AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?

Zoo : ಆಕಸ್ಮಿಕ ಎನ್ನುವುದೆಲ್ಲ ಕೆಲ ಕ್ಷಣಗಳಲ್ಲೇ ಘಟಿಸುತ್ತದೆ. ಪ್ರಾಣಿಸಂಗ್ರಹಾಲಯಕ್ಕೆ ಹೋದರೆ ಹತ್ತಿರದಿಂದ ಪ್ರಾಣಿಗಳನ್ನು ನೋಡುವ ಖುಷಿಯೇನೋ ಸರಿ. ಆದರೆ ಅವುಗಳಿಗೆ ತಿಂಡಿತಿನಿಸು ಇನ್ನೇನೋ ತಿನ್ನಿಸುವ ಖಯಾಲಿ ಯಾಕೋ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಗಾಬರಿಯಾಗಿದ್ದಾರೆ. ಇನ್ನು ಈ ಮಗುವಿನ ಅವಸ್ಥೆ ಏನಾಗಿರಬಾರದು?

Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?
ಎಲೆಸಮೇತ ಮಗುವನ್ನೇ ಎತ್ತಿದ ಜಿರಾಫೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Aug 14, 2023 | 6:57 PM

Share

Giraffe : ಪ್ರಾಣಿಸಂಗ್ರಹಾಲಯಕ್ಕೆ ಹೋದಾಗ ಕೋತಿ ಕಂಡರೆ ಬಾಳೆಹಣ್ಣು, ಕೊಬ್ಬರಿ, ಕಡಲೆಕಾಯಿ, ಬಿಸ್ಕೆಟ್​, ಚಿಪ್ಸ್​ ಹೀಗೆ… ತಮ್ಮ ಬಳಿ ಇದ್ದ ತಿನಿಸನ್ನೆಲ್ಲ ಧಾರೆ ಎರೆದುಬಿಡುತ್ತವೆ ಮಕ್ಕಳು. ಅದೇ ಮೊಲ ಕಂಡರೆ ಕ್ಯಾರೆಟ್​, ಸೊಪ್ಪು, ಕ್ಯಾಬೇಜ್​ ಅನ್ನು ಕೊಡುತ್ತವೆ. ಪಕ್ಷಿಗಳು (Birds) ಕಂಡರೆ ಕಾಳುಗಳನ್ನು ಹಾಕುತ್ತವೆ. ಜಿರಾಫೆ ಕಂಡರೆ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ತಮ್ಮ ಮಗನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ದಿದ್ದಾರೆ ಈ ದಂಪತಿ. ಜಿರಾಫೆ ನೋಡಲು ಹೋದಾಗ ಒಂದು ದೊಡ್ಡ ಎಲೆಯನ್ನು ತಿನ್ನಿಸಲು ಮಗು ಹತ್ತಿರ ಹೋಗಿದೆ. ಆದರೆ ಆ ಜಿರಾಫೆ ಎಲೆಸಮೇತ ಆ ಮಗುವನ್ನು ಮೇಲಕ್ಕೆತ್ತಿಬಿಟ್ಟಿದೆ!

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಕ್ಷಣವೇ ಗಂಡ ಹೆಂಡತಿ ಮಗುವನ್ನು ರಕ್ಷಿಸುತ್ತಾರೆ. ಆ ಮಗು ಕೈಲಿದ್ದ ಎಲೆಯನ್ನು ಬಿಟ್ಟುಬಿಡುತ್ತಾನೆ. ಜಿರಾಫೆ ತನ್ನ ಪಾಡಿಗೆ ತಾನು ಎಲೆಯನ್ನು ಮೆಲ್ಲತೊಡಗುತ್ತದೆ. ಓಡಿಬಂದ ಅಮ್ಮ, ವಿಡಿಯೋ ಮಾಡಲು ಇಟ್ಟಿದ್ದ ಕ್ಯಾಮೆರಾ ಬಟನ್ ಆಫ್ ಮಾಡುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅಬ್ಬಾ ಆ ಎಲೆ ಎಂಥಾ ಗಟ್ಟಿ ಇರಬೇಕು ಎಂದು ತಮಾಷೆ ಮಾಡುತ್ತಿದ್ದಾರೆ. ಅಕಸ್ಮಾತ್ ಅಲ್ಲಿ ಅಪ್ಪ ಅಮ್ಮ ಇಲ್ಲದಿದ್ದರೆ!?

ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ಮುಗಿಯುತ್ತದೆ! ನೋಡಿ ಈ ವಿಡಿಯೋ

View this post on Instagram

A post shared by Giraffe (@giraffe__gram)

ಈತನಕ ಈ ವಿಡಿಯೋ ಅನ್ನು 10 ಮಿಲಿಯನ್​ ಜನರು ನೋಡಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ ಎಂಥ ಅನಾಹುತವಾಗುತ್ತಿತ್ತು ಎಂದಿದ್ದಾರೆ ಅನೇಕರು. ಆ ಜಿರಾಫೆಯ ದವಡೆ ಎಷ್ಟು ಗಟ್ಟಿ ಇರಬೇಡ ಎಂದಿದ್ದಾರೆ ಒಬ್ಬರು. ಆದರೆ ಆ ಮಗು ಅದೆಷ್ಟು ಗಟ್ಟಿಯಾಗಿ ಆ ಎಲೆಯನ್ನು ಹಿಡಿದುಕೊಂಡಿತ್ತಲ್ಲ ಎಂದಿದ್ದಾರೆ ಇನ್ನೊಬ್ಬರು. ಆ ಎಲೆ ತುಂಡಾಗಲೇ ಇಲ್ಲವಲ್ಲ ಅದನ್ನು ಹೇಳಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಪ್ಯಾನ್​ಕೇಕ್ ಅಲ್ಲ ದೋಸೆ​! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್​ಬುಕ್​ ಪುಟ ಡಿಲೀಟ್ ಆಗಬೇಕು

ಅಪ್ಪಅಮ್ಮನೇನೋ ಕೊನೆಗೆ ಖುಷಿಯಲ್ಲಿ ನಕ್ಕುಬಿಟ್ಟಿದ್ದಾರೆ, ಮಗುವನ್ನೂ ಅವರ ಕೈಗೆ ಸಿಗದಂತೆ ಬೀಸಿ ಒಗೆದಿದ್ದರೆ? ಎಂದು ಕೆಲವರು ಗಾಬರಿಗೆ ಒಳಗಾಗಿದ್ದಾರೆ. ನನಗನ್ನಿಸಿದಂತೆ ಆ ಮಗು ಅಮ್ಯೂಸ್​ಮೆಂಟ್ ಪಾರ್ಕಿಗೆ ಹೋಗೋಣ ಎಂದು ಹಠ ಮಾಡಿರುತ್ತಾನೆ. ಆದರೆ ಅವನ ಪೋಷಕರು, ಅದೆಲ್ಲ ತುಂಬಾ ದುಬಾರಿ, ಪ್ರಾಣಿಸಂಗ್ರಹಾಲಯಕ್ಕೆ ಹೋಗೋಣ ಎಂದು ಕರೆದುಕೊಂಡು ಬಂದಿರುತ್ತಾರೆ. ಅಂತೂ ಮಗುವಿನ ಆಸೆಯೇ ಇಲ್ಲಿ ಫಲಿಸಿದೆ! ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ