AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Internet Shutdown: ಜಗತ್ತಿನಲ್ಲೇ ಅತ್ಯಧಿಕ ಇಂಟರ್​ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ- ಇಲ್ಲಿದೆ ವಿವರ

ವಿವಿಧ ಕಾರಣಗಳಿಗಾಗಿ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ನಿಗದಿತ ಅವಧಿಗೆ ಇಂಟರ್​ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುತ್ತವೆ. ಜಾಗತಿಕವಾಗಿ ಕಳೆದ ವರ್ಷ 187 ಬಾರಿ ಇಂಟರ್​ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಈ ಪೈಕಿ ಭಾರತದಲ್ಲಿ ಅತ್ಯಧಿಕ ಇಂಟರ್​ನೆಟ್ ಶಟ್​ಡೌನ್ ವರದಿಯಾಗಿದೆ ಎಂದು ಅಕ್ಸೆಸ್ ನೌ ಹೇಳಿದೆ.

Internet Shutdown: ಜಗತ್ತಿನಲ್ಲೇ ಅತ್ಯಧಿಕ ಇಂಟರ್​ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ- ಇಲ್ಲಿದೆ ವಿವರ
ಇಂಟರ್​ನೆಟ್ ಸಂಪರ್ಕ ಸ್ಥಗಿತ
Follow us
ಕಿರಣ್​ ಐಜಿ
|

Updated on: Mar 01, 2023 | 3:56 PM

ಕಳೆದ ವರ್ಷ ಜಾಗತಿಕವಾಗಿ 187 ಬಾರಿ ಇಂಟರ್​ನೆಟ್ ಸಂಪರ್ಕ (Internet Connection) ಸ್ಥಗಿತಗೊಳಿಸಲಾಗಿದೆ. ಅದರಲ್ಲೂ 84 ಬಾರಿ ಇಂಟರ್​ನೆಟ್ ಶಟ್​ಡೌನ್ ಆಗಿರುವುದು ಭಾರತದಲ್ಲಿ ಎನ್ನುವುದು ಗಮನಾರ್ಹ. ಜತೆಗೆ, ಈ ಪೈಕಿ, ಜಮ್ಮು ಕಾಶ್ಮೀರದಲ್ಲೇ ಅತ್ಯಧಿಕ ಬಾರಿ ಅಂದರೆ, 49 ಸಂದರ್ಭದಲ್ಲಿ ಇಂಟರ್​ನೆಟ್ ಸಂಪರ್ಕ ನಿಲ್ಲಿಸಲಾಗಿದೆ ಎಂದು ಅಕ್ಸೆಸ್ ನೌ ವರದಿ ಹೇಳಿದೆ. ಜತೆಗೆ, ಸತತ ಐದನೇ ವರ್ಷ ಭಾರತ ಟಾಪ್ ಸ್ಥಾನದಲ್ಲಿದೆ ಎಂದು ಜಾಗತಿಕವಾಗಿ ಇಂಟರ್​ನೆಟ್ ಸೇವೆಗಳ ಸ್ಥಗಿತ, ನಿರ್ಬಂಧ ಕುರಿತು ಪರಿಶೀಲಿಸುವ ಅಕ್ಸೆಸ್ ನೌ ತಿಳಿಸಿದೆ.

ಭಾರತದಲ್ಲಿ ಇಂಟರ್​ನೆಟ್ ಶಟ್​ಡೌನ್ ಅಧಿಕ ಯಾಕೆ?

ನ್ಯೂಯಾರ್ಕ್ ಮೂಲದ ಅಕ್ಸೆಸ್ ನೌ (Access Now), ಜಾಗತಿಕವಾಗಿ ಇಂಟರ್​ನೆಟ್ ಸಂಪರ್ಕ ಕಡಿತವಾದರೆ, ಸರ್ಕಾರ ಮತ್ತು ಇಲಾಖೆಗಳು ಅಧಿಕೃತವಾಗಿ ನಿರ್ಬಂಧ ವಿಧಿಸಿದರೆ ಅದನ್ನು ವರದಿ ಮಾಡುತ್ತದೆ. ಈ ಪೈಕಿ, ಭಾರತದಲ್ಲೇ ಅತ್ಯಧಿಕ ಇಂಟರ್​ನೆಟ್ ಶಟ್​ಡೌನ್ ವರದಿಯಾಗಿದೆ. ಅಂದರೆ, ಜಮ್ಮು ಕಾಶ್ಮೀರದಲ್ಲಿ ಉಂಟಾಗುವ ಗಲಭೆ ತಡೆಗಟ್ಟಲು ಸರ್ಕಾರ, ಹಲವು ಸಂದರ್ಭದಲ್ಲಿ ಇಂಟರ್​ನೆಟ್ ನಿರ್ಬಂಧ ವಿಧಿಸುತ್ತದೆ. ಹೀಗಾಗಿ ಭಾರತ, ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿದೆ ಉಕ್ರೇನ್

ಭದ್ರತಾ ಕಾರಣಗಳಿಗೋಸ್ಕರ ಇಂಟರ್​ನೆಟ್ ನಿರ್ಬಂಧ ವಿಧಿಸಲಾಗಿದೆ ಎಂದು ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ. ಭಾರತ ಹೊರತುಪಡಿಸಿದರೆ, ಉಕ್ರೇನ್ ಎರಡನೇ ಸ್ಥಾನದಲ್ಲಿದೆ. ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಅಲ್ಲಿ ಕಳೆದ ವರ್ಷ ಕನಿಷ್ಠ 22 ಬಾರಿ ಇಂಟರ್​ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರನೇ ಸ್ಥಾನದಲ್ಲಿ ಇರಾನ್ ಇದ್ದು, ಅಲ್ಲಿ 18 ಬಾರಿ ಇಂಟರ್​ನೆಟ್ ಶಟ್​ಡೌನ್ ಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ