AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Smartphones: ಬರೋಬ್ಬರಿ 8 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್​

Price Cut: ನೀವು ಹೊಸ ಸ್ಮಾರ್ಟ್​ಫೋನ್ ಅನ್ನು ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಬೇಕು ಎಂಬ ಪ್ಲಾನ್​ನಲ್ಲಿದ್ದರೆ ಇದುವೇ ಸರಿಯಾದ ಸಮಯ. ಇಲ್ಲಿದೆ ನೋಡಿ ಬೆಲೆ ಕಡಿತಗೊಂಡಿರುವ ಫೋನುಗಳ ಪಟ್ಟಿ.

Best Smartphones: ಬರೋಬ್ಬರಿ 8 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್​
Smartphones
TV9 Web
| Updated By: Vinay Bhat|

Updated on:Aug 30, 2022 | 2:32 PM

Share

ಈ ಆಗಸ್ಟ್ ತಿಂಗಳು ಭಾರತದಲ್ಲಿ ಅನೇಕ ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆ ಆಗಿದೆ. ರೆಡ್ಮಿ (Redmi), ಸ್ಯಾಮ್​ಸಂಗ್, ರಿಯಲ್ ಮಿ, ಇನ್ಫಿನಿಕ್ಸ್, ವಿವೋ ಕಂಪನಿಯ ಫೋನುಗಳು ಅನಾವರಣಗೊಂಡಿದೆ. ಇದು ಭರ್ಜರಿ ಸೇಲ್ ಕೂಡ ಕಾಣುತ್ತಿದೆ. ಇದರ ಜೊತೆಗೆ ಈ ತಿಂಗಳು ಬರೋಬ್ಬರಿ ಎಂಟು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಸ್ಯಾಮ್​ಸಂಗ್ (Samsung), ಒಪ್ಪೋ, ಒನ್​ಪ್ಲಸ್, ವಿವೋ ಕಂಪಪನಿಯ ಫೋನಿಗಳ ಬೆಲೆಯನ್ನು ಕಡಿಮೆ ಮಾಡಿ ಮಾರಾಟ ಮಾಡಲಾಗುತ್ತಿದೆ. ನೀವು ಹೊಸ ಸ್ಮಾರ್ಟ್​ಫೋನ್ ಅನ್ನು ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಬೇಕು ಎಂಬ ಪ್ಲಾನ್​ನಲ್ಲಿದ್ದರೆ ಇದುವೇ ಸರಿಯಾದ ಸಮಯ. ಹಾಗಾದರೆ ಬೆಲೆ ಕಡಿತಗೊಂಡಿರುವ ಫೋನುಗಳ ಯಾವುವು?, ಇಲ್ಲಿದೆ ನೋಡಿ ಕಂಪ್ಲಿಟ್ ಡೀಟೇಲ್ಸ್​.

OnePlus Nord CE 2 Lite: 5G ಫೋನಿನ ಬೆಲೆಯನ್ನು 1,000 ರೂ. ನಷ್ಟು ಕಡಿತಗೊಳಿಸಿದೆ. ಇದು ಈ ವದರ್ಷ ಏಪ್ರಿಲ್‌ನಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಆಗಿತ್ತ. ಇದರ 6GB ಮತ್ತು 8GB ಬೆಲೆ ಕ್ರಮವಾಗಿ 19,999 ರೂ. ಮತ್ತು 21,999 ರೂ. ಆಗಿದೆ. ಇದೀಗ ಬೆಲೆ ಕಡಿತದ ನಂತರ 6GB RAM ಮಾದರಿಯನ್ನು 18,999 ರೂ. ಗೆ ಖರೀದಿಸಬಹುದು. .ತೆಯೆ 8GB RAM ರೂಪಾಂತರವು ಈಗ 20,999 ರೂ. ಗೆ ಮಾರಾಟವಾಗುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ F42: ಗ್ಯಾಲಕ್ಸಿ F42 ಸ್ಮಾರ್ಟ್​ಫೋನ್ ಬೆಲೆಯಲ್ಲಿ 3,000 ರೂ. ಗಳನ್ನು ಇಳಿಕೆ ಮಾಡಲಾಗಿದೆ. 6GB ಹಾಗೂ 8GB ಎರಡು ವೇರಿಯೆಂಟ್​ನಲ್ಲಿ ಖರೀದಿಸಬಹುದು. 6GB RAM ಬೆಲೆ 17,999 ರೂ. ಆಗಿದೆ. ಇದರಲ್ಲಿ ಮೀಡಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ. ಬಲಿಷ್ಠವಾದ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ ಕೂಡ ನೀಡಲಾಗಿದೆ.

ಇದನ್ನೂ ಓದಿ
Image
Android 13: ಆಂಡ್ರಾಯ್ಡ್ 13 ನಲ್ಲಿದೆ ವಿಶೇಷ ಆಯ್ಕೆ: ಈಗ ಆ್ಯಪ್​ಗಳ ಬಾಷೆಯನ್ನೂ ಬದಲಾಯಿಸಬಹುದು
Image
iPhone 14: ಸೆ. 7ಕ್ಕೆ ಐಫೋನ್ 14 ಸರಣಿ ಬಿಡುಗಡೆ: ಹುಬ್ಬೇರುವಂತೆ ಮಾಡಿದೆ ಇದರಲ್ಲಿರುವ 5 ಫೀಚರ್ಸ್
Image
Vivo Y35: ಭಾರತದಲ್ಲಿ ವಿವೋದಿಂದ ಮತ್ತೊಂದು ಸ್ಮಾರ್ಟ್​​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
Image
ಎಂಜಿನ್ ಸೋರಿಕೆ: ನಾಸಾ ಆರ್ಟೆಮಿಸ್ I ಮೂನ್ ಮಿಷನ್ ಉಡಾವಣೆ ಮುಂದೂಡಿಕೆ

ಸ್ಯಾಮ್​ಸಂಗ್ ಗ್ಯಾಲಕ್ಸಿ A53: ಗ್ಯಾಲಕ್ಸಿ A53 ಇದು 5G ಬೆಂಬಲ ಪಡೆದುಕೊಂಡಿರುವ ಫೋನಾಗಿದ್ದು, 6GB ಹಾಗೂ 8GB ಎರಡು ವೇರಿಯೆಂಟ್​ನಲ್ಲಿ ಖರೀದಿಸಬಹುದು. 34,999 ರೂ. ಗೆ ಲಾಂಚ್ ಆದ ಈ ಸ್ಮಾರ್ಟ್​ಫೋನ್ ಈಗ 31,999 ರೂ. ಗೆ ನಿಮ್ಮದಾಗಿಸಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ A03: ಕಳೆದ ವರ್ಷ ಬಿಡುಗಡೆ ಆದ ಗ್ಯಾಲಕ್ಸಿ A03 10,499 ರೂ. ಗೆ ಖರೀದಿಸಬಹುದಿತ್ತು. ಇದೀಗ ಈ ಫೋನಿನ ಬೆಲೆಯಲ್ಲಿ ಕಡಿಮೆ ಮಾಡಲಾಗಿದ್ದು 9,514 ರೂ. ಗೆ ಮಾರಾಟ ಆಗುತ್ತಿದೆ. 3GB ಹಾಗೂ 4GB ಎರಡು ವೇರಿಯೆಂಟ್​ನಲ್ಲಿ ಲಭ್ಯವಿದೆ. ನೀಲಿ, ಕಪ್ಪು ಮತ್ತು ಕೆಂಪು ಮೂರು ಬಣ್ಣಗಳಲ್ಲಿ ಈ ಸ್ಮಾರ್ಟ್​ಫೋನ್ ಇದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ F22: ಗ್ಯಾಲಕ್ಸಿ F22 ಮೇಲೆ ಬರೋಬ್ಬರಿ 2000 ರೂ. ಗಳನ್ನು ಕಡಿಮೆ ಮಾಡಲಾಗಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆಯ ಈಗಿನ ಬೆಲೆ 10,499 ರೂ. ಮತ್ತು 6GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 12,4999 ರೂ. ಆಗಿದೆ. ಇದು 6.4 ಇಂಚಿನ HD+ ಸೂಪರ್ ಅಮ್ಲೋಡ್ ಡಿಸ್ ಪ್ಲೇ ಹೊಂದಿದೆ.

ವಿವೋ V23e 5G: 8GB RAM + 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್​ಫೋನ್ ಮೇಲೆ 1,000 ರೂ. ಗಳನ್ನು ಕಡಿಮೆ ಮಾಡಲಾಗಿದ್ದು, 24,990 ರೂ. ಗೆ ಮಾರಾಟ ಆಗುತ್ತಿದೆ. ಇದಕ್ಕೆ ಮೀಡಿಯಾಟೆಕ್ ಡೈಮೆನ್ಸಿಟಿ 810 ಚಿಪ್ಸೆಟ್ ಅಳವಡಿಸಲಾಗಿದೆ. ಬಲಿಷ್ಠ ಬ್ಯಾಟರಿ, ಉತ್ತಮ ಕ್ಯಾಮೆರಾ ಕೂಡ ನೀಡಲಾಗಿದೆ.

ವಿವೋ Y21T: ಈ ಸ್ಮಾರ್ಟ್​ಫೋನ್ ಮೇಲೂ 1,000 ರೂ. ಕಡಿತ ಮಾಡಲಾಗಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆ ಈಗ 15,499 ರೂ. ಗೆ ನಿಮ್ಮದಾಗಿಸಬಹುದು. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 680 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. 6.58 ಇಂಚಿನ ಫುಲ್ HD+ LCD ಡಿಸ್ ಪ್ಲೇ ನೀಡಲಾಗಿದೆ.

ಒಪ್ಪೋ ರೆನೊ 7 ಪ್ರೊ: ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಹೊಂದಿರುವ ಈ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3,000 ರೂ. ಕಡಿಮೆ ಮಾಡಲಾಗಿದೆ. 39,999 ರೂ. ಗೆ ಲಾಂಚ್ ಆಗಿದ್ದ ಒಪ್ಪೋ ರೆನೊ 7 ಪ್ರೊ ಅನ್ನು ಈಗ ನೀವು 36,999 ರೂ. ಗೆ ಖರೀದಿಸಬಹುದು. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಹೊಂದಿದ್ದು, 50 ಮೆಗಾಫಿಕ್ಸೆಲ್​ನ ಸೋನಿ IMX766 ಸೆನ್ಸಾರ್​ನ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ.

Published On - 2:32 pm, Tue, 30 August 22

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ