AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!

Handicapped : ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ; ಇದು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ.

ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!
ಮನಸಿಗಿಲ್ಲ ವೈಕಲ್ಯ
ಶ್ರೀದೇವಿ ಕಳಸದ
|

Updated on:May 12, 2023 | 2:54 PM

Share

Viral Video : ನಾದ ಮತ್ತು ಲಯ ಪ್ರಕೃತಿಯಲ್ಲಿನ ಮೂಲ ಧಾತುಗಳು. ಆದಿಯಲ್ಲಿ ಮನುಷ್ಯ ಇವನ್ನು ಸ್ವಾಭಾವಿಕವಾಗಿ ಬಹುಬೇಗ ಗ್ರಹಿಸಿದ. ಜಗತ್ತಿನ ಯಾವುದೇ ಬುಡಕಟ್ಟಿನ ಜನರನ್ನು ನಾವು ಗಮನಿಸಿದರೂ ಅವರಲ್ಲಿ ಅವರದೇ ವಿಶಿಷ್ಟ ಹಾಡುಗಬ್ಬಗಳು, ಕುಣಿತದ ಬಗೆಗಳು ಇರುವುದು ಮತ್ತವರು ಅವನ್ನು ಸಹಜವಾಗಿ ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದು ನಮಗೆ ಮನದಟ್ಟಾಗುತ್ತದೆ.

ಇದನ್ನೂ ಓದಿ
Image
ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!
Image
ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?
Image
ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
Image
ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
View this post on Instagram

A post shared by Christa Media (@christamedia)

“In the dark times Will there also be singing? Yes, there will also be singing. About the dark times.”

ಇದು ಬರ್ಟೋಲ್ಟ್ ಬ್ರೆಖ್ಟ್ ಎಂಬ ಜರ್ಮನ್ ನಾಟಕಕಾರ, ಕವಿಯ ಒಂದು ಕವನದ ಸಾಲುಗಳು. ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ, ಎಂಬರ್ಥದ ಈ ಸಾಲುಗಳು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ. ಎಂಥದೇ ಪರಿಸ್ಥಿತಿಯಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ. ನಮ್ಮಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ.

ಇದನ್ನು ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

ಆ ಚೈತನ್ಯದ ಒಂದು ಮಾದರಿ ಮೇಲಿನ ಇನ್​​ಸ್ಟಾಗ್ರಾಮ್​ ಕ್ಲಿಪ್​ನಲ್ಲಿ ನಮಗೆ ಕಾಣಸಿಗುತ್ತದೆ. ತಮ್ಮ ಮೈಗಳ್ಳತನವನ್ನೋ ಕೆಲಸಗೇಡಿತನವನ್ನೋ ಸರಿಪಡಿಸಿಕೊಳ್ಳದೇ ಹೊರಗಿನ ವಾತಾವರಣ ಅಥವಾ ತಮ್ಮ ಪರಿಸ್ಥಿಯ ಬಗ್ಗೆ ನೆವ ಹೇಳುವವರಿಗೆ ನಮ್ಮಲ್ಲಿ, ಕುಣಿಯಲು ಬಾರದವರಿಗೆ ನೆಲ ಡೊಂಕು, ಎಂಬ ಗಾದೆ ಮಾತಿದೆ.

ಇದನ್ನೂ ಓದಿ : ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು

ಮೇಲಿನ ವಿಡಿಯೋದಲ್ಲಿ ಆ ಯುವತಿ ತನ್ನ ಊರುಗೋಲುಗಳ ಸಹಾಯದಿಂದ ಸೊಗಸಾಗಿ ನರ್ತಿಸಿರುವುದಲ್ಲದೇ ಆ ಊರುಗೋಲುಗಳನ್ನು ತನ್ನ ನರ್ತನದ ಪರಿಕರ (props)ವನ್ನಾಗಿಸಿಕೊಂಡಿದ್ದಾಳೆ. ಅವಳ ಕುಣಿತದ ಭಂಗಿ, ಛಲ, ನಗುಮುಖ ನಮ್ಮೆಲ್ಲರ ಎದೆಯನ್ನು ತಟ್ಟಲೇಬೇಕು. ಇದನ್ನು ಲಕ್ಷಗಟ್ಟಲೇ ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನು ನೋಡಿ ನಿಮಗೇನೆನ್ನಿಸಿತು? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:30 pm, Fri, 12 May 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ