Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್​ಆ್ಯಪ್ ಚಾಟ್​ನಲ್ಲಿ ಪಿನ್ ಮಾಡುವುದು ಹೇಗೆ?

WhatsApp Tips and Tricks: ವಾಟ್ಸ್​ಆ್ಯಪ್​​ನಲ್ಲಿ ಚಿಕ್ಕದೊಂದು ಟ್ರಿಕ್ ಉಪಯೋಗಿಸಿ ನೀವು ಹೆಚ್ಚಾಗಿ ಚಾಟ್ ಮಾಡುವಂತಹ ಕಾಂಟೆಕ್ಟ್ ಅನ್ನು ಟಾಪ್​ನಲ್ಲಿ ಕಾಣಿಸುವಂತೆ ಮಾಡಬಹುದು.

WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್​ಆ್ಯಪ್ ಚಾಟ್​ನಲ್ಲಿ ಪಿನ್ ಮಾಡುವುದು ಹೇಗೆ?
ವಾಟ್ಸಾಪ್
Follow us
TV9 Web
| Updated By: Vinay Bhat

Updated on: Jul 25, 2022 | 1:11 PM

ಯಾರಿಗಾದರು ತಕ್ಷಣ ಮೆಸೇಜ್ ಮಾಡಬೇಕು ಅಥವಾ ಫೋಟೋ, ವಿಡಿಯೋವನ್ನು ಕಳುಹಿಸಬೇಕು ಎಂದಾಗ ನಮಗೆ ಕೂಡಲೇ ನೆನಪಾಗುವುದು ವಾಟ್ಸ್​ಆ್ಯಪ್ (WhatsApp). ಅದು ಆಂಡ್ರಾಯ್ಡ್ ಆಗಿರಬಹುದು ಅಥವಾ ಐಫೋನ್ ಬಳಕೆದಾರರಿಗೆ ಆಗಿರಬಹುದು. ವಾಟ್ಸ್​ಆ್ಯಪ್ ಅನ್ನು ಚಾಟ್ ಮಾಡಲು, ಫೋಟೋ (Photo), ವಿಡಿಯೋ ಅಥವಾ ಡಾಕ್ಯುಮೆಂಟ್ ಕಳುಹಿಸಲು, ಸ್ಟೇಟಸ್ ಹಂಚಿಕೊಳ್ಳಲು ಮುಖ್ಯವಾಗಿ ಉಪಯೋಗಿಸುತ್ತಾರೆ. ಕೆಲವರಿಗೆ ವಾಟ್ಸ್​ಆ್ಯಪ್​ನಲ್ಲಿ ಅನೇಕ ಜನರು ಸಂಪರ್ಕ ಇರುತ್ತದೆ. ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ (Message) ಬರುತ್ತಾ ಇದ್ದರೆ ನಮಗೆ ಅಗತ್ಯವಿರುವ ಮುಖ್ಯವಾದ ಕಾಂಟೆಕ್ಟ್​ಗಳು ಕೆಳಗಡೆ ಸಾಗಿ ಅವರನ್ನು ಹುಡುಕುವುದೇ ದೊಡ್ಡ ಸವಾಲಾಗುತ್ತದೆ. ಈ ಸಂದರ್ಭ ಚಿಕ್ಕದೊಂದು ಟ್ರಿಕ್ ಉಪಯೋಗಿಸಿ ನೀವು ಹೆಚ್ಚಾಗಿ ಚಾಟ್ ಮಾಡುವಂತಹ ಕಾಂಟೆಕ್ಟ್ ಅನ್ನು ಟಾಪ್​ನಲ್ಲಿ ಕಾಣಿಸುವಂತೆ ಮಾಡಬಹುದು.

ಹೌದು, ವಾಟ್ಸ್​ಆ್ಯಪ್​ನಲ್ಲಿ ಪಿನ್ ಚಾಟ್ ಎಂಬ ವಿಶೇಷ ಫೀಚರ್ ಇದೆ. ಇದರ ಮೂಲಕ ನಿಮಗೆ ಅಗತ್ಯವಿರುವ ಕಾಂಟೆಕ್ಟ್ ಅನ್ನು ಯಾವಾಗಲು ಮೊದಲಿಗೆ ಸಿಗುವಂತೆ ಮಾಡಬಹುದು. ಇದು ವಾಟ್ಸ್​ಆ್ಯಪ್ ತೆರೆದ ಕೂಡಲೇ ಮೇಲ್ಬಾಗದಲ್ಲಿ ಕಾಣಿಸುತ್ತದೆ. ಈ ಪಿನ್ ಚಾಟ್ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿದೆ.

ಈ ಆಯ್ಕೆಯನ್ನು ಬಳಸಲು ಮೊದಲು ನೀವು ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಅಗತ್ಯವಿರುವ ಚಾಟ್ ಅನ್ನು 2 ಸೆಕೆಂಡ್ ಹೋಲ್ಡ್ ಮಾಡಿಕೊಟ್ಟುಕೊಳ್ಳಿ. ನಂತರ ಮೇಲೆ ಕಾಣುವ ಪಿನ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿ. ಅಂತೆಯೆ ಐಫೋನ್ ಬಳಕೆದಾರರು ಚಾಟ್ ಅನ್ನು ಸ್ವೈಪ್ ಮಾಡುವ ಮೂಲಕ ಈ ಫೀಚರ್​ನ ಪ್ರಯೋಜನ ಪಡೆಯಬಹುದು. ಇನ್ನು ಅನ್​ಪಿನ್ ಮಾಡಲು ಅದೇರೀತಿ ಮೆಸೇಜ್ ಅನ್ನು ಕೆಲ ಸೆಕೆಂಡ್ ಒತ್ತಿ ಹಿಡಿದು ಅನ್​ಪಿನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ
Image
Best Camera Phone: ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ಇಲ್ಲಿದೆ ನೋಡಿ
Image
Oppo Reno 8: ಐಫೋನ್ 12 ಡಿಸೈನ್ ಹೊಂದಿರುವ ಬೆಸ್ಟ್​​ ಕ್ಯಾಮೆರಾ ಫೋನ್ ಒಪ್ಪೋ ರೆನೋ 8 ಇಂದು ಮಾರಾಟ
Image
BSNL: ಬಿಎಸ್​ಎನ್​ಎಲ್​ನ 100 ರೂ. ಒಳಗಿನ ಈ ಮೂರು ಪ್ಲಾನ್​ನಲ್ಲಿದೆ ಬಂಪರ್ ಆಫರ್
Image
WhatsApp: ಆನ್​ಲೈನ್ ಸ್ಟೇಟಸ್ ಹೈಡ್ ಮಾಡುವ ಆಯ್ಕೆ: ವಾಟ್ಸ್​ಆ್ಯಪ್ ಮುಂದಿನ ಅಪ್ಡೇಟ್​ನಲ್ಲಿದೆ ವಿಶೇಷ ಫೀಚರ್

ಸ್ಟಾರ್ ಮೆಸೇಜ್:

ವಾಟ್ಸ್​ಆ್ಯಪ್​​ ಸ್ಟಾರ್ ಮೆಸೆಜ್ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಈ ಆಯ್ಕೆಗಾಗಿ ನೀವು ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಬೇಕು. ಈಗ ಆ ಮೆಸೇಜ್ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಮೆಸೇಜ್ ಆಯ್ಕೆ ಮಾಡಬಹುದು. ಒಮ್ಮೆ ಬೇಕಾದ ಮೆಸೇಜ್ ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ಸ್ಟಾರ್ ಐಕಾನ್ ಅನ್ನು ಕಾಣುತ್ತೀರಿ. ಹೀಗೆ ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.

ಅಂತೆಯೆ ವಾಟ್ಸ್​ಆ್ಯಪ್​​ನಲ್ಲಿ ನೀವು ಸ್ಟಾರ್‌ ಮಾರ್ಕ್‌ ಮಾಡಿದ ಮೆಸೆಜ್‌ ಮತ್ತೆ ವೀಕ್ಷಿಸಲು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರುಡಾಟ್ ಮೆನುವನ್ನು ಟ್ಯಾಪ್ ಮಾಡಿ. ಡ್ರಾಪ್ಡೌನ್ ಮೆನುವಿನಲ್ಲಿ ನೀವು “ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು” ಆಯ್ಕೆಯನ್ನು ನೋಡುತ್ತೀರಿ. ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.

ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್