳಿಸಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಖಾತೆ ಕೂಡ ತೆರೆಯಲಿಲ್ಲ. ಉಳಿದ ಇಬ್ಬರು ಕೇವಲ 3 ರನ್ ಗಳಿಸಿದರು. ಮತ್ತಿಬ್ಬರು ಕೇವಲ 2 ರನ್​ ಗಳಿಸಲಷ್ಟೇ ಶಕ್ತರಾದರು. ಒಬ್ಬ ಆಟಗಾರ್ತಿ 6 ಕ್ಕೆ ಔಟಾದರು. 6 ರನ್ ಗಳಿಸಿದ ಆ ಆಟಗಾರ್ತಿ ಖಾತೆಯಲ್ಲಿ ಬೌಂಡರಿ ಸಿಕ್ಕಿತು. ಅದೃಷ್ಟವಶಾತ್ ನಮೀಬಿಯಾ ತಂಡವು ಎದುರಾಳಿಗೆ ಹೆಚ್ಚುವರಿಯಾಗಿ 19 ರನ್​ಗಳನ್ನು ಬಿಟ್ಟುಕೊಟ್ಟಿತು. ಇದರಿಂದಾಗಿ ಸ್ಕೋರ್ ಬೋರ್ಡ್ 50 ರನ್ ದಾಟಿತು.

ಪಂದ್ಯಶ್ರೇಷ್ಠ 18 ವರ್ಷದ ನಮೀಬಿಯಾದ ಬೌಲರ್ ವಿಕ್ಟೋರಿಯಾ ಹಮುನೆಲ್ಲಾ ಪಂದ್ಯಶ್ರೇಷ್ಠರಾಗಿದ್ದು, 4 ಓವರ್‌ಗಳಲ್ಲಿ 8 ರನ್​ಗಳಿಗೆ 4 ವಿಕೆಟ್ ಪಡೆದರು. ಆದಾಗ್ಯೂ, ನಮೀಬಿಯಾ 2 ವಿಕೆಟ್ ಕಳೆದುಕೊಂಡು 56 ಎಸೆತಗಳಲ್ಲಿ ಪಂದ್ಯವನ್ನು ಜಯದೊಂದಿಗೆ ಮುಗಿಸಿದರು. ನಮೀಬಿಯಾ ತಂಡವು 64 ಎಸೆತಗಳು ಬಾಕಿಯಿರುವಂತೆ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಮಾತು ಉಳಿಸಿಕೊಂಡ ಬಿಸಿಸಿಐ; ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕೊನೆಗೂ ಸಿಗ್ತು ವಿಶ್ವಕಪ್ ಬಹುಮಾನದ ಹಣ 

ಮಗನ ಕ್ರಿಕೆಟ್ ತರಬೇತಿಗಾಗಿ 5 ಎಕರೆ ದ್ರಾಕ್ಷಿ ತೋಟವನ್ನೇ ಕ್ರಿಕೆಟ್ ಕ್ರೀಡಾಂಗಣವನ್ನಾಗಿಸಿದ ಅಪ್ಪ! ಯಾವುರಲ್ಲಿ?

ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ
SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
VIDEO: ಚೆಂಡು ಎಲ್ಲಿ? ಕಣ್ಮುಂದೆ ಬಾಲ್ ಇದ್ದರೂ, ಹುಡುಕಾಡಿದ ಇಶಾನ್ ಕಿಶನ್
VIDEO: ಚೆಂಡು ಎಲ್ಲಿ? ಕಣ್ಮುಂದೆ ಬಾಲ್ ಇದ್ದರೂ, ಹುಡುಕಾಡಿದ ಇಶಾನ್ ಕಿಶನ್