AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

Viksit Bharat 2025: India's AI, Chip & Critical Mineral Revolution Towards Self-Reliance: 2025 ಭಾರತದ ವೈಜ್ಞಾನಿಕ-ತಂತ್ರಜ್ಞಾನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಪ್ರಮುಖ ಖನಿಜಗಳು ಹಾಗೂ ಸಂಶೋಧನೆ-ಅಭಿವೃದ್ಧಿ ಕ್ಷೇತ್ರಗಳಲ್ಲಿ ದೇಶವು ಸ್ವಾವಲಂಬನೆ ಸಾಧಿಸುತ್ತಿದೆ. ಜಾಗತಿಕವಾಗಿ ಮುಂಚೂಣಿಗೆ ಬರುತ್ತಿರುವ ಭಾರತ, AI ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದೆ. 'ಇಂಡಿಯಾ ಎಐ ಮಿಷನ್' ಮತ್ತು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಯಿಂದ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. 'ವಿಕಸಿತ ಭಾರತ 2047' ಗುರಿಯತ್ತ ಹೆಜ್ಜೆ ಹಾಕುತ್ತಿದೆ.

ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
ತಂತ್ರಜ್ಞಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 27, 2025 | 11:13 PM

Share

2025ರ ವರ್ಷವು ಭಾರತದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಯಾಣದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಎನಿಸಿದೆ. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ದೇಶ ಮುನ್ನಡೆದಿದೆ. ಜಾಗತಿಕ ಮಾನ ಸನ್ಮಾನ ಗಿಟ್ಟಿಸಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್​ಗಳಿಂದ ಹಿಡಿದು ಬಾಹ್ಯಾಕಾಶ ಅನ್ವೇಷಣೆ, ಪರಮಾಣ ಶಕ್ತಿ, ಪ್ರಮುಖ ಖನಿಜಗಳವರೆಗೆ ಭಾರತ ಜಾಗತಿಕ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿರುವುದು ಮಾತ್ರ, ಹೊಸ ತಂತ್ರಜ್ಞಾನ ರೂಪಿಸುವ ಸಾಮರ್ಥ್ಯವನ್ನೂ ತೋರಿದೆ. ಭಾರತದ ಸ್ವತಂತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ತಂತ್ರಜ್ಞಾನ ಸ್ವಾವಂಬನೆ (Technological self-determination) ಎಂಬುದು ಕನಸಾಗಿ ಉಳಿಯದೇ ನನಸಾಗುತ್ತಿದೆ. 2047ರ ವಿಕಸಿತ ಭಾರತದ (Viksit Bharat) ಗುರಿಯೊಂದಿಗೆ ಮಿಳಿತಗೊಂಡಿದೆ.

ಎಐ ಕ್ರಾಂತಿ: ಡಿಜಿಟಲ್ ಬೆನ್ನೆಲುಬಿಗೆ ಆಧಾರ

ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಸರ್ಕಾರವು 10,000 ಕೋಟಿ ರೂಗೂ ಅಧಿಕ ಹೂಡಿಕೆಗೆ ಬದ್ಧವಾಗಿದೆ. ಮಾನವ ಕೇಂದ್ರಿತ ಅಥವಾ ಮಾನವಮುಖಿ ಕೃತಕ ಬುದ್ಧಿಮತ್ತೆಯಲ್ಲಿ ಭಾರತವನ್ನು ಮುಂಚೂಣಿಗೆ ತರುವುದು ಈ ಮಿಷನ್​ನ ಗುರಿ. ಸಾಮಾಜಿಕ ನ್ಯಾಯಕ್ಕೆ, ಅದರಲ್ಲೂ ನಗರ ಮತ್ತು ಗ್ರಾಮೀಣ ಅಂತರ ತಗ್ಗಿಸಲು ಆರ್ಟಿಫಿಶಿಯಲ್ ಇಂಟೆಜೆನ್ಸ್ ಅನ್ನು ಒಂದು ಪ್ರಮುಖ ಸಾಧನವಾಗಿ ಮಾಡಬೇಕು ಎಂಬುದು ಈ ಮಿಷನ್​ನ ಮಹದೋದ್ದೇಶ. 2025-26ರ ಮೊದಲ ಕ್ವಾರ್ಟರ್​ನಲ್ಲಿ (2025ರ ಏಪ್ರಿಲ್​ನಿಂದ ಜೂನ್) ಭಾರತದ ರಾಷ್ಟ್ರೀಯ ಎಐ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ದೊಡ್ಡ ವಿಸ್ತರಣೆಯನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ 15,916 ಹೊಸ ಜಿಪಿಯುಗಳನ್ನು ಪಡೆಯಲಾಯಿತು. ಇದರೊಂದಿಗೆ ಭಾರತದ ಒಟ್ಟೂ ಕಂಪ್ಯೂಟ್ ಕೆಪಾಸಿಟಿ 38,000 ಜಿಪಿಯುಗಿಂತ ಹೆಚ್ಚಾಗಿದೆ. ಈ ಜಿಪಿಯುಗಳು ಗಂಟೆಗೆ ಕೇವಲ 67 ರೂಗಳ ದರಕ್ಕೆ ಲಭ್ಯ ಇವೆ. ಮಾರುಕಟ್ಟೆಯಲ್ಲಿ ಈ ಜಿಪಿಯುಗಳ ಬಳಕೆಗೆ ಇರುವ ಸರಾಸರಿ ಬೆಲೆ ಗಂಟೆಗೆ 115 ರೂ. ಆದರೆ, ಸರ್ಕಾರವು ಸಬ್ಸಿಡಿ ಮೂಲಕ ಕಡಿಮೆ ದರಕ್ಕೆ ಈ ಜಿಪಿಯುಗಳನ್ನು ಉದ್ಯಮಗಳಿಗೆ ಕೊಡುತ್ತಿದೆ. ಉನ್ನತ ಮಟ್ಟದ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ಎಲ್ಲರಿಗೂ ಲಭ್ಯ ಇರಲಿ ಎಂಬುದು ಉದ್ದೇಶ.

ಇತ್ತೀಚೆಗೆ, ಅಮೆರಿಕ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯ 2025ರ ಗ್ಲೋಬಲ್ ಎಐ ವೈಬ್ರನ್ಸಿ ಟೂಲ್​ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ಗ್ಲೋಬಲ್ ಎಐ ಸ್ಪರ್ಧಾತ್ಮಕತೆಯಲ್ಲಿ ಅಮೆರಿಕ ಮತ್ತು ಚೀನಾ ನಂತರ ಭಾರತ ಸ್ಥಾನ ಪಡೆದಿದೆ. ಸೌತ್ ಕೊರಿಯಾ, ಬ್ರಿಟನ್, ಸಿಂಗಾಪುರ್, ಜಪಾನ್, ಜರ್ಮನಿ, ಫ್ರಾನ್ಸ್, ಕೆನಡಾ ಇತ್ಯಾದಿ ಅನೇಕ ಮುಂದುವರಿದ ದೇಶಗಳಿಗಿಂತ ಭಾರತ ಎಐ ಸ್ಪರ್ಧಾತ್ಮಕತೆಯಲ್ಲಿ ಮುಂಚೂಣಿಯಲ್ಲಿದೆ ಎಂದಾಯಿತು. ಗ್ಲೋಬಲ್ ಎಐ ಸ್ಪರ್ಎಯಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಾದರೆ ಟೆಕ್ ಇಕೋಸಿಸ್ಟಂ ಬೇಗ ಬೆಳೆಸಲು ಮತ್ತು ಉತ್ತಮ ಗುಣಮಟ್ಟದ ಪ್ರತಿಭಾ ಸಮೂಹ ಬೆಳೆಸಲು ಭಾರತ ಸರಿಯಾದ ಹಾದಿಯಲ್ಲಿದೆ.

ಸೆಮಿಕಂಡಕ್ಟರ್​ನಲ್ಲಿ ಭಾರತದ ಸ್ವಾವಲಂಬನೆಯ ಹೊಸ ಪರ್ವ

ಭಾರತದ ಇತಿಹಾಸದಲ್ಲಿ ಸರ್ಕಾರವೊಂದು ಸೆಮಿಕಂಡಕ್ಟರ್ ತಯಾರಿಕೆಯನ್ನು ದೇಶದ ತಂತ್ರಜ್ಞಾನ ಮಿಷನ್​ನ ಮುಖ್ಯಭಾಗವಾಗಿ ಇಟ್ಟಿದೆ. 2025ರ ಮೇ ತಿಂಗಳಲ್ಲಿ ನೋಯ್ಡಾ ಮತ್ತು ಬೆಂಗಳೂರಿನಲ್ಲಿ ಎರಡು ಸುಧಾರಿತ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಿತು. ಈ ಎರಡು ಘಟಕಗಳಲ್ಲಿ 3-ಎನ್​ಎಂ ಚಿಪ್ ಡಿಸೈನ್ ಮಾಡಲಾಗುತ್ತದೆ. ಈ ಎರಡು ಘಟಕಗಳು ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯವನ್ನಷ್ಟೇ ಅಲ್ಲ, ಬಹಳ ಮುಖ್ಯವಾದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನದೇ ಭವಿಷ್ಯ ರೂಪಿಸುವ ಹಾದಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತವೆ.

ಈ 3ಎನ್​ಎಂ ಚಿಪ್​​ಗಳು ಸಾಮಾನ್ಯವಲ್ಲ. ಸ್ಮಾರ್ಟ್​ಫೋನ್​ಗಳಿಂದ ಹಿಡಿದು ಲ್ಯಾಪ್​ಟಾಪ್, ಉನ್ನತ ಸಾಮರ್ಥ್ಯದ ಕಂಪ್ಯೂಟರ್​ಗಳವರೆಗೆ ವಿಶ್ವದ ಅತ್ಯಂತ ಸುಧಾರಿತ ತಂತ್ರಜ್ಞಾನಗಳಿಗೆ ಶಕ್ತಿ ಕೊಡುವ ಮುಖ್ಯ ಭಾಗವಾಗಿವೆ. ಐಐಟಿ ಮದ್ರಾಸ್ ತನ್ನ ಶಕ್ತಿ ಯೋಜನೆಮೂಲಕ 7 ಎನ್​ಎಂ ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸೆಪ್ಟೆಂಬರ್​ನಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾನ್ಫರೆನ್ಸ್ ವೇಳೆ ಪ್ರಧಾನಿ ಮೋದಿ ಅವರಿಗೆ ವಿಕ್ರಮ್-32 ಬಿಟ್ ಚಿಪ್ ಅನ್ನು ಉಡುಗೆಯಾಗಿ ಕೊಡಲಾಯಿತು. ಇದು ಪೂರ್ಣ ದೇಶೀಯವಾಗಿ ನಿರ್ಮಿಸಿದ ಚಿಪ್.

ಈ ಅಂಕಿ ಅಂಶದ ಹಿಂದೆ ಜಾಗತಿಕ ರಾಜಕೀಯ ವಿಚಾರವೂ ಮಿಳಿತವಾಗಿದೆ. ವೈಚಾರಿಕ ತುಮುಲಗಳ ನಡುವೆ ಜಾಗತಿಕ ಸರಬರಾಜು ಸರಪಳಿಯು ಹರಿದು ಹಂಚಿಹೋಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯವು ಆರ್ಥಿಕ ಕ್ಷಮತೆಯನ್ನು ಬಿಂಬಿಸುತ್ತದೆ. 2025ರ ಒಂದೇ ವರ್ಷದಲ್ಲಿ ಭಾರತವು ಐದಕ್ಕೂ ಅಧಿಕ ಸೆಮಿಕಂಡಕ್ಟರ್ ಯೂನಿಟ್​ಗಳಿಗೆ ಅನುಮೋದನೆ ಕೊಟ್ಟಿತು. ಇದರೊಂದಿಗೆ ಆರು ರಾಜ್ಯಗಳಲ್ಲಿ ಒಟ್ಟು 1.60 ಲಕ್ಷ ಕೋಟಿ ರೂ ಹೂಡಿಕೆಯೊಂದಿಗೆ ಆರಂಭವಾಗಿರುವ ಮತ್ತು ಆರಂಭವಾಗಲಿರುವ ಸೆಮಿಕಂಡಕ್ಟರ್ ಘಟಕಗಳ ಸಂಖ್ಯೆ 10ಕ್ಕೆ ಏರಿದೆ. 2030ರೊಳಗೆ ಜಾಗತಿಕ ಸೆಮಿಕಂಡಕ್ಟರ್ ಅನುಭೋಗದಲ್ಲಿ ಶೇ. 10 ಪಾಲನ್ನು ಪಡೆಯುವ ದೊಡ್ಡ ಗುರಿ ಭಾರತದ್ದಾಗಿದೆ. ಇದು ಸಾಧ್ಯವಾದರೆ ಭಾರತವು ಸೆಮಿಕಂಡಕ್ಟರ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್​ನಲ್ಲಿ ಪ್ರಮುಖ ಕೇಂದ್ರವಾಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ

ವಿರಳ ಭೂ ಖನಿಜಗಳ ಯೋಜನೆ

ಗಗನಚುಂಬಿ ಕಟ್ಟಡಗಳನ್ನು ಕಟ್ಟಡಲು ಉಕ್ಕು ಎಷ್ಟು ಮುಖ್ಯವೋ, ಸೆಮಿಕಂಡಕ್ಟರ್​ಗಳನ್ನು ನಿರ್ಮಿಸಲು ಕ್ರಿಟಿಕಲ್ ಮಿನರಲ್​ಗಳು ಬಹಳ ಮುಖ್ಯ. ಈ ವಿರಳ ಭೂ ಖನಿಜಗಳು (Critical minerals) ಇಲ್ಲದಿದ್ದರೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಆಗಲೀ ಎಐ ಆಗಲೀ ಕಷ್ಟಸಾಧ್ಯ. ಡಿಜಿಟಲ್ ಭವಿಷ್ಯ ಮಸುಕಾಗುತ್ತದೆ. ಹೀಗಾಗಿ, ಮೋದಿ ಸರ್ಕಾರ 2025ರ ಜನವರಿಯಲ್ಲಿ ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್​ಗೆ ಚಾಲನೆ ನೀಡಿದರು. ಭಾರತಕ್ಕೆ ಅಗತ್ಯವಾಗಿರುವ ವಿರಳ ಭೂಖನಿಜಗಳನ್ನು ಗಳಿಸಲು, ಹಾಗೂ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಸ್​ವಾವಲಂಬನೆ ಸಾಧಿಸಲು 16,300 ಕೋಟಿ ರೂ ಬಜೆಟ್ ಇಟ್ಟು ಈ ಮಿಷನ್ ಆರಂಭಿಸಲಾಗಿದೆ.

ಈ ಖನಿಜಗಳು ದೇಶೀಯವಾಗಿಯೇ ಸಿಗುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದೆನಿಸಿದೆ. ಈ ಖನಿಜಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸಬಹುದು. 2024-25ರಲ್ಲಿ ಜಿಎಸ್​ಐ ಸಂಸ್ಥೆಯು ದೇಶಾದ್ಯಂತ 195 ಕಡೆ ಮುಖ್ಯ ಖನಿಜಗಳ ಅನ್ವೇಷಣೆ ಯೋಜನೆಗಳನ್ನು ಆರಂಭಿಸಿತು. 2025-26ರಲ್ಲಿ ಒಟ್ಟು 227 ಪ್ರಾಜೆಕ್ಟ್​ಗಳು ಕಾರ್ಯಗತಗೊಳ್ಳುತ್ತಿವೆ. 2025-26ರ ಬಜೆಟ್​ನಲ್ಲಿ ಮೋದಿ ಸರ್ಕಾರವು ಲಿಥಿಯಮ್ ಅಯಾನ್ ಬ್ಯಾಟರಿಯ ತ್ಯಾಜ್ಯವಾದ ಕೊಬಾಲ್ಟ್ ಪೌಂಡರ್, ಪಾದರಸ (ಲೆಡ್), ಜಿಂಕ್ ಹಾಗೂ ಇನ್ನೂ 12 ಇತರ ಮುಖ್ಯ ಖನಿಜನಗಳಿಗೆ ವಿನಾಯಿತಿ ನೀಡಿತು. ಇವುಗಳ ರೀಸೈಕ್ಲಿಂಗ್ ಮತ್ತು ಪ್ರೋಸಸಿಂಗ್​ಗೆ ಉತ್ತೇಜಿಸುವಂತಹ ಕ್ರಮಗಳನ್ನು ಕೈಗೊಂಡಿತು.

ಪುನಾವರ್ತಿತ ಆರ್ಥಿಕತೆಗೆ (Circular Economy) ಒತ್ತು

ಲಿಥಿಯಂ, ಕೊಬಾಲ್ಟ್, ನಿಕಲ್, ಹಾಗೂ ವಿವಿಧ ವಿರಳ ಭೂ ಖನಿಜಗಳಂತಹ ಕ್ರಿಟಿಕಲ್ ಮಿನರಲ್​ಗಳ ರೀಸೈಕ್ಲಿಂಗ್ ಅನ್ನು ದೇಶೀಯವಾಗಿ ಮಾಡುವ ಸಾಮರ್ಥ್ಯ ಬೆಳೆಸಲು ಸರ್ಕಾರ 1,500 ಕೋಟಿ ರೂ ಸ್ಕೀಮ್ ಆರಂಭಿಸಿದೆ. ಖನಿಜಗಳನ್ನು ಭೂಗರ್ಭದಿಂದ ಹೆಕ್ಕಿ ತೆರೆಯುವುದಕ್ಕಿಂತ ಹೆಚ್ಚಾಗಿ, ಸಂಪನ್ಮೂಲಗಳ ಮರುಬಳಕೆಗೆ ಒತ್ತು ಕೊಡುವುದು ಸರ್ಕಾರದ ಉದ್ದೇಶ. ಜಾಗತಿಕವಾಗಿ ಸ್ವಚ್ಛ ಇಂಧನಕ್ಕೆ ಆದ್ಯತೆ ಕೊಡಲಾಗುತ್ತಿದೆ. ಎಲೆಕ್ಟ್ರಾನಿಕ್ ತ್ಯಾಜ್ಯಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತವು ಸಂಪನ್ಮೂಲ ಮರುಬಳಕೆ ಮತ್ತು ಸರ್ಕ್ಯುಲಾರ್ ಮ್ಯಾನುಫ್ಯಾಕ್ಚರಿಂಗ್​ನ ಅಡ್ಡೆಯಾಗಲು ಹೊರಟಿದೆ.

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ: ಗಗನಯಾನದಿಂದ ಆಚೆ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಹೆಮ್ಮೆ ಪಡುವಂತೆ ಬೆಳೆಯುತ್ತಿದೆ. ಇಸ್ರೋ ಹಲವು ಮಹತ್ತರ ಮಿಷನ್​ಗಳನ್ನು ಸಾಧಿಸಿದೆ. ಜುಲೈ 30ರಂದು ನಾಸಾ ಮತ್ತು ಇಸ್ರೋ ಜಂಟಿಯಾಗಿ ನಿಸಾರ್ ಎನ್ನುವ ಅಪರ್ಚರ್ ರಾಡಾರ್ ಅನ್ನು ಉಡಾವಣೆ ಮಾಡಿದವು. ಜಿಎಸ್​ಎಲ್​ವಿ-ಎಫ್16 ರಾಕೆಟ್​ನಲ್ಲಿ ವಿಶ್ವದ ಅತ್ಯಂತ ಸುಧಾರಿತ ರಾಡಾರ್ ಸೆಟಿಲೈಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.

ಜುಲೈ ತಿಂಗಳಲ್ಲಿ ಭಾರತದ ಮಾನವ ಬಾಹ್ಯಾಕಾಶ ಪ್ರಯಾಣದ ಕನಸು ಈಡೇರುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಆಯಿತು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದರು. ಹಾಗೆ ಮಾಡಿದ ಮೊದಲ ಭಾರತೀಯ ಅವರು. ಸ್ಪೇಸ್ ಸ್ಟೇಷನ್​ನಲ್ಲಿ ಅವರು 18 ದಿನ ಇದ್ದು, ವಿವಿಧ ವೈಜ್ಞಾನಿಕ ಪ್ರಯೋಗ ಮತ್ತು ಸಂಶೋಧನೆಗಳಲ್ಲಿ ಪಾಲ್ಗೊಂಡರು. ಜಾಗತಿಕ ಸಂಶೋಧನೆ ತಂಡಗಳೊಂದಿಗೆ ಭಾರತೀಯ ವಿಜ್ಞಾನಿಗಳು ಜೊತೆಯಾಗಿ ಕೆಲಸ ಮಾಡಬಹುದು ಎಂಬುದು ನಿರೂಪಿತವಾಯಿತು.

ವರ್ಷದ ಕೊನೆಯಲ್ಲಿ, ನವೆಂಬರ್ 3ರಂದ ಇಸ್ರೋ ತನ್ನ ಎಲ್​ವಿಎಂ3-ಎಂ5 ರಾಕೆಟ್ ಬಳಸಿ ಸಿಎಂಎಸ್-03 ಉಪಗ್ರಹ ಉಡಾವಣೆ ಮಾಡಿತು. 4,400 ಕಿಲೋ ತೂಕದ ಇದು ಭಾರತದಿಂದ ಉಡಾವಣೆಯಾದ ಅತ್ಯಂತ ಭಾರತದ ಸೆಟಿಲೈಟ್ ಎನಿಸಿದೆ. ಅತ್ಯಂತ ತೂಕದ ವಸ್ತುವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಎಲ್​ವಿಎಂ3 ರಾಕೆಟ್​ಗೆ ಇರುವುದು ಸಾಬೀತಾಯಿತು.

ಈ ಡಿಸೆಂಬರ್​ನಲ್ಲಿ ಪ್ರಧಾನಿ ಮೋದಿ ಅವರು ಹೈದರಾಬಾದ್​ನಲ್ಲಿ ಸ್ಕೈರೂಟ್ ಏರೋಸ್ಪೇಸ್​ನ ಹೊಸ ಇನ್ಫೀನಿಟಿ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡಿದರು. ಹಾಗೆಯೇ, ಈಕಂಪನಿಯ ಮೊದಲ ಆರ್ಬಿಟಲ್ ರಾಕೆಟ್ ಎನಿಸಿದ ವಿಕ್ರಮ್-1 ಅನ್ನೂ ಅನಾವರಣಗೊಳಿಸಿದರು. 2020ರಲ್ಲಿ ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ನಿರ್ಧಾರ ಮಾಡಿದ್ದು ಸಖತ್ ಫಲ ಕೊಡುತ್ತಿದೆ. IN-SPACe ಅನ್ನು ಸರ್ಕಾರ ಸ್ಥಾಪಿಸಿದ್ದು, ಖಾಸಗಿ ಆವಿಷ್ಕಾರಗಳ ಒಂದು ಪ್ರಬಲ ಇಕೋಸಿಸ್ಟಂ ಬೆಳೆಯಲು ಸಹಾಯವಾಗುತ್ತಿದೆ. 330 ಕೈಗಾರಿಕೆಗಳು, ಸ್ಟಾರ್ಟಪ್​ಗಳು, ಎಂಎಸ್​ಎಂಇಗಳು ಬಾಹ್ಯಾಕಾಶ ಯೋಜನೆಗಳಿಗಾಗಿ IN-SPACe ಜೊತೆ ಕೈಜೋಡಿಸಿವೆ. ಭಾರತದ ಬಾಹ್ಯಾಕಾಶ ಉದ್ಯಮವು 2033ರೊಳಗೆ ಈಗಿರುವ 8.4 ಬಿಲಿಯನ್ ಡಾಲರ್​ನಿಂದ 44 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು

ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯಲ್ಲಿ ವೇಗದ ಪರಿವರ್ತನೆ

2047ರ ವಿಕಸಿತ ಭಾರತದ ಗುರಿಸಾಧನೆಗೆ ಆರ್ ಅಂಡ್ ಡಿಗೆ ಬಹಳ ಆದ್ಯತೆ ಕೊಡಲಾಗಿದೆ. ನವೆಂಬರ್ 3ರಂದು ರಿಸರ್ಚ್ ಡೆವಲಪ್ಮೆಂಟ್ ಅಂಡ್ ಇನ್ನೋವೇಶನ್ (ಆರ್​​ಡಿಐ) ಸ್ಕೀಮ್ ಫಂಡ್ ಅನ್ನು ಆರಂಭಿಸಲಾಯಿತು. ಭಾರತದ ಸಂಧೋಧನೆ ಮತ್ತು ಅಭಿವೃದ್ಧಿ ಇಕೋಸಿಸ್ಟಂ ಬಲಪಡಿಸುವ ಉದ್ದೇಶದ ಈ ಫಂಡ್​ಗೆ ಒಂದು ಲಕ್ಷ ಕೋಟಿ ರೂ ಮೀಸಲಿಡಲಾಗಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಕೋಸಿಸ್ಟಂ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಸ್ಕೀಮ್​ಗಳ ಏಕೀಕರಣಕ್ಕೆ ಅನುಮೋದನೆ ಕೊಟ್ಟರು. 10,579.84 ಕೋಟಿ ರೂ ಅನುದಾನದ ‘ವಿಜ್ಞಾನ್ ಧಾರ’ ಯೋಜನೆ ಇದು. ವಿಜ್ಞಾನಿಗಳಿಗೆ ತರಬೇತಿ ನೀಡುವುದು, ಲ್ಯಾಬ್ ಸೌಕರ್ಯ ವ್ಯವಸ್ಥೆ ಉನ್ನತೀಕರಿಸುವುದು, ವೈಜ್ಞಾನಿಕ ಆವಿಷ್ಕಾರಗಳು ಲ್ಯಾಬ್​ನಿಂದ ನಾಡಿಗೆ ಬೇಗ ವರ್ಗಾವಣೆಗೊಳುವುದು, ಈ ಅಂಶಗಳತ್ತ ಇದು ಗಮನ ಕೊಡುತ್ತದೆ. ಫಂಡಿಂಗ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಭಾರತದ ವೈಜ್ಞಾನಿಕ ಇಕೋಸಿಸ್ಟಂ ಹೆಚ್ಚು ಕ್ಷಮತೆಯಿಂದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವಂತೆ ಮಾಡುವುದು ಈ ಸ್ಕೀಮ್​ನ ಉದ್ದೇಶ.

ದೂರದೃಷ್ಟಿ ಗುಣದ ಪಿಎಂ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ನಾವೀನ್ಯತೆಗೆ ಪುಷ್ಟಿ ಸಿಕ್ಕಿದೆ, ದೇಶೀಯ ಸಾಮರ್ಥ್ಯ ಹೆಚ್ಚಿದೆ, ತಂತ್ರಜ್ಞಾನ ಸ್ವಾಲವಂಬನೆ ಬಲಗೊಂಡಿದೆ. ಭಾರತ ಈಗ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರಾಂತಿಯಲ್ಲಿ ಕೇವಲ ವೀಕ್ಷಕನಾಗಿ ಉಳಿಯದೇ ಮುಂಚೂಣಿಯಲ್ಲಿ ಸಾಗುತ್ತಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Sat, 27 December 25

ತಮಿಳುನಾಡಿನ ವೆಲ್ಲೂರಿನಲ್ಲಿ 200ಕ್ಕೂ ಹೆಚ್ಚು ಹೋರಿಗಳಿಂದ ಓಟ ಸ್ಪರ್ಧೆ
ತಮಿಳುನಾಡಿನ ವೆಲ್ಲೂರಿನಲ್ಲಿ 200ಕ್ಕೂ ಹೆಚ್ಚು ಹೋರಿಗಳಿಂದ ಓಟ ಸ್ಪರ್ಧೆ
ಕೊನೆಗೂ ಕೂಡಿಬಂತು ಟೈಮ್: ರಾಹುಲ್ ಭೇಟಿ ಮಾಡಿದ್ದಕ್ಕೆ ಡಿಕೆಶಿ ಫುಲ್ ಖುಷ್
ಕೊನೆಗೂ ಕೂಡಿಬಂತು ಟೈಮ್: ರಾಹುಲ್ ಭೇಟಿ ಮಾಡಿದ್ದಕ್ಕೆ ಡಿಕೆಶಿ ಫುಲ್ ಖುಷ್
ಗಿಲ್ಲಿ ಎಂದರೆ ಯಾಕೆ ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
ಗಿಲ್ಲಿ ಎಂದರೆ ಯಾಕೆ ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?
6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?
ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ