AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant

Rishabh Pant

ಅಂಡರ್ 19 ವಿಶ್ವಕಪ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, 2017 ರಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದರು. ನಂತರ ಒಂದು ವರ್ಷದ ಬಳಿಕ ಅಂದರೆ 2018 ರಲ್ಲಿ ತಂಡದ ಪರ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲೂ ಮೊದಲ ಪಂದ್ಯವನ್ನಾಡಿದರು. ಅಂದಿನಿಂದ ಪಂತ್ ಟೀಂ ಇಂಡಿಯಾದ ಖಾಯಂ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ 33 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 43.67ರ ಸರಾಸರಿಯಲ್ಲಿ 2271 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ ಹನ್ನೊಂದು ಅರ್ಧಶತಕವೂ ಸೇರಿದೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ. ಪಂತ್ ಏಕದಿನ ಕ್ರಿಕೆಟ್​​ನಲ್ಲಿ 30 ಪಂದ್ಯಗಳಿಂದ 865 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್​​ನಲ್ಲಿ 66 ಪಂದ್ಯಗಳನ್ನಾಡಿ 987 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲೂ ಕಮಾಲ್ ಮಾಡಿರುವ ಪಂತ್, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಾಗವಾಗಿದ್ದು, ಇದುವರೆಗೆ 98 ಐಪಿಎಲ್ ಪಂದ್ಯಗಳನ್ನಾಡಿರುವ ಪಂತ್, ಒಟ್ಟು 2818 ರನ್ ಕಲೆಹಾಕಿದ್ದಾರೆ.

ಇನ್ನೂ ಹೆಚ್ಚು ಓದಿ

ICC Test Rankings: ರಿಷಭ್ ಪಂತ್​ಗೆ ಮುಂಬಡ್ತಿ; ಟಾಪ್ 10 ರಿಂದ ಜೈಸ್ವಾಲ್ ಔಟ್

ICC Test Rankings: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ರಿಷಭ್ ಪಂತ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಲಂಕಾ ವಿರುದ್ಧದ ಪ್ರದರ್ಶನದಿಂದ 711 ರೇಟಿಂಗ್‌ ಪಾಯಿಂಟ್‌ನೊಂದಿಗೆ 7ನೇ ಸ್ಥಾನಕ್ಕೇರಿದ್ದು, ಶುಭ್​ಮನ್ ಗಿಲ್ ಅವರನ್ನು ಸರಿಗಟ್ಟಿದ್ದಾರೆ. ಬೌಲರ್​ಗಳ ರ್ಯಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಕಳೆದುಕೊಂಡಿದ್ದು, ಮಿಚೆಲ್ ಸ್ಟಾರ್ಕ್ ನಂ.1 ಆಗಿದ್ದಾರೆ. ಯಶಸ್ವಿ ಜೈಸ್ವಾಲ್ ಟಾಪ್ 10 ರಿಂದ ಹೊರಬಿದ್ದಿದ್ದಾರೆ.

IND vs SL: ರಿಷಭ್ ಪಂತ್ ಗಾಯದ ಬಗ್ಗೆ ಮಾಹಿತಿ ನೀಡಿದ ಬೌಲಿಂಗ್ ಕೋಚ್

Rishabh Pant injury update: ಕೊಲಂಬೊದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಭುಜದ ಗಾಯದಿಂದಾಗಿ ಮೂರನೇ ದಿನ ಆಡಲಿಲ್ಲ. ಅವರ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ನಿರ್ವಹಿಸಿದರು. ನಾಲ್ಕನೇ ದಿನ ಪಂತ್ ಆಡುವ ಭರವಸೆ ಇದೆ. ವೈರಲ್ ಜ್ವರದಿಂದ ಕುಲ್ದೀಪ್ ಯಾದವ್ ಅಲಭ್ಯರಾಗಿದ್ದಾರೆ.

IND vs SL: ಡಬ್ಲ್ಯೂಟಿಸಿಯಲ್ಲಿ ಅತ್ಯಧಿಕ ರನ್; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್

Rishabh Pant WTC record: ರಿಷಭ್ ಪಂತ್ ಕೊಲಂಬೊ ಟೆಸ್ಟ್‌ನಲ್ಲಿ 63 ರನ್ ಗಳಿಸುವ ಮೂಲಕ ಭಾರತದ ಪರ WTC ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಶುಭ್​ಮನ್ ಗಿಲ್ ಅವರ ದಾಖಲೆಯನ್ನು ಮುರಿದು 2948 ರನ್ ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಗಿಲ್ 76 ಇನ್ನಿಂಗ್ಸ್‌ಗಳಲ್ಲಿ 2917 ರನ್ ಗಳಿಸಿದ್ದರೆ, ಪಂತ್ ಕೇವಲ 74 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

IND vs SL: ಕೈಗೆ ಗಂಭೀರ ಗಾಯ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್

Rishabh Pant Injury: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಸರಣಿ ಆರಂಭಕ್ಕೂ ಮುನ್ನ ಬುಮ್ರಾ, ಸಾಯಿ ಸುದರ್ಶನ್ ಹೊರಬಿದ್ದ ಬೆನ್ನಲ್ಲೇ, ಕೊಲಂಬೊ ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್ ತಮ್ಮ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಶಾರ್ಟ್ ಬಾಲ್‌ಗೆ ಪೆಟ್ಟು ಬಿದ್ದು ರಿಟೈರ್ಡ್ ಹರ್ಟ್ ಆದ ಪಂತ್, ತಂಡದ ಆತಂಕ ಹೆಚ್ಚಿಸಿದ್ದಾರೆ. ಪಂತ್ ಮತ್ತೆ ಬ್ಯಾಟಿಂಗ್‌ಗೆ ಇಳಿಯುವ ಬಗ್ಗೆಯೂ ಅನಿಶ್ಚಿತತೆ ಇದೆ.

IND vs SL: ಸಿಕ್ಸರ್‌ಗಳ ಶತಕ; ವಿಶ್ವ ದಾಖಲೆ ನಿರ್ಮಿಸಿದ ರಿಷಭ್ ಪಂತ್

Rishabh Pant 100 sixes: ಗಾಲೆ ಟೆಸ್ಟ್‌ನಲ್ಲಿ ರಿಷಭ್ ಪಂತ್ 100 ಸಿಕ್ಸರ್‌ಗಳ ದಾಖಲೆ ಬರೆದಿದ್ದಾರೆ. ಕೇವಲ 89 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇದು ಆಡಮ್ ಗಿಲ್‌ಕ್ರಿಸ್ಟ್ ದಾಖಲೆಯನ್ನು ಮುರಿದಿದೆ. ಪಂತ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಕೂಡ ಹೌದು, ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮೀರಿಸಿದ್ದಾರೆ.

IND vs SL: ಕಾಲಿಸ್ ದಾಖಲೆ ಮುರಿದು ಗೇಲ್ ದಾಖಲೆಯನ್ನು ಸರಿಗಟ್ಟಿದ ಪಂತ್

Rishabh Pant Test sixes record: ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದೆ. ಮೊದಲ ದಿನವೇ ದೇವದತ್ ಪಡಿಕ್ಕಲ್ ಶತಕ ಸಿಡಿಸಿದರೆ, ರಿಷಭ್ ಪಂತ್ 98 ಸಿಕ್ಸರ್‌ ಬಾರಿಸುವ ಮೂಲಕ ಜಾಕ್ವೆಸ್ ಕಾಲ್ಲಿಸ್ ದಾಖಲೆ ಮುರಿದರು. ಸದ್ಯ ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ದಾಖಲೆ ಸರಿಗಟ್ಟಿರುವ ಪಂತ್, ಕೇವಲ ಎರಡು ಸಿಕ್ಸರ್‌ಗಳೊಂದಿಗೆ 100 ಸಿಕ್ಸರ್‌ಗಳ ಕ್ಲಬ್ ಸೇರುವ ಮೊದಲ ಭಾರತೀಯನಾಗುವ ಐತಿಹಾಸಿಕ ಸಾಧನೆಗೆ ಸಿದ್ಧರಾಗಿದ್ದಾರೆ.

IND vs SL: 22 ಎಸೆತಗಳ ನಂತರ ಖಾತೆ ತೆರೆದು ಬಾಲ್ ಕಳೆದು ಹಾಕಿದ ಪಂತ್

Rishabh Pant's New Batting Mantra: ರಿಷಭ್ ಪಂತ್ ಅವರ ಹೊಡಿಬಡಿ ಆಟ ಬದಲಾಗಿದೆ. ಶ್ರೀಲಂಕಾ ಅಭ್ಯಾಸ ಪಂದ್ಯದಲ್ಲಿ ಪಂತ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು, 22 ಎಸೆತಗಳಲ್ಲಿ ಖಾತೆ ತೆರೆದು ಆಶ್ಚರ್ಯ ಮೂಡಿಸಿದರು. ಮುಂಬರುವ ಟೆಸ್ಟ್ ಸರಣಿಗೆ, ವಿಶೇಷವಾಗಿ ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಈ ಹೊಸ ವಿಧಾನ ಅನುಸರಿಸಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವನ್ನು ಸೂಚಿಸುತ್ತದೆ, ತಂಡದ ಅಗತ್ಯಗಳಿಗೆ ತಕ್ಕಂತೆ ತಮ್ಮ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

Rishabh Pant: ಅತಿ ಹೆಚ್ಚು ತೆರಿಗೆ ಪಾವತಿ; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್

Rishabh Pant Uttarakhand's Top Taxpayer: ರಿಷಭ್ ಪಂತ್ ಪ್ರಸ್ತುತ ಭಾರತ ಟೆಸ್ಟ್ ತಂಡದಲ್ಲಿ ಮಾತ್ರ ಕಾಣಿಸಿಕೊಂಡರೂ, ಅವರ ಆದಾಯ ಹೆಚ್ಚುತ್ತಲೇ ಇದೆ. ಅವರು 2025-26ರ ಹಣಕಾಸು ವರ್ಷದಲ್ಲಿ ₹23.84 ಕೋಟಿ ಆದಾಯ ತೆರಿಗೆ ಪಾವತಿಸಿ ಉತ್ತರಾಖಂಡದ ಅತಿ ಹೆಚ್ಚು ತೆರಿಗೆದಾರರಾಗಿದ್ದಾರೆ. ಬಿಸಿಸಿಐ ಒಪ್ಪಂದ, ಐಪಿಎಲ್, ಪಂದ್ಯ ಶುಲ್ಕ ಹಾಗೂ ಜಾಹೀರಾತುಗಳು ಅವರ ಆದಾಯದ ಪ್ರಮುಖ ಮೂಲಗಳಾಗಿವೆ. ಅವರ ನಿವ್ವಳ ಮೌಲ್ಯ ₹150 ಕೋಟಿ ಎಂದು ಅಂದಾಜಿಸಲಾಗಿದೆ.

15 ವರ್ಷ, 6 ಟ್ರೋಫಿ; ಟ್ರೋಲಿಗರಿಗೆ ಆಹಾರವಾದ ಸಂಜೀವ್ ಗೋಯೆಂಕಾ

Rishabh Pant: ಲಕ್ನೋ ಸೂಪರ್​ಜೈಂಟ್ಸ್ ತಂಡದಲ್ಲಿ ದಾಖಲೆಯ 27 ಕೋಟಿ ರೂ.ಗೆ ಸೇರಿದ್ದ ರಿಷಭ್ ಪಂತ್, ಕೇವಲ ಎರಡೇ ವರ್ಷಕ್ಕೆ ತಂಡದಿಂದ ಹೊರಬಿದ್ದಿದ್ದಾರೆ. ನಾಯಕನಾಗಿ ಮತ್ತು ಆಟಗಾರನಾಗಿ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. 2025ರ ಮೆಗಾ ಹರಾಜಿನ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ, ಪಂತ್‌ರನ್ನು ಧೋನಿ-ರೋಹಿತ್‌ಗೆ ಹೋಲಿಸಿ ಭವಿಷ್ಯದ ನಾಯಕ ಎಂದು ಹೊಗಳಿದ್ದರು. ಈಗ ಅವರ ಈ ಯೂ-ಟರ್ನ್ ನೆಟ್ಟಿಗರ ಟ್ರೋಲಿಂಗ್‌ಗೆ ಕಾರಣವಾಗಿದೆ.

ಲಕ್ನೋ ಫ್ರಾಂಚೈಸಿಗೆ ಮೂರೇ ಪದಗಳಲ್ಲಿ ವಿದಾಯ ಹೇಳಿದ ರಿಷಭ್ ಪಂತ್..!

Rishabh Pant IPL: 2026ರ ಐಪಿಎಲ್ ನಂತರ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಈ ಟ್ರೇಡ್‌ನಲ್ಲಿ ಕುಲ್ದೀಪ್ ಯಾದವ್ ಲಕ್ನೋಗೆ ತೆರಳಿದ್ದಾರೆ. ಪಂತ್ ವೇತನ 27 ಕೋಟಿಯಿಂದ 15 ಕೋಟಿಗೆ ಇಳಿದಿದೆ. ನಾಯಕತ್ವ ರಾಜೀನಾಮೆಗೆ ಫ್ರಾಂಚೈಸಿಯೇ ಒತ್ತಡ ಹೇರಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ಪಂತ್ ಕೇವಲ ಮೂರು ಪದಗಳಲ್ಲಿ ಲಕ್ನೋ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

IPL 2027: ಮರಳಿ ಡೆಲ್ಲಿಗೆ ರಿಷಭ್ ಪಂತ್, ಲಕ್ನೋ ಸೇರಲಿದ್ದಾರೆ ಕುಲ್ದೀಪ್..!

IPL 2027: 2027ರ ಐಪಿಎಲ್ ಮಾರ್ಚ್ 10ರಿಂದ ಆರಂಭವಾಗಲಿದೆ. ಈ ನಡುವೆ ಇಬ್ಬರು ಸ್ಟಾರ್ ಆಟಗಾರರ ತಂಡ ಬದಲಾವಣೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಲಕ್ನೋ ಸೂಪರ್‌ಜೈಂಟ್ಸ್‌ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುವ ಸಾಧ್ಯತೆ ಇದೆ. ಡೆಲ್ಲಿಯ ಕುಲದೀಪ್ ಯಾದವ್ ಲಕ್ನೋ ಸೇರಬಹುದು. ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗುವ ವದಂತಿಗಳೂ ಇವೆ.

IND vs AFG: ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌; ದಿಗ್ಗಜರನ್ನು ಹಿಂದಿಕ್ಕಿದ ರಿಷಭ್ ಪಂತ್

Rishabh Pant: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ರಿಷಭ್ ಪಂತ್ 81 ರನ್ ಗಳಿಸಿ ಮಿಂಚಿದರು. 2026ರ ಐಪಿಎಲ್ ನಿರಾಶೆಯ ನಂತರ ಇದು ಮಹತ್ವದ ಇನ್ನಿಂಗ್ಸ್. ಪಂತ್ ಇದೀಗ ಟೆಸ್ಟ್‌ನಲ್ಲಿ 97 ಸಿಕ್ಸರ್‌ಗಳೊಂದಿಗೆ ಜಾಕ್ವೆಸ್ ಕಾಲಿಸ್ ದಾಖಲೆ ಸರಿಗಟ್ಟಿದ್ದಾರೆ. 50ನೇ ಟೆಸ್ಟ್ ಆಡುವ ಮೂಲಕ ಭಾರತದ ಮೂರನೇ ವಿಕೆಟ್ ಕೀಪರ್ ಎನಿಸಿದ್ದಾರೆ. 100 ಸಿಕ್ಸರ್‌ಗಳ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ
ಉಜ್ಬೇಕಿಸ್ತಾನ್ ತಲುಪಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಉಜ್ಬೇಕಿಸ್ತಾನ್ ತಲುಪಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಜಿಬಿಎ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾದ ಸಚಿವ ಕೃಷ್ಣಬೈರೇಗೌಡ
ಜಿಬಿಎ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾದ ಸಚಿವ ಕೃಷ್ಣಬೈರೇಗೌಡ