ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!

Handicapped : ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ; ಇದು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ.

ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!
ಮನಸಿಗಿಲ್ಲ ವೈಕಲ್ಯ
Follow us
|

Updated on:May 12, 2023 | 2:54 PM

Viral Video : ನಾದ ಮತ್ತು ಲಯ ಪ್ರಕೃತಿಯಲ್ಲಿನ ಮೂಲ ಧಾತುಗಳು. ಆದಿಯಲ್ಲಿ ಮನುಷ್ಯ ಇವನ್ನು ಸ್ವಾಭಾವಿಕವಾಗಿ ಬಹುಬೇಗ ಗ್ರಹಿಸಿದ. ಜಗತ್ತಿನ ಯಾವುದೇ ಬುಡಕಟ್ಟಿನ ಜನರನ್ನು ನಾವು ಗಮನಿಸಿದರೂ ಅವರಲ್ಲಿ ಅವರದೇ ವಿಶಿಷ್ಟ ಹಾಡುಗಬ್ಬಗಳು, ಕುಣಿತದ ಬಗೆಗಳು ಇರುವುದು ಮತ್ತವರು ಅವನ್ನು ಸಹಜವಾಗಿ ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದು ನಮಗೆ ಮನದಟ್ಟಾಗುತ್ತದೆ.

ಇದನ್ನೂ ಓದಿ
Image
ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!
Image
ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?
Image
ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
Image
ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
View this post on Instagram

A post shared by Christa Media (@christamedia)

“In the dark times Will there also be singing? Yes, there will also be singing. About the dark times.”

ಇದು ಬರ್ಟೋಲ್ಟ್ ಬ್ರೆಖ್ಟ್ ಎಂಬ ಜರ್ಮನ್ ನಾಟಕಕಾರ, ಕವಿಯ ಒಂದು ಕವನದ ಸಾಲುಗಳು. ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ, ಎಂಬರ್ಥದ ಈ ಸಾಲುಗಳು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ. ಎಂಥದೇ ಪರಿಸ್ಥಿತಿಯಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ. ನಮ್ಮಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ.

ಇದನ್ನು ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

ಆ ಚೈತನ್ಯದ ಒಂದು ಮಾದರಿ ಮೇಲಿನ ಇನ್​​ಸ್ಟಾಗ್ರಾಮ್​ ಕ್ಲಿಪ್​ನಲ್ಲಿ ನಮಗೆ ಕಾಣಸಿಗುತ್ತದೆ. ತಮ್ಮ ಮೈಗಳ್ಳತನವನ್ನೋ ಕೆಲಸಗೇಡಿತನವನ್ನೋ ಸರಿಪಡಿಸಿಕೊಳ್ಳದೇ ಹೊರಗಿನ ವಾತಾವರಣ ಅಥವಾ ತಮ್ಮ ಪರಿಸ್ಥಿಯ ಬಗ್ಗೆ ನೆವ ಹೇಳುವವರಿಗೆ ನಮ್ಮಲ್ಲಿ, ಕುಣಿಯಲು ಬಾರದವರಿಗೆ ನೆಲ ಡೊಂಕು, ಎಂಬ ಗಾದೆ ಮಾತಿದೆ.

ಇದನ್ನೂ ಓದಿ : ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು

ಮೇಲಿನ ವಿಡಿಯೋದಲ್ಲಿ ಆ ಯುವತಿ ತನ್ನ ಊರುಗೋಲುಗಳ ಸಹಾಯದಿಂದ ಸೊಗಸಾಗಿ ನರ್ತಿಸಿರುವುದಲ್ಲದೇ ಆ ಊರುಗೋಲುಗಳನ್ನು ತನ್ನ ನರ್ತನದ ಪರಿಕರ (props)ವನ್ನಾಗಿಸಿಕೊಂಡಿದ್ದಾಳೆ. ಅವಳ ಕುಣಿತದ ಭಂಗಿ, ಛಲ, ನಗುಮುಖ ನಮ್ಮೆಲ್ಲರ ಎದೆಯನ್ನು ತಟ್ಟಲೇಬೇಕು. ಇದನ್ನು ಲಕ್ಷಗಟ್ಟಲೇ ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನು ನೋಡಿ ನಿಮಗೇನೆನ್ನಿಸಿತು? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:30 pm, Fri, 12 May 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ