AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಯುಎಸ್​ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್​ನಲ್ಲಿ​ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ

ಯುಎಸ್​ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್​ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್​ ಆಗಿದೆ.

Viral Video: ಯುಎಸ್​ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್​ನಲ್ಲಿ​ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ
ವಯಲಿನ್​ ನುಡಿಸುತ್ತಿರುವ ಬಾಲಕಿ
TV9 Web
| Edited By: |

Updated on:Feb 27, 2022 | 2:02 PM

Share

ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಗಡಿಯ ನಿರ್ಬಂಧವಿಲ್ಲ. ಈ ವಿಡಿಯೋ ಅದನ್ನು ಸಾಬೀತುಪಡಿಸಿದೆ. ಯುಎಸ್​ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್​ (violin)ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್​ ಆಗಿದೆ. ಪಂಜಾಬಿ ಗಾಯಕ ಹಾರ್ಡಿ ಸಂಧು(Harddy Sandhu) ಹಾಡಿದ ಬಿಜಲಿ ಬಿಜಲಿ ಹಾಡನ್ನು ಬಾಲಕಿ ವೈಯಲಿನ್​ನಲ್ಲಿ ನುಡಿಸಿದ್ದಾಳೆ.  ಇನ್ಸ್ಟಾಗ್ರಾಮ್​ ಮತ್ತು ಯುಟ್ಯೂಬ್​ನಲ್ಲಿ ಹಂಚಿಕೊಳ್ಳ;ಲಾದ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಕರೋಲಿನಾ ಪ್ರೊಟ್ಸೆಂಕೊ(Karolina Protsenko )ಎನ್ನುವ  ಬಾಲಕಿ ಈ ಹಾಡನ್ನು ನುಡಿಸಿದ್ದಾಳೆ.

View this post on Instagram

A post shared by Raag Fusion ? (@raagfusion)

ವಿಡಿಯೋದಲ್ಲಿ ಆಕೆ ಎಂಜಾಯ್​ ಮಾಡಿಕೊಂಡು ವಯಲಿನ್​ಅನ್ನು ನುಡಿಸುವುದನ್ನು ಕಾಣಬಹುದು. ಸುತ್ತಲು ನಿಂತ ಜನ ಆಕೆ ಶ್ರದ್ಧೆಯಿಂದ ನುಡಿಸುತ್ತಿರುವುದನ್ನು ನೋಡಿ ದಂಗಾಗಿದ್ದಾರೆ. ಆಕೆಯ ಕೈಚಳಕ ಎಲ್ಲರನ್ನು ಮೋಡಿ ಮಾಡಿದಂತಿದೆ.  ಸದ್ಯ ವೈರಲ್​ ಆಗಿರುವ ವಿಡಿಯೋ 5 ಲಕ್ಷದಷ್ಟು ಲೈಕ್ಸ್​ಗಳಿಸಿದೆ. ಭಾರತದ ಈ ಪಂಜಾಬಿ ಗೀತೆ ಪಿಟೀಲಿನಲ್ಲಿ ಸುಮಧುರವಾಗಿ ಧ್ವನಿಸುತ್ತದೆ! ಧನ್ಯವಾದಗಳು ಕರೋಲಿನಾ, ನಿಮ್ಮ ಪ್ರತಿಭೆಯನ್ನು ಮುಂದುವರಿಸಿ ಮತ್ತು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಯೂಟ್ಯೂಬ್‌ನಲ್ಲಿ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

13 ವರ್ಷದ ಕರೋಲಿನಾ  ತನ್ನ ಪಿಟೀಲಿನಲ್ಲಿ ಅನೇಕ ಜನಪ್ರಿಯ ಹಾಡುಗಳ ನುಡಿಸಿದ್ದಾಳೆ. ಯುಎಸ್​ನ ಬೀದಿಗಳಲ್ಲಿ ಪ್ರದರ್ಶಿಸುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾಳೆ. ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾಳೆ.

ಇದನ್ನೂ ಓದಿ:

‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್​

Published On - 1:59 pm, Sun, 27 February 22

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ