AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್​ ಆಯ್ತು ಹೊಸ ಗಣಿತ ಸೂತ್ರ

ನನಗೆ ಈ ದಿನಾಂಕಗಳು ಗಣಿತ ಸೂತ್ರದಂತೆ ಕಂಡಿದ್ದು, ಎಲ್ಲವೂ ವಿಚಿತ್ರವಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್​ ಆಯ್ತು ಹೊಸ ಗಣಿತ ಸೂತ್ರ
ಹೊಸ ಗಣಿತ ಸೂತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 11, 2022 | 11:44 AM

ಉಕ್ರೇನ್ ಮತ್ತು ರಷ್ಯಾ (Russia Ukraine War)  ನಡೆವೆ ಯುದ್ಧ ಆರಂಭವಾಗಿ ಇಂದಿಗೆ 16ನೇ ದಿನವಾಗಿದೆ. ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ಯುದ್ಧ ಮುಂದುವರೆಸಿದೆ.  ಪ್ಯಾಟ್ರಿಕ್ ಬೆಟ್ ಡೇವಿಡ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ ಮತ್ತು ಇವಾಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭದ ದಿನಾಂಕಗಳ ನಡುವಿನ ವಿಲಕ್ಷಣವಾದ ಹೋಲಿಕೆಯನ್ನು ಗುರುತಿಸಿದ್ದಾರೆ. ಹೌದು. ಜುಲೈ 28, 1914 ರಂದು, ಆಸ್ಟ್ರಿಯಾ-ಹಂಗೇರಿ ಸೆರ್ಬಿಯಾದ ಮೇಲೆ ಮೊದಲ ವಿಶ್ವ ಯುದ್ಧ ಪ್ರಾರಂಭಿಸಲಾಗಿತ್ತು. ಪ್ಯಾಟ್ರಿಕ್ 7, 28, 19, 14ನ್ನು ಒಟ್ಟುಗೂಡಿಸಿದಾಗ ಅದರ ಫಲಿತಾಂಶವು 68 ಆಗಿತ್ತು. ನಂತರ ಅವರು ಸೆಪ್ಟೆಂಬರ್ 1, 1939 ಎರಡನೇ ವಿಶ್ವ ಯುದ್ಧ ಆರಂಭದ ದಿನಾಂಕವನ್ನು ತೆಗೆದುಕೊಂಡರು. ಆ ದಿನಾಂಕವು ಕೂಡ 68ರ ಸಂಖ್ಯೆಯನ್ನು ಹೋಲಿತು. ತದ ನಂತರ ಅವರು ಇವಾಗ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಸಮರ ಆರಂಭವಾದ ದಿನಾಂಕವನ್ನು (ಫೆಬ್ರವರಿ 24, 2022. ಮತ್ತು 24+2+20+22 = 68) ಪರಿಶಿಲಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ ಅದು ಕೂಡ 68 ಬಂದಿದೆ.

ನನಗೆ ಈ ದಿನಾಂಕಗಳು ಗಣಿತ ಸೂತ್ರದಂತೆ ಕಂಡಿದ್ದು, ಎಲ್ಲವೂ ವಿಚಿತ್ರವಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಲ್ಲಿಯವರೆಗೂ 11 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು 3 ಸಾವಿರಕ್ಕೂ ಹೆಚ್ಚು ರಿಟ್ವೀಟ್​ಗಳು ಬಂದಿವೆ.

ಗಣಿತದಲ್ಲಿ 68 ಪೆರಿನ್ ಸಂಖ್ಯೆಯಾಗಿದೆ. ಇದು ನಿಖರವಾಗಿ ಎರಡು ವಿಭಿನ್ನ ರೀತಿಯಲ್ಲಿ ಎರಡು ಅವಿಭಾಜ್ಯಗಳ ಮೊತ್ತವಾಗಲು ತಿಳಿದಿರುವ ಅತಿದೊಡ್ಡ ಸಂಖ್ಯೆಯಾಗಿದೆ. 68 = 7 + 61 = 31 + 37. ಪ್ರಪಂಚವು ಗಣಿತದ ಮಾದರಿಗಳಲ್ಲಿ ಚಲಿಸುತ್ತದೆ. ಮುನ್ಸೂಚಕ ವಿಶ್ಲೇಷಣೆ ಎಲ್ಲಾ ಗಣಿತದ ಮಾದರಿಗಳಾಗಿವೆ. ಆದ್ದರಿಂದ ನೀವು ಹಂಚಿಕೊಂಡಿದ್ದು ಮೌಲ್ಯಯುತವಾಗಿದೆ ಎಂದು ಟ್ವೀಟ್​ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಂಬ್ಬ ಟ್ವೀಟ್​ ಬಳಕೆದಾರ ಜನರು ಇದನ್ನು ಭವಿಷ್ಯವಾಣಿಯಂದು ನಂಬುವುದನ್ನು ನಾನು ದ್ವೇಷಿಸುತ್ತೇನೆ. ಆದರೆ ಈ ರೀತಿಯಾಗಿ ಸಂಭವಿಸುವುದು ತುಂಬಾ ಕಡಿಮೆ ಎಂದಿದ್ದಾರೆ. ಮತ್ತೊಬ್ಬರು ಇದಕ್ಕೆ ಏನಾದರೂ ಅರ್ಥವಿಸದೆಯೇ? ಇಲ್ಲ. ಆದರೂ ಇದು ಆಸಕ್ತಿದಾಯಕವಾಗಿದೆ ಎಂದು ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:

‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ರಕ್ಷಿತಾ-ಪ್ರೇಮ್​ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ