Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಮೊಬೈಲ್ ಕಳ್ಳತನವಾದರೆ ಮೊದಲು ಈ 3 ಕೆಲಸಗಳನ್ನು ಮಾಡಿ

ಮೊಬೈಲ್ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರ ಇದಕ್ಕಾಗಿ ಅನೇಕ ಕಾರ್ಯತಂತ್ರ ರೂಪಿಸಿದ್ದರೂ ಕಳ್ಳತನದ ಪ್ರಕರಣ ಕಡಿಮೆ ಆಗುತ್ತಿಲ್ಲ. ಫೋನ್ ಕಳೆದು ಹೋದಾಗ ಏನು ಮಾಡಬೇಕು ಎಂದು ದೋಚುವುದಿಲ್ಲ. ನಿಮ್ಮ ಫೋನ್ ಎಲ್ಲಿಯಾದರೂ ಬಿದ್ದರೆ ಅಥವಾ ಕಳೆದುಹೋದರೆ ತಕ್ಷಣ ಮಾಡಬೇಕಾದ ಕೆಲವು ಕೆಲಸಗಳು ಏನು ಎಂಬುದನ್ನು ಇಲ್ಲಿ ನೀಡಲಾಗಿದೆ.

Tech Tips: ನಿಮ್ಮ ಮೊಬೈಲ್ ಕಳ್ಳತನವಾದರೆ ಮೊದಲು ಈ 3 ಕೆಲಸಗಳನ್ನು ಮಾಡಿ
Mobile Stolen
Follow us
Vinay Bhat
|

Updated on: Mar 25, 2025 | 12:21 PM

ಬೆಂಗಳೂರು (ಮಾ. 23): ಇಂದು ಮೊಬೈಲ್ (Mobile) ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ, ಸ್ಮಾರ್ಟ್​ಫೋನ್ ಇಲ್ಲದೆ ಅನೇಕ ಕೆಲಸ ಅಪೂರ್ಣ ಎನ್ನಬಹುದು. ಹೆಚ್ಚಿನ ಕಡೆಗಳಲ್ಲಿ ಮೊಬೈಲ್ ಬಳಕೆ ಬೇಕೇ ಬೇಕು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳು ಸಿಗುವುದರಿಂದ ಒಬ್ಬರು ಎರಡೆರಡು ಫೋನ್​ಗಳನ್ನು ಬಳಸುತ್ತಾರೆ. ಇದರ ಜೊತೆಗೆ ಮೊಬೈಲ್ ಕಳ್ಳತನದ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಸರ್ಕಾರ ಇದಕ್ಕಾಗಿ ಅನೇಕ ಕಾರ್ಯತಂತ್ರ ರೂಪಿಸಿದ್ದರೂ ಕಳ್ಳತನದ ಪ್ರಕರಣ ಕಡಿಮೆ ಆಗುತ್ತಿಲ್ಲ. ಫೋನ್ ಕಳೆದು ಹೋದಾಗ ಏನು ಮಾಡಬೇಕು ಎಂದು ದೋಚುವುದಿಲ್ಲ. ನಿಮ್ಮ ಫೋನ್ ಎಲ್ಲಿಯಾದರೂ ಬಿದ್ದರೆ ಅಥವಾ ಕಳೆದುಹೋದರೆ ತಕ್ಷಣ ಮಾಡಬೇಕಾದ ಕೆಲವು ಕೆಲಸಗಳು ಏನು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸ್ಮಾರ್ಟ್​ಫೋನ್​ಗಳು ಕಾಣೆಯಾದಾಗ ತಕ್ಷಣ ಹೀಗೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಂಭವವಿರುತ್ತದೆ. ಇಂದಿನ ಕಾಲದಲ್ಲಿ ಮೊಬೈಲ್‌ಗಳಲ್ಲಿ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಇತರ ಹಲವು ಹಣಕಾಸು ಸೇವೆಗಳು ಆನ್ ಆಗಿರುತ್ತದೆ. ಇದರಿಂದ ಮೊಬೈಲ್ ಕಳ್ಳತನವಾದರೆ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಮೊಬೈಲ್ ಕಳ್ಳತನವಾದರೆ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ.

ನಿಮ್ಮ ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಿ: ಮೊದಲು, ನಿಮ್ಮ ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ. ಇದಕ್ಕಾಗಿ ನೀವು ನಿಮ್ಮ ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು ಅಥವಾ 14422 ಸಂಖ್ಯೆಯನ್ನು ಡಯಲ್ ಮಾಡಬಹುದು.

ಇದನ್ನೂ ಓದಿ
Image
MOBILE: ಮೊಬೈಲ್​ನ ಫುಲ್ ಫಾರ್ಮ್ ಏನು ಎಂಬುದು ನಿಮಗೆ ಗೊತ್ತೇ?
Image
ಮನೆಯ ದಪ್ಪ ಗೋಡೆಗಳು ವೈಫೈ ಸಿಗ್ನಲ್ ಕಡಿಮೆ ಮಾಡುತ್ತಾ?, ಹೀಗೆ ವೇಗ ಹೆಚ್ಚಿಸಿ
Image
38 ಕೋಟಿ ಬಳಕೆದಾರರಿಗೆ ಬಂಪರ್ ಪ್ಲ್ಯಾನ್ ತಂದ ಏರ್‌ಟೆಲ್: ಇದರ ಪ್ರಯೋಜನ ನೋಡಿ
Image
ಚಾರ್ಜ್ ಫುಲ್ ಮಾಡಿ ತೆಗೆದ ತಕ್ಷಣವೇ ಬ್ಯಾಟರಿ ಖಾಲಿಯಾಗುತ್ತದೆಯೇ?

ಎಫ್‌ಐಆರ್ ದಾಖಲಿಸಿ: ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ. ಎಫ್‌ಐಆರ್‌ನಲ್ಲಿ ಫೋನ್ IMEI ಸಂಖ್ಯೆ, ಇತರ ಮಾಹಿತಿಯನ್ನು ಒದಗಿಸಬೇಕು.

ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಲಾಕ್ ಮಾಡಿ ಮತ್ತು ಡೇಟಾವನ್ನು ತೆರವುಗೊಳಿಸಿ: ನೀವು ಫೋನ್​ನಲ್ಲಿ ‘ಫೈಂಡ್ ಮೈ ಡಿವೈಸ್’ ಅಥವಾ ‘ಫೈಂಡ್ ಮೈ ಫೋನ್’ ವೈಶಿಷ್ಟ್ಯವನ್ನು ಆನ್ ಮಾಡಿದ್ದರೆ, ರಿಮೋಟ್ ಆಗಿ ಲಾಕ್ ಮಾಡಲು ಮತ್ತು ನಿಮ್ಮ ಡೇಟಾವನ್ನು ಅಳಿಸಲು ನೀವು ಅದನ್ನು ಬಳಸಬಹುದು.

MOBILE: ಮೊಬೈಲ್​ನ ಫುಲ್ ಫಾರ್ಮ್ ಏನು ಎಂಬುದು ನಿಮಗೆ ಗೊತ್ತೇ?

  • ನೀವು ಮುಂಚಿತವಾಗಿ ಫೋನ್‌ನ IMEI ಸಂಖ್ಯೆ ಮತ್ತು ಇತರ ಪ್ರಮುಖ ಮಾಹಿತಿಯನ್ನು ಬರೆದಿಟ್ಟುಕೊಂಡರೆ ಉತ್ತಮ.
  • ನಿಮ್ಮ ಫೋನ್‌ನಲ್ಲಿ “ಫೈಂಡ್ ಮೈ ಫೋನ್” ವೈಶಿಷ್ಟ್ಯವನ್ನು ಆನ್ ಮಾಡಿ.
  • ಪಾಸ್ವರ್ಡ್ ಅಥವಾ ಪಿನ್ ಮೂಲಕ ನಿಮ್ಮ ಫೋನ್ ಅನ್ನು ರಕ್ಷಿಸಿ.
  • ಈ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಫೋನ್ ಅನ್ನು ಕಳ್ಳತನದಿಂದ ರಕ್ಷಿಸಬಹುದು ಮತ್ತು ನಿಮ್ಮ ವೈಯಕ್ತಿಕ ವಿವರ ತಿಳಿದುಕೊಳ್ಳುವುದನ್ನು ತಡೆಯಬಹುದು. ನಿಮ್ಮ ಕದ್ದ ಫೋನ್ ಅನ್ನು ಪತ್ತೆ ಮಾಡಲು ಇದು ಸಹಾಯ ಮಾಡುತ್ತಿದೆ.

UPI ಅನ್ನು ಹೇಗೆ ಆಫ್ ಮಾಡುವುದು?:

ಗೂಗಲ್ ಪೇ ಯುಪಿಐ ಐಡಿಯನ್ನು ನಿರ್ಬಂಧಿಸಲು ಮೊದಲನೆಯದಾಗಿ ಯಾವುದೇ ಫೋನ್‌ನಿಂದ 18004190157 ಗೆ ಡಯಲ್ ಮಾಡಿ. ನಂತರ, ಖಾತೆಯನ್ನು ನಿರ್ಬಂಧಿಸುವ ಬಗ್ಗೆ ಮಾಹಿತಿಯನ್ನು ಗ್ರಾಹಕ ಸೇವಾ ಕೇಂದ್ರಕ್ಕೆ ನೀಡಬೇಕಾಗುತ್ತದೆ. ಫೋನ್ ಪೇ ಯುಪಿಐ ಐಡಿಯನ್ನು ನಿರ್ಬಂಧಿಲು ಮೊದಲು 02268727374 ಅಥವಾ 08068727374 ಸಂಖ್ಯೆಗೆ ಕರೆ ಮಾಡಿ. ಯುಪಿಐ ಐಡಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ವಿರುದ್ಧ ದೂರು ದಾಖಲಿಸಿ. ನೀವು iOS ಬಳಕೆದಾರರಾಗಿದ್ದರೆ, Find My App ಮತ್ತು ಇತರ ಆಪಲ್ ಅಧಿಕೃತ ಪರಿಕರಗಳನ್ನು ಬಳಸಿಕೊಂಡು ಎಲ್ಲಾ ಡೇಟಾವನ್ನು ಅಳಿಸುವ ಮೂಲಕ ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ!
ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ!
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!