AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ

USB Type-C: ಯುರೋಪಿಯನ್​ ಕಮಿಷನ್​ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ ಹಾಗೂ ಇಯರ್​ ಫೋನ್​​ಗಳಿಗೆ ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ
Ajay V Bhatt
TV9 Web
| Updated By: Vinay Bhat|

Updated on: Jun 26, 2022 | 3:18 PM

Share

ಟೆಕ್ ಮಾರುಕಟ್ಟೆಯಲ್ಲಿ ಈಗ ನಾನಾರೀತಿಯ ಚಾರ್ಜರ್​ಗಳಿವೆ. ಐಫೋನ್​ಗಳಿಗೆ ಒಂದು ವಿಧದ ಚಾರ್ಜರ್ ಆದರೆ ಆಂಡ್ರಾಯ್ಡ್​ನ ಒಂದೊಂದು ಕಂಪನಿಯ ಸ್ಮಾರ್ಟ್​​ಫೋನ್​ಗಳಿಗೆ ಅದರದ್ದೇ ಆದ ಪೋರ್ಟ್​​ಗಳಿಗೆ ಬೇರೆ ಬೇರೆ ಚಾರ್ಜರ್ ಇರುತ್ತದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಹೆಚ್ಚಾಗಿ ಆ್ಯಂಡ್ರಾಯ್ಡ್​ (Android) ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ (Micro USB) ಬಳಸುತ್ತಿದ್ದಾರೆ. ಹೀಗೆ ಅನೇಕ ಮಾದರಿಯ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಅರಿತಿರುವ ಯುರೋಪಿಯನ್​ ಕಮಿಷನ್​ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ ಹಾಗೂ ಇಯರ್​ ಫೋನ್​​ಗಳಿಗೆ ಒಂದೇ ವಿಧದ ಚಾರ್ಜರ್ (Charger)​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ಯುಎಸ್​​ಬಿ ಅನ್ನು ಮೊದಲ ಬಾರಿಗೆ 1995 ರಲ್ಲಿ ಕಂಡು ಹಿಡಿದ ಭಾರತ ಮೂಲದ ಇಂಜಿನಿಯರ್ ಅಜಯ್ ವಿ ಭಟ್, “ಮುಂದಿನ ದಿನಗಳಲ್ಲಿ ಬಳಕೆದಾರರು ಯುಎಸ್​ಬಿ ಕೇವಲ ಅಥವಾ ಚಾರ್ಜರ್​ಗಾಗಿ ಅಲೆದಾಡುವ ಪ್ರಮೆಯವೇ ಬರುವುದಿಲ್ಲ ಎಂದು ಹೇಳಿದ್ದಾರೆ. ಯುಎಸ್​ಬಿ ಟೈ-ಸಿ ಚಾರ್ಜರ್ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರವಹಿಸಲಿದೆ. ಇದರಿಂದ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗಲಿದೆ. ಇಷ್ಟು ಮಾತ್ರವಲ್ಲದೆ ನಿಮಗೆ ಫೈಲ್ ವರ್ಗಾವಣೆ ಕೂಡ ವೇಗವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

Jio vs Airtel: 666 ರೂ. ಪ್ಲಾನ್: ಜಿಯೋ ಏರ್ಟೆಲ್​ನಲ್ಲಿ ಒಂದೇ ಬೆಲೆಯ ಯೋಜನೆ: ಯಾವುದು ಬೆಸ್ಟ್?

ಇದನ್ನೂ ಓದಿ
Image
Flipkart Electronics Sale: ಒಂದೇ ದಿನ ಬಾಕಿ: ಎಲೆಕ್ಟ್ರಾನಿಕ್ ಸೇಲ್​ನ ಈ ಆಫರ್ ಮಿಸ್ ಮಾಡ್ಬೇಡಿ
Image
Realme Narzo 50i Prime: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್​​ಫೋನ್
Image
Reliance JIO: 56 GB ಡೇಟಾ, ಅನ್ಲಿಮಿಟೆಡ್ ಕಾಲ್: ಇದು ಜಿಯೋ ಕಂಪನಿಯ ಬಂಪರ್ ಆಫರ್
Image
WhatsApp: ನೀವು ವಾಟ್ಸ್​ಆ್ಯಪ್ ಕಂಪ್ಯೂಟರ್​ನಲ್ಲಿ ಉಪಯೋಗಿಸ್ತೀರ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

ಯುಎಸ್​ಬಿ ಟೈಪ್-ಸಿಯು ತನ್ನ ಮುಂದಿನ ಅಪ್ಡೇಟ್​ನಲ್ಲಿ 240W ವೇಗದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಸಾಕಷ್ಟು ಶಕ್ತಿಯುತವಾಗಿರುತ್ತದೆ. ದಿನಕಳೆದಂತೆ ಟೈಪ್-ಸಿ ಚಾರ್ಜರ್​ನ ಅಗತ್ಯ ಹೆಚ್ಚಾಗಲಿದ್ದು ಎಲ್ಲ ಸಾಧನಕ್ಕೂ ಇದನ್ನೆ ಅಳವಡಿಸಬೇಕಾಗಿ ಬರುತ್ತದೆ. ಪ್ರಪಂಚದಾದ್ಯಂತ ಅಂದಾಜು 6 ಶತಕೋಟಿ ಯುಎಸ್​ಬಿ ಕನೆಕ್ಟರ್‌ಗಳು ಬಳಕೆಯಲ್ಲಿವೆ ಎಂಬುದು ಅವರ ಮಾತು.

ಇನ್ನು ಯುರೋಪಿಯನ್​ ಕಮಿಷನ್​ ಹೇಳಿರುವಂತೆ ಮೊಬೈಲ್​ ಫೋನ್​, ಟ್ಯಾಬ್ಲೆಟ್​ ಮತ್ತು ಹೆಡ್​ಫೋನ್​ ಸಾಮಾನ್ಯ ಜಾರ್ಜಿಂಗ್​ ಪೋರ್ಟ್​​ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್​ಬಿ-ಸಿ ಕನೆಕ್ಟರ್​ ಎಲ್ಲಾ ಸ್ಮಾರ್ಟ್​ಫೋನ್​ಗಳು, ಟ್ಯಾಬ್ಲೆಟ್​ಗಳು, ಹೆಡ್​ಫೋನ್​ಗಳು, ಫೋರ್ಟಬಲ್​ ಸ್ಪೀಕರ್​ಗಳು ಮತ್ತು ಹ್ಯಾಂಡ್​​ಹೆಲ್ಡ್​ ವಿಡಿಯೋಗೇಮ್​ ಕನ್ಸೋಲ್​ಗಳಿಗೆ  ಪ್ರಮಾಣಿತ ಪೋರ್ಡ್​ ನೀಡಬೇಕು ಎಂದಿದೆ. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಈ ವಿಚಾರ ತಿಳಿದು ಆ್ಯಪ್​ ಸಂಸ್ಥೆಯೊಂದು ಯುರೋಪಿಯನ್​ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್​ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ. ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್​ ಮತ್ತು ಐಫೊನ್​ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್​ ಪೋರ್ಟ್​ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್​ಫೋನ್​ ಮತ್ತು ಚಾರ್ಜರ್​ ಫೋರ್ಟ್​ಗಳು ಬೇರ ಬೇರೆ ಆಗಿದೆ.

POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ