Viral Video: ‘ಸಾಮಾನ್ಯರ ಕೈಗೆಟುಕಲೆಂದೇ ನನ್ನ ಕಲಾಕೃತಿಗಳನ್ನು ಕಡಿಮೆ ಬೆಲೆಗೆ ಮಾರುತ್ತೇನೆ’

Artist : ಒಂದು ಕಲಾಕೃತಿಗೆ ರೂ. 50ರಿಂದ ರೂ. 100 ಮಾತ್ರ. 80ರ ಹರೆಯದ ಈ ಕಲಾವಿದರು ತಮ್ಮ ವಿಶೇಷ ಮಗನೊಂದಿಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ನೆಟ್ಟಿಗರು ಉಚಿತವಾಗಿ ಇವರ ಕಲಾಪ್ರದರ್ಶನ ಏರ್ಪಡಿಸಲು ಆಲೋಚಿಸುತ್ತಿದ್ದಾರೆ.

Viral Video: 'ಸಾಮಾನ್ಯರ ಕೈಗೆಟುಕಲೆಂದೇ ನನ್ನ ಕಲಾಕೃತಿಗಳನ್ನು ಕಡಿಮೆ ಬೆಲೆಗೆ ಮಾರುತ್ತೇನೆ'
ಕೊಲ್ಕತ್ತೆಯಲ್ಲಿ ತನ್ನ ವಿಶೇಷ ಮಗನೊಂದಿಗೆ ಸ್ವಾವಲಂಬಿ ಜೀವನ ಸಾಗಿಸುತ್ತಿರುವ 80 ವರ್ಷದ ಕಲಾವಿದ
Follow us
|

Updated on:Jul 11, 2023 | 1:09 PM

Kolkata : ಕೊಲ್ಕತ್ತೆಯ ಗೋಲ್​ಪಾರ್ಕ್​ನ ಆ್ಯಕ್ಸಿಸ್​ ಬ್ಯಾಂಕ್​ (Axis Bank) ಬಳಿ 80ರ ಹರೆಯದ ಈ ಕಲಾವಿದರು  ಬುಧವಾರ ಮತ್ತು ಶನಿವಾರದಂದು ತಮ್ಮ ಕಲಾಕೃತಿಗಳೊಂದಿಗೆ ಹೀಗೆ ಕುಳಿತಿರುತ್ತಾರೆ. ಮನೆಯಲ್ಲಿ ಅವರು ಮತ್ತು ಅವರ ‘ವಿಶೇಷ’ ಮಗ ಮಾತ್ರ. ಇಬ್ಬರ ತುತ್ತಿನ ಚೀಲ ತುಂಬಲು ವಯೋವೃದ್ಧ ಕಲಾವಿದರು ಈ ಕಲೆಯನ್ನೇ ನೆಚ್ಚಿಕೊಂಡಿದ್ದಾರೆ. ಇವರು ಬೀದಿಬದಿ ಕಲಾವಿದರು ಮಾಡುವ ಪೇಂಟಿಂಗ್​ ನೋಡಿ ತಮ್ಮಷ್ಟಕ್ಕೆ ತಾವು ಈ ಕಲೆಯಲ್ಲಿ ತೊಡಗಿಕೊಂಡು ಇದನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಇವರ ಕಲಾಕೃತಿಗಳ ಬೆಲೆ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಲಭ್ಯ. ಒಂದು ಕಲಾಕೃತಿಯ ಬೆಲೆ ಕೇವಲ ರೂ. 50ರಿಂದ 100 ಮಾತ್ರ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Aradhana Chatterjee (@aradhana.chatterjee)

ಆರಾಧನಾ ಚಟರ್ಜೀ (Aradhana Chatterjee) ಎಂಬ ಯೂಟ್ಯೂಬರ್​ ಕ್ಯಾಮೆರಾ ಕಣ್ಣಿಗೆ ಈ ಕಲಾವಿದರು ಬಿದ್ದಿದ್ದಾರೆ. ಈತನಕ ಈ ವಿಡಿಯೋ ಅನ್ನು ನಾಲ್ಕು ಮಿಲಿಯನ್​ ಜನರು ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಅನ್ನು ಮೆಚ್ಚಿದ್ದಾರೆ. ಅನೇಕರು ಇವರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳುತ್ತಿದ್ದಾರೆ. ನಾವು ಇವರ ಪ್ರದರ್ಶನವನ್ನು ಏರ್ಪಡಿಸಬೇಕು, ಆ ಮೂಲಕ ಇವರಿಗೆ ಆರ್ಥಿಕ ಸಹಾಯವನ್ನು ಒದಗಿಸಬೇಕು ಎಂದು ಕಲಾವಿದರ ವಿವರಗಳಿಗಾಗಿ ಆರಾಧನಾ ಅವರಿಗೆ ಕೇಳುತ್ತಿದ್ದಾರೆ.

ಇದನ್ನೂ ಓದಿ : Viral Video: ಒಂಟಿಗಾಲಿನಲ್ಲಿ ತಪಸ್ಸು ಮಾಡುತ್ತಿರುವ ಮಾರ್ಜಾಲ ಮತ್ತು ಕೋಳಿ, ಮುಂದೆ?

ಈ ವಯೋವೃದ್ಧ ಕಲಾವಿದರ ಉಳಿದ ಮಕ್ಕಳು ಇವರನ್ನು ತೊರೆದಿದ್ದಾರೆ. ಆದರೆ ಇವರು ತಮ್ಮ ವಿಶೇಷ ಮಗನನ್ನು ದೂರ ಮಾಡಲಿಲ್ಲ. ಮಕ್ಕಳಿಗಾಗಿ ಹೆತ್ತವರು ತ್ಯಾಗ ಮಾಡುತ್ತಾರೆ, ಆದರೆ ಮಕ್ಕಳು ಹೀಗೆ ತಂದೆತಾಯಿಯರನ್ನು ಈ ವಯಸ್ಸಿನಲ್ಲಿ ಕಷ್ಟಕ್ಕೆ ತಳ್ಳಬಾರದು ಎಂದು ಒಬ್ಬರು ಹೇಳಿದ್ದಾರೆ. ಭಾರತದ ಪ್ರತೀ ರಾಜ್ಯ, ಹಳ್ಳಿ, ನಗರಗಳಲ್ಲಿರುವ ಹಿರಿಯ ಕಲಾವಿದರಿಗಾಗಿ ಉಚಿತ ಪ್ರದರ್ಶನವನ್ನು ಏರ್ಪಡಿಸಬೇಕು, ಇಂಥ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಇವರೆಲ್ಲ ಒಂದುಗೂಡುವಂತೆ ಮಾಡಬೇಕು. ಧ್ವನಿ ಇಲ್ಲದ ಇವರಿಗೆ ಬೆಂಬಲಿಸಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಫ್ರೀಸ್ಟೈಲ್​ ಫುಟ್​ಬಾಲ್​ನಲ್ಲಿ ಲಿವ್​ ಕುಕ್​ ಗಿನ್ನೀಸ್ ವಿಶ್ವ​ ದಾಖಲೆ

ಮುಂದಿನ ಬಾರಿ ಕೊಲ್ಕತ್ತೆಗೆ ಹೋದಾಗ ಖಂಡಿತ ನಾನು ಈ ಚಿತ್ರಗಳನ್ನು ವೈಯಕ್ತಕಕ್ಕಾಗಿ ಖರೀದಿಸುತ್ತೇನೆ, ಆದರೆ ದಾನಕ್ಕಾಗಿ ಅಲ್ಲ ಎಂದಿದ್ದಾರೆ ಒಬ್ಬರು. ಇವರ ಈ ವರ್ಣಚಿತ್ರಗಳನ್ನು ದೆಹಲಿಗೆ ರವಾನಿಸಲು ಒಂದು ಐಡಿಯಾ ಇದೆ! ಮದುವೆಯಲ್ಲಿ ಕೊಡುವ ಸಿಹಿಪೊಟ್ಟಣಗಳ ಬದಲಿಗೆ ಇವುಗಳನ್ನು ಉಡುಗೊರೆಯಾಗಿ ಕೊಡಬಹುದು ಎಂದಿದ್ದಾರೆ ಮಗದೊಬ್ಬರು. ನಾನು ಇವರ ಪ್ರದರ್ಶನವನ್ನು ಆಯೋಜಿಸುತ್ತೇನೆ, ಮಳಿಗೆಯ ಶುಲ್ಕವನ್ನು ಇವರು ಕೊಡಬೇಕಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 12:19 pm, Tue, 11 July 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ