Rishabh Pant
ಅಂಡರ್ 19 ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್, 2017 ರಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದರು. ನಂತರ ಒಂದು ವರ್ಷದ ಬಳಿಕ ಅಂದರೆ 2018 ರಲ್ಲಿ ತಂಡದ ಪರ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲೂ ಮೊದಲ ಪಂದ್ಯವನ್ನಾಡಿದರು. ಅಂದಿನಿಂದ ಪಂತ್ ಟೀಂ ಇಂಡಿಯಾದ ಖಾಯಂ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ 33 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 43.67ರ ಸರಾಸರಿಯಲ್ಲಿ 2271 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ ಹನ್ನೊಂದು ಅರ್ಧಶತಕವೂ ಸೇರಿದೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ. ಪಂತ್ ಏಕದಿನ ಕ್ರಿಕೆಟ್ನಲ್ಲಿ 30 ಪಂದ್ಯಗಳಿಂದ 865 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್ನಲ್ಲಿ 66 ಪಂದ್ಯಗಳನ್ನಾಡಿ 987 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲೂ ಕಮಾಲ್ ಮಾಡಿರುವ ಪಂತ್, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಾಗವಾಗಿದ್ದು, ಇದುವರೆಗೆ 98 ಐಪಿಎಲ್ ಪಂದ್ಯಗಳನ್ನಾಡಿರುವ ಪಂತ್, ಒಟ್ಟು 2818 ರನ್ ಕಲೆಹಾಕಿದ್ದಾರೆ.
IND vs AFG: ರಿಷಭ್ ಪಂತ್ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ
Rishabh Pant: ಅಫ್ಘಾನಿಸ್ತಾನ ಸರಣಿಗಾಗಿ ಬಿಸಿಸಿಐ ಘೋಷಿಸಿದ ತಂಡಗಳಲ್ಲಿ ರಿಷಭ್ ಪಂತ್ಗೆ ಡಬಲ್ ಶಾಕ್ ನೀಡಲಾಗಿದೆ. ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ ಮಾತ್ರವಲ್ಲದೆ, ಟೆಸ್ಟ್ ತಂಡದ ಉಪನಾಯಕತ್ವದಿಂದಲೂ ತೆಗೆದುಹಾಕಲಾಗಿದೆ. ಪಂತ್ ಬದಲಿಗೆ ಕೆಎಲ್ ರಾಹುಲ್ ಟೆಸ್ಟ್ ಉಪನಾಯಕನಾದರೆ, ಇಶಾನ್ ಕಿಶನ್ ಏಕದಿನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪಂತ್ ಟೆಸ್ಟ್ ಆಟಗಾರನಾಗಿದ್ದರೂ, ಏಕದಿನದಲ್ಲಿ ಬೇರೆ ಆಯ್ಕೆಗಳಿವೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.
- pruthvi Shankar
- Updated on: May 20, 2026
- 3:35 pm
IPL 2026: ಲಕ್ನೋ ತಂಡದ ನಾಯಕ ರಿಷಭ್ ಪಂತ್ಗೆ ದಂಡದ ಬರೆ ಎಳೆದ ಬಿಸಿಸಿಐ
Rishabh Pant fine IPL 2026: ಐಪಿಎಲ್ 2026 ರ 59 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಗೆಲುವು ಲಕ್ನೋ ತಂಡಕ್ಕೆ ಪ್ಲೇಆಫ್ ಲಾಭ ತರದಿದ್ದರೂ, ನಾಯಕ ರಿಷಭ್ ಪಂತ್ಗೆ ನಿಧಾನಗತಿಯ ಓವರ್ ಕಾರಣಕ್ಕಾಗಿ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. ಈ ಆವೃತ್ತಿಯಲ್ಲಿ ನಿಧಾನಗತಿ ಓವರ್ಗಾಗಿ ದಂಡಕ್ಕೊಳಗಾದ ಹಲವು ನಾಯಕರಲ್ಲಿ ಪಂತ್ ಕೂಡ ಸೇರಿದ್ದಾರೆ.
- pruthvi Shankar
- Updated on: May 16, 2026
- 4:23 pm
LSG vs RCB: ಆರ್ಸಿಬಿ ಸೋಲಿಗೆ ಕಾರಣವಾಗಿದ್ದು ಕೊನೆಯಲ್ಲಿ ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರ
Digvesh Rathi Last Over: ಲಕ್ನೋ ತಂಡವು ಆರ್ಸಿಬಿಯನ್ನು 20 ರನ್ಗಳಿಂದ ಸೋಲಿಸಿ ಪ್ಲೇಆಫ್ ರೇಸ್ನ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಆದಾಗ್ಯೂ, ಈ ಗೆಲುವಿನ ಶ್ರೇಯಸ್ಸಿನ ಗಮನಾರ್ಹ ಭಾಗವು ರಿಷಭ್ ಪಂತ್ಗೆ ಸಲ್ಲುತ್ತದೆ. ಕೊನೆಯ ಓವರ್ನಲ್ಲಿ ಎಲ್ಎಸ್ಜಿ ಕ್ಯಾಪ್ಟ್ ತೆಗೆದುಕೊಂಡ ಒಂದು ನಿರ್ಧಾರ ಇಡೀ ಫಲಿತಾಂಶವನ್ನೇ ಬದಲಾಯಿಸಿತು.
- Sainandha P
- Updated on: May 8, 2026
- 7:42 am
LSG vs RCB: ಮುಂದಿನ ಸೀಸನ್ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್
Rishabh Pant LSG Statement: 2026ರ ಐಪಿಎಲ್ನಲ್ಲಿ ಲಕ್ನೋ ಸೂಪರ್ಜೈಂಟ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು, ಉಳಿದ ಏಳರಲ್ಲಿ ಸೋತಿದೆ. ನಾಯಕ ರಿಷಭ್ ಪಂತ್ ತಂಡದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡು, ಮುಂದಿನ ಆವೃತ್ತಿಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. LSG ಲೀಗ್ ಹಂತದಲ್ಲೇ ತನ್ನ ಪಯಣ ಮುಗಿಸುವ ಲಕ್ಷಣಗಳು ಸ್ಪಷ್ಟವಾಗಿವೆ.
- pruthvi Shankar
- Updated on: May 7, 2026
- 9:37 pm
Rishabh Pant: ಹೆಚ್ಚುತ್ತಿದೆ ವಿವಾದ.. ಲಕ್ನೋ ತಂಡದ ನಾಯಕ ಸ್ಥಾನದಿಂದ ಪಂತ್ ವಜಾ?, ಮುಂದಿನ ಕ್ಯಾಪ್ಟರ್ ಯಾರು?
IPL 2026, LSG: ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ವೈಫಲ್ಯದ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂದು ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಮಾರ್ಕ್ರಾಮ್ ಅವರಿಗೆ ಕ್ಯಾಪ್ಟನ್ ಜವಾಬ್ದಾರಿಯನ್ನು ನೀಡಬೇಕೆಂಬ ಸಲಹೆಗಳಿವೆ. ಈ ಋತುವಿನಲ್ಲಿ ಪಂತ್ 9 ಪಂದ್ಯಗಳಲ್ಲಿ ಕೇವಲ 204 ರನ್ ಗಳಿಸಿದ್ದಾರಷ್ಟೆ.
- Sainandha P
- Updated on: May 5, 2026
- 12:57 pm
MI vs LSG: ಪೋಸ್ಟ್ ಮ್ಯಾಚ್ನಲ್ಲಿ ಉಲ್ಟಾ ಹೊಡೆದ ರಿಷಭ್ ಪಂತ್: ಸೋಲಿಗೆ ಬೌಲರ್ಸ್ ಅಲ್ಲ ಬ್ಯಾಟರ್ಸ್ ಕಾರಣವಂತೆ
Rishabh Pant post-match presentation Statement: ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 228 ರನ್ ಗಳಿಸಿದ್ದರೂ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ರಿಷಭ್ ಪಂತ್ ತಂಡದ ಸೋಲಿಗೆ ಬ್ಯಾಟರ್ಸ್ ಕಾರಣ ಎಂಬ ಹೇಳಿಕೆ ನೀಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಾಯಕ ಪಂತ್ ಸೋಲಿಗೆ ಬ್ಯಾಟ್ಸ್ಮನ್ಗಳನ್ನೇ ದೂಷಿಸಿದರೆ, ಬೌಲರ್ಗಳನ್ನು ಕೊಂಡಾಡಿದ್ದಾರೆ.
- Sainandha P
- Updated on: May 5, 2026
- 8:45 am
ಸೋಲಿಗೆ ಕಾರಣವೇನು? ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದ ರಿಷಭ್ ಪಂತ್!
IPL 2026 LSG vs KKR: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 20 ಓವರ್ಗಳಲ್ಲಿ 155 ರನ್ ಬಾರಿಸಿ ಪಂದ್ಯ ಟೈ ಗೊಳಿಸಿದ್ದರು. ಇದಾದ ಬಳಿಕ ನಡೆದ ಸೂಪರ್ ಓವರ್ನಲ್ಲಿ ಕೆಕೆಆರ್ ತಂಡ ಜಯ ಸಾಧಿಸಿದೆ.
- Zahir Yusuf
- Updated on: Apr 27, 2026
- 9:30 am
ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವಣ ವಿಡಿಯೋ ವೈರಲ್
IPL 2026 LSG: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್-19ರ ಮೊದಲಾರ್ಧದಲ್ಲಿ 7 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಈ ಗೆಲುವುಗಳ ಮೂಲಕ ಪ್ರಸ್ತುತ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅಂದರೆ ಎಲ್ಎಸ್ಜಿ ತಂಡವು ಪ್ಲೇಆಫ್ಗೇರಲು ದ್ವಿತೀಯಾರ್ಧದಲ್ಲಿ ಪ್ರಚಂಡ ಪ್ರದರ್ಶನ ನೀಡಲೇಬೇಕು.
- Zahir Yusuf
- Updated on: Apr 23, 2026
- 11:52 am
RCB vs LSG: ರಿಷಭ್ ಪಂತ್ ಮೊಣಕೈಗೆ ಗಂಭೀರ ಗಾಯ ಮಾಡಿದ ಹೇಜಲ್ವುಡ್ ಬೆಂಕಿ ಚೆಂಡು
Rishabh Pant Suffers Elbow Injury: ಐಪಿಎಲ್ 2026 ರಲ್ಲಿ LSG vs RCB ಪಂದ್ಯದಲ್ಲಿ ಲಕ್ನೋ ನಾಯಕ ರಿಷಭ್ ಪಂತ್ ಮೊಣಕೈಗೆ ಗಂಭೀರ ಗಾಯ ಮಾಡಿಕೊಂಡು ರಿಟೈರ್ಡ್ ಹರ್ಟ್ ಆಗಿದ್ದಾರೆ. ಜೋಶ್ ಹೇಲ್ವುಡ್ ಎಸೆದ ಚೆಂಡು ಬಡಿದು ತೀವ್ರ ನೋವಿನಿಂದ ನರಳಿದ ಪಂತ್, ಕೇವಲ 3 ಎಸೆತಗಳನ್ನು ಎದುರಿಸಿ ಮೈದಾನ ತೊರೆದರು. ಅವರ ನೋವಿನಿಂದಾಗಿ ಮತ್ತೆ ಬ್ಯಾಟಿಂಗ್ಗೆ ಇಳಿಯುವ ಸಾಧ್ಯತೆ ಕಡಿಮೆ. ಈ ಘಟನೆ ಲಕ್ನೋ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
- pruthvi Shankar
- Updated on: Apr 15, 2026
- 8:35 pm
LSG vs DC: ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಲಕ್ನೋ ‘ಸೂಪರ್ ಸ್ಟಾರ್ಸ್’
Lucknow Super Giants Stumble in IPL 2026:ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದರೂ, ನಾಯಕ ರಿಷಭ್ ಪಂತ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಬೇಗನೆ ವಿಕೆಟ್ ಒಪ್ಪಿಸಿದರು. ಮೊದಲ 10 ಓವರ್ಗಳಲ್ಲಿ 71 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಲಕ್ನೋ ತಂಡ ಸಂಕಷ್ಟಕ್ಕೆ ಸಿಲುಕಿದೆ, ನಿರೀಕ್ಷೆ ಸುಳ್ಳಾಗಿದೆ.
- pruthvi Shankar
- Updated on: Apr 1, 2026
- 8:45 pm
IND vs NZ: ಮತ್ತೆ ಗಾಯಗೊಂಡ ರಿಷಬ್ ಪಂತ್; ಅಭ್ಯಾಸದಿಂದ ಅರ್ಧಕ್ಕೆ ವಾಪಸ್
Rishabh Pant injury update: ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅಭ್ಯಾಸದ ವೇಳೆ ಸೊಂಟಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಪಂತ್ ಅವರ ಗಾಯದ ತೀವ್ರತೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲವಾದರೂ, ಇದು ತಂಡದ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.
- pruthvi Shankar
- Updated on: Jan 10, 2026
- 5:18 pm
IND vs SA: ಮೊದಲ ಏಕದಿನದಲ್ಲಿ ಪಂತ್, ರುತುರಾಜ್ ಆಡ್ತಾರಾ? ನಾಯಕ ರಾಹುಲ್ ಹೇಳಿದ್ದಿದು
India vs South Africa ODI: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್, ರಾಂಚಿ ಪಂದ್ಯಕ್ಕೂ ಮುನ್ನ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ತಾನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ತಿಳಿಸಿದ ರಾಹುಲ್, ರಿಷಭ್ ಪಂತ್ ವಿಕೆಟ್ಕೀಪರ್ ಆಗಿ ಆಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ರುತುರಾಜ್ ಗಾಯಕ್ವಾಡ್ಗೆ ಸರಣಿಯಲ್ಲಿ ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದ್ದು, ರೋಹಿತ್ ಮತ್ತು ಕೊಹ್ಲಿ ಕಮ್ಬ್ಯಾಕ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
- pruthvi Shankar
- Updated on: Nov 29, 2025
- 5:34 pm