Viral Video: ಕಸದ ಬುಟ್ಟಿಯಲ್ಲಿ ಅಪಾಯಕಾರಿ ಮೊಸಳೆಯನ್ನು  ಸೆರೆ ಹಿಡಿದ ಧೀರ

ಮೊಸಳೆ ಎಷ್ಟು ಅಪಾಯಕಾರಿ ಜೀವಿ ಎಂಬುದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ಮೊಸಳೆಗಳ ತಂಟೆಗೆ ಅಷ್ಟಾಗಿ ಯಾರು ಹೋಗಲ್ಲ. ಅಲ್ಲದೆ ಮೊಸಳೆಗಳೇ ನಮ್ಮ ತಂಟೆಗೆ ಬಂದ್ರೂ, ಆ ದೈತ್ಯ ಜೀವಿಯನ್ನು ಕಂಡು ನಾವೆಲ್ಲರೂ ಕಾಲ್ಕಿತ್ತು ಓಡಿ ಹೋಗುತ್ತೇವೆ. ಆದ್ರೆ ಇಲ್ಲೊಬ್ಬ ಎಂಟೆದೆ ಬಂಟ ಮನೆಯ ಬಳಿ ಬಂದಂತಹ ಮೊಸಳೆಯನ್ನು ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಹಿಡಿದು ಹೆಡೆಮುರಿ ಕಟ್ಟಿ, ಅದನ್ನು  ಸರೋವರದ ಬಳಿ ಬಿಟ್ಟು ಬಂದಿದ್ದಾನೆ.  ಈ ವಿಡಿಯೋ ಇದೀಗ ವೈರಲ್ ಆಗಿದೆ. 

Viral Video: ಕಸದ ಬುಟ್ಟಿಯಲ್ಲಿ ಅಪಾಯಕಾರಿ ಮೊಸಳೆಯನ್ನು  ಸೆರೆ ಹಿಡಿದ ಧೀರ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2023 | 2:18 PM

ಮೊಸಳೆಗಳು ಎಷ್ಟು  ಅಪಾಯಕಾರಿ  ಜೀವಿಗಳು ಎಂಬುದು ಎಲ್ಲರಿಗೂ ತಿಳಿದಿದೆ,  ಆದ್ದರಿಂದಲೇ  ಮೊಸಳೆಗಳ ತಂಟೆಗೆ ಯಾರು ಹೋಗುವುದಿಲ್ಲ.  ಕೆಲವರು ಈ ಪ್ರದೇಶದಲ್ಲಿ ಮೊಸಳೆ ಇದೆ ಅಂದ್ರೆ ಅತ್ತ ಕಡೆ ತಲೆ ಹಾಕಿ ಕೂಡಾ ಮಲಗೋದಿಲ್ಲ. ಇನ್ನೂ ಮೊಸಳೆಗಳು ಜನವಸತಿ ಪ್ರದೇಶಕ್ಕೆ ಬಂದ್ರೆ ಹೇಗಿರಬಹುದು? ಖಂಡಿತವಾಗಿ ನಾವೆಲ್ಲರೂ ಆ ಅಪಾಯಕಾರಿ ಜೀವಿಯನ್ನು ಕಂಡು ಓಡಿ ಹೋಗುತ್ತಿದ್ದೆವು.  ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಯಾವುದೇ ಭಯವಿಲ್ಲದೆ ಧೈರ್ಯದಿಂದ ಮನೆ ಬಳಿ ಬಂದಂತಹ ಮೊಸಳೆಯನ್ನು ಹೆಡೆಮುರಿ ಕಟ್ಟಿ ಸರೋವರದ ಬಳಿ ಬಿಟ್ಟು ಬಂದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆ ವ್ಯಕ್ತಿಯ ಸಾಹಸವನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.

ಈ ಘಟನೆ  2 ವರ್ಷಗಳ ಹಿಂದೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು,  ಈ  ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.   MindBlowing ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಫ್ಲೋರಿಡಾದ ವ್ಯಕ್ತಿ ಕಸದ ಬುಟ್ಟಿಯ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.  ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮನೆ ಬಾಗಿಲಿಗೆ ಬಂದಂತಹ  ಮೊಸಳೆಯನ್ನು ಸೆರೆ ಹಿಡಿಯುವುದನ್ನು ಕಾಣಬಹುದು.

ಇದನ್ನೂ ಓದಿ: ಪ್ರಧಾನಿಗೊಂದು ಕಾಶ್ಮೀರದ ಮುತ್ತು: ಮೋದಿ ಎಂದರೆ ಕಾಶ್ಮೀರಿಗರಿಗೆ ಎಷ್ಟು ಪ್ರೀತಿ ನೋಡಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ, ಮೊಸಳೆಯೊಂದು ನಿಧಾನಕ್ಕೆ ಮನೆಯ ಅಂಗಳದ ಬಳಿ ಬರುತ್ತಿರುವುದನ್ನು ಕಾಣಬಹುದು. ಈ ಅಪಾಯಕಾರಿ ಜೀವಿಯನ್ನು ಕಂಡು ಅಕ್ಕ ಪಕ್ಕದ ಮನೆಯವರೆಲ್ಲರೂ  ಗಾಬರಿಗೊಂಡು ಕಿರಿಚಾಡುತ್ತಾರೆ.  ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಈ ಮೊಸಳೆಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು, ಇಲ್ಲದಿದ್ರೆ, ತುಂಬಾ ಕಷ್ಟ ಇದೆ ಎನ್ನುತ್ತಾ, ಧೈರ್ಯ ಮಾಡಿ  ಅಲ್ಲೇ ಇದ್ದ ದೊಡ್ಡ ಕಸದ ಬುಟ್ಟಿಯನ್ನು ತೆಗೆದುಕೊಂಡು ತನ್ನ ಸಾಹಸ ಮತ್ತು ಸಮಯ ಪ್ರಜ್ಞೆಯಿಂದ  ಮೊಸಳೆಯನ್ನು  ಆ ಕಸದ ಬುಟ್ಟಿಯೊಳಗೆ ಬೀಳಿಸಿ, ನಂತರ ಕಸದ ಬುಟ್ಟಿಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ, ಮೊಸಳೆಯನ್ನು ಸೆರೆಹಿಡಿಯುತ್ತಾನೆ. ಹೀಗೆ ಸೆರೆ ಹಿಡಿದ ಮೊಸಳೆಯನ್ನು   ತೆಗೆದುಕೊಡು ಹೋಗಿ ಅಲ್ಲೇ ಸಲ್ವ ದೂರದಲ್ಲಿದ್ದ ಸರೋವರದ  ಬಳಿ ಬಿಟ್ಟು ಬರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು