Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ

ನವೆಂಬರ್ 1, 1956 ರ ಏಕೀಕೃತ ನಾಡಿನ 67ನೇ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲಾಗುತ್ತಿದೆ. ಆದರೆ, ಇದು ಇಂದು ಒಂದೇದಿನ ಸೂರ್ಯಾಸ್ತದ ನಂತರ ಕನ್ನಡಿಗರು ಮೌನವಾಗಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗದಿರಲಿ ಎಂಬುದು ಆಶಯ.

Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ
Kannada Rajyotsava
Follow us
| Updated By: Vinay Bhat

Updated on:Nov 01, 2022 | 3:43 PM

ಕನ್ನಡ (Kannada) ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಪಂಕ್ತಿ. ಇಷ್ಟೆಲ್ಲ ಇದ್ದರೂ ಭಾಷಾ ಸಂವಹನಕ್ಕೆ ಹೋಲಿಕೆ ಮಾಡಿದರೆ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ವಿರಳ. ವಿಶ್ವ ಮಾನವ ಕುವೆಂಪು ಹೇಳಿದಂತೆ ಎಲ್ಲಾದರೂ ಇರು ಎಂತಾದರೂ ಇರು ನೀನು ಕನ್ನಡದ ಕಂದನಾಗಿರು. ಬಹುಶಃ ಇಂದಿಗೆ ಈ ಮಾತು ಅಪ್ರಸ್ತುತ. ಇತರೆ ಬಾಷಾ ಪ್ರಭಾವದಿಂದಾಗಿ ಕನ್ನಡದ ಅಚ್ಚ ಸೂಗಡಿನ ಭಾಷೆಗಳು ನೆಲಕಚ್ಚಿದೆ ಎಂದರೆ ತಪ್ಪಾಗಲಾರದು. ನವೆಂಬರ್ 1, 1956 ರ ಏಕೀಕೃತ ನಾಡಿನ 67ನೇ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲಾಗುತ್ತಿದೆ. ಆದರೆ, ಇದು ಇಂದು ಒಂದೇದಿನ ಸೂರ್ಯಾಸ್ತದ ನಂತರ ಕನ್ನಡಿಗರು ಮೌನವಾಗಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗದಿರಲಿ ಎಂಬುದು ಆಶಯ.

ಇಡೀ ಜಗತ್ತಿನಲ್ಲಿ 2000 ಕ್ಕಿಂತಲೂ ಅಧಿಕ ಭಾಷೆಗಳಿವೆ ಆದರೆ ಒಂದು ಮಗು ಕನಿಷ್ಟ ಅಂದರೂ ಮಾತೃಭಾಷೆ, ವ್ಯವಹಾರಿಕ ಭಾಷೆಯಾಗಿ ಒಂದಿಷ್ಟು ಭಾಷೆಯನ್ನು ಅರಿಯುತ್ತದೆ. ನಿಜಕ್ಕೂ ಭಾಷೆ ಇರುವುದೇ ಭಾವನೆಯ ಅಭಿವ್ಯಕ್ತಿಗಾಗಿ, ಸಂವಹನ ಮಾದ್ಯಮಕ್ಕಾಗಿ. ಕಾಕತಾಳೀಯ ಎಂಬಂತೆ ನಮ್ಮಲ್ಲಿ ಆದಿವಾಸಿ ಸಮುದಾಯಗಳು ಇಂದಿಗೂ ಭಾಷೆ ಅರಿಯದೆ ಸಮಾಜದ ಮುನ್ನಲೆಗೆ ಬರುವಲ್ಲಿ ಸೋತಿವೆ. ಕನ್ನಡವನ್ನು ಮೊದಲು ಆಡಳಿತ ಭಾಷೆಯನ್ನಾಗಿ ಮಾಡಿದ್ದೇ ಕದಂಬರು. ಹಾಗದರೆ ಕನ್ನಡ ಇತಿಹಾಸದ ಬಗ್ಗೆ ಬೇರೆ ದಾಖಲೆಗಳು ತಡಕಾಡುವ ಅವಸರ ಅನಗತ್ಯ. ರಾಷ್ಟ್ರೀಯ ಭಾಷಾ ನೀತಿಯೂ ಮುಂದೂದು ದಿನ ಪ್ರಾದೇಶಿಕ ಭಾಷಾ ಸಂಪತ್ತಿಗೆ ಹಾನಿ ತರುವ ಸಾಧ್ಯತೆಗಳಿವೆ.

ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?:

ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ಏನು ಗೂಗಲಿಸಿದರೂ ಅದು ಹೋಗುತ್ತಿದ್ದುದು ಕನ್ನಡ ವಿಕಿಪಿಡಿಯಾದ ಪುಟಗಳಿಗೇ. ಹಾಗಂತ ಅಲ್ಲಿ ಇಂದುಕೂಡ ಮಾಹಿತಿಯ ಮಹಾಸಂಗ್ರಹವಿದೆ ಎಂದಲ್ಲ. ಅಂತರಜಾಲಾಡಿಗಳ ಗೂಗಲಾಟಕ್ಕೆ ಸಿಗುವಂತಿದ್ದ ಕನ್ನಡ ಪಠ್ಯ ಕನ್ನಡ ವಿಕಿಪಿಡಿಯಾದಲ್ಲಷ್ಟೇ ಇತ್ತು. ಸದ್ಯ ಹಿಂದಿ, ತಮಿಳು, ತೆಲುಗು, ಮಲೆಯಾಳ, ಮರಾಠಿ ಸೇರಿದಂತೆ ದೇಶದ 21 ಭಾಷೆಗಳಲ್ಲಿ ವಿಕಿಪಿಡಿಯಾ ಲಭ್ಯವಿದೆ. ಆದರೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಗತಿ ಉತ್ತಮವಾಗಿಲ್ಲ ಎಂಬುದು ಒಪ್ಪಿಕೊಳ್ಳಬೇಕು.

ಕನ್ನಡ ವಿಕಿಪಿಡಿಯಾ 2004ರ ಜೂನ್ ತಿಂಗಳಲ್ಲಿ ಆರಂಭವಾಯಿತು. ಆದರೆ, ಅಧಿಕೃತವಾಗಿ ಜನರ ಬಳಕೆಗೆ ಮುಕ್ತವಾಗಿದ್ದು 2004ರ ಸೆಪ್ಟೆಂಬರ್‌ನಲ್ಲಿ. ಈಗ ಕನ್ನಡ ವಿಕಿಪಿಡಿಯದ ಒಡಲಲ್ಲಿ ಅನೇಕ ಲೇಖನಗಳಿವೆ. ಆದರೆ, ಈ ಪೈಕಿ ಅನೇಕ ಲೇಖನಗಳು ಗೂಗಲ್ ಟ್ರಾನ್ಸಲೇಟ್ ಮಾದರಿಯಲ್ಲಿದ್ದು, ಓದುಗರಿಗೆ ಪರಿಪೂರ್ಣ ಮಾಹಿತಿ ನೀಡುತ್ತಿಲ್ಲ. ಅದರಲ್ಲಿರುವ ಪದಗಳು, ಸಾಲುಗಳು ಗಟ್ಟಿತನವನ್ನು ಹೊಂದಿಲ್ಲ ಎಂದೇ ಹೇಳಬಹುದು.

ಇಂದು ನಾವಷ್ಟೇ ಅಲ್ಲ ಕೋಟ್ಯಾಂತರ ಮಂದಿ ವಿಕಿಪಿಡಿಯಾದಿಂದ ಮಾಹಿತಿಯನ್ನು ಪಡೆದುಕೊಳ್ಳುವವರಿದ್ದಾರೆ. ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ವಿಕಿಪಿಡಿಯಾದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶಕ್ಕೆ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು. ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಅನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪಿಡಿಯಾ ಇನ್ನಷ್ಟು ಬೆಳಯಬೇಕು.

-ಹರೀಶ್ ಭಟ್. ಕೂವೆತ್ತಂಡ

Published On - 10:49 am, Tue, 1 November 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ